ಸಾಮಾನ್ಯ ಜ್ಞಾನದ ಕುರಿತ ಅಸತೋಮ


Team Udayavani, Apr 6, 2018, 4:10 PM IST

samanya.jpg

“ಹಾಕಿರೋ ದುಡ್ಡು ಬಂದರೆ ಮತ್ತೆ ಸಿನಿಮಾ ಮಾಡ್ತೀನಿ …’ ಹಾಗಂತ ನಿರ್ಮಾಪಕ ಅಶ್ವಿ‌ನ್‌ ಪರೈರಾ ಘೋಷಿಸುತ್ತಿದ್ದಂತೆ ಜನ ಚಪ್ಪಾಳೆ ಹೊಡೆದರು. ಅಶ್ವಿ‌ನ್‌ ಖುಷಿಯಾದರು. ಮಾತು ಮುಂದುವರೆಯಿತು. “ನಾನು ಶಾಲೆಯಲ್ಲಿ ಓದೋವಾಗ 35 ಅಂಕ ಬಂದರೆ ಅದೇ ದೊಡ್ಡ ವಿಷಯ. ಯಾವತ್ತೂ ರ್‍ಯಾಂಕ್‌ ಯೋಚನೆ ಮಾಡಿದವರೇ ಅಲ್ಲ. 35 ಬಂದರೆ ಸಾಕಾಗಿತ್ತು. ಈಗ ಯಾರು ನೋಡಿದರೂ 90 ಮಾರ್ಕ್ಸ್ ಅಂತಾರೆ.

ಹೆಚ್ಚು ಅಂಕವನ್ನೇನೋ ಪಡೀತಿದ್ದಾರೆ, ಅದರ ಜೊತೆಗೆ ಸಂಬಂಧ ಮರೀತಿದ್ದಾರೆ. ಅದನ್ನ ಈ ಚಿತ್ರದಲ್ಲಿ ತೋರಿಸುತ್ತಿದ್ದೀವಿ. ಈಗ ನೋಡಿ. ನಮ್ಮ ಆಡಿಯೋ ಫ‌ಂಕ್ಷನ್‌ ಆಗ್ತಿದೆ. ಯಾರಾದರೂ ಈ ಸಮಾರಂಭದ ಫೋಟೊ ಹಾಕ್ತಾರೆ. ಅದನ್ನ ನೋಡಿ ಎಷ್ಟೋ ಜನ ಫೇಸ್‌ಬುಕ್‌ನಲ್ಲಿ ಲೈಕ್‌ ಒತ್ತುತ್ತಾರೆ. ಮಾತನಾಡದಷ್ಟು ಬಿಝಿ ಆಗಿºಟ್ಟಿದ್ದಾರೆ. ಈ ವಿಷಯ ಇಟ್ಟುಕೊಂಡೇ ಈ ಸಿನಿಮಾ ಮಾಡಿದ್ದೇವೆ’ ಎಂದರು ಅಶ್ವಿ‌ನ್‌.

ಕಳೆದ ವಾರವಷ್ಟೇ ದುಬೈನಲ್ಲಿ “ಅಸತೋಮ ಸದ್ಗಮಯ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಬಂದ ಅಶ್ವಿ‌ನ್‌, ಈಗ ಬೆಂಗಳೂರಿನಲ್ಲಿ ಹಾಡುಗಳನ್ನು ಬಿಡುಗಡೆ ಮಾಡಿಸಿದ್ದಾರೆ. ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಚಂದನ್‌ ಶೆಟ್ಟಿ ಬಂದಿದ್ದರು. ನಿರ್ಮಾಪಕ ಮನು ಗೌಡ ಇದ್ದರು. ಇಂಡಿಯನ್‌ ಎಕನಾಮಿಕ್‌ ಟ್ರೇಡ್‌ ಆರ್ಗನೈಸೇಷನ್‌ನ ಅಧ್ಯಕ್ಷರಾದ ಆಸಿಫ್ ಇಕ್ಬಾಲ್‌ ಬಂದಿದ್ದರು ಅವರೆಲ್ಲರ ಜೊತೆಗೆ ಚಿತ್ರತಂಡದವರು ಇದ್ದರು. ನಾಯಕ ಕಿರಣ್‌ ರಾಜ್‌ ಒಬ್ಬರನ್ನು ಬಿಟ್ಟು.

ಮೊದಲು ಟ್ರೇಲರ್‌ ತೋರಿಸಿ ಮಾತು ಶುರು ಮಾಡಲಾಯಿತು. ಈ ಚಿತ್ರವನ್ನು ರಾಜೇಶ್‌ ವೇಣೂರು ಬರೆದು ನಿರ್ದೇಶಿಸಿದ್ದಾರೆ. ಅವರು ಹೇಳುವಂತೆ ಮಕ್ಕಳು ಮತ್ತು ಪೋಷಕರು ನೋಡಬೇಕಾದ ಚಿತ್ರವಂತೆ. “ಟ್ರೇಲರ್‌ ನೋಡಿದರೆ, ಇದು ಯಾವ ಜಾನರ್‌ಗೆ ಸೇರಿದ ಚಿತ್ರ ಎಂಬ ಪ್ರಶ್ನೆ ಬರುವುದು ಸಹಜ. ಇದು ಯಾವ ಜಾನರ್‌ ಎನ್ನುವುದಕ್ಕಿಂತ ಮಕ್ಕಳು ಮತ್ತು ಪೋಷಕರು ನೋಡಲೇಬೇಕಾದ ಸಿನಿಮಾ ಎಂದರೆ ತಪ್ಪಲ್ಲ.

ಇವತ್ತಿನ ತಲೆಮಾರಿನವರಿಗೆ ಡಿಗ್ರಿ ಜಾಸ್ತಿ, ಸಾಮಾನ್ಯ ಜ್ಞಾನ ಕಡಿಮೆ. ಈ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಸಂಗೀತ ನಿರ್ದೇಶಕ ವಹಾಬ್‌ ಸಲೀಮ್‌ ಇವತ್ತು ಬಂದಿಲ್ಲ. ಈ ಚಿತ್ರಕ್ಕಾಗಿ ವೆರೈಟಿಯ ಹಾಡುಗಳನ್ನು ಕೊಟ್ಟಿದದ್ದಾರೆ. ಈಗಾಗಲೇ ಚಿತ್ರದ ಸೆನ್ಸಾರ್‌ ಆಗಿದೆ. ಈ ತಿಂಗಳ ಕೊನೆಗೆ ಚಿತ್ರ ಬಿಡುಗಡೆಯಾಗಲಿದೆ’ ಎಂದರು. ಚಂದನ್‌ ಶೆಟ್ಟಿಗೆ ಈ ಸಮಾರಂಭಕ್ಕೆ ಬರುವುದಕ್ಕೆ ಮುಖ್ಯ ಕಾರಣ ಲಾಸ್ಯ ನಾಗರಾಜ್‌.

ಚಂದನ್‌ ಹಾಗೂ ಲಾಸ್ಯ ಇಬ್ಬರೂ ಕೆಲವು ದಿನಗಳ ಕಾಲ “ಬಿಗ್‌ ಬಾಸ್‌’ ಮನೆಯಲ್ಲಿದ್ದರು. ಅಲ್ಲಿ ಅವರಿಬ್ಬರ ಪರಿಚಯವಾಯಿತಂತೆ. ಅದೇ ಸ್ನೇಹದ ಮೇಲೆ ಅವರು ಅಂದಿನ ಸಮಾರಂಭಕ್ಕೆ ಬಂದಿದ್ದರು. “ಅಂದು ಲಾಸ್ಯ ನನಗೆ ತುಂಬಾನೇ ಸಪೋರ್ಟ್‌ ಮಾಡಿದ್ದರು. ಇವತ್ತು ಅವಳ ಚಿತ್ರಕ್ಕೆ ಸಪೋರ್ಟ್‌ ಮಾಡೋಕೆ ಬಂದಿದ್ದೀನಿ’ ಎಂದು ಚಂದನ್‌ ಹೇಳುವುದರ ಜೊತೆಗೆ, ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಅಂದು ರಾಧಿಕಾ ಚೇತನ್‌, ಲಾಸ್ಯ ನಾಗರಾಜ್‌, ಯಮುನಾ ಶ್ರೀನಿಧಿ ಮುಂತಾದವರು ವೇದಿಕೆಯ ಮೇಲಿದ್ದು, ಚಿತ್ರದ ಅನುಭವಗಳನ್ನು ಹಂಚಿಕೊಂಡರು.

ಟಾಪ್ ನ್ಯೂಸ್

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.