ಮುಂಗಾರು ಸಂಜೆಯಲ್ಲೊಂದು ಸಂಗೀತದ ಮಳೆ ಗಮನವಿಟ್ಟು ಕೇಳಿ!


Team Udayavani, Jun 23, 2017, 1:33 PM IST

Ban23061703SSch.jpg

ಹಾಡುಗಳನ್ನು ಗಣ್ಯರಿಂದ ಬಿಡುಗಡೆ ಮಾಡಿಸುವುದು ವಾಡಿಕೆ. ಆದರೆ, “ದಯವಿಟ್ಟು ಗಮನಿಸಿ’ ಚಿತ್ರದ ಹಾಡುಗಳನ್ನು ಸಂಗೀತಗಾರರಿಂದಲೇ ಬಿಡುಗಡೆ ಮಾಡಿಸಬೇಕು ಎಂದು ಚಿತ್ರತಂಡದವರು ಡಿಸೈಡ್‌ ಮಾಡಿಬಿಟ್ಟಿದ್ದರು. ಅದರಂತೆ ಗಿಟಾರ್‌ ಶ್ರೀನಿವಾಸ್‌, ಫ‌ೂಟ್‌ ರಮೇಶ್‌, ಶೆಹನಾಯ್‌ ರುದ್ರೇಶ್‌, ವೊಯಲಿನ್‌ ಮಣಿಭಾರತಿ, ಕೀಬೋರ್ಡ್‌ ಉಮೇಶ್‌, ಡ್ರಮ್ಸ್‌ ಮಂಜು ಮುಂತಾದವರನ್ನು ವೇದಿಕೆ ಮೇಲೆ ಕರೆಸಲಾಯಿತು.

ಹಾಗಂತ ಅವರು ಸಿಡಿಗಳನ್ನು ಬಿಡುಗಡೆ ಮಾಡಿದರು ಎಂದುಕೊಳ್ಳಬೇಡಿ. ಅದಾಗಿದ್ದು ಕೊನೆಗೆ. ಅದಕ್ಕೂ ಮುನ್ನ
ಅವರೆಲ್ಲರೂ ಲೈವ್‌ ಕಾರ್ಯಕ್ರಮ ಕೊಟ್ಟರು. ಲೈವ್‌ ಆರ್ಕೆಸ್ಟ್ರಾ ಮತ್ತು ಚಿತ್ರತಂಡದವರ ಮಾತುಗಳು ಮುಗಿಯುತ್ತಿದ್ದಂತೆ ಹಾಡುಗಳು ಬಿಡುಗಡೆಯಾದವು.

“ದಯವಿಟ್ಟು ಗಮನಿಸಿ’ ಚಿತ್ರವನ್ನು ಕೃಷ್ಣ ಸಾರ್ಥಕ್‌ ಎನ್ನುವವರು ನಿರ್ಮಿಸಿದರೆ, “ಆಟಗಾರ’ ಮುಂತಾದ ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದ ರೋಹಿತ್‌ ಪದಕಿ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಘು ಮುಖರ್ಜಿ, ಭಾವನಾ ರಾವ್‌, ಸಂಗೀತ ಭಟ್‌, ಮೇಘನಾ ರಾಜ್‌ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಂದು ಅವರೆಲ್ಲರೂ ಸಮಾರಂಭದಲ್ಲಿದ್ದರು.
ಹಾಡುಗಳ ಬಿಡುಗಡೆಗೆ ಕಾದಿದ್ದರು. ಅದೇ ಕಾರಣಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಾಲಿಡಲ್ಲಿಕ್ಕಾಗದಷ್ಟು ಜನ
ತುಂಬಿದ್ದರು. ಅವರೆಲ್ಲರೂ ಮಾತಾಡುವ ಮುನ್ನ ಅನನ್ಯ ಭಟ್‌, ಪಂಡಿತ್‌ ಪರಮೇಶ್ವರ ಹೆಗಡೆ, ಅನೂಪ್‌ ಸೀಳಿನ್‌ ಮುಂತಾದವರು ಚಿತ್ರದ ಹಾಡುಗಳನ್ನು ಹಾಡಿದರು.

ಮೊದಲಿಗೆ ಮಾತಾಡಿದ್ದು ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌. ಮೊದಲಿಂದಲೂ ಕಂಟೆಂಟ್‌ ಇರುವ ಸಿನಿಮಾಗಳು ಸಿಗುತ್ತಿರುವುದರಿಂದ, ಅನೂಪ್‌ ಖುಷಿಪಟ್ಟರು.

“ವಿಜಯ್‌ಪ್ರಸಾದ್‌, ಚೈತನ್ಯ ಮುಂತಾದ ಹಲವು ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದೇನೆ. ಅವರ ಚಿತ್ರಗಳಲ್ಲಿ ನಾನು ಹಾಡು ಕೊಟ್ಟೆ ಅನ್ನೋದಕ್ಕಿಂತ, ಚಿತ್ರದ ಕಥೆಗೆ ಶರಣಾಗಿದ್ದೇನೆ. ಈ ಚಿತ್ರ ಸಹ ಅದೇ ಮಾದರಿಯ ಚಿತ್ರ. ನನಗೆ ರೋಹಿತ್‌ ಪದಕಿ ಅವರ ಬರವಣಿಗೆ ಬಹಳ ಇಷ್ಟ. ಅದೊಂದು ದಿನ ಸ್ಕ್ರಿಪ್ಟ್ ತಂದರು. ಈ ಚಿತ್ರವಾಯಿತು’ ಎಂದರು ಅನೂಪ್‌ ಸೀಳಿನ್‌.

ರೋಹಿತ್‌ ಪದಕಿ ಆರಂಭದಲ್ಲಿ ಗೆಲುವಾಗಿಯೇ ಮಾತು ಪ್ರಾರಂಭಿಸಿದರು. ತಮ್ಮ ಟಾರ್ಚರ್‌ ತಡೆದುಕೊಂಡ ಇಡೀ ಚಿತ್ರತಂಡಕ್ಕೆ ಧನ್ಯವಾದ ಸಲ್ಲಿಸಿದರು. ಈ ಚಿತ್ರ ಬಿಡುಗಡೆಯಾಗುತ್ತಿದೆ ಎಂದರೆ ಅದಕ್ಕೆ ಕಾರಣ ಅನೂಪ್‌ ಸೀಳಿನ್‌ ಎಂದು ಹೇಳುವಷ್ಟರಲ್ಲೇ ಅವರ ಸಂಯಮದ ಕಟ್ಟೆ ಒಡೆದಿತ್ತು. ತುಂಬಾನೇ ಎಮೋಷನಲ್‌ ಆದ ರೋಹಿತ್‌ ಅಳುತ್ತಲೇ ಮಾತಾಡಿದರು. ಸ್ವಲ್ಪ ಸುಧಾರಿಸಿಕೊಂಡ ಅವರು ಚಿತ್ರದ ಬಗ್ಗೆ ಮಾತಾಡಿದರು. “ಇಲ್ಲಿ ನಾಲ್ಕು ಕಥೆಗಳನ್ನು 
ಹೇಳುವುದಕ್ಕೆ ಹೊರಟಿದ್ದೀನಿ. ಇದು ಎಲ್ಲರ ಜೀವನದಲ್ಲೂ ಅಥವಾ ಎಲ್ಲರ ಸುತ್ತ ನಡೆಯ ಬಹುದಾಗಿರುತ್ತವೆ. ಚಿತ್ರ ಚೆನ್ನಾಗಿದೆ ಎನ್ನುವುದಕ್ಕಿಂತ, ಕುತೂಹಲಕ್ಕೆ ನೋಡಿ. ಹಾಡುಗಳಾದರೆ ಶೇರ್‌ ಮಾಡಿ. ಇಂತಹ ಚಿತ್ರ ಗೆದ್ದರೆ ಹೊಸಬರು ಬೆಳೆಯುತ್ತಾರೆ’ ಎಂದು ಹೇಳಿ, ಸಮಾರಂಭ ಮುಗಿಸಿದರು.

ಟಾಪ್ ನ್ಯೂಸ್

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.