ಆಟೋರಾಜ ಈಗ ಸ್ಟೈಲ್‌ ರಾಜ!


Team Udayavani, Feb 3, 2017, 3:45 AM IST

auto-raja.jpg

5 ವರ್ಷ ಆಟೋ ಓಡಿಸಿಕೊಂಡಿದ್ದ ಗಿರೀಶ್‌, ಈಗ ಹೀರೋ. ಈ ವಾರ ತೆರೆಗೆ ಕಾಣುತ್ತಿರುವ ಚಿತ್ರವಿದು. ಗಿರೀಶ್‌ಗೆ ಕನಸಿಗೆ ಬಣ್ಣ ತುಂಬಿದ್ದು ಗೆಳೆಯರಾದ ರಮೇಶ್‌ ಮತ್ತು ಹರೀಶ್‌. ರಮೇಶ್‌ ಈ ಚಿತ್ರದ ನಿರ್ಮಾಪಕರಾದರೆ, ಹರೀಶ್‌ ನಿರ್ದೇಶಕರು.

ಕಲರ್‌ಫ‌ುಲ್‌ ಜಗತ್ತಿನ ಕರಾಮತ್ತೇ ಅಂಥದ್ದು! ಇಲ್ಲಿ ಅದೃಷ್ಟ ಇದ್ದರೆ ಯಾರು ಏನು ಬೇಕಾದರೂ ಆಗಬಹುದು. ಈಗಾಗಲೇ ಅದು ಸಾಬೀತಾಗಿದ್ದುಂಟು. ಬಸ್‌ ಕಂಡಕ್ಟರ್‌ ಆಗಿದ್ದವರು ಸೂಪರ್‌ ಸ್ಟಾರ್‌ ಆಗಿದ್ದಾರೆ. ಲೈಟ್‌ಬಾಯ್‌ ಎನಿಸಿಕೊಂಡವರು ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ. ಫೈಟರ್‌ ಆಗಿದ್ದವರು “ಸಿನಿ ದುನಿಯಾ’ದ ಹೀರೋ ಆಗಿದ್ದಾರೆ. ಹಾಗೆಯೇ, ಇಲ್ಲೊಬ್ಬ ಆಟೋ ಡ್ರೈವರ್‌ ಆಗಿದ್ದವರು ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 

ಹೌದು, ಐದು ವರ್ಷಗಳ ಕಾಲ ಆಟೋ ಓಡಿಸಿಕೊಂಡಿದ್ದ ಗಿರೀಶ್‌, ಈಗ ಹೀರೋ. ಯಾವ ಗಿರೀಶ್‌ ಅಂದರೆ, “ಸ್ಟೈಲ್‌ರಾಜ’ ಸಿನಿಮಾ ತೋರಿಸಬೇಕು. ಈ ವಾರ ತೆರೆಗೆ ಕಾಣುತ್ತಿರುವ ಚಿತ್ರವಿದು. ಆಟೋ ಓಡಿಸಿಕೊಂಡಿದ್ದ ಗಿರೀಶ್‌ಗೆ ತಾನೂ ಹೀರೋ ಆಗುವ ಆಸೆ ಇತ್ತು. ಅವರ ಕನಸಿಗೆ ಬಣ್ಣ ತುಂಬಿದ್ದು ಅವರ ಗೆಳೆಯರಾದ ರಮೇಶ್‌ ಮತ್ತು ಹರೀಶ್‌. ರಮೇಶ್‌ ಈ ಚಿತ್ರದ ನಿರ್ಮಾಪಕರಾದರೆ, ಹರೀಶ್‌ ನಿರ್ದೇಶಕರು. “ಸ್ಟೈಲ್‌ ರಾಜ’ ಚಿತ್ರದಲ್ಲಿ ಗಿರೀಶ್‌ ಹೀರೋ ಆಗಿದ್ದರೂ, ಅಲ್ಲಿ ಚಿಕ್ಕಣ್ಣ ಹೈಲೆಟ್‌. “ಹೊಸ ತಂಡವೇ ಸೇರಿ ಹೊಸಬಗೆಯ ಚಿತ್ರ ಮಾಡಿದೆ. ಇದು ಎಲ್ಲಾ ವರ್ಗಕ್ಕೂ ಇಷ್ಟವಾಗುತ್ತೆ. ನಿಮ್ಮಗಳ ಸಹಕಾರ ಇರಲಿ’ ಅಂದರು ಗಿರೀಶ್‌.

ನಿರ್ದೇಶಕ ಹರೀಶ್‌ಗೆ ಸಿನಿಮಾ ಚೆನ್ನಾಗಿ ಮಾಡಿರುವ ನಂಬಿಕೆ. ಅದನ್ನು ಜನರು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವೂ ಇದೆಯಂತೆ. ಗೆಳೆಯರು ಸೇರಿ ಒಂದೊಳ್ಳೆಯ ಚಿತ್ರ ಮಾಡಿದ್ದೇವೆ. “ಒಬ್ಬ ಹಳ್ಳಿಯ ಮುಗ್ಧ ಹುಡುಗ ಬೆಂಗಳೂರಿಗೆ ಬಂದು, ಪ್ರೀತಿಗೆ ಬಿದ್ದು, ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ ಅನ್ನೋದು ಚಿತ್ರದ ಸಾರಾಂಶ. ಇಲ್ಲಿ ಹಾಡುಗಳು, ಲೊಕೇಷನ್‌ಗಳು ಹೊಸದಾಗಿವೆ’ ಅಂದರು ಹರೀಶ್‌.

ನಿರ್ಮಾಪಕ ರಮೇಶ್‌ಗೆ ಬಹಳಷ್ಟು ಮಂದಿ ಸಾಥ್‌ ಕೊಟ್ಟು, ಧೈರ್ಯ ತುಂಬಿದ್ದರಂತೆ. ಹಾಗಾಗಿ, ಚಿತ್ರವನ್ನು ಯಾವುದಕ್ಕೂ ಕಡಿಮೆ ಇಲ್ಲದಂತೆ ನಿರ್ಮಿಸಿದ್ದಾರಂತೆ.

ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಹಾರಿಜೋನ್‌ ಸ್ಟುಡಿಯೋದ ಟೋನಿ ಚಿತ್ರವನ್ನು ವಿತರಣೆ ಮಾಡುತಿದ್ದಾರೆ ಎಂದರು ಅವರು.

ಇನ್ನು, ಚಿತ್ರಕ್ಕೆ ಚಂದ್ರಣ್ಣ ಎಂಬುವವರು, ಸಹಕಾರ ನೀಡುತ್ತಿದ್ದು, ಪ್ರಚಾರ ಕಾರ್ಯದಲ್ಲಿ ಸಾಥ್‌ ಕೊಟ್ಟಿದ್ದಾರಂತೆ. ಲೋಕಿ ಚಿತ್ರದ 6 ಹಾಡುಗಳನ್ನು ರಚಿಸಿದ್ದಾರೆ. ಎಂ.ಬಿ.ಅಳ್ಳಿಕಟ್ಟೆ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.

ಅಂದು ನಾಯಕಿ ರನೂಷಾ ಹೆಚ್ಚು ಮಾತಾಡದೆ, “ಸಿನಿಮಾ ಎಲ್ಲಾ ವರ್ಗಕ್ಕೂ ಇಷ್ಟವಾಗುತ್ತೆ’ ಎಂದಷ್ಟೇ ಹೇಳಿ ಸುಮ್ಮನಾದರು.

ಟಾಪ್ ನ್ಯೂಸ್

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Gadag

ಮೋದಿಯಿಂದ ಬಡತನ ಮುಕ್ತ ಭಾರತ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.