ಬರೋಬ್ಬರಿ 40 ವರ್ಷಗಳ ಬಳಿಕ ಈ ಊರಿಗೆ ಬಂತು ಬಸ್: ಗ್ರಾಮಸ್ಥರಿಗೆ ಸಂತಸ
1982ರ ಬಳಿಕ ಸ್ಥಗಿತಗೊಂಡಿದ್ದ ಸಂಚಾರ
Team Udayavani, Jan 31, 2023, 7:45 AM IST
ರಾಯ್ಪುರ:ಬರೋಬ್ಬರಿ ನಲವತ್ತು ವರ್ಷಗಳು. ನಕ್ಸಲ್ ಪೀಡಿತ ಛತ್ತೀಸ್ಗಡದ ದಂತೇವಾಡ ಜಿಲ್ಲೆಯ ಜಗಾರ್ಗುಂಡ ಗ್ರಾಮಕ್ಕೆ ಬಸ್ ಸೇವೆ ಸ್ಥಗಿತಗೊಂಡು ಆಗಿರುವ ವರ್ಷಗಳಿವು. ಈಗ ಸಮಸ್ಯೆ ನಿವಾರಣೆಯಾಗಿದೆ. ಜಿಲ್ಲಾ ಕೇಂದ್ರ ದಂತೇವಾಡದಿಂದ 81 ಕಿಮೀ ದೂರ ಇರುವ ಈ ಗ್ರಾಮಕ್ಕೆ ಮೂರೂವರೆ ಗಂಟೆಯ ಪ್ರಯಾಣ ಇದೆ.
ಸ್ಥಳೀಯರು ಹೇಳಿಕೊಳ್ಳುವ ಪ್ರಕಾರ 1982ರಲ್ಲಿ ಈ ಪ್ರದೇಶದಲ್ಲಿ ನಕ್ಸಲೀಯರು ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆ ತಂದೊಡ್ಡುತ್ತಿದ್ದರು. ರಸ್ತೆಯಲ್ಲಿ ಗುಂಡಿ ತೋಡಿ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದ್ದರು. ಹೀಗಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗ್ರಾಮಕ್ಕೆ ಸಂಚಾರವನ್ನೇ ರದ್ದು ಮಾಡಿತ್ತು. ಈಗ ಅಂದರೆ ಜ.15ರಂದು ಮತ್ತೆ ಬಸ್ ಸಂಚಾರ ಶುರು ಮಾಡಿದ್ದರಿಂದ 25 ಗ್ರಾಮಗಳ 17 ಸಾವಿರ ಮಂದಿಗೆ ಜರಗುಂಡದಿಂದ ದಂತೇವಾಡಕ್ಕೆ ತೆರಳಲು ಸುಲಭವಾಗಿದೆ.
ಸ್ಥಳೀಯರು ಅದರಿಂದ ಸಂತೋಷಗೊಂಡಿದ್ದಾರೆ.
“ಈ ಬಸ್ಸು ಸ್ಥಳೀಯರ ಜೀವನಾಡಿ. ಇದುವರೆಗೆ ದಂತೇವಾಡ ತಲುಪಲು ಸುಕಾ¾ ಮೂಲಕ 180 ಕಿಮೀ ಬಳಸು ದಾರಿಯ ಮೂಲಕ ಕ್ರಮಿಸಬೇಕಿತ್ತು. ಈಗ 3-4 ಗಂಟೆಗಳ ಅವಧಿಯಲ್ಲಿ ದಂತೇವಾಡ ತಲುಪಲು ಸಾಧ್ಯವಾಗುತ್ತಿದೆ’ ಎಂದು ನಿರ್ವಾಹಕ ಹೇಳಿದ್ದಾರೆ. ಇದರ ಜತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ತಿವಾರಿ ಮಾತನಾಡಿ ಈ ರಸ್ತೆಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ 140 ಮಂದಿ ಅಸುನೀಗಿದ್ದರು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್