ಇಳಕಲ್ನಿಂದ “ಗುಳ್ಟು’ವರೆಗೂ
Team Udayavani, Apr 6, 2018, 4:10 PM IST
ನೀವು “ಗುಳ್ಟು’ ಸಿನಿಮಾ ನೋಡಿದ್ದೆರ ಖಂಡಿತಾ ನಿಮಗೆ ಇವರ ನಟನೆ ಇಷ್ಟವಾಗಿರುತ್ತದೆ. ಸಿಕ್ಕ ಪಾತ್ರಗಳನ್ನು ಸಮರ್ಥವಾಗಿ ನಿಭಾಹಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ. ಅಂದಹಾಗೆ, ಇವರ ಹೆಸರು ನವೀನ್ ಶಂಕರ್. “ಗುಳ್ಟು’ ಸಿನಿಮಾದ ನಾಯಕ. ಇದು ಇವರಿಗೆ ಮೊದಲ ಸಿನಿಮಾ. ಈ ಹಿಂದೆ ಒಂದು ಸಿನಿಮಾ ಆರಂಭವಾಗಿ ನಿಂತು ಹೋಗಿದೆ. ಹಾಗಾಗಿ, ನವೀನ್ಗೆ “ಗುಲ್ಟಾ’ ಮೊದಲ ಸಿನಿಮಾ.
ಇಳಕಲ್ನಲ್ಲಿ ಪಿಯುಸಿ ಮುಗಿಸಿದ ನವೀನ್ ಇಂಜಿನಿಯರಿಂಗ್ಗೆಂದು ಬೆಂಗಳೂರಿಗೆ ಬಂದವರು. ಆದರೆ, ಆಸಕ್ತಿ ಸಿನಿಮಾ ಕಡೆಗಿದ್ದ ಕಾರಣ ಎರಡೇ ವರ್ಷಕ್ಕೆ ಇಂಜಿನಿರಿಂಗ್ಗೆ ಗುಡ್ಬೈ ಹೇಳಿ, ವಾಹಿನಿಗಳಲ್ಲಿ ಕೆಲಸ ಆರಂಭಿಸಿದರಂತೆ. ಸಿನಿಮಾ ನಟನಾಗುವ ಮುನ್ನ ನಟನೆ ಕಲಿಯಬೇಕೆಂದು ಎರಡು ವರ್ಷಗಳ ಕಾಲ ರಂಗಭೂಮಿಯಲ್ಲಿ ವಿವಿಧ ನಾಟಕ, ಬೀದಿ ನಾಟಕಗಳನ್ನು ಮಾಡಿದ ಅನುಭವ ನವೀನ್ಗಿದೆ.
ಅದೇ ಅನುಭವದೊಂದಿಗೆ ಅವರು “ಗುಲ್ಟಾ’ಗೆ ಬಣ್ಣ ಹಚ್ಚಿದ್ದಾರೆ. “ಗುಳ್ಟು’ ನಿರ್ದೇಶಕ ಜನಾರ್ದನ್ ಹಾಗೂ ನವೀನ್ ಒಂದೇ ಕಾಲೇಜು. ಸಿನಿಮಾಸಕ್ತಿ ಹೊಂದಿದ್ದ ಇವರು, ಆಗಲೇ ಅವರಿಬ್ಬರು ಮುಂದೆ ಒಟ್ಟಿಗೆ ಸಿನಿಮಾ ಮಾಡುವ ಎಂದು ಮಾತನಾಡಿಕೊಂಡಿದ್ದರಂತೆ. ಅದರಂತೆ ಈಗ ಇಬ್ಬರು ಸೇರಿಕೊಂಡು ಸಿನಿಮಾ ಮಾಡಿದ್ದಾರೆ. “ಸಿನಿಮಾ ನೋಡಿದವರಿಂದ ಒಳ್ಳೆಯ ಮಾತು ಕೇಳಿಬರುತ್ತಿದೆ.
ನನ್ನ ನಟನೆಯ ಬಗ್ಗೆಯೂ ಮಾತನಾಡುತ್ತಿದ್ದಾರೆ. ಚಿತ್ರರಂಗದಿಂದಲೂ ಪ್ರೋತ್ಸಾಹ ಸಿಗುತ್ತಿದ್ದು, ಮುಂದೆಯೂ ಒಳ್ಳೆಯ ಸಿನಿಮಾ ಮಾಡುವಂತೆ ಸಲಹೆ ಕೊಡುತ್ತಿದ್ದಾರೆ’ ಎನ್ನುವುದು ನವೀನ್ ಮಾತು. ಅಂದಹಾಗೆ, ನವೀನ್ಗೆ ಈಗಾಗಲೇ ಒಂದಷ್ಟು ಅವಕಾಶಗಳು ಬರುತ್ತಿವೆಯಂತೆ. “ತುಂಬಾ ಅವಕಾಶಗಳು ಬರುತ್ತಿವೆ. ಒಳ್ಳೆಯ ಕಥೆಗಳನ್ನೇ ನೋಡಿಕೊಂಡು ಆಯ್ಕೆ ಮಾಡುತ್ತೇನೆ’ ಎನ್ನುತ್ತಾರೆ ನವೀನ್.
* ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
MUST WATCH
ಹೊಸ ಸೇರ್ಪಡೆ
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ