ವ್ಯಾಕ್ಯೂಮ್ ಕ್ಲೀನರ್ ಮಾರುಕಟ್ಟೆಗೆ ಕಾಲಿಟ್ಟ ಸ್ಯಾಮ್ ಸಂಗ್
Team Udayavani, Jul 8, 2022, 5:27 PM IST
ಗುರುಗ್ರಾಮ್: ಸ್ಯಾಮ್ಸಂಗ್ ಕಂಪೆನಿಯು ಭಾರತದ ಮಾರುಕಟ್ಟೆಗೆ ಜೆಟ್ ಕಾರ್ಡ್ಲೆಸ್ ಸ್ಟಿಕ್ ವ್ಯಾಕ್ಯೂಮ್ ಕ್ಲೀನರ್ ಲೈನ್-ಅಪ್ ಬಿಡುಗಡೆ ಮಾಡಿದೆ.
ಇದರೊಂದಿಗೆ ಭಾರತದಲ್ಲಿ ವ್ಯಾಕ್ಯೂಮ್ ಕ್ಲೀನರ್ ವಲಯಕ್ಕೆ ಸ್ಯಾಮ್ಸಂಗ್ ಪ್ರವೇಶಿಸಿದೆ. ಈ ಶ್ರೇಣಿಯು ಜೆಟ್ ಸೈಕ್ಲೋನ್ ಸಿಸ್ಟಂನೊಂದಿಗೆ ಬಂದಿದ್ದು 27 ಏರ್ ಇನ್ಲೆಟ್ಗಳೊಂದಿಗೆ ಸುರಕ್ಷಿತವಾಗಿ ಸೂಕ್ಷ್ಮ ಧೂಳಿನ ಕಣಗಳನ್ನು ಹೀರಿಕೊಳ್ಳುತ್ತವೆ. ಸ್ಯಾಮ್ಸಂಗ್ ಜೆಟ್ ಕಾರ್ಡ್ಲೆಸ್ ಸ್ಟಿಕ್ ವ್ಯಾಕ್ಯೂಮ್ ಕ್ಲೀನರ್ ಸ್ವಚ್ಛ ಗಾಳಿಯನ್ನು ಮಲ್ಟಿ-ಲೇಯರ್ಡ್ ಫಿಲ್ಟರೇಷನ್ ಸಿಸ್ಟಂನಿಂದ ಬಿಡುಗಡೆ ಮಾಡುತ್ತದೆ, ಅದು ಶೇ.99.999ರಷ್ಟು ಸೂಕ್ಷ್ಮ ಕಣಗಳು ಮತ್ತು ಅಲರ್ಜೆನ್ಗಳನ್ನು ಹಿಡಿಯುತ್ತದೆ. ಬ್ರಿಟಿಷ್ ಅಲರ್ಜಿ ಫೌಂಡೇಷನ್ ಅಂಡ್ ಎಸ್ಎಲ್ಜಿ ಯಿಂದ ಪ್ರಮಾಣೀಕರಿಸಲಾಗಿದೆ.
ನಮ್ಮ ಹೊಚ್ಚಹೊಸ ಸ್ಯಾಮ್ಸಂಗ್ ಜೆಟ್ ಕಾರ್ಡ್ಲೆಸ್ ಸ್ಟಿಕ್ ವ್ಯಾಕ್ಯೂಮ್ ಕ್ಲೀನರ್ಗಳು ನಮ್ಮ ಗ್ರಾಹಕರಿಗೆ ತಡೆರಹಿತ ಸ್ವಚ್ಛತೆಯ ಅನುಭವಕ್ಕೆ ಈ ವರ್ಗದ ಅತ್ಯುತ್ತಮ ವಿಶೇಷತೆಗಳ ಮೂಲಕ ಸರಿಸಾಟಿ ಇರದ ಅನುಕೂಲ ನೀಡುತ್ತವೆ. ಮಲ್ಟಿ-ಲೇಯರ್ಡ್ ಫಿಲ್ಟರೇಷನ್ ಸಿಸ್ಟಂನಂತಹ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಈ ವ್ಯಾಕ್ಯೂಮ್ ಕ್ಲೀನರ್ಗಳು ಶೇ.99.99 ರಷ್ಟು ಸೂಕ್ಷ್ಮ ಧೂಳು ಮತ್ತು ಅಲರ್ಜೆನ್ಗಳನ್ನು ಹಿಡಿಯುತ್ತವೆ ಮತ್ತು ಶಕ್ತಿಯುತ ಮತ್ತು ನಿರ್ಮಲವಾದ ಸ್ವಚ್ಛತೆ ನೀಡುತ್ತವೆ. ಸ್ಯಾಮ್ಸಂಗ್ ಜೆಟ್ನ ಗಮನಾರ್ಹ ಶಕ್ತಿಯುತ ಹೀರಿಕೊಳ್ಳುವ ಸಾಮರ್ಥ್ಯಗಳ ನಡುವೆಯೂ ಅದರ ಬಾಡಿಯನ್ನು ಹಗುರವಾಗಿ ವಿನ್ಯಾಸಗೊಳಿಸಲಾಗಿದ್ದು ನಮ್ಮಗ್ರಾಹಕರಿಗೆ ಜೆಟ್ನ ಸುಲಭ ಬಳಕೆಯ ವಿಶೇಷತೆಗಳನ್ನು ಅನುಕೂಲಕರವಾಗಿ ಬಳಸಲು ಅವಕಾಶ ನೀಡುತ್ತವೆ’’ ಎಂದು ಸ್ಯಾಮ್ಸಂಗ್ ಇಂಡಿಯಾದ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಬಿಸಿನೆಸ್ನ ಹಿರಿಯ ಉಪಾಧ್ಯಕ್ಷ ಮೋಹನ್ದೀಪ್ ಸಿಂಗ್ ಬಿಡುಗಡೆ ಸಂದರ್ಭದಲ್ಲಿ ಹೇಳಿದರು.
ಹೊಚ್ಚಹೊಸ ಶ್ರೇಣಿಯ ಸ್ಯಾಮ್ಸಂಗ್ ಜೆಟ್ ಕಾರ್ಡ್ಲೆಸ್ ಸ್ಟಿಕ್ ವ್ಯಾಕ್ಯೂಮ್ ಕ್ಲೀನರ್ ಗಳು ಜೆಟ್ 70, ಜೆಟ್ 75 ಮತ್ತು ಜೆಟ್ 90 ಮೂರು ಮಾದರಿಗಳಲ್ಲಿ ಲಭ್ಯವಿದ್ದು ಬೆಲೆ ರೂ.36,990ರಿಂದ ರೂ.52,990 ಆಗಿದೆ.
ಕೈಗಳಲ್ಲಿ ಹಿಡಿವ ಉಪಕರಣವು ಜೆಟ್ 70 1.48ಕೆಜಿ, ಜೆಟ್ 75, 1.66 ಕೆಜಿ ಮತ್ತು ಜೆಟ್ 90 1.89 ಕೆಜಿ ತೂಕ ಹೊಂದಿದೆ.ಸೀಮಿತ ಅವಧಿಗೆ ಸ್ಯಾಮ್ಸಂಗ್ ಜೆಟ್ ಕಾರ್ಡ್ಲೆಸ್ ಸ್ಟಿಕ್ ವ್ಯಾಕ್ಯೂಮ್ ಕ್ಲೀನರ್ಗಳನ್ನು ಕೊಳ್ಳುವವರು 12 ತಿಂಗಳವರೆಗೆ ಬಡ್ಡಿರಹಿತ ಇಎಂಐಗಳನ್ನು ರೂ.2,799ರಿಂದ ಪಡೆಯಬಹುದು. ಗ್ರಾಹಕರು ಸ್ಯಾಮ್ಸಂಗ್ ಜೆಟ್ ಕಾರ್ಡ್ಲೆಸ್ ಸ್ಟಿಕ್ ವ್ಯಾಕ್ಯೂಮ್ ಕ್ಲೀನರ್ಗಳ ಮೇಲೆ ಒಂದು ವರ್ಷ ವಾರೆಂಟಿ ಇರುತ್ತದೆ.ಸ್ಯಾಮ್ ಸಂಗ್ ಆನ್ ಲೈನ್ ಸ್ಟೋರ್ ನಲ್ಲಿ ಲಭ್ಯ. ಶೀಘ್ರದಲ್ಲೇ ಫ್ಲಿಪ್ಕಾರ್ಟ್ ನಲ್ಲೂ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…