ಮಗಳನ್ನೇ ಹತ್ಯೆಗೈದ ಪ್ರಕರಣ : ಕೊನೆಗೂ ಇಂದ್ರಾಣಿ ಮುಖರ್ಜಿಗೆ ಜಾಮೀನು
Team Udayavani, May 19, 2022, 12:37 AM IST
ಹೊಸದಿಲ್ಲಿ: 2012ರಲ್ಲಿ ತನ್ನ ಸ್ವಂತ ಮಗಳನ್ನೇ ಕೊಂದ ಆರೋಪದ ಮೇರೆಗೆ 2015ರಲ್ಲಿ ಬಂಧನಕ್ಕೊಳಗಾಗಿದ್ದ ಮಾಧ್ಯಮ ವಲಯದ ಮಾಜಿ ಅಧಿಕಾರಿ ಇಂದ್ರಾಣಿ ಮುಖರ್ಜಿ ಅವರಿಗೆ ಸುಪ್ರೀಂ ಕೋರ್ಟ್ ಇದೇ ಪ್ರಕರಣದಲ್ಲಿ ಜಾಮೀನು ನೀಡಿದೆ.
ಅಲ್ಲಿಗೆ ತಮ್ಮ ಬಂಧನವಾಗಿ ಸುಮಾರು 6.5 ವರ್ಷಗಳಾದ ಅನಂತರ ಅವರಿಗೆ ಜಾಮೀನು ಸಿಕ್ಕಂತಾಗಿದೆ.
ಇಂದ್ರಾಣಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಪ್ರಸ್ತುತ ಮೆದುಳಿಗೆ ಸಂಬಂಧಿಸಿದ ರೋಗದಿಂದ ಬಳಲುತ್ತಿರುವ ಅವರಿಗೆ ಜಾಮೀನು ನೀಡುವುದು ಸದ್ಯದ ಮಟ್ಟಿಗೆ ಅಗತ್ಯವಿದೆ ಎಂದರು.