ಫಿಲಿಪ್ಪೆ„ನ್ಸ್‌ ದೇಶದ ಕತೆ: ಮೊಲದ ಜಾಣ್ಮೆ


Team Udayavani, Apr 2, 2017, 3:50 AM IST

01-SAPTAHIKA-4.jpg

ಒಂದು ಕಾಡಿನಲ್ಲಿ ಎಲ್ಲ ಬಗೆಯ ಪ್ರಾಣಿಗಳೂ ವಾಸವಾಗಿದ್ದರೂ ಹುಲಿ ಮಾತ್ರ ಇರಲಿಲ್ಲ. ಒಂದು ಸಲ ಬೇರೆ ಕಾಡಿನಿಂದ ಒಂದು ಹೆಬ್ಬುಲಿ ಅಲ್ಲಿಗೆ ಬಂದಿತು. ಓಹ್‌, ಕಾಡು ಬಹು ಸೊಗಸಾಗಿದೆ! ಇಲ್ಲಿ ಎಷ್ಟೊಂದು ಪ್ರಾಣಿಗಳಿವೆ. ದಿನವೂ ಒಂದೊಂದಾಗಿ ಅವುಗಳನ್ನು ಕೊಂದು ಮೃಷ್ಟಾನ್ನ ಉಣ್ಣಬಹುದು ಎಂದು ನೆನೆದು ದೊಡ್ಡದಾಗಿ ಒಮ್ಮೆ ಘರ್ಜಿಸಿತು. ಆಗ ಕಾಡು ಗಡಗಡನೆ ನಡುಗಿತು. ಇದೇನು ಧ್ವನಿ ಎಂದು ನೋಡಲು ಎಲ್ಲ ಜೀವಿಗಳೂ ಓಡೋಡಿ ಬಂದವು. ಮೈ ತುಂಬ ಪಟ್ಟೆಗಳಿರುವ ದೈತ್ಯ ಪ್ರಾಣಿ ಹುಲಿಯನ್ನು ಇದು ವರೆಗೂ ಅವು ಕಂಡಿರಲಿಲ್ಲ. ಅದರ ಕೈಯ ಉಗುರುಗಳು, ಕೋರೆ ಹಲ್ಲುಗಳನ್ನು ಕಂಡು ಭಯಭೀತವಾದವು. ಒಂದು ಜಿಂಕೆಯನ್ನು ಹೊಡೆದುರುಳಿಸಿ ಹುಲಿ ತಿನ್ನುವ ದೃಶ್ಯವನ್ನು ಕಂಡ ಮೇಲೆ ತಮಗಿನ್ನು ಉಳಿಗಾಲವಿಲ್ಲವೆಂದೇ ಭಾವಿಸಿ ದಿಕ್ಕಾಪಾಲಾಗಿ ಓಡಿಹೋದವು.

ಹುಲಿಗೆ ಹೆದರಿದ ಪ್ರಾಣಿಗಳೆಲ್ಲವೂ ಒಟ್ಟುಗೂಡಿ ಕಾಡಿನ ಒಂದು ಮೂಲೆಯಲ್ಲಿ ರಹಸ್ಯವಾಗಿ ಸಭೆ ನಡೆಸಿದವು. “”ಈ ಭಯಂಕರ ಪ್ರಾಣಿಯಿಂದ ಪಾರಾಗುವ ಬಗೆ ಹೇಗೆ? ಕೋತಿಯ ಹಾಗಿದ್ದರೆ ತೊಂದರೆಯಿಲ್ಲ. ಮರವೇರಿ ಕುಳಿತು ಪ್ರಾಣ ಉಳಿಸಿಕೊಳ್ಳಬಹುದು. ಆದರೆ ನಮಗಿನ್ನೂ ಮರವೇರುವ ಕಲೆ ಗೊತ್ತಿಲ್ಲ. ಕಾಡು ಬಿಟ್ಟು ಊರಿಗಿಳಿದರೆ ಜನ ಕೊಲ್ಲುತ್ತಾರೆ ” ಎಂದು ಹಂದಿ ದುಃಖದಿಂದ ಹೇಳಿತು. ಕೋತಿಯೂ ಸಂತೋಷಪಡದೆ, “”ನೀವು ನನ್ನದು ನಿಶ್ಚಿಂತೆಯ ಬದುಕು ಅಂದುಕೊಂಡಿದ್ದರೆ ಅದು ನಿಮ್ಮದೇ ತಪ್ಪು. ಆ ದೈತ್ಯನಿಗೆ ಮರ ಹತ್ತುವುದಕ್ಕೂ ಬರುತ್ತದೆ ಎಂಬುದು ನಿಮಗೆ ತಿಳಿದಿಲ್ಲವೆ? ರಾತ್ರೆ ನಾನು ಹೆಂಡತಿ, ಮಕ್ಕಳೊಂದಿಗೆ ಹಾಯಾಗಿ ಮರದ ಕೊಂಬೆಯಲ್ಲಿ ಮಲಗಿ ನಿದ್ರಿಸುತ್ತೇನೆ. ಆಗ ಈ ರಕ್ಕಸ ಮರವೇರಿ ಬಂದರೆ ಕತ್ತಲಲ್ಲಿ ಹೋಗುವುದಾದರೂ ಎಲ್ಲಿಗೆ?” ಎಂದು ಅದೂ ಮುಖ ಚಿಕ್ಕದು ಮಾಡಿತು.

ಆಮೆಗೂ ಚಿಂತೆ ತಪ್ಪಿರಲಿಲ್ಲ. “”ನೀರೊಳಗಿದ್ದು ಬೇಸರವಾದಾಗ ಒಂದೊಂದು ಸಲ ನೀರಿನಿಂದ ಮೇಲಕ್ಕೆ ಬಂದು ರುಚಿಯಾದ ಆಹಾರ ಏನಾದರೂ ತಿಂದು ತೇಗುತ್ತಿದ್ದೆ. ಇನ್ನು ಅದಕ್ಕೂ ಕೊರತೆ ಬಂದ ಹಾಗಾಯಿತು. ಮೇಲೆ ಬಂದಿರುವಾಗ ಈ ಪಟ್ಟೆ ಮೈಯ ಪ್ರಾಣಿ ಬೆಂಬತ್ತಿ ಬಂತು ಅಂತಾದರೆ ನಾನು ಓಡಿ ಅದರ ಕೈಯಿಂದ ಪಾರಾಗಲು ಉಂಟೇ?” ಎಂದು ಅದು ದುಃಖಪಟ್ಟಿತು. ಹಾಗಿದ್ದರೆ ಏನು ಮಾಡುವುದು? ಎಂದು ಚಿಂತಿಸಿದಾಗ, “”ನಾವು ನಮ್ಮ ಸಂಸಾರದೊಂದಿಗೆ ನೆಮ್ಮದಿಯಿಂದ ಇರಬೇಕಿದ್ದರೆ ಎಲ್ಲರೂ ಜೊತೆಗೂಡಿ ಬೇರೆ ಸುರಕ್ಷಿತವಾದ ಕಾಡಿಗೆ ಹೋಗುವುದೇ ಒಳ್ಳೆಯದು” ಎಂದು ಒಂಟೆ ಸಲಹೆ ನೀಡಿತು.

ಒಂಟೆ ಎಲ್ಲರಿಗಿಂತ ಎತ್ತರ ಮಾತ್ರವಲ್ಲ, ಅನುಭವದಲ್ಲಿಯೂ ಹಿರಿಯ. ಅದರ ಮಾತನ್ನು ತಳ್ಳಿ ಹಾಕದೆ ಎಲ್ಲವೂ ಸಾಲಾಗಿ ಕಾಡು ಬಿಟ್ಟು ದೂರ ಹೋಗಲು ಯಾತ್ರೆ ಆರಂಭಿಸಿದವು. ಆಗ ಎದುರಿನಿಂದ ಒಂದು ಮೊಲ ತಲೆಯ ಮೇಲೆ ಗಜ್ಜರಿಯ ಮೂಟೆ ಹೊತ್ತುಕೊಂಡು ಬರುತ್ತ ಇತ್ತು. ಪ್ರಾಣಿಗಳ ಸಾಲು ಕಂಡು ಅದು ಅಚ್ಚರಿಯಿಂದ, “”ಅರರೇ, ಎಲ್ಲರೂ ಮಕ್ಕಳು, ಮರಿಗಳನ್ನು ಕೂಡಿಕೊಂಡು ಎಲ್ಲಿಗೆ ಹೊರಟಿದ್ದೀರಿ? ಸಮುದ್ರಕ್ಕೆ ಬೀಳಲು ಹೊರಟಿದ್ದೀರೋ?” ಎಂದು ನಗುತ್ತ ಕೇಳಿತು. ಪ್ರಾಣಿಗಳಿಗೆ ನಗು ಬರಲಿಲ್ಲ. ತೋಳವು ಖನ್ನತೆಯಿಂದ, “”ನಿನಗೆ ತಮಾಷೆ ಮಹಾರಾಯಾ. ಇಡೀ ಕಾಡಿಗೆ ಬಂದಿರುವ ವಿಪತ್ತು ಏನೆಂಬುದನ್ನು ತಿಳಿದುಕೊಂಡರೆ ಹೀಗೆಲ್ಲ ಮಾತನಾಡಲು ನಿನಗೂ ಧೈರ್ಯ ಬರಲಿಕ್ಕಿಲ್ಲ. ಎಲ್ಲ ಪ್ರಾಣಿಗಳ ವಂಶವೇ ನಿರ್ಮೂಲವಾಗುವ ಸಮಯ ಸನ್ನಿಹಿತವಾಗಿದೆ?” ಎಂದು ಹೇಳಿತು.

ಮೊಲ ಈಗಲೂ ಚಿಂತಿಸಲಿಲ್ಲ. “”ಏನಾಯಿತು, ಮೊದಲು ಹೇಳಿ. ಆಮೇಲೆ ವಿಪತ್ತಿಗೆ ಪರಿಹಾರ ಏನೆಂಬುದನ್ನು ಆಲೋಚಿಸೋಣ. ಬನ್ನಿ, ಇಲ್ಲಿ ಮರದ ನೆರಳಿನಲ್ಲಿ ಕುಳಿತುಕೊಂಡು ಆ ವಿಷಯವಾಗಿ ಚರ್ಚೆ ಮಾಡೋಣ” ಎಂದು ಕರೆಯಿತು. ಪ್ರಾಣಿಗಳು ಮರದ ಕೆಳಗೆ ಕುಳಿತು ಹುಲಿಯ ಕಥೆ ಹೇಳಿದವು. “”ನಮ್ಮ ಕಣ್ಣೆದುರೇ ಓಟದಲ್ಲಿ ಶೂರನಾದ ಜಿಂಕೆಯನ್ನು ಹೊಡೆದುರುಳಿಸಿ ಅದು ತಿನ್ನುವುದನ್ನು ನೋಡಿದೆವು. ಇನ್ನು ಇಷ್ಟು ಸಣ್ಣ ಗಾತ್ರದ ನೀನು ಅಷ್ಟು ದೊಡ್ಡ ಪ್ರಾಣಿಯ ಕಾಟ ನಿವಾರಿಸಲು ಪರಿಹಾರ ಹುಡುಕುವೆಯಂತೆ! ಅದು ಆಗಲಿಕ್ಕುಂಟೆ?” ಎಂದು ಕೇಳಿದವು.

ಮೊಲ ಸ್ವಲ್ಪವೂ ಭಯಪಡಲಿಲ್ಲ. “”ಫ‌ೂ, ಇದಕ್ಕೆ ಭಯಪಡಬೇಕೆ? ನಾನು ಗಾತ್ರದಲ್ಲಿ ಸಣ್ಣಗಿರುವ ಮಾತ್ರಕ್ಕೆ ನನ್ನಲ್ಲಿ ಜಾಣ್ಮೆಯಿಲ್ಲವೆಂದು ಭಾವಿಸಬೇಡಿ. ಯಾವ ಕಾಯಿಲೆಗೆ ಯಾವ ಬೇರು ಅರೆಯಬೇಕೆಂದು ನನಗೆ ತಿಳಿದಿದೆ. ಇದೊಂದು ದಿನ ನಿಮ್ಮ ಮನೆಗಳ ಒಳಗೆ ಅಡಗಿಕೊಳ್ಳಿ. ಯಾರೂ ಹೊರಗೆ ಬರಬೇಡಿ. ಬಂದ ಸಂಕಷ್ಟ ನಿವಾರಣೆಗೆ ಏನಾದರೂ ಉಪಾಯ ಹುಡುಕಲು ಸಾಧ್ಯವೇ ನಾನು ನೋಡುತ್ತೇನೆ” ಎಂದು ಭರವಸೆ ಹೇಳಿ ಪ್ರಾಣಿಗಳನ್ನು ಅವುಗಳ ಮನೆಗಳಿಗೆ ಕಳುಹಿಸಿತು. ತಾನೊಬ್ಬನೇ ಕಾಡಿನಲ್ಲಿ ಸವಾರಿ ಹೊರಟಿತು. ಎಲ್ಲ ಪ್ರಾಣಿಗಳೂ ಅಡಗಿಕೊಂಡ ಕಾರಣ ಹುಲಿಗೆ ಎಷ್ಟು ಹುಡುಕಿದರೂ ಏನೂ ಆಹಾರ ಸಿಕ್ಕಿರಲಿಲ್ಲ. ಅದು ಹಸಿವಿನಿಂದ ಬಳಲಿ ಅರಣ್ಯದಲ್ಲಿ ಕಾಲೆಳೆದುಕೊಂಡು ಬರುತ್ತ ಇತ್ತು. ಆಗ ಅದರ ಮುಂದೆ ಧಿಮಾಕಿನಿಂದ ಮೊಲ ನಡೆದುಕೊಂಡು ಬಂತು. ಹುಲಿ ಒಂದು ಸಲ ಘರ್ಜನೆ ಮಾಡಿತು. “”ಯಾರೋ ಅದು ಅಷ್ಟು ಪೊಗರಿನಿಂದ ಹೋಗುತ್ತಿರುವುದು? ಕಾಡಿನ ರಾಜ ನಾನಿಲ್ಲಿ ಬರುತ್ತಿರುವಾಗ ನನ್ನ ಮುಂದೆ ಮೊಣಕಾಲೂರಿ ಸಲಾಮು ಹೊಡೆಯಬೇಕೆಂಬುದು ತಿಳಿದಿಲ್ಲವೆ?” ಎಂದು ಪ್ರಶ್ನಿಸಿತು.

ಮೊಲ ನಿರ್ಲಕ್ಷ್ಯದಿಂದ, “”ಈ ಕಾಡಿಗೆ ನಿಮಗಿಂತ ದೊಡ್ಡವರಾದ, ಪರಾಕ್ರಮಿಯೊಬ್ಬರು ರಾಜರಾಗಿರುವಾಗ ಅವರಿಗೆ ಗೌರವ ಕೊಡುತ್ತೇವೆ ವಿನಃ ನಿಮಗೆ ನಾನೇಕೆ ಸಲಾಮು ಹೊಡೆಯಬೇಕು?” ಎಂದು ಕೇಳಿತು. ಹುಲಿ ಕೋಪದಿಂದ, “”ಏನೆಂದೆ? ನನಗಿಂತ ದೊಡ್ಡವರು ಈ ಕಾಡಿಗೆ ರಾಜರಾಗಿದ್ದಾರೆಯೇ? ಇದು ನಂಬುವ ಸಂಗತಿಯೇ?” ಎಂದು ಘರ್ಜಿಸಿತು. “”ಕೋಪ ಮಾಡಿಕೊಳ್ಳಬೇಡಿ. ಅಷ್ಟೇ ಏಕೆ, ಆ ರಾಜನಿಗೆ ಮಂತ್ರಿಯಾಗಿರುವುದು ನನ್ನ ಅಣ್ಣ. ಸುಳ್ಳು ಅಂದುಕೊಂಡಿರಾ? ನನ್ನ ಜೊತೆಗೆ ಬನ್ನಿ, ಅವರಿಬ್ಬರನ್ನೂ ತೋರಿಸುತ್ತೇನೆ” ಎಂದು ಮೊಲ ಸವಾಲು ಹಾಕಿತು.

“”ಓಹೋ, ನಿನ್ನ ವಂಶದವರಿಗೂ ರಾಜನ ಬಳಿ ಉದ್ಯೋಗವಿದೆಯೇ? ಈ ಚೋದ್ಯವನ್ನೊಮ್ಮೆ ಕಣ್ಣಾರೆ ನೋಡಿ ಆ ರಾಜನನ್ನು ಕಾಳಗಕ್ಕೆ ಕರೆಯುತ್ತೇನೆ. ಕ್ಷಣಮಾತ್ರದಲ್ಲಿ ಅವನನ್ನು ಸೋಲಿಸಿ ಮುಂದೆ ನನಗೆ ಎದುರಾಳಿಯಿಲ್ಲದ ಹಾಗೆ ಮಾಡುತ್ತೇನೆ. ಮೊದಲು ನನಗವರನ್ನು ತೋರಿಸು” ಎಂದಿತು ಹುಲಿ. ಮೊಲ ತುಂಬ ನೀರಿರುವ ಆಳವಾದ ಬಾವಿಯ ಬಳಿಗೆ ಹುಲಿಯನ್ನು ಕರೆದುಕೊಂಡು ಹೋಗಿ, “”ಬಾಗಿ ನೋಡಿ. ಅಲ್ಲಿ ನಿಮಗಿಂತ ಶೂರರಾದ ರಾಜರು, ಅವರ ಬಳಿ ಮಂತ್ರಿಯಾಗಿ ನಿಂತಿರುವ ನನ್ನ ಅಣ್ಣ ಕಾಣಿಸುತ್ತಾರೆ. ಮತ್ತೆ ಯುದ್ಧಕ್ಕೆ ಕರೆಯಿರಿ” ಎಂದು ಹೇಳಿತು. ಹುಲಿ ಬಾವಿಗೆ ಬಾಗಿ ನೋಡಿದಾಗ ಅದರ ಪ್ರತಿಬಿಂಬದ ಜೊತೆಗೆ ಮೊಲದ ಪ್ರತಿಬಿಂಬವೂ ಕಂಡುಬಂತು. ಮೊಲ ಹೇಳಿದ್ದು ಸುಳ್ಳಲ್ಲ, ಇಲ್ಲಿ ಪರಾಕ್ರಮಿ ಹುಲಿಯೊಂದು ಇದೆ, ಅದರೊಂದಿಗೆ ಮೊಲವೂ ಇದೆ ಎಂದು ನಂಬಿ ಘರ್ಜಿಸುತ್ತ ಅದರ ಕಡೆಗೆ ನೆಗೆಯಿತು. ಆದರೆ ತುಂಬಿದ್ದ ನೀರಿಗೆ ಬಿದ್ದು ಮೇಲೆ ಬರಲಾಗದೆ ಮೊಲದೊಂದಿಗೆ, “”ಮೋಸ, ಮೋಸ! ನೀನು ಮೋಸ ಮಾಡಿದೆ” ಎಂದು ಕೂಗಿತು. “”ಮೋಸ ಎಲ್ಲಿಯದು? ನಿನ್ನನ್ನು ಹೀಗೆಯೇ ಬಿಟ್ಟರೆ ಉಳಿದ ಪ್ರಾಣಿಗಳು ಬದುಕಬೇಡವೆ?” ಎಂದು ಮೊಲ ಹಿಗ್ಗುತ್ತ ಹೊರಟುಹೋಯಿತು.

ಪರಾಶರ

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.