ವಿಂಡ್‌ಶೀಲ್ಡ್‌   ಸ್ಪ್ರೇಯರ್‌ ರಿಪೇರಿ ಹೇಗೆ?


Team Udayavani, Jan 10, 2020, 4:24 AM IST

30

ಪ್ರಯಾಣದ ವೇಳೆ ಕಾರಿನ ವಿಂಡ್‌ಶೀಲ್ಡ್‌ (ಮುಂಭಾಗದ ಗಾಜು) ಕೊಳೆಯಾಗಿದ್ದರೆ ನಾವು ಅದಕ್ಕೆ ಸ್ಟೀರಿಂಗ್‌ ಕೆಳಗಿನ ಸ್ಪ್ರೇಯರ್‌ ಲಿವರ್‌ ಅದುಮಿ ನೀರು ಎರಚುತ್ತೇವೆ. ಇದೇ ವೇಳೆ ವೈಪರ್‌ ಕೂಡ ಚಾಲೂ ಆಗಿ ವಿಂಡ್‌ಶೀಲ್ಡ್‌ ಶುಚಿಯಾಗುತ್ತದೆ. ಆದರೆ ಕೆಲವೊಮ್ಮೆ ಸ್ಟ್ರೇಯರ್‌ನಲ್ಲಿ ನೀರು ಬರುವುದಿಲ್ಲ. ಇದಕ್ಕೆ ಕಾರಣಗಳೇನು ನೋಡೋಣ?

ಕಸದ ಸಮಸ್ಯೆ
ಕಾರಿನ ಬಾನೆಟ್‌ ಮೇಲೆ ನೀರು ಎರಚುವ ಪುಟ್ಟ ಸ್ಪ್ರೇಯರ್‌ ಇರುತ್ತದೆ. ಇದರ ಕಣ್ಣುಗಳಲ್ಲಿ ಕಸ ಕಟ್ಟಿಕೊಂಡಿದ್ದರೆ, ನೀರು ಸರಿಯಾಗಿ ವಿಂಡ್‌ಶೀಲ್ಡ್‌ಗೆ ಸ್ಪ್ರೇ ಆಗಲಾರದು. ಇದನ್ನು ಸರಿಪಡಿಸಲು ಪುಟ್ಟ ಸೂಜಿ ತೆಗೆದುಕೊಳ್ಳಿ ಅದರಿಂದ ಸ್ಪ್ರೆಯರ್‌ಗೆ ಚುಚ್ಚಿ, ಕಸ ಹೋಗುವಂತೆ ಮಾಡಿ ಅಥವಾ ಪ್ರಶರ್‌ ಇರುವ ಗಾಳಿ ಹಿಡಿದರೂ ಆಗುತ್ತದೆ.

ಪೈಪ್‌ ಹಾಳಾಗಿದ್ದರೆ
ವಿಂಡ್‌ಶೀಲ್ಡ್‌ ಶುಚಿಗೊಳಿಸಲು ವಾಟರ್‌ ಟ್ಯಾಂಕ್‌ನಿಂದ ಪುಟ್ಟ ಪೈಪ್‌ ಒಂದು ಬರುತ್ತದೆ. ಇದು ಕಾರಿನ ಚಕ್ರದ ಎದುರಿನ ಬಂಪರ್‌ನಿಂದ ಬಾನೆಟ್‌ ಹಿಂಭಾಗದ ಮೂಲಕ ಬರುತ್ತದೆ. ಇದು ತುಂಡಾಗಿದ್ದರೆ ನೀರು ಬರಲಾರದು. ಸಮಸ್ಯೆಗಳಿದ್ದರೆ ಅದನ್ನು ಬದಲಾಯಿಸಬೇಕು.

ವಾಶರ್‌ ಪಂಪ್‌ ಕನೆಕ್ಟರ್‌ ಮತ್ತು ಫ್ಯೂಸ್‌
ನೀರು ಹಾಯಿಸಲು ವಾಟರ್‌ ಟ್ಯಾಂಕ್‌ನಲ್ಲಿ ಒಂದು ಪುಟ್ಟದಾದ ಪಂಪ್‌ ಇರುತ್ತದೆ. ಈ ಪಂಪ್‌ಗೆ ವಿದ್ಯುತ್‌ ಸೌಕರ್ಯ ಕಲ್ಪಿಸುವ ಒಂದು ಪುಟ್ಟ ಕನೆಕ್ಟರ್‌ ಇರುತ್ತದೆ. ಕನೆಕ್ಟರ್‌ ಹಾಳಾಗಿದ್ದರೆ ಪಂಪ್‌ ಚಾಲೂ ಆಗದು. ಅಲ್ಲದೇ ಇದಕ್ಕೆ ಪ್ರತ್ಯೇಕ ಫ್ಯೂಸ್‌ ಕೂಡ ಇದ್ದು ಫ್ಯೂಸ್‌ ಹಾಳಾಗಿದ್ದರೆ ಪಂಪ್‌ ಚಾಲೂ ಆಗದು. ಡ್ಯಾಶ್‌ ಬೋರ್ಡ್‌ ತಳಭಾಗದಲ್ಲಿರುವ ಫ್ಯೂಸ್‌ ಬಾಕ್ಸ್‌ ತೆಗೆದು, ನಿರ್ದಿಷ್ಟ ಫ್ಯೂಸ್‌ ಹುಡುಕಿ ಬದಲಾಯಿಸಬೇಕು. ಕನೆಕ್ಟರ್‌ ಹಾಳಾಗಿದ್ದರೆ ಹೊಸ ಕನೆಕ್ಟರ್‌ ಹಾಕುವುದೇ ದಾರಿ.

ಪಂಪ್‌ ಕೆಟ್ಟುಹೋಗಿದ್ದರೆ
ಕೆಲವೊಮ್ಮೆ ಪಂಪ್‌ ಹಾಳಾಗುವ ಸಾಧ್ಯತೆ ಇರುತ್ತದೆ. ಇದನ್ನು ಕಂಡುಹಿಡಿಯುವುದು ಸುಲಭ. ಪಂಪ್‌ ಹಾಳಾಗಿದ್ದರೆ ನೀವು ಬಟನ್‌ ಅದುಮಿದರೂ ಪಂಪ್‌ ಚಾಲೂ ಆಗುವುದಿಲ್ಲ. ಸರಿಯಾಗಿದ್ದರೆ ಸಣ್ಣದಾದ ಶಬ್ದ ಕೇಳಿಸುತ್ತದೆ. ಪಂಪ್‌ ಹಾಳಾಗಿದ್ದರೆ ಟ್ಯಾಂಕ್‌ ಬದಿಯಲ್ಲಿರುವ ಪಂಪ್‌ ಅನ್ನು ತೆಗೆದು ಹೊಸದು ಹಾಕಿ. ಹಾಗೆಯೇ ರಿಯರ್‌ ವಿಂಡೋಗೆ ಪ್ರತ್ಯೇಕ ಮೋಟಾರ್‌ ಇದ್ದು, ಅದರ ಸಮಸ್ಯೆ ಇದ್ದರೂ ಇದೇ ರೀತಿ ಪರಿಶೀಲಿಸಬಹುದು.

ಹೀಗೆ ಮಾಡಿ
ವಿಂಡ್‌ಶೀಲ್ಡ್‌ ಶುಚಿಗೊಳಿಸಲು ವಾಟರ್‌ ಟ್ಯಾಂಕ್‌ಗೆ ಕೇವಲ ನೀರು ಹಾಕುವುದಕ್ಕಿಂತ ಸೋಪಿನ ನೀರು/ಶ್ಯಾಂಪೂ ನೀರು ಬಳಕೆ ಉತ್ತಮ. ಮೊದಲು 2 ಎಂ.ಎಲ್‌ನಷ್ಟು ಶ್ಯಾಂಪೂ ಇದಕ್ಕೆ ಹಾಕಿ ಬಳಿಕ ನೀರು ಹಾಕಿ. ಬಳಿಕ ಬಳಕೆ ವೇಳೆ ಇದು ನೊರೆಯಾಗಿ ಬರುತ್ತದೆ ಮತ್ತು ನೀರಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಗಾಜನ್ನು ಶುಚಿಗೊಳಿಸುತ್ತದೆ.

-ಈಶ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.