Company: ಬೆಂಗಳೂರಿನ ಹೃದಯಭಾಗದಲ್ಲಿ 15 ಅಂತಸ್ತುಗಳ ನೂತನ ಕಚೇರಿ ಆರಂಭಿಸಿದ ಆಪಲ್ ಕಂಪೆನಿ
Team Udayavani, Jan 17, 2024, 1:11 PM IST
ಬೆಂಗಳೂರು: ಭಾರತದಲ್ಲಿ ತನ್ನ ವಹಿವಾಟನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಐಫೋನ್ ತಯಾರಕ, ಅಮೆರಿಕಾದ ಆಪಲ್ ಕಂಪೆನಿ ಬೆಂಗಳೂರಿನ ಹೃದಯಭಾಗದಲ್ಲಿ 15 ಅಂತಸ್ತುಗಳ ನೂತನ ಕಚೇರಿಯನ್ನು ಆರಂಭಿಸಿದೆ.
ಆಪಲ್ ನ ನೂತನ ಕಚೇರಿಯು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದ ಮಿನ್ಸ್ಕ್ ಸ್ಕ್ವೇರ್ನಲ್ಲಿ ತಲೆಯೆತ್ತಿದೆ. ಈ ಕಚೇರಿಯಲ್ಲಿ 1200 ಮಂದಿ ಉದ್ಯೋಗಿಗಳು ಕೆಲಸ ನಿರ್ವಹಿಸಲಿದ್ದಾರೆ.
ಬೆಂಗಳೂರಿನ ಹೃದಯಭಾಗದಲ್ಲಿ ನೂತನ ಕಚೇರಿಯನ್ನು ತೆರೆಯುತ್ತಿರುವುದು ನಮಗೆ ಸಂಭ್ರಮದ ವಿಷಯವಾಗಿದೆ. ಕ್ರಿಯಾಶೀಲ ನಗರವಾದ ಬೆಂಗಳೂರು ನಮ್ಮ ಅನೇಕ ಪ್ರತಿಭಾವಂತ ಉದ್ಯೋಗಿಗಳ ತಂಡಕ್ಕೆ, ಸಾಫ್ಟ್ ವೇರ್, ಹಾರ್ಡ್ ವೇರ್ ತಂತ್ರಜ್ಞಾನ ಕಂಪೆನಿಗಳಿಗೆ ಆಶ್ರಯತಾಣವಾಗಿದೆ. ಹಾಗೆಯೇ ನಮ್ಮ ಆಪಲ್ ಕಂಪೆನಿಯ ನೂತನ ಆವಿಷ್ಕಾರಗಳು, ಕ್ರಿಯಾಶೀಲತೆ, ಸಂಪರ್ಕಗಳಿಗೆ ಅದ್ಭುತ ತಾಣ ಇದಾಗಿದೆ ಎಂದು ಆಪಲ್ ವಕ್ತಾರರು ಸಂತಸ ವ್ಯಕ್ತಪಡಿಸಿದ್ದಾರೆ.
15 ಅಂತಸ್ತುಗಳ ತಮ್ಮ ಕಚೇರಿಯು ವಿಧಾನಸೌಧ, ಹೈಕೋರ್ಟ್, ಸೆಂಟ್ರಲ್ ಲೈಬ್ರರಿಯಂಥ ಸ್ಥಳಗಳ ಸಮೀಪ, ಉದ್ಯಾನವನ ಪ್ರದೇಶದಲ್ಲಿದೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಹತ್ತಿರ ಇರುವುದರಿಂದ ಉದ್ಯೋಗಿಗಳು ಸಾರ್ವಜನಿಕ ಸಾರಿಗೆ ಬಳಸಲು ಅನುಕೂಲಕರವಾಗಿದೆ ಎಂದು ಕಂಪೆನಿ ತಿಳಿಸಿದೆ.
ಈ ಕಚೇರಿಯಲ್ಲಿ ಆಪಲ್ ಉದ್ಯೋಗಿಗಳು ಸಾಫ್ಟ್ ವೇರ್, ಹಾರ್ಡ್ ವೇರ್, ಸರ್ವೀಸ್, ಗ್ರಾಹಕ ಸಂಪರ್ಕ ಇತ್ಯಾದಿ ಕೆಲಸಗಳನ್ನು ನಿರ್ವಹಿಸುತ್ತಾರೆ. ಆಪಲ್ ಭಾರತದಲ್ಲಿ ಒಟ್ಟು ಮೂರು ಸಾವಿರ ಉದ್ಯೋಗಿಗಳನ್ನು ಹೊಂದಿದೆ. ತನ್ನ ವಹಿವಾಟಿನ ಮೂಲಕ ದೇಶಾದ್ಯಂತ ಸಾವಿರಾರು ಜನರಿಗೆ ಉದ್ಯೋಗಾವಕಾಶ ನೀಡಿದೆ ಎಂದು ತಿಳಿಸಿದೆ.
ಈ ಕಚೇರಿಯಲ್ಲಿ ವಿಶಾಲ ಲ್ಯಾಬ್ ಸ್ಥಳಾವಕಾಶವಿದ್ದು, ಸ್ಥಳೀಯವಾಗಿ ಲಭ್ಯವಾಗುವ ಗ್ರಾನೈಟ್ ಹಾಗೂ ಮರಗಳಿಂದ ಕಟ್ಟಡ ನಿರ್ಮಿಸಲಾಗಿದೆ. ಆಪಲ್ ಕಂಪೆನಿಯು ಕಾರ್ಬನ್ ನ್ಯೂಟ್ರಲ್ ಮಾನದಂಡವನ್ನು ಅನುಸರಿಸುತ್ತಾ ಬಂದಿದ್ದು, ಅದರಂತೆ ಈ ನೂತನ ಕಚೇರಿಯು ಶೇ. 100ರಷ್ಟು ಮರುಬಳಕೆ ಮಾಡಬಹುದಾದ ಇಂಧನಗಳ ಬಳಕೆ, ಪರಿಸರ ಸ್ನೇಹಿ ವಿನ್ಯಾಸ (ಲೀಡ್ ಪ್ಲಾಟಿನಂ ರೇಟಿಂಗ್) ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ