ಮುಂದಿನ ಬದಲಾವಣೆಗೆ ಸಿದ್ಧರಾಗಿ
Team Udayavani, Sep 14, 2018, 6:00 AM IST
ಗೀತರಚನೆಕಾರನಾಗಬೇಕು ಅಂತ ತುಮಕೂರಿನಿಂದ ಕೆಂಪು ಬಸ್ಸು ಹತ್ತಿ ಬಂದಿದ್ದರಂತೆ ಪ್ರವೀಣ್ ಭೂಷಣ್. ಆ ನಂತರ ಗೀತರಚನೆಕಾರರಾದ ಅವರು, ಈಗ ನಟ-ನಿರ್ದೇಶಕರೂ ಆಗಿದ್ದಾರೆ, “ಮುಂದಿನ ಬದಲಾವಣೆ’ ಎಂಬ ಚಿತ್ರದ ಮೂಲಕ.
ಇಂಥದ್ದೊಂದು ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿರುವ ಪ್ರವೀಣ್, ಇತ್ತೀಚೆಗೆ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಹಾಡುಗಳನ್ನು ಬಿಡುಗಡೆ ಮಾಡಿದ್ದು ಪ್ರವೀಣ್ ಅವರಿಂದ ಮೊದಲ ಬಾರಿಗೆ ಹಾಡು ಬರೆಸಿಕೊಂಡ ಮಣಿಕಾಂತ್ ಕದ್ರಿ. ಮಣಿಕಾಂತ್ ಜೊತೆಗೆ ನಟ ಅನಿರುದ್ಧ್ ಸಹ ಇದ್ದರು. ಪ್ರವೀಣ್ ಒಂದು ಚಿತ್ರ ಮಾಡಬೇಕು ಎಂದು ಕನಸು ಕಂಡು, ಹಲವು ನಿರ್ಮಾಪಕರಿಗೆ ಕಥೆ ಹೇಳಿದ್ದಾರೆ. ಆದರೆ, ಯಾರೊಬ್ಬ ನಿರ್ಮಾಪಕರೂ ಚಿತ್ರ ಮಾಡುವುದಕ್ಕೆ ಮುಂದೆ ಬರಲಿಲ್ಲವಂತೆ. ಅದರಲ್ಲೂ ಒಬ್ಬ ನಿರ್ಮಾಪಕರು ಆರು ತಿಂಗಳ ಕಾಲ ಕಾಯಿಸಿದರಂತೆ. ಕೊನೆಗೆ ಪ್ರವೀಣ್ ಮನೆಯವರೇ ಕಡಿಮೆ ಬಜೆಟ್ನಲ್ಲಿ ಚಿತ್ರ ಮಾಡೋಕೆ ಮುಂದಾದರಂತೆ.
“ಇದೊಂದು ಅದ್ಭುತ ಕಥೆ ಅಲ್ಲ. ಆದರೆ, ಎಲ್ಲೂ ಬೋರ್ ಹೊಡೆಸದೆ, ಮನರಂಜಿಸುವ ಕಥೆ ಇದು. ಇದರಲ್ಲಿ ಕಾಮಿಡಿ, ಥ್ರಿಲ್ ಎಲ್ಲವೂ ಇದೆ. 90 ಪರ್ಸೆಂಟ್ ಹೊಸಬರೇ ಈ ಚಿತ್ರದಲ್ಲಿದ್ದಾರೆ. ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದು, ಅಕ್ಟೋಬರ್ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಮೊದಲ ಮೂರು ದಿನಗಳಲ್ಲೇ ಬಂದು ಚಿತ್ರ ನೋಡಿ ಹಾರೈಸಿ’ ಎಂದು ಪ್ರವೀಣ್ ಕರೆ ನೀಡಿದರು. “ಮುಂದಿನ ಬದಲಾವಣೆ’ ಚಿತ್ರದಲ್ಲಿ ಸಂಗೀತ, ಲಕ್ಷ್ಮಣ್ ಗೌಡ, ಮಾಲಾಶ್ರೀ, ಕಾವ್ಯ ಮುಂತಾದವರು ನಟಿಸಿದ್ದಾರೆ. ಕೋಟೇಶ್ವರ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ