ಗಾಂಧಾರಿ-375 ತಂಡದವರ ಆನಂದಕ್ಕೆ ಪಾರವೇ ಇಲ್ಲ


Team Udayavani, May 26, 2017, 2:27 PM IST

Gandhari-375.jpg

ಕಿರುತೆರೆಯ ಮತ್ತೂಂದು ಜನಪ್ರಿಯ ಮುಖ ಇದೀಗ ಹಿರಿತೆರೆಗೆ ಜಂಪ್‌ ಆಗುತ್ತಿದೆ. ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಗಾಂಧಾರಿ’ ಧಾರಾವಾಹಿಯ ನಾಯಕಿ ಕಾವ್ಯ ಗೌಡ, ಇದೀಗ ರವಿಚಂದ್ರನ್‌ ಅಭಿನಯದ “ಬಕಾಸುರ’ ಚಿತ್ರಕ್ಕೆ ನಾಯಕಿಯಾಗಿ
ಆಯ್ಕೆಯಾಗಿದ್ದಾರೆ. ಹಾಗೆ ಆಯ್ಕೆಯಾಗುವುದಕ್ಕೆ ಕಾರಣವೇನು ಗೊತ್ತಾ, “ಗಾಂಧಾರಿ’. ಆ ಧಾರಾವಾಹಿಯಲ್ಲಿ ಕಾವ್ಯದು ಡಬ್ಬಲ್‌ ರೋಲ್‌. ಎರಡು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಿರುವುದು ನೋಡಿದ, ಚಿತ್ರತಂಡದವರು, ನಾಯಕಿಯ ಪಾತ್ರವನ್ನು ಕಾವ್ಯಗೆ ಕೊಟ್ಟಿದ್ದಾರೆ. “ಗಾಂಧಾರಿ’ ಜೊತೆಜೊತೆಗೆ “ಬಕಾಸುರ’ ಚಿತ್ರದಲ್ಲೂ ಕಾವ್ಯ ನಟಿಸಬೇಕಿದೆ. ಹಾಗಾಗಿ ಅವರಗೆ ತ್ರಿಪಾತ್ರ ಎಂದರೆ ತಪ್ಪಿಲ್ಲ.

ಅಂದಹಾಗೆ, ಕಾವ್ಯ ತಮಗೆ “ಬಕಾಸುರ’ ಚಿತ್ರದಲ್ಲಿ ಅವಕಾಶ ಸಿಕ್ಕ ಬಗ್ಗೆ ಹೇಳಿಕೊಂಡಿದ್ದು, “ಗಾಂಧಾರಿ’ ಧಾರಾವಾಹಿಯ ಪತ್ರಿಕಾಗೋಷ್ಠಿಯಲ್ಲಿ. ಸುಮಾರು 19 ತಿಂಗಳ ಹಿಂದೆ ಪ್ರಾರಂಭವಾದ ಈ ಧಾರಾವಾಹಿ 350 ಕಂತುಗಳನ್ನು ಮುಗಿಸಿ, ಮುಂದಿನ ವಾರ 375ಕ್ಕೆ ಕಾಲಿಡಲಿದೆಯಂತೆ. ಅದೇ ಕಾರಣಕ್ಕೆ ತಂಡದವರು ತಮ್ಮ ಪ್ರಯಾಣದ ಬಗ್ಗೆ ಒಂದು ಪತ್ರಿಕಾಗೋಷ್ಠಿ ಮಾಡಿ ವಿಷಯ ಹಂಚಿಕೊಂಡರು. ಈ ಚಿತ್ರವನ್ನು ಲೋಕೇಶ್‌ ಕೃಷ್ಣ ನಿರ್ದೇಶಿಸಿದರೆ, ಆನಂದ್‌ ಆಡಿಯೋದ ಶ್ಯಾಮ್‌ ಮತ್ತು ಆನಂದ್‌ ನಿರ್ಮಿಸುತ್ತಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ಕಾವ್ಯ ಗೌಡ ಜೊತೆಗೆ ಜಗನ್‌, ಜಯಲಕ್ಷ್ಮೀ, ಭವ್ಯಶ್ರೀ ರೈ, ಕಿರಣ್‌ ವಟಿ ಮುಂತಾದವರು ನಟಿಸುತ್ತಿದ್ದಾರೆ.

ಈ ಸಂಭ್ರಮವನ್ನು ನೋಡಿದ್ದರೆ, ಆನಂದ್‌ ಆಡಿಯೋದ ಮೋಹನ್‌ ತುಂಬಾ ಖುಷಿಪಡುತ್ತಿದ್ದರು ಎಂದರು ಲೋಕೇಶ್‌. “ಈ ಸಂಭ್ರಮಕ್ಕೆ ಅವರೇ ಕಾರಣ . ಅವರಿಗೆ ಇನ್ನಷ್ಟು ಧಾರಾವಾಹಿಗಳನ್ನು ನಿರ್ಮಿಸುವುದಕ್ಕೆ ಆಸೆ ಇತ್ತು. ಆದರೆ, ಈಗ ಅವರಿಲ್ಲ. ಅವರಿದ್ದಿದ್ದರೆ ಬಹಳ
ಖುಷಿಪಡುತ್ತಿದ್ದರು’ ಎಂದರು ಲೋಕೇಶ್‌. ಇನ್ನು ನಾಯಕ ಜಗನ್‌ಗೆ ಈ ಧಾರಾವಾಹಿ ಎಲ್ಲವನ್ನೂ  ಕೊಟ್ಟಿದೆಯಂತೆ.

“ಧಾರಾವಾಹಿಯ ಬಗ್ಗೆ ಎಲ್ಲಾ ಕಡೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ವೈಯಕ್ತಿಕವಾಗಿ ನನಗೆ ಈ ಧಾರಾವಾಹಿ ತುಂಬಾ ಹೆಸರು ತಂದುಕೊಟ್ಟಿದೆ. ಇಲ್ಲಿ ನಾನು ಅಂಧನಾಗಿ ನಟಿಸಿದ್ದೀನಿ. ನಾನು ನಿಜಕ್ಕೂ ಅಂಧ ಅಂತ ಆಂಟಿಯೊಬ್ಬರು ಸಹಾಯ ಮಾಡುವುದಕ್ಕೆ ಬಂದಿದ್ದರು. ಈ ಧಾರಾವಾಹಿಯಿಂದ ನನಗೆ ಪ್ರೀತಿ, ಖುಷಿ ಎಲ್ಲವೂ ಸಿಕ್ಕಿದೆ’ ಎಂದರು. 

ಟಾಪ್ ನ್ಯೂಸ್

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.