ತುಳುನಾಡ ಸಂಸ್ಕೃತಿಯ ಅನುಕ್ತ


Team Udayavani, Sep 14, 2018, 6:00 AM IST

anukta.jpg

ಕನ್ನಡದಲ್ಲಿ ಕರಾವಳಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಸಾಗುವ ಚಿತ್ರಗಳು ಬಂದಿವೆಯಾದರೂ, ಅದರೊಂದಿಗೆ ಸಸ್ಪೆನ್ಸ್‌ ಕ್ರೈಂ ಥ್ರಿಲ್ಲರ್‌ ಬೆರೆತು ಪತ್ತೆದಾರಿ ಮಾದರಿಯ ಸಿನಿಮಾ ಈವರೆಗೆ ಬಂದಿಲ್ಲ. “ಅನುಕ್ತ’ ಎಂಬ ಹೊಸಬರ ಚಿತ್ರ ಅಂಥದ್ದೊಂದು ಅನುಭವ ಕಟ್ಟಿಕೊಡಲು ಅಣಿಯಾಗಿದೆ. ಈ ಚಿತ್ರದ ಮೂಲಕ ಅಶ್ವತ್ಥ್ ಸ್ಯಾಮ್ಯುಯೆಲ್‌ ನಿರ್ದೇಶಕರಾಗುತ್ತಿದ್ದಾರೆ. ಸಿನಿಮಾ ಈಗಾಗಲೇ ಪೂರ್ಣಗೊಂಡಿದ್ದು ಬಿಡುಗಡೆಯ ತಯಾರಿಯಲ್ಲಿದೆ.

“ಕನಸುಗಳು ಎಷ್ಟರ ಮಟ್ಟಿಗೆ ನಿಜವಾಗುತ್ತವೆ. ಆ ಕನಸಿನ ಮೇಲೆ ನಡೆಯುವ ಘಟನೆಗಳು ಏನೆಲ್ಲಾ ಸೃಷ್ಟಿಸುತ್ತವೆ ಎಂಬುದರ ಮೇಲೆ ಕಥೆ ಸಾಗುತ್ತದೆ’ ಎಂದು ಚಿತ್ರದ ವಿವರ ಕೊಡುತ್ತಾರೆ ನಿರ್ದೇಶಕ ಅಶ್ವತ್ಥ್. ಚಿತ್ರದಲ್ಲಿ ತುಳುನಾಡಿನ ಧಾರ್ಮಿಕ ಆಚರಣೆಯಾದ ದೈವಾರಾಧನೆಯ ಶಕ್ತಿ ಅನ್ಯಾಯ ನಡೆದಾಗ, ಹೇಗೆ ನ್ಯಾಯ ದೊರಕಿಸಿಕೊಡುತ್ತದೆ ಎಂಬ ನಂಬಿಕೆಯನ್ನು ತಿಳಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಇಲ್ಲಿನ ಮತ್ತೂಂದು ವಿಶೇಷವೆಂದರೆ, ಸುಮಾರು 500 ವರ್ಷಗಳ ಹಳೆಯ ದೊಡ್ಡ ಮನೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಂದು ಕ್ರೈಮ್‌ ಹಿನ್ನೆಲೆಯ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯಲ್ಲಿ ಕನ್ನಡತನ ಮೇಳೈಸಿದೆ. ಅನು ಪ್ರಭಾಕರ್‌, ಸಂಪತ್‌ರಾಜ್‌, ಶ್ರೀಧರ್‌, ಕಾರ್ತಿಕ್‌ ಅತ್ತಾವರ್‌, ಸಂಗೀತಾ ಭಟ್‌ ಚಿತ್ರದ ಆಕರ್ಷಣೆ. ಬಹುತೇಕ ಬೆಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿ ಮತ್ತೂಂದು ವಿಶೇಷವೆಂದರೆ, ಹಿನ್ನೆಲೆ ಸಂಗೀತ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಅಶ್ವತ್ಥ್.

ಚಿತ್ರಕ್ಕೆ ಮನೋಹರ್‌ ಜೋಶಿ ಛಾಯಾಗ್ರಹಣ ಮಾಡಿದ್ದಾರೆ. ಅವರಿಗೆ ನಿರ್ದೇಶಕರು ಕಥೆ ಹೇಳಿದಾಗ, ಹೊಸ ಪ್ರಯೋಗ ಎನಿಸಿತಂತೆ. “ಬಹುತೇಕ ಕರಾವಳಿ ಭಾಗದ ಚಿತ್ರಣ ಕಟ್ಟಿಕೊಡಬೇಕಿದ್ದರಿಂದ ಅದೊಂದು ರೀತಿಯ ಚಾಲೆಂಜ್‌ ಆಗಿತ್ತು. ನಿರ್ದೇಶಕರಿಗೆ ಎಲ್ಲಾ ವಿಭಾಗದ ಕೆಲಸವೂ ಗೊತ್ತು. ಹಾಗಾಗಿ ನಮ್ಮ ಕೆಲಸ ಸುಲಭವಾಗಿದೆ. ಇನ್ನು, 28 ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ರಾತ್ರಿ ದಿನಗಳನ್ನು ಕಳೆದದ್ದೇ ಹೆಚ್ಚು. ಚಿತ್ರದಲ್ಲಿ ಎಲ್ಲರಿಗೂ ಇಷ್ಟವಾಗುವುದು ಅಂದರೆ ಅದು ಹಿನ್ನೆಲೆ ಸಂಗೀತ. ಅದೇ ಚಿತ್ರದ ಶಕ್ತಿ’ ಎಂದರು ಮನೋಹರ್‌ ಜೋಶಿ.

ಸಂಗೀತ ನಿರ್ದೇಶಕ ನೊಬೀನ್‌ ಪಾಲ್‌ ಅವರಿಲ್ಲಿ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರಂತೆ. ಇಲ್ಲಿ ಭೂತಕೋಲ ದೃಶ್ಯಕ್ಕೆ ಕೊಟ್ಟಿರುವ ಹಿನ್ನೆಲೆ ಸಂಗೀತ ನನಗೆ ಹೊಸ ಅನುಭವ ಕೊಟ್ಟಿದೆ ಎಂಬುದು ನೊಬೀನ್‌ ಪಾಲ್‌ ಮಾತು.

ನಿರ್ಮಾಪಕ ಹರಿ ಬಂಗೇರ ಅವರಿಗೆ ಇದು ಮೊದಲ ನಿರ್ಮಾಣದ ಚಿತ್ರ. “ಕಾಲೇಜು ದಿನಗಳಲ್ಲೇ ನಾನು ಸಾಂಸ್ಕೃತಿಕ ಚಟು­ವಟಿಕೆಗಳಲ್ಲಿ ಪಾಲ್ಗೊ­­ಳ್ಳು­ತ್ತಿದ್ದೆ. ಈ ಹಿಂದೆಯೇ ನನಗೆ ಸಿನಿಮಾ ನಿರ್ಮಿಸುವ ಆಸೆ ಇತ್ತು. ಆಗ ಎರಡು ಕಥೆ ಕೇಳಿದ್ದೆ. ಆದರೆ, ನನಗೆ ಆ ಕಥೆಯಲ್ಲಿ ಅಷ್ಟೊಂದು ಗಟ್ಟಿತನ ಇದೆ ಅನಿಸಲಿಲ್ಲ. ಅಶ್ವತ್ಥ್ ಹೇಳಿದ ಕಥೆಯಲ್ಲಿ ಹೊಸತನ­ವಿತ್ತು. ಕರಾವಳಿ ಸೊಗಡು ತುಂಬಿತ್ತು. ಕನ್ನಡಕ್ಕೆ ಹೊಸ ಸಿನಿಮಾ ಕೊಡಬಹುದು ಅಂತ “ಅನುಕ್ತ’ ಚಿತ್ರ ನಿರ್ಮಿಸಿದ್ದಾಗಿ ಹೇಳಿಕೊಂಡರು ಅವರು.

ನಾಯಕ ಕಾರ್ತಿಕ್‌ ಅತ್ತಾವರ್‌ಗೆ ಇಲ್ಲಿ ನಟನೆಗೆ ಹೆಚ್ಚು ಅವಕಾಶ ಇರುವಂತಹ ಪಾತ್ರ ಸಿಕ್ಕಿದೆಯಂತೆ. “ಇದು ಕ್ರೈಮ್‌ ಬ್ರೇಸ್ಡ್ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಆಗಿರುವುದರಿಂದ ನನಗೂ ಒಂದು ಕಡೆ ಭಯ ಮತ್ತು ಸಂತಸವಿದೆ. ಜನರ ಹೇಗೆ ಸ್ವೀರಿಸುತ್ತಾರೋ ಎಂಬ ಭಯ ಒಂದು ಕಡೆಯಾದರೆ, ಇಂಥದ್ದೊಂದು ಹೊಸ ಪ್ರಯತ್ನದಲ್ಲಿ ನಾನಿದ್ದೇನೆ ಎಂಬ ಸಂತಸ ಇನ್ನೊಂದು ಕಡೆ’ ಅಂದರು ಕಾರ್ತಿಕ್‌.

ಸಂತೋಷ್‌ ಕುಮಾರ್‌ ಕೊಂಚಾಡಿ ಮತ್ತು ಕಾರ್ತಿಕ್‌ ಕಥೆ ಬರೆದರೆ, ನವೀನ್‌ ಶರ್ಮ ಸಂಭಾಷಣೆ ಇದೆ. ವಿಶ್ವ ಸಂಕಲನ ಮಾಡಿದ್ದಾರೆ.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.