ಗೋವಿಂದು ಕನಸು ನನಸು


Team Udayavani, Jun 15, 2018, 6:00 AM IST

bb-32.jpg

ಕಳೆದ ಎರಡೂವರೆ ವರ್ಷಗಳಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಸಾ.ರಾ. ಗೋವಿಂದು, ಸದ್ಯದಲ್ಲೇ ತಮ್ಮ ಅವಧಿ ಮುಗಿಸಿ, ಅಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡುತ್ತಿದ್ದಾರೆ. ವಾಣಿಜ್ಯ ಮಂಡಳಿಗೆ ಇದೇ ತಿಂಗಳ 26ರಂದು ಚುನಾವಣೆಗಳು ನಡೆಯಲಿದ್ದು, ಅಲ್ಲಿಯವರೆಗೂ ಗೋವಿಂದು ಅವರು ಅಧ್ಯಕ್ಷರಾಗಿರುತ್ತಾರೆ. ಮುಂದಿನ ಅಧ್ಯಕ್ಷರ್ಯಾರಾಗಬಹುದು ಎಂಬ ಚರ್ಚೆ ಕನ್ನಡ ಚಿತ್ರರಂಗದ ವಲಯದಲ್ಲಿ ಜೋರಾಗಿ ನಡೆಯುತ್ತಿದೆ. ಈಗಾಗಲೇ ಕೆಲವು ಪ್ರಮುಖರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಅವರಲ್ಲೊಬ್ಬರು ಗೋವಿಂದು ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

ಈ ಎರಡೂವರೆ ವರ್ಷಗಳ ಅವಧಿಯಲ್ಲಿ, ಸಾಂಸ್ಕೃತಿಕ ಭವನವೊಂದನ್ನು ಕಟ್ಟಿಸುವುದಕ್ಕೆ ಸಾಧ್ಯವಾಗಿಲ್ಲ ಎನ್ನುವುದು ಬಿಟ್ಟರೆ, ಅಂದುಕೊಂಡಿದ್ದೆಲ್ಲವೂ ಆಗಿದೆ ಎನ್ನುತ್ತಾರೆ ಗೋವಿಂದು. “ನನ್ನ ಅವಧಿಯಲ್ಲಿ ಸಬ್ಸಿಡಿ ಚಿತ್ರಗಳ ಸಂಖ್ಯೆ 100ರಿಂದ 125ಕ್ಕೆ ಏರಿತು. ಮುಂಚೆ ಎರಡೂರು ವರ್ಷಗಳಿಗೊಮ್ಮೆ ರಾಜ್ಯ ಪ್ರಶಸ್ತಿ ನೀಡಲಾಗುತಿತ್ತು. ಈಗ ಪ್ರತಿ ವರ್ಷ ಒಂದೇ ದಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗುತ್ತಿದೆ. ಹಾಗೆಯೇ ಗುಣಾತ್ಮಕ ಚಿತ್ರಗಳಿಗೆ ಸಬ್ಸಿಡಿ ಕೊಡುವ ವಿಷಯದಲ್ಲೂ ವಿಳಂಬವಾಗುತ್ತಿತ್ತು. ಈಗ ಅದೂ ಬೇಗ ಆಗುತ್ತಿದೆ. ಇನ್ನು ಕಳೆದ ಬಜೆಟ್‌ನಲ್ಲಿ ಕಲ್ಯಾಣನಿಧಿಯನ್ನು ಒಂದು ಕೋಟಿಯಿಂದ 10 ಕೋಟಿಯವರೆಗೂ ಏರಿಸಲಾಗಿದೆ. ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಜಾಗ ಗೊತ್ತಾಗಿದ್ದು, ಅದನ್ನೂ ಸದ್ಯದಲ್ಲೇ ಕಾರ್ಯರೂಪಕ್ಕೆ ತರಲಾಗುತ್ತದೆ. ಮಂಡಳಿಯ ವತಿಯಿಂದ ಕ್ಷೇಮನಿಧಿ ಸ್ಥಾಪಿಸಲಾಗಿದ್ದು, ಅದರಿಂದ ಅನಾರೋಗ್ಯದಿಂದ ಬಳಲುತ್ತಿರುವ ಹಲವರಿಗೆ ಸಹಾಯ ಮಾಡಲಾಗಿದೆ. “ಮಾಸ್ತಿಗುಡಿ’ ಪ್ರಕರಣದಲ್ಲಿ ಮೃತಪಟ್ಟ ಅನಿಲ್‌ ಮತ್ತು ಉದಯ್‌ ಅವರಿಗೆ ಸರ್ಕಾರದಿಂದ ಐದು ಲಕ್ಷ ಕೊಡಿಸಲಾಗಿದೆ. 

ಇನ್ನು ಚಿತ್ರರಂಗಕ್ಕೆ ಪ್ರತ್ಯೇಕವಾದ ಸಾಂಸ್ಕೃತಿಕ ಭವನವೊಂದನ್ನು ನಿರ್ಮಿಸುವ ಆಸೆಯಿತ್ತು. ಈ ಕುರಿತು ಬೆಂಗಳೂರಿನಲ್ಲಿ ಪಾಲಿಕೆ ವ್ಯಾಪ್ತಿಗೆ ಬರುವ ಜಾಗವನ್ನೂ ನೋಡಲಾಗಿತ್ತು. ಕೆಲವು ಕಡೆ ಸ್ಥಳ ಪರಿಶೀಲನೆ ಸಹ ಆಗಿತ್ತು. ಆದರೆ, ಕಾರಣಾಂತರಗಳಿಂದ ಅದೊಂದು ಕೆಲಸವಾಗಲಿಲ್ಲ. ಅದೊಂದು ಬಾಕಿ ಉಳಿದಿರುವುದು ಬಿಟ್ಟರೆ, ಸಾಕಷ್ಟು ಕೆಲಸಗಳಾಗಿವೆ. ನಾನು ಅಧ್ಯಕ್ಷನಾಗಿ ಇರಲಿ, ಇಲ್ಲದಿರಲಿ ಆ ಕೆಲಸ ಪೂರೈಸುವುದಕ್ಕೆ ನನ್ನ ಕೈಲಾದ ಕೆಲಸ ಮಾಡುತ್ತೀನಿ’ ಎನ್ನುತ್ತಾರೆ ಗೋವಿಂದು.

ತಾವು ಇಷ್ಟು ಕಾಲ ಅಧ್ಯಕ್ಷರಾಗಿದ್ದಕ್ಕೆ ಎಲ್ಲರ ನಂಬಿಕೆ ಮತ್ತು ಸಹಕಾರವೇ ಕಾರಣ ಎಂದು ಹೇಳಲು ಗೋವಿಂದು ಅವರು ಮರೆಯುವುದಿಲ್ಲ. “ಎಲ್ಲರೂ ನಂಬಿಕೆ ಇಟ್ಟು ಸಹಕಾರ ಕೊಟ್ಟಿದ್ದರಿಂದ, ಇಷ್ಟು ದಿನಗಳ ಕಾಲ ಅಧ್ಯಕ್ಷನಾಗಿರುವುದಕ್ಕೆ ಸಾಧ್ಯವಾಯಿತು. ಆ ನಂಬಿಕೆಗೆ ಧಕ್ಕೆ ಬಾರದಂತೆ ಕೆಲಸ ಮಾಡಿದ್ದೀನಿ ಎಂಬ ಸಂತೋಷ ಇದೆ. ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿದ ಖುಷಿಯೂ ಇದೆ. ಒಟ್ಟಾರೆ ಒಳ್ಳೆಯ ಕೆಲಸ ಮಾಡಿದ ತೃಪ್ತಿ ಇದೆ. ಮುಂಬರುವ ಅಧ್ಯಕ್ಷರು ಇದನ್ನು ಮುಂದುವರೆಸಬೇಕು. ಈ ವಿಷಯದಲ್ಲಿ ನನ್ನ ಸಂಪೂರ್ಣ ಸಹಕಾರವಿರುತ್ತದೆ. ನನ್ನ ಅವಧಿ ಮುಗಿಯಿತು ಅಂತ ಸುಮ್ಮನಿರುವುದಿಲ್ಲ. ನನ್ನಿಂದ ಏನು ಬಾಕಿ ಇತ್ತೋ ಅದನ್ನು ಸಂಪೂರ್ಣಗೊಳಿಸುವ ಕೆಲಸ ಮುಂದುವರೆಸುತ್ತೇನೆ’ ಎನ್ನುತ್ತಾರೆ ಗೋವಿಂದು.

ತಾವು ಹಾಕಿಕೊಟ್ಟ ಮಾದರಿಯನ್ನು, ಮುಂದೆ ಬರುವವರು ಉಳಿಸಿಕೊಂಡು, ಮಂಡಳಿಗೆ ಗೌರವ ತರಲಿ ಎನ್ನುವ ಗೋವಿಂದು, “ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಲವು ದಶಕಗಳ ಇತಿಹಾಸವಿದೆ. ಆದರೆ, ಈಗ ಯಾರಿಗೆ ಇಲ್ಲಿ ಅಧಿಕಾರ ಸಿಗುವುದಿಲ್ಲವೋ ಅವರೇ ಒಂದೊಂದು ಮಂಡಳಿಯನ್ನು ಹುಟ್ಟುಹಾಕುತ್ತಿದ್ದಾರೆ. ಇಲ್ಲಿ ಇದ್ದು ಜಯಿಸಬೇಕು. ಅದು ಬಿಟ್ಟು ಎಲ್ಲರೂ ಒಂದೊಂದು ವಾಣಿಜ್ಯ ಮಂಡಳಿ ಸ್ಥಾಪಿಸಿದರೆ ಹೇಗೆ? ಮಂಡಳಿಯ ಇಷ್ಟು ವರ್ಷದ ಇತಿಹಾಸವನ್ನು ಗಮನಿಸಿ, ಕನ್ನಡ ಚಿತ್ರರಂಗಕ್ಕೆ ಅದು ಮಾತೃ ಸಂಸ್ಥೆಯೆಂದು ಪರಿಗಣಿಸಿ ಸರ್ಕಾರ ಮಾನ್ಯತೆ ಕೊಡಬೇಕು’ ಎನ್ನುತ್ತಾರೆ ಗೋವಿಂದು.

ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.