ವಾಟ್ಸಾಪ್ ವೆಬ್ ಗಾಗಿ QR Code Scan ಮಾಡಿ ಬೇಸತ್ತಿದ್ದೀರಾ ? ಬರುತ್ತಿದೆ ಹೊಸ ಫೀಚರ್ !
Team Udayavani, Sep 20, 2020, 8:19 PM IST
ನ್ಯೂಯಾರ್ಕ್: ಡೆಸ್ಕ್ ಟಾಪ್ ನಲ್ಲಿ ವಾಟ್ಸಾಪ್ ಬಳಸಬೇಕಾದರೇ ಈ ಮೊದಲು ನಮ್ಮ ಫೋನ್ ತೆಗೆದುಕೊಂಡು ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ಲಾಗಿನ್ ಆಗಬೇಕಿತ್ತು. ಇದೊಂದು ದೀರ್ಘಾವಧಿಯ ವಿಧಾನವಾಗಿದ್ದು, ಕೆಲವೊಮ್ಮೆ ನೆಟ್ ವರ್ಕ್ ಸಮಸ್ಯೆಯಿದ್ದರೇ ಲಾಗಿನ್ ಆಗುವುದು ಕೂಡ ವಿಳಂಬವಾಗುತ್ತಿತ್ತು. ಈಗ ಅದಕ್ಕೊಂದು ಪರಿಹಾರ ಸಿಕ್ಕಿದ್ದು ಅದೇನೆಂದು ಮುಂದೆ ಓದಿ.
ಈಗಿರುವ ಡೆಸ್ಕ್ ಟಾಪ್ ವಾಟ್ಸಾಪ್ ಲಾಗಿನ್ ವಿಧಾನ ಶೀಘ್ರದಲ್ಲಿ ಬದಲಾಗಲಿದೆ. ಇನ್ನು ಮುಂದೆ ವಾಟ್ಸಾಪ್ ವೆಬ್ ಗೆ ಕೇವಲ ಫಿಂಗರ್ ಪ್ರಿಂಟ್ ಮೂಲಕ ಲಾಗಿನ್ ಆಗಬಹುದು.
WABetaInfo ವರದಿ ಪ್ರಕಾರ ವಾಟ್ಸಾಪ್ ವೆಬ್ ಫಿಂಗರ್ ಲಾಗಿನ್ ಫೀಚರ್ ಪರೀಕ್ಷಾರ್ಥ ಹಂತದಲ್ಲಿದೆ. ಮಾತ್ರವಲ್ಲದೆ ಇತ್ತೀಚಿನ ವಾಟ್ಸಾಪ್ ಬೇಟಾ ಅವೃತ್ತಿಯಲ್ಲೂ ಲಭ್ಯವಿದೆ. ಹೊಸ ಲಾಗಿನ್ ಫೀಚರ್ ಬಹಳ ಅನುಕೂಲಕರವಾಗಿದೆ ಎಂದೇ ಬಣ್ಣಿಸಲಾಗಿದೆ. ಅದಾಗ್ಯೂ ಕ್ಯೂಆರ್ ಕೋಡ್ ನಂತೆ ಇದರ ಕಾರ್ಯನಿರ್ವಹಣೆಯೂ ಒಂದೇ ತೆರನಾಗಿರಲಿದೆ. ಈ ಫೀಚರ್ ಬಳಕೆಗೆ ಬಂದ ತಕ್ಷಣ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತಿಲ್ಲ. ಬದಲಾಗಿ ನಿಮ್ಮ ಫೋನ್ ನಲ್ಲಿಯೇ ವಾಟ್ಸಾಪ್ ವೆಬ್ ಗೆ ಫಿಂಗರ್ ಪ್ರಿಂಟ್ ನೀಡಿದರಾಯಿತು. ಇಲ್ಲಿಯೂ ಕೂಡ ಸ್ಮಾರ್ಟ್ ಫೋನ್ ಬಳಕೆ ಮಾಡುವುದು ಅನಿವಾರ್ಯ. ಅದಾಗ್ಯೂ ಫಿಂಗರ್ ಪ್ರಿಂಟ್ ಸ್ಕ್ಯಾನ್, ಕೋಡ್ ಸ್ಕ್ಯಾನ್ ಗಿಂತ ಬಹಳ ಸುಲಭಕರವಾಗಲಿದೆ.
ಇದನ್ನೂ ಓದಿ: ಮಧ್ಯಾಹ್ನ ಕಾಣೆಯಾಗಿ ಸಂಜೆಯ ವೇಳೆ Google’s Play Storeನಲ್ಲಿ ಪ್ರತ್ಯಕ್ಷವಾದ Paytm !
ಇದನ್ನೂ ಓದಿ: ಸೆ.20ರಿಂದ ಅಮೆರಿಕದಲ್ಲಿ ಟಿಕ್ ಟಾಕ್, ವಿ-ಚಾಟ್ ಅಧಿಕೃತವಾಗಿ ಬ್ಯಾನ್
ಮಾತ್ರವಲ್ಲದೆ ಸುರಕ್ಷತಾ ದೃಷ್ಟಿಯಿಂದ ಕೂಡ ಫಿಂಗರ್ ಪ್ರಿಂಟ್ ಅತ್ಯುತ್ತಮವಾಗಲಿದೆ. ಕ್ಯೂಆರ್ ಕೋಡ್ ಬಳಸಿ ಬೇರೊಬ್ಬರು ಸುಲಭವಾಗಿ ನಿಮ್ಮ ಫೋನ್ ಹ್ಯಾಕ್ ಮಾಡಬಹುದಿತ್ತು. ಇನ್ನು ಮುಂದೆ ಅದು ಅಸಾಧ್ಯವಾಗಲಿದೆ. ಕಳೆದ ವರ್ಷದಿಂದ ಈ ಫೀಚರ್ ಬಳಕೆಗೆ ತರಲು ವಾಟ್ಸಾಪ್ ಯೋಜನೆ ರೂಪಿಸುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್