ವಾಟ್ಸಾಪ್‌ ಕತೆ


Team Udayavani, Feb 9, 2020, 5:11 AM IST

Whats-App-730

ಲೆಕ್ಕಾಚಾರ
ಅಜ್ಜಿ ರಸ್ತೆಯ ಪಕ್ಕ ಕೂತು ಸೊಪ್ಪು ಮಾರುತ್ತಿದ್ದಳು. ಒಂದಷ್ಟು ಸೊಪ್ಪು ಕೈಯಲ್ಲಿ ಹಿಡಿದು, “ಅಜ್ಜಿ ಎಷ್ಟು ಕೊಡಲಿ?” ಅಂದೆ. ‘ಹದಿನೆಂಟು ರೂಪಾಯಿ ಕೊಡಿ” ಅಂದಿತು ಅಜ್ಜಿ.
ಇಪ್ಪತ್ತು ರೂಪಾಯಿ ಕೊಟ್ಟೆ. ಅಜ್ಜಿ ಎರಡು ರೂಪಾಯಿ ವಾಪಸು ಕೊಡಲು ಬಂದರು. ನಾನು ತೆಗೆದುಕೊಳ್ಳಲಿಲ್ಲ. ಮತ್ತೂಮ್ಮೆ ಹೀಗೆ ಎಳನೀರು ಕುಡಿಯುವ ವಿಷಯದಲ್ಲೂ ಮೂರು ರೂಪಾಯಿ ಚಿಲ್ಲರೆ ಮರಳಿ ಕೊಡಲು ಬಂದ ರೈತನಿಗೆ, “”ಪರವಾಗಿಲ್ಲ, ಇಟ್ಟುಕೊಳ್ಳಿ” ಎಂದಿದ್ದೆ.

ಮೊನ್ನೆ ಊರಿಗೆ ಹೊರಟಿದ್ದೆ ನೋಡಿ. ಕಂಡಕ್ಟರ್‌ ಟಿಕೆಟ್‌ನ ಹಿಂಭಾಗದಲ್ಲಿ ಎಂಟು ರೂಪಾಯಿ ಚಿಲ್ಲರೆ ಬರೆದಿದ್ದ. ಅದನ್ನು ಪ್ರಯಾಣ ಪೂರ್ತಿ ನೆನಪಿಟ್ಟುಕೊಂಡು ಊರು ಬಂದಾಗ ಚೀಟಿ ತೋರಿಸಿ ಚಿಲ್ಲರೆ ಕೇಳಿದೆ. ಹದಿನೈದು ರೂಪಾಯಿ ಕೊಟ್ಟು ಎಂಟು ಮತ್ತು ಏಳು ರೂಪಾಯಿ ಹಂಚಿಕೊಳ್ಳಲು ಹೇಳಿ ಹೋದ. ಎಂಟು ರೂಪಾಯಿ ಕೊಡಬೇಕಾದ ನನ್ನ ಸಹಪಯಣಿಗ ನನ್ನನ್ನು ನೋಡಿದ. ಅವನು ಪೂರ್ಣ ಹದಿನೈದು ರೂಪಾಯಿಯನ್ನು ನನ್ನ ಕೈಯಲ್ಲಿಟ್ಟು, “ಪರವಾಗಿಲ್ಲ, ಇಟ್ಕೊಳ್ಳಿ” ಅಂತ ಹೇಳಿ ತಿರುಗಿ ನೋಡದೆ ಹೊರಟು ಹೋದ. ನಾನು, “ಹಲೋ ಹಲೋ…” ಅಂತ ಕೂಗಿದರೂ ಅವನು ತಿರುಗಿ ಬರಲಿಲ್ಲ.

ಬೇರೆಯವರಿಗೆ ಕೊಟ್ಟ ಎರಡರಷ್ಟು ಈಗ ನನ್ನ ಕೈಯಲ್ಲಿತ್ತು. ದೇವರ ಬಳಿ ಒಳ್ಳೆಯ ಕ್ಯಾಲ್ಕುಲೇಟರ್‌ ಖಂಡಿತ ಇದೆ !
— ಸದಾಶಿವ ಸೊರಟೂರು

ರಂಗೋಲಿ
ಮಹಾನಗರಿಯೆಂಬ ತುದಿ ಮೊದಲಿಲ್ಲದ ಮಡಿಲಿಗೆ ಬಂದು ಬಿದ್ದ ಅವಳು, ತನ್ನ ಹಿಂದಿನ ಅಭ್ಯಾಸ ಬಲದಂತೆ ಬೆಳಗು ಹುಟ್ಟುವ ಮೊದಲೇ ಮನೆಯ ಮುಂದಿನ ರಸ್ತೆಯನ್ನು ಅಂಗಳದಂತೆ ಗುಡಿಸಿ, ಎರಡು ಚೊಂಬು ನೀರು ಎರಚಿ ರಂಗೋಲಿ ಪುಡಿಯ ಬಟ್ಟಲು ಹಿಡಿದು ಬಂದಳು.

ಎಲ್ಲೋ ಇದ್ದ ಚುಕ್ಕೆ ಮತ್ತೂಂದನ್ನು ಸೇರಿ ಹೂವಾಗುವುದನ್ನು ಧೇನಿಸುತ್ತಲೇ ಚೆಂದದ ಬಳ್ಳಿ ಬಿಡಿಸಿಟ್ಟು ತೃಪ್ತಿಯ ನಗು ನಕ್ಕಳು. ತೆಳ್ಳಗೆ ಬೆಳಕು ಅವತರಿಸುವ ಹೊತ್ತಿಗೆ ಕೆದಕಿದ ಇರುವೆಗಳಂತೆ ಮನೆಯಿಂದ ಹೊರಬಿದ್ದ ಜನರು ಅವಳು ಬಿಡಿಸಿಟ್ಟ ರಂಗೋಲಿಯನ್ನು ನೋಡಿ ಆನಂದಿಸುವುದು ಒತ್ತಟ್ಟಿಗಿರಲಿ, ಅದನ್ನು ನಿರ್ದಯವಾಗಿ ತುಳಿದುಕೊಂಡೇ ಮುಂದೆ ಹೋಗುತ್ತಿದ್ದರು.

ಜನರ ಕಾಲುಗಳ ಕೆಳಗೆ ನಲುಗುತ್ತಿರುವ ಹೂಬಳ್ಳಿಗಳನ್ನು ಅದೆಷ್ಟೋ ಹೊತ್ತು ಹನಿಗಣ್ಣಾಗಿ ನೋಡುತ್ತ ನಿಂತಿದ್ದ ಅವಳ ಅಂಗಳದಲ್ಲಿ ಮತ್ತೂಮ್ಮೆ ಹೂ ಅರಳಿದ್ದನ್ನು ಯಾರೂ ಕಂಡಿಲ್ಲ. ಕಾಣುವಷ್ಟು ವ್ಯವಧಾನ ತುಳಿದು ಬದುಕುವ ನಗರ ಜೀವನಕ್ಕೆ ಇರಲೂ ಇಲ್ಲ !
— ಕವಿತಾ ಭಟ್‌

ಅದೃಷ್ಟ
ಲಾಟರಿ, ಲಕ್ಕಿಡಿಪ್‌ ಅದೃಷ್ಟ ತರುವ ಈ ಚೀಟಿಗಳಿಗೆ ಎಷ್ಟೆಲ್ಲ ಹಣ ಹಾಕಿದರೂ ಒಮ್ಮೆಯಾದರೂ ಒಂದು ರೂಪಾಯಿಯೂ ಕೊಡುಗೆಯಾಗಿ ಸಿಕ್ಕಿರಲಿಲ್ಲ. ಅದೃಷ್ಟವೇ ಇಲ್ಲದ ನನ್ನ ಹಣೆಯ ಬರಹಕ್ಕೆ ಎಷ್ಟೋ ಸಲ ನಾನೇ ಶಾಪ ಹಾಕಿದೆ. ಹಾಗಂತ ಲಾಟರಿ ವ್ಯಾಮೋಹ ಕಮ್ಮಿಯಾಗಲಿಲ್ಲ.

ದೇವರು ಕಣ್ಣು ತೆರೆದರೆ? ಅದೃಷ್ಟ ಲಕ್ಷ್ಮಿ ಬಲಗಾಲಿಟ್ಟು ಒಳಗೆ ಬಂದರೆ? “ರೆ’ಗಳ ರಾಜ್ಯದಲ್ಲೆ ಸುತ್ತಾಡುತ್ತಿದ್ದೆ. ಆ ದೇವರು ಯಾವಾಗ ಕಣ್ಣು ತೆರೆವನೊ? ಆ ಮುಹೂರ್ತ ಗೊತ್ತಿರಲಿಲ್ಲ.

ಒಮ್ಮೆ ಲಾಟರಿ ತಕ್ಕೊಂಡವನು ಅಂಗಡಿಯಿಂದ ಗಡಿಬಿಡಿಯಲ್ಲಿ ಹೊರಬಂದು ಆಚೀಚೆ ನೋಡದೆ ರಸ್ತೆ ದಾಟುತ್ತಿದ್ದೆ. ಎದುರಿನಿಂದ ಬಸ್ಸು ಬರುತ್ತಿರುವುದೂ ಗಮನಕ್ಕೆ ಬಂದಿರಲಿಲ್ಲ. ಕೂದಲೆಳೆಯ ಅಂತರದಿಂದ ಬಚಾವಾಗಿದ್ದೆ. ರಸ್ತೆ ದಾಟಿ ಜೀವಂತ ಇದ್ದೆ !
ಯಾವುದೋ ಕಾಣದ ಕೈಗಳು ನನ್ನನ್ನು ರಸ್ತೆ ದಾಟಿಸಿದ್ದವು. ಅವೇ ಕೈಗಳು ಇದಕ್ಕಿಂತ ಮೊದಲು ಎಷ್ಟೋ ಸಲ ಕಾಪಾಡಿದ್ದಿರಬಹುದು. ಮುಂದಕ್ಕೂ ಕಾಪಾಡಿಯಾವು.

ಅದೃಷ್ಟಕ್ಕೂ ಆಯಾಸ ತರುವ ಬಳಲಿಕೆ, ತೂಕಡಿಕೆ ಎಲ್ಲ ನಮ್ಮಂತೆ ಇದೆ ತಾನೆ? ಅದು ಯಾವಾಗ ಎಚ್ಚರವಾಗಿರುತ್ತದೋ ಯಾರಿಗೆ ಗೊತ್ತು?

ಅಪಘಾತದಿಂದ ಪಾರಾದೆ.

ಆ ಸಲವೂ ಲಾಟರಿ ಟಿಕೇಟನ್ನು ಹರಿದು ಬಿಸಾಡಬೇಕಾಯಿತು.
— ಯು. ದಿವಾಕರ ರೈ

ದೈನಂದಿನ ಅನುಭವಗಳನ್ನೇ ಕತೆಯಾಗಿಸಿ ಕಳುಹಿಸಿ
ಅಂಚೆ ವಿಳಾಸ : ಸಂಪಾದಕರು, ಸಾಪ್ತಾಹಿಕ ಸಂಪದ ವಿಭಾಗ, ಉದಯವಾಣಿ ದಿನಪತ್ರಿಕೆ, ನಾಲ್ಕನೆಯ ಮಹಡಿ, ಉದಯವಾಣಿ ಹೊಸಕಟ್ಟಡ, ಮಣಿಪಾಲ-576104
ಈಮೇಲ್‌ ವಿಳಾಸ :
 [email protected]

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.