ನವರಸ ಚಿತ್ರ: ನಿರ್ಮಾಪಕರ ಕನಸು; ನಿರ್ದೇಶಕರ ವೈರ
Team Udayavani, Jun 23, 2017, 11:59 AM IST
ಸದ್ಯ “ವೈರ’ ಸಿನಿಮಾ ನಿರ್ದೇಶಿಸಿ, ನಟಿಸಿರುವ ನವರಸನ್ ಅವರಿಗೆ ಈ ಸಿನಿಮಾ ನಿರ್ದೇಶಿಸಬೇಕೆಂಬ ಯಾವ ಆಸೆಯೂ ಇರಲಿಲ್ಲವಂತೆ. ಯಾರಾದರೂ ಬೇರೆ ನಿರ್ದೇಶಕರಿಂದ ಈ ಕಥೆ ಮಾಡಿಸಿ, ತಾನು ನಟಿಸಬೇಕೆಂದುಕೊಂಡಿದ್ದರಂತೆ.
ಅದೇ ಉದ್ದೇಶದಿಂದ ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಅವರಲ್ಲಿ ಕಥೆ ಹೇಳಿದರಂತೆ. ಕಥೆ ಕೇಳಿ ಖುಷಿಯಾದ
ಮಂಜುನಾಥ್ ಅವರು, ನಿಮ್ಮ ಕನಸನ್ನು ಬೇರೆಯವರ ಕೈಗೆ ಕೊಡುವ ಬದಲು ನೀವೇ ನಿರ್ದೇಶಿಸಿ, ನಟಿಸಿ ಎಂದರಂತೆ. ಹಾಗಾಗಿ, ತಾನು “ವೈರ’ ಸಿನಿಮಾವನ್ನು ನಿರ್ದೇಶಿಸಬೇಕಾಯಿತು ಎಂದು ಹೇಳಿಕೊಂಡರು ನವರಸನ್. ಅವರ ಮಾತಿಗೆ ವೇದಿಕೆಯಾಗಿದ್ದು “ವೈರ’ ಚಿತ್ರದ ಟ್ರೇಲರ್ ಬಿಡುಗಡೆ. ಇತ್ತೀಚೆಗೆ ಚಿತ್ರತಂಡ ಜೊತೆಯಾಗಿ “ವೈರ’
ಚಿತ್ರದ ಟ್ರೇಲರ್ ಬಿಡುಗಡೆ ಮಾಡಿತು.
ನಿರ್ಮಾಪಕ ಮಂಜುನಾಥ್ ಅವರು ಈ ಸಿನಿಮಾ ನಿರ್ಮಿಸಲು ಕಾರಣ ಚಿತ್ರದ ಕಥೆಯಂತೆ. “ನನಗೆ ಸಣ್ಣ ಸಿನಿಮಾ ದೊಡ್ಡ ಸಿನಿಮಾ ಎಂದಿಲ್ಲ. ಕಥೆ ಮುಖ್ಯ. ಕಥೆ ಚೆನ್ನಾಗಿದ್ದರೆ ನಾನು ಸಿನಿಮಾ ಮಾಡುತ್ತೇನೆ. ನವರಸನ್ ಬಂದು ಕಥೆ ಹೇಳಿದರು. ಆ ಸಿನಿಮಾವನ್ನು ನಾನು ಕನಸು ಕಂಡೆ. ನನ್ನ ಕನಸಿನಂತೆ ಈ ಸಿನಿಮಾವನ್ನು ಮಾಡಿಕೊಡಿ ಎಂದೆ. ಅದರಂತೆ ನವರಸನ್ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಕನ್ನಡಕ್ಕೆ ಇದು ಒಳ್ಳೆಯ ಸಿನಿಮಾವಾಗುವ ವಿಶ್ವಾಸವಿದೆ’ ಎನ್ನುವುದು ಮಂಜುನಾಥ್ ಮಾತು.
ಚಿತ್ರಕ್ಕೆ ರವಿ ಬಸ್ರೂರು ಸಂಗೀತ, ಹಿನ್ನೆಲೆ ಸಂಗೀತ ನೀಡಿದ್ದಾರೆ. ನಿರ್ದೇಶಕರು ಬಂದು ತಮ್ಮ ಸಿನಿಮಾಕ್ಕೆ ಕೆಲಸ ಮಾಡಿಕೊಡಿ ಎಂದಾಗ, “ಫ್ರೆಂಡ್ಶಿಪ್ ಇದ್ದರೆ ಜೊತೆಗೆ ಟಿ ಕುಡಿಯುವ, ಊಟ ಮಾಡುವ. ಕೆಲಸ ಮಾತ್ರ ನನಗೆ ಇಷ್ಟವಾದರೆ ಮಾತ್ರ ಮಾಡುತ್ತೇನೆ’ ಎಂದರಂತೆ ರವಿ ಬಸ್ರೂರು. ಆದರೆ, ಸಿನಿಮಾ ನೋಡಿದ ಕೂಡಲೇ ಖುಷಿಯಿಂದ ಕೆಲಸ ಮಾಡಿಕೊಡುತ್ತೇನೆ ಎಂದರಂತೆ. ಹೀಗೆ ಖುಷಿಯಿಂದ ಹೇಳಿಕೊಂಡೆ ರವಿ ಬಸ್ರೂರುಗೆ ಮೈಕ್ ಕೊಟ್ಟರು ನವರಸನ್. ಚಿತ್ರ ಕತೆಯಿಂದ ಹಿಡಿದು ತಾಂತ್ರಿಕವಾಗಿ ಸಿನಿಮಾ ಚೆನ್ನಾಗಿ ಬಂದಿದ್ದು, ಹಿನ್ನೆಲೆ ಸಂಗೀತಕ್ಕೆ ಹೆಚ್ಚಿನ ಮಹತ್ವವಿದೆಯಂತೆ. ಆ ಕಾರಣದಿಂದ ತಾನು ಒಪ್ಪಿಕೊಂಡಿದ್ದಾಗಿ ಹೇಳಿದರು. ನಾಯಕಿ ಪ್ರಿಯಾಂಕಾ
ಮಲಾ°ಡ್ ಅವರದ್ದು ಕಥೆಗೆ ಟ್ವಿಸ್ಟ್ ಕೊಡುವ ಪಾತ್ರವಂತೆ. ಹಿರಿಯ ನಿರ್ಮಾಪಕ ಜಿ.ಕೆ.ರೆಡ್ಡಿ ಕೂಡಾ ತಂಡಕ್ಕೆ
ಶುಭಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
MUST WATCH
ಹೊಸ ಸೇರ್ಪಡೆ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ