UV Fusion: ಹೋರಾಟಗಾತಿಯೊಬ್ಬಳ ಕಥನ- ವಖಾರಿ ಧೂಸ


Team Udayavani, Aug 22, 2023, 3:42 PM IST

14-uv-fusion

ಆಳುವವರು ಮತ್ತು ಆಳಿಸಿಕೊಳ್ಳುವವರ ಮಧ್ಯದ ಸಂಘರ್ಷ ಇಂದು ನಿನ್ನೆಯದಲ್ಲ. ಬಡವ-ಬಲ್ಲಿದ, ಮೇಲು-ಕೀಳುಗಳೆಂಬ ಭೇದ-ಭಾವ ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿದೆ. ಉಳ್ಳವರ ಅಧಿಕಾರದ ಸೊಕ್ಕು, ಹಣದ ಮದವನ್ನು ಇಳಿಸಲು ಕೆಲವೊಮ್ಮೆ ಶೋಷಣೆಗೊಳಗಾಗುವ ವರ್ಗವು ಹೋರಾಟ, ಆಂದೋಲನಗಳೆಂಬ ಅಸ್ತ್ರಗಳನ್ನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ. ಇವರ ಹೋರಾಟದ ಹಾದಿ ಕಲ್ಲು-ಮುಳ್ಳುಗಳಿಂದ ಕೂಡಿರುತ್ತದೆ. ಕೆಲವೊಮ್ಮೆ ನ್ಯಾಯಕ್ಕಾಗಿ ಧ್ವನಿ ಎತ್ತಿದವರ ದಮನವೂ ಆಗಬಲ್ಲದು ಎಂಬುದನ್ನು ಹೇಳುತ್ತದೆ ವಖಾರಿ ಧೂಸ ನಾಟಕ.

“”ವಖಾರಿ ಧೂಸ” ಇದು ಮರಾಠಿ ಶಬ್ದವಾಗಿದ್ದು, ಗೋದಾಮಿನ ಧೂಳು ಎಂಬರ್ಥವನ್ನು ಕೊಡುತ್ತದೆ. ನಿಪ್ಪಾಣಿ, ಅದರ ಸುತ್ತ ಮುತ್ತಲಿನ ಪ್ರದೇಶಗಳ ಬೀಡಿ ಕಾರ್ಮಿಕರ ಬವಣೆಗಳನ್ನು ಹೇಳುತ್ತದೆ ಈ ನಾಟಕ. ಮಾಲಕರ ಶೋಷಣೆಯನ್ನು ಸಹಿಸಿಕೊಂಡೇ ಬಂದ ಭೀಮವ್ವ ಗಟ್ಟಿಗಿತ್ತಿ. ಶೋಷಣೆಗೊಳಗಾಗಿ ಕುಡಿತ, ಮೋಜುಗಳಲ್ಲಿಯೇ ಬದುಕನ್ನು ದೂಡುತ್ತಿರುವ ತನ್ನ ಸಮುದಾಯದ ಜನರ ಬದುಕನ್ನು ಮೇಲೆತ್ತಬೇಕೆಂಬ ಕಳಕಳಿಯುಳ್ಳವಳು. ಬೀಡಿ ಕಾರ್ಖಾನೆಯ ಮಾಲಕರು ವಖಾರಿಗೆ ದುಡಿಯಲು ಬರುವ ಹೆಂಗಸರ ದೌರ್ಬಲ್ಯವನ್ನು ಉಪಯೋಗಿಸಿಕೊಂಡು ತಮ್ಮ ದೇಹದ ಹಸಿವನ್ನು ಇಂಗಿಸಿಕೊಳ್ಳುವವರು. ಕಚ್ಚಾ ಮಾಲನ್ನು ಪೂರೈಸುವ ತಂಬಾಕು ಬೆಳೆಗಾರರಿಗೆ ತರಾವರಿ ಮೋಸ ಮಾಡುವವರು.

ಕಾರ್ಮಿಕರಲ್ಲಿ ಹೋರಾಟದ ಕಿಚ್ಚನ್ನು ಹುಟ್ಟು ಹಾಕುವ ಭೀಮವ್ವ ಬೃಹತ್‌ ಪ್ರಮಾಣದಲ್ಲಿ ಆಂದೋಲನವನ್ನು ನಡೆಸಲು ಕಾರ್ಮಿಕರನ್ನು ಸಜ್ಜುಗೊಳಿಸುತ್ತಾಳೆ. ಇದರ ಸುಳಿವು ಸಿಕ್ಕ ಮಾಲಕರು, ವ್ಯಾಪಾರಿಗಳೆಲ್ಲ ಒಂದಾಗುತ್ತಾರೆ. ಆಂದೋಲನ ನಡೆದರೆ ಕಾರ್ಖಾನೆಗಳ ಕೆಲಸಕ್ಕೆ ಕುತ್ತು ಬರುತ್ತದೆ ಎಂದು ಕಾರ್ಮಿಕರ ನಾಯಕಿ ಭೀಮವ್ವಳನ್ನು ಮಟ್ಟ ಹಾಕಲು ನಾನಾ ವಿಧದಲ್ಲಿ ಬಲೆ ಹೆಣೆಯತ್ತಾರೆ. ಭೀಮವ್ವನ ಹೋರಾಟಕ್ಕೆ ಹೆಗಲು ಕೊಡಲು ನಿಂತ ಶಶಾಂಕ ದೇಶಪಾಂಡೆ ಎಂಬ ಕಾರ್ಮಿಕ ಹೋರಾಟಗಾರನ ದೌರ್ಬಲ್ಯಗಳನ್ನು ತಿಳಿದುಕೊಂಡು ಆತನನ್ನು ಬೆದರಿಸಿ, ವಿವಿಧ ಆಮಿಷಗಳನ್ನೊಡ್ಡುತ್ತಾರೆ. ಹೋರಾಟಗಾರನ ರೆಕ್ಕೆಗಳನ್ನು ಕತ್ತರಿಸುವಲ್ಲಿ ಯಶಸ್ವಿಯಾಗುತ್ತಾರೆ ಮಾಲಕರು. ಇದಕ್ಕೆಲ್ಲ ಬೆದರದ ಭೀಮವ್ವ ತನ್ನ ಅಚಲ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಆದರೆ ಸಮಯ ಸಾಧಿಸಿ ಭೀಮವ್ವಳನ್ನು ಹಾದಿಯ ಹೆಣವಾಗಿಸುತ್ತಾರೆ ಉಳ್ಳವರು. ಆಕೆಯ ಮಾರ್ಗದರ್ಶಿಯೂ ಹಿತೈಷಿಯೂ ಆದ ಸಾಧು ಬಾಬಾ ಭರವಸೆಯನ್ನು ಕಳೆದುಕೊಂಡ ಕಾರ್ಮಿಕರಲ್ಲಿ ಮತ್ತೆ ಹೋರಾಟದ ಕಿಚ್ಚನ್ನು ಹಚ್ಚುವ ಮೂಲಕ ನಾಟಕಕ್ಕೆ ಪರದೆ ಬೀಳುತ್ತದೆ.

ನಾಟಕದುದ್ದಕ್ಕೂ ಉಪ ಕತೆಯಂತೆ ಹಾಡುಗಳ ರೂಪದಲ್ಲಿ ಬಂದು ಹೋಗುವ ಸಂಗ್ಯಾ-ಬಾಳ್ಯಾ ನಾಟಕದ ಪ್ರಸಂಗಗಳು ಮುದಗೊಳಿಸುತ್ತವೆ. ನಂಬಿದ ಗೆಳೆಯನಿಂದಲೇ ಮೋಸ ಹೋಗಿ ಪ್ರಾಣ ಕಳೆದುಕೊಳ್ಳುವಂತೆ ಇಲ್ಲಿ ಭೀಮವ್ವ ಕೂಡ ತಾನು ನಂಬಿದ ತನ್ನ ಗೆಳೆಯನಿಂದಲೇ ಮೋಸ ಹೋಗುವ ಕತೆಯನ್ನು ಸೂಚ್ಯವಾಗಿ ಹೇಳಿದ್ದಾರೆ ಲೇಖಕರು.

ಸಶಕ್ತ ನಾಟಕಗಳನ್ನು ಬರೆಯುವಲ್ಲಿ ನಿಸ್ಸೀಮರಾದ ಡಿ.ಎಸ್‌. ಚೌಗಲೆ ಅವರ ರಚನೆಯಾದ “”ವಖಾರಿ ಧೂಸ” ನಾಟಕ ಇತ್ತೀಚೆಗೆ ಶಿವಮೊಗ್ಗೆಯ ಸಹ್ಯಾದ್ರಿ ರಂಗ ತರಂಗದ ಕಲಾವಿದರಿಂದ ಪ್ರಯೋಗಗೊಂಡಿತು. ಹಿರಿಯ ನಿರ್ದೇಶಕರಾದ ಕಾಂತೇಶ ಕದರಮಂಡಲಗಿ ಅವರ ನಿರ್ದೇಶನದಲ್ಲಿ ಈ ನಾಟಕ ಪ್ರೇಕ್ಷಕರನ್ನು ರಂಜಿಸಿತು. ಉತ್ತರ ಕರ್ನಾಟಕದ ಗಡಸು ಭಾಷೆಯಿಂದ ಕೂಡಿದ ಸಂಭಾಷಣೆಗಳು, ಗೋಪಾಲ ಸ್ವಾಮಿ ಅವರ ನೆರಳು ಬೆಳಕು, ಸತೀಶ ಸಾಸ್ವೆಹಳ್ಳಿ ಅವರ ಪ್ರಸಾಧನ ನಾಟಕದ ಪ್ಲಸ್‌ ಪಾಯಿಂಟ್‌.

-ಗೌರಿ ಚಂದ್ರಕೇಸರಿ, ಶಿವಮೊಗ್ಗ

ಟಾಪ್ ನ್ಯೂಸ್

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.