ಹಾಡುಗಳ ದಾರಿಯಲ್ಲಿ…


Team Udayavani, Jan 19, 2018, 1:04 PM IST

19-51.jpg

“ಮಾಮ, ನಮ್ಮ ಚಿತ್ರದ ಆಡಿಯೋ ಬಿಡುಗಡೆಗೆ ಬರಬೇಕು. ಇನ್ವಿಟೇಶನ್‌ ಬಂದು ಕೊಡುತ್ತೇನೆ’ ಎಂದರಂತೆ ಅನೂಪ್‌. ಅದಕ್ಕೆ ಜಗ್ಗೇಶ್‌ ಹೇಳಿದ್ದು ಒಂದೇ ಮಾತು. “ಇನ್ವಿಟೇಶನ್‌ ಎಲ್ಲಾ ಏನು ಬೇಡ. ಹೇಳಿದ್ದೀಯಲ್ಲ ಸಾಕು. ಏನಿದ್ರೂ ಒಂದು ಫೋನ್‌ ಮಾಡು ಸಾಕು …’ ಅಂದರಂತೆ ಜಗ್ಗೇಶ್‌. ಹಾಗೆ ಮಾತು ಕೊಟ್ಟಂತೆ, ಅನೂಪ್‌ ಅಭಿನಯದ ಹೊಸ ಚಿತ್ರ “ಸಾಗುವ ದಾರಿಯಲ್ಲಿ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು ಜಗ್ಗೇಶ್‌. ಜೊತೆಗೆ ಪುನೀತ್‌ ಇದ್ದರು. ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ದೇವರಾಜ್‌, ಅನೂಪ್‌ ತಂದೆ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಇದ್ದರು. ಅವರೆಲ್ಲರ ಸಮ್ಮುಖದಲ್ಲಿ “ಸಾಗುವ ದಾರಿಯಲ್ಲಿ’ ಚಿತ್ರದ ಹಾಡುಗಳ ಬಿಡುಗಡೆಯಾಯಿತು.

ಅಂದು ಜಗ್ಗೇಶ್‌ ಅವರು ಚಾಮುಂಡೇಶ್ವರಿ ಸ್ಟುಡಿಯೋಗೆ ಕಾಲಿಡುತ್ತಿದ್ದಂತೆಯೇ, “ಏನ್‌ ಮಾಮ, ನನ್‌ ಟೈಪ್‌ ಡ್ರೆಸ್‌ …’ ಹಾಕಿದ್ದೀರಿ ಎಂದರಂತೆ ಅನೂಪ್‌. ಏಕೆಂದರೆ, ಅಂದು ಇಬ್ಬರೂ ಒಂದೇ ತರಹದ ಶರ್ಟ್‌ ತೊಟ್ಟು ಬಂದಿದ್ದರು. ಇದಕ್ಕೆ ವೇದಿಕೆ ಮೇಲೆ ಉತ್ತರ ಕೊಟ್ಟ ಜಗ್ಗೇಶ್‌, “ನನ್ನ ಸ್ಟಾರ್‌ ನಿನಗೆ ಬರಲಿ ಎಂದರು. ನಂತರ ಮಾತನಾಡಿದ ಅವರು. “ಅನೂಪ ಚಿಕ್ಕ ವಯಸ್ಸಿಗೆ ತಾಯಿಯನ್ನ ಕಳೆದುಕೊಂಡ. ಆ ಸಂದರ್ಭದಲ್ಲಿ ತಂದೆ-ತಾಯಿ ಎರಡೂ ಆಗಿದ್ದವರು ಗೋವಿಂದು. ಮಕ್ಕಳನ್ನ ಚೆನ್ನಾಗಿ ಬೆಳೆಸಿದರು. ಇವತ್ತು ಅವರದೇ ಕಥೆ, ಚಿತ್ರವಾಗಿ ಬಂದಿದೆ. ಇವತ್ತು ಎಲ್ಲಾ ಭಾಷೆಯ ಚಿತ್ರಗಳು ಸಹ ಇಲ್ಲಿ ಬಿಡುಗಡೆಯಾಗುತ್ತಿದೆ. ಯಾವ ಭಾಷೆ ಚಿತ್ರವಾದರೂ ನೋಡಿ. ಆದರೆ, ನಿಮ್ಮ ಮೊದಲ ಪ್ರಾಶಸ್ತ್ಯ ಕನ್ನಡಕ್ಕಿರಲಿ. ನಮ್ಮನ್ನೆಲ್ಲಾ ಪ್ರೇಕ್ಷಕರು ಆಶೀರ್ವಾದ ಮಾಡಿ ಬೆಳೆಸಿದ್ದಾರೆ. ಮಕ್ಕಳನ್ನೂ ಅದೇ ತರಹ ಬೆಳೆಸಿ. ಅವರನ್ನು ಮುಂದಿನ ಪೀಳಿಗೆಗೆ ದಾಟಿಸಿ’ ಎಂದು ಕರೆ ನೀಡಿದರು.

ಅಂದು ಪುನೀತ್‌ ಮತ್ತು ದೇವರಾಜ್‌ ಹೆಚ್ಚು ಮಾತನಾಡಲಿಲ್ಲ. ದೇವರಾಜ್‌ ಈ ಚಿತ್ರದಲ್ಲಿ ತಮಗೊಂದು ಒಳ್ಳೆಯ ಪಾತ್ರ ಸಿಕ್ಕಿದೆ ಎನ್ನುವುದರ ಜೊತೆಗೆ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಇನ್ನು ಪುನೀತ್‌, “ಈ ಚಿತ್ರತಂಡಕ್ಕೆ ಯಶಸ್ಸು ಸಿಗಲಿ. ಎಲ್ಲರ ಆಶೀರ್ವಾದ ಈ ತಂಡದ ಮೇಲಿರಲಿ. ನಾನು ಜಗ್ಗೇಶ್‌ ಅವರ ಅಭಿಮಾನಿ. “ತರೆಲ ನನ್ಮಗ’, “ಮಠ’ ಮುಂತಾದ ಚಿತ್ರಗಳನ್ನು ಹಲವು ಬಾರಿ ನೋಡಿದ್ದೀನಿ’ ಎಂದು ಹೇಳಿದರು.

ಸಮಾರಂಭದಲ್ಲಿ ನಿರ್ಮಾಪಕ ಶಿವಶಂಕರ್‌, ನಿರ್ದೇಶಕ ಶಿವಕುಮಾರ್‌, ಉಮೇಶ್‌ ಬಣಕಾರ್‌, ಎನ್‌.ಎಂ. ಸುರೇಶ್‌, ಎಂ.ಜಿ. ರಾಮಮೂರ್ತಿ, ಎಚ್‌. ವಾಸು ಸೇರಿದಂತೆ ಹಲವರು ಹಾಜರಿದ್ದರು.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.