ಇನ್ಮುಂದೆ ಮನೆಯಲ್ಲೇ ಕೂತು ನಿಮ್ಮ ಫೋನ್.ನಂ’ನ ಆಧಾರ್ ಗೆ ಲಿಂಕ್ ಮಾಡಿ
Team Udayavani, Feb 15, 2018, 6:23 PM IST
ಕೇಂದ್ರ ಸರ್ಕಾರದ ಆದೇಶದಂತೆ ಆಧಾರ್ ಕಾರ್ಡನ್ನು ಬಹುತೇಕ ನಮ್ಮ ಎಲ್ಲ ದಾಖಲೆಗಳಿಗೂ ಲಿಂಕ್ ಮಾಡಬೇಕು,ಅಂತೆಯೇ ಪ್ರತಿಯೊಬ್ಬರು ಆಧಾರ್ ನ ಕಡ್ಡಾಯವಾಗಿ ತಮ್ಮ ಫೋನ್.ನಂ ಗೆ ಲಿಂಕ್ ಮಾಡಿರಲೇಬೇಕು ಇಲ್ಲದಿದ್ದರೆ ತಮ್ಮ ನಂ. ಅಸ್ಥಿಸ್ತ್ವ ಕಳೆದುಕೊಳ್ಳಲಿದೆ.
ಮೊದಲೆಲ್ಲ ನಾವು ಈ ಪ್ರಕ್ರಿಯೆಯನ್ನು ಮಾಡಲು ಸಂಬಂಧಪಟ್ಟ ಗ್ರಾಹಕರ ಕೇಂದ್ರಗಳನ್ನ ಹುಡುಕಿಕೊಂಡು ಹೋಗಬೇಕಿತ್ತು ಆದರೆ UIDAI ಬಿಡುಗಡೆ ಮಾಡಿದ ಹೊಸ ಸೇವೆಯ ಮೂಲಕ ಮನೆಯಲ್ಲೇ ಕೂತು ತುಂಬಾ ಸರಳ ವಿಧಾನದಲ್ಲಿ ಈ ಕೆಲಸವನ್ನು ಮಾಡಬಹುದು.
ಈ ಕೆಳಗೆ ಸಂಪೂರ್ಣ ವಿಧಾನವನ್ನು ಕ್ರಮವಾಗಿ ವಿವರಿಸಿದ್ದೇನೆ :-
1. ಮೊದಲಿಗೆ ನಿಮ್ಮ ಫೋನ್ ನಿಂದ 14546 ಸುಂಕ ರಹಿತ ಸಂಖ್ಯೆಗೆ ಕರೆ ಮಾಡಿ.
2. ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ.
3. ಸಂಖ್ಯೆ 1ನ್ನು ಒತ್ತಿ ನಿಮ್ಮ ರಾಷ್ಟ್ರೀಯತೆ ಆಯ್ಕೆಮಾಡಿಕೊಳ್ಳಿ.
4. ನಂತರ ನಿಮ್ಮ ಟೆಲಿಕಾಂ ತಂಡದೊಂದಿಗೆ ಆಧಾರ್’ನ ಮಾಹಿತಿಯನ್ನು ಹಂಚಿಕೊಳ್ಳಬೇಕಾಗುತ್ತದೆ, ಅದರ ಅನುಮತಿಗಾಗಿ 1ನ್ನು ನಮೂದಿಸಿ.
5. ನಂತರ ನಿಮ್ಮ 12 ಅಂಕೆಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ.
6. ನಂತರ ಆ ನಂಬರಿಗೆ ಆಧಾರ್ ವತಿಯಿಂದ ಸಂದೇಶ ಬರುತ್ತದೆ, ಅದರಲ್ಲಿ ತೋರುವ 6 ಅಂಕೆಗಳ ಓ.ಟಿ.ಪಿ ಯನ್ನು ನಮೂದಿಸಿ – ಧೃಡೀಕರಿಸಲು 1ನ್ನು ಒತ್ತಿ.【ಓ.ಟಿ.ಪಿ ಕೋಡ್’ಗೆ 30 ನಿಮಿಷಗಳ ಕಾಲಾವಧಿ ಇರುತ್ತದೆ 】
7. ಇದರ ಬಳಿಕ ನಿಮ್ಮ ಮೊಬೈಲ್ಗೆ ಈ ಪ್ರಕ್ರಿಯೆ ಯಶಸ್ವಿಯಾಗಿರುವ ಬಗ್ಗೆ ಸಂದೇಶ ಬರುತ್ತದೆ 【 48 ಗಂಟೆಯ ಒಳಗಾಗಿ ಸಂದೇಶ ಬರುತ್ತದೆ 】.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮಾರ್ಚ್ 31 2018 ಕೊನೆಯ ದಿನವಾಗಿರುತ್ತದೆ, ಅಷ್ಟರೊಳಗೆ ಲಿಂಕ್ ಮಾಡದಿದ್ದಲ್ಲಿ ನಿಮ್ಮ ನಂ. ಚಾಲನೆಯನ್ನು ಕಳೆದುಕೊಳ್ಳಲಿದೆ.
ಈಗಾಗಲೇ ಏರ್ಟೆಲ್, ಐಡಿಯಾ, & ವೊಡಾಫೋನ್ ಈ ಸೇವೆಯನ್ನು ನೀಡುತ್ತಿದ್ದು ಆಯಾ ಚಂದಾದರರು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ ಹಾಗೆಯೇ ಜಿಯೋ ಬಳಕೆದಾರರು ಸಿಮ್ ಕೊಳ್ಳುವಾಗಲೇ ಆಧಾರ್’ನ ಮೂಲಕ ಪಡೆದ ಕಾರಣ ಅವರು ಮತೊಮ್ಮೆ ಲಿಂಕ್ ಮಾಡುವ ಅವಶ್ಯಕತೆ ಇರುವುದಿಲ್ಲ.
ಆಧಾರ್ ಮತ್ತು ತಾವು ಬಳಸುತ್ತಿರುವ ಸಿಮ್ ಎರಡೂ ಬೇರೆ ಬೇರೆ ರಾಜ್ಯಕ್ಕೆ ಸೇರಿದ್ದರೆ ಈ ವಿಧಾನದ ಮೂಲಕ ಲಿಂಕ್ ಮಾಡಲು ಸಾಧ್ಯವಿಲ್ಲ, ಅದಕ್ಕಾಗಿ ನೀವು ನಿಮ್ಮ ಹತ್ತಿರದ ಯಾವುದೇ ಗ್ರಾಹಕರ ಕೇಂದ್ರಕ್ಕೆ ಹೋಗಿ ಲಿಂಕ್ ಮಾಡಬಹುದು.
*ಸೂರಜ್ ಅಣ್ವೇಕರ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ