ವಿಕ್ರಾಂತ್ ರೋಣನಿಗೆ ಓಟಿಟಿಯಿಂದ ಭರ್ಜರಿ ಆಫರ್:OTTಯಲ್ಲೇ ರಿಲೀಸ್ ಆಗುತ್ತಾ ಕಿಚ್ಚನ ಚಿತ್ರ
Team Udayavani, Jan 7, 2022, 3:12 PM IST
ಕೋವಿಡ್, ಲಾಕ್ಡೌನ್ ಅನಿಶ್ಚಿತತೆಯಿಂದ ಅನೇಕ ಸಿನಿಮಾಗಳು ಓಟಿಟಿ ಮೊರೆ ಹೋಗುತ್ತಿವೆ. ಇನ್ನು, ಓಟಿಟಿಗಳು ಕೂಡಾ ಸ್ಟಾರ್ ಸಿನಿಮಾಗಳಿಗೆ ಭರ್ಜರಿ ಆಫರ್ ನೀಡುತ್ತಿರೋದು ಸುಳ್ಳಲ್ಲ. ಬೇರೆ ಬೇರೆ ಭಾಷೆಯ ಅನೇಕ ಸ್ಟಾರ್ ಸಿನಿಮಾಗಳಿಗೆ ಓಟಿಟಿಗಳು ಕೋಟಿಗಟ್ಟಲೇ ಆಫರ್ ನೀಡುತ್ತಿವೆ. ಈಗ ಕನ್ನಡ ಚಿತ್ರವೊಂದಕ್ಕೆ ಓಟಿಟಿ ಭರ್ಜರಿ ಆಫರ್ ನೀಡಿದೆ. ಅದು ಸುದೀಪ್ ನಟನೆಯ “ವಿಕ್ರಾಂತ್ ರೋಣ’ ಚಿತ್ರಕ್ಕೆ.
ಹೌದು, ಸುದೀಪ್ ಅವರ ಬಹುನಿರೀಕ್ಷಿತ “ವಿಕ್ರಾಂತ್ ರೋಣ’ ಸಿನಿಮಾ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಫೆ.24ಕ್ಕೆ ತೆರೆಕಾಣಬೇಕಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಆ ದಿನಾಂಕಕ್ಕೆ ಸಿನಿಮಾ ಬಿಡುಗಡೆ ಮಾಡೋದು ಕಷ್ಟ ಎಂಬ ಮಾತು ಕೇಳಿಬರುತ್ತಿದೆ. ಈ ನಡುವೆಯೇ ಓಟಿಟಿಗಳಿಂದ “ವಿಕ್ರಾಂತ್ ರೋಣ’ನಿಗೆ ಭರ್ಜರಿ ಆಫರ್ಗಳು ಬರುತ್ತಿವೆ ಎಂಬ ಸುದ್ದಿ ಹಬ್ಬಿದೆ. ನೇರವಾಗಿ ಚಿತ್ರವನ್ನು ಓಟಿಟಿಯಲ್ಲಿ ರಿಲೀಸ್ ಮಾಡುವ ಆಫರ್ ಬಂದಿದೆ.
ಇದನ್ನೂ ಓದಿ:ಮತ್ತೆ ಮೌನ,ಮುಂದುವರಿದ ಆತಂಕ! ರಿಲೀಸ್ ಡೇಟ್ಸ್ ಅನೌನ್ಸ್ ಮಾಡಿದ್ದ ಸಿನಿಮಾಗಳು ಮುಂದಕ್ಕೆ..
ಈ ಬಗ್ಗೆ ನಿರ್ಮಾಪಕ ಜಾಕ್ ಮಂಜು ಅವರನ್ನು ಪ್ರಶ್ನಿಸಿದಾಗ ಅವರು, ಸಿನಿಮಾವನ್ನು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವಂತೆ ಆಫರ್ ಬಂದಿರೋದು ನಿಜ ಎನ್ನುತ್ತಾರೆ. “ನಮ್ಮ ಸಿನಿಮಾವನ್ನು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವಂತೆ ಆಫರ್ ಬಂದಿರೋದು ನಿಜ. ದೊಡ್ಡ ಮೊತ್ತವನ್ನೇ ನಮಗೆ ಓಟಿಟಿಗಳು ಆಫರ್ ಮಾಡಿವೆ. ಆದರೆ, ನಾವಿನ್ನು ನಿರ್ಧರಿಸಿಲ್ಲ. ನಮಗೆ ಚಿತ್ರಮಂದಿರದಲ್ಲೇ ರಿಲೀಸ್ ಮಾಡಬೇಕೆಂಬ ಆಸೆ. ಸಿನಿಮಾವನ್ನು 3ಡಿಯಲ್ಲೂ ಮಾಡಿದ್ದೇವೆ. ಹಾಗಾಗಿ, ಓಟಿಟಿ ರಿಲೀಸ್ ಬಗ್ಗೆ ಏನೂ ನಿರ್ಧರಿಸಿಲ್ಲ. ಸದ್ಯ ಮೂರನೇ ಅಲೆಯ ಪ್ರಭಾವವನ್ನು ನೋಡಿಕೊಂಡು ಮೂರ್ನಾಲ್ಕು ವಾರಗಳ ನಂತರ, ನಮ್ಮ ತಂಡದೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ’ ಎನ್ನುವುದು ನಿರ್ಮಾಪಕರ ಮಾತು.
ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವಂತೆ ಆಫರ್ ಬಂದಿರೋದು ನಿಜ. ದೊಡ್ಡ ಮೊತ್ತವನ್ನೇ ನಮಗೆ ಓಟಿಟಿಗಳು ಆಫರ್ ಮಾಡಿವೆ. ಸದ್ಯ ಮೂರನೇ ಅಲೆಯ ಪ್ರಭಾವವನ್ನು ನೋಡಿಕೊಂಡು ಮೂರ್ನಾಲ್ಕು ವಾರಗಳ ನಂತರ ನಿರ್ಧರಿಸುತ್ತೇವೆ.- ಜಾಕ್ ಮಂಜು, ನಿರ್ಮಾಪಕ
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…