ದ.ಕ. ಜಿಲ್ಲೆಯಲ್ಲಿ ಶೇ.76.15 ಶೇ. 83ರ ಗುರಿ ತಲುಪಲು ವಿಫಲ
Team Udayavani, May 11, 2023, 6:45 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ಮತದಾನ ಒಂದೆರಡು ಸಣ್ಣಪುಟ್ಟ ಘರ್ಷಣೆ ಹೊರತು ಪಡಿಸಿ ಬಹುತೇಕ ಶಾಂತಿಯುತವಾಗಿ ನಡೆದಿದೆ. ಸದ್ಯದ ಲೆಕ್ಕಾಚಾರದಂತೆ ಶೇ. 76.15 ರಷ್ಟು ಮತದಾನವಾಗಿದೆ. ಆದರೆ ಗುರುವಾರ ಖಚಿತ ಅಂಕಿಅಂಶಗಳು ಲಭ್ಯವಾಗಲಿದ್ದು, ಕೊಂಚ ಏರುಪೇರಾಗಬಹುದು.
ಕಳೆದ ಬಾರಿಯ(2018) ಶೇ.77.67 ಮತದಾನವನ್ನು ಮೀರಿಸುವ ಚುನಾವಣ ಆಯೋಗದ ಗುರಿ ಈಡೇರಿದಂತೆ ಕಾಣು ತ್ತಿಲ್ಲ. ಪೂರ್ಣ ವಿವರ ಗುರುವಾರ ಲಭ್ಯ ವಾಗಲಿದೆ. 2013ರಲ್ಲಿ ದ.ಕ ಜಿಲ್ಲೆಯಲ್ಲಿ 74.48 ಮತದಾನವಾಗಿದ್ದು, 2018ರಲ್ಲಿ ಉತ್ತಮ ಏರಿಕೆ ಕಂಡಿತ್ತು.
ಮಂಗಳೂರು ನಗರ ದಕ್ಷಿಣ 65.10, ಮಂಗಳೂರು ನಗರ ಉತ್ತರ 72.32, ಮಂಗಳೂರು 77.60, ಮೂಡುಬಿದಿರೆ 76.11, ಬಂಟ್ವಾಳ 80.17, ಬೆಳ್ತಂಗಡಿ 80.80, ಸುಳ್ಯ 78.94 ಹಾಗೂ ಪುತ್ತೂರಿನಲ್ಲಿ 80.02 ರಷ್ಟು ಮತದಾನ ನಡೆದಿದೆ.
ಈ ಬಾರಿ 6,58,761 ಪುರುಷರು, 6,92,803 ಮಹಿಳಾ ಮತದಾರರು ಹಾಗೂ 18 ತƒತೀಯ ಲಿಂಗಿಗಳು ಮತದಾನ ಮಾಡಿದ್ದಾರೆ.
2018ರಲ್ಲಿ ಮಂಗಳೂರು ನಗರ ದಕ್ಷಿಣ 67.47, ಮಂಗಳೂರು ನಗರ ಉತ್ತರ 74.55, ಮಂಗಳೂರು 75.73, ಮೂಡು ಬಿದಿರೆ 75.44, ಬಂಟ್ವಾಳ 81.89, ಬೆಳ್ತಂಗಡಿ 81.40, ಸುಳ್ಯ 83.98 ಹಾಗೂ ಪುತ್ತೂರಿನಲ್ಲಿ 81.70ರಷ್ಟು ಮತದಾನ ನಡೆದಿತ್ತು.
ನಗರದ ಹೊರವಲಯದ ಮೂಡುಶೆಡ್ಡೆ ಯಲ್ಲಿ ಮೂಡುಬಿದಿರೆಯ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿನ ಮೇಲೆ ಕಲ್ಲೆಸೆದಿರುವುದು, ಮೂಡುಬಿದಿರೆಯ ಬೆಳುವಾಯಿಯಲ್ಲಿ ನಕಲಿ ಮತದಾನ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ. ಅದು ಬಿಟ್ಟರೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಜಿಲ್ಲೆಯಾದ್ಯಂತ ಜನರು ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ಆಗಮಿಸಿ ಮತದಾನದಲ್ಲಿ ಭಾಗಿಯಾದರು.
ಮಳೆಯಿಂದಾಗಿ ತುಸು ವಿಳಂಬ
ಮಧ್ಯಾಹ್ನದ ವೇಳೆ ಜಿಲ್ಲೆಯಲ್ಲಿ ಶೇ.44 ರಷ್ಟು ಮತದಾನ ನಡೆದಿದ್ದರೆ ಸಂಜೆ ವೇಳೆ ಮತ ಹಾಕಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವೇಳೆ ಬಿಸಿಲಿನ ಝಳದಲ್ಲಿ ಮತದಾನದ ಗತಿ ಮಂದವಾಗಿತ್ತು. ಬೆಳ್ತಂಗಡಿ, ಪುತ್ತೂರಿನ ಕೆಲ ಭಾಗಗಳಲ್ಲಿ ಬುಧವಾರ ಸಂಜೆ ವೇಳೆಗೆ ಭಾರಿ ಗುಡುಗು ಸಿಡಿಲು ಸಹಿತ ಮಳೆಯಾಗಿರುವುದರಿಂದ ಕೊನೆ ಕ್ಷಣದ ಮತದಾನಕ್ಕೆ ಅಡ್ಡಿಯಾಯಿತು. ವಿದ್ಯುತ್ ವ್ಯತ್ಯಯದ ಕಾರಣ ಕೆಲ ಮತಗಟ್ಟೆಗಳಲ್ಲಿ ಕತ್ತಲಾವರಿಸಿ ಮತ ಹಾಕಲು ಸಮಸ್ಯೆಯಾಯಿತು.
ಕೊಡಗು: ಶೇ. 74.74 ಮತದಾನ
ಮಡಿಕೇರಿ ಮೇ 10: ಕೊಡಗು ಜಿಲ್ಲೆ ಯಲ್ಲಿ ಶೇ. 74.74ರಷ್ಟು ಮತದಾನವಾಗಿದೆ. ಒಟ್ಟು 4,56,313 ಮತದಾರರಲ್ಲಿ 3,41,046 ಮಂದಿ ಮತದಾನ ಮಾಡಿದ್ದಾರೆ.
ಮಡಿಕೇರಿ ಕ್ಷೇತ್ರದ ಒಟ್ಟು 2,32,148 ಮತದಾರರಲ್ಲಿ 1,75,009 ಮಂದಿ ಮತ ಚಲಾಯಿಸಿದ್ದು, ಶೇ.75.39 ರಷ್ಟು ಮತದಾನವಾಗಿದೆ. ವೀರಾಜಪೇಟೆ ಕ್ಷೇತ್ರದ ಒಟ್ಟು 2,24,165 ಮತದಾರರಲ್ಲಿ 1,66,037 ಮಂದಿ ಮತ ಚಲಾಯಿಸಿದ್ದು, ಶೇ.74.07ರಷ್ಟು ಮತದಾನವಾಗಿದೆ.
ಕಡಿಮೆಯಾಗಲು ಕಾರಣವೇನು?
ಮಂಗಳೂರು ನಗರ ದಕ್ಷಿಣದಲ್ಲಿ ಎಂದಿನಂತೆ ಹೆಚ್ಚಿನ ಎನ್ಆರ್ಐ ಮತದಾರರಿದ್ದಾರೆ. ಅವರೆಲ್ಲರೂ ಅಪಾರ್ಟ್ಮೆಂಟ್ಗಳಲ್ಲಿದ್ದು, ಅಂತಹವರನ್ನು ಮತದಾನಕ್ಕೆ ಸೆಳೆಯುವಲ್ಲಿ ಸೀÌಪ್ ಸಮಿತಿ ಅಷ್ಟಾಗಿ ಯಶಸ್ವಿಯಾದಂತಿಲ್ಲ. ಕಳೆದ ಬಾರಿಗಿಂತಲೂ ಈ ಬಾರಿ ಮತದಾನ ಕಡಿಮೆಯಾಗಿದೆ. ಉಳಿದಂತೆ 2018ರ ರೀತಿಯ ಸರಕಾರ ವಿರೋಧಿ ಅಥವಾ ಪರ ಅಲೆ ಇಲ್ಲದಿರುವುದೂ ಮತದಾನ ಕುಸಿಯಲು ಕಾರಣ ಇರಬಹುದು ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ