ಅರಳುವ ಮುನ್ನವೇ ಕಮರುವ ಬದುಕು!


Team Udayavani, Mar 17, 2021, 3:11 PM IST

girl child

ಜಗತ್ತಿನಲ್ಲಿ ಅದೆಷ್ಟೋ ಮಕ್ಕಳು ಹೆತ್ತವರನ್ನು ಕಳೆದುಕೊಂಡು ಅನಾಥರಾಗುತ್ತಾರೆ. ಈ ನಡುವೆ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಾರೆ. ಕಲಿಯುವ ಹಂಬಲ, ಆಸಕ್ತಿಯಿದ್ದರೂ ಶಿಕ್ಷಣ ಮರೀಚಿಕೆಯಾಗುತ್ತದೆ.

ತಂದೆ-ತಾಯಿಯ ಪ್ರೀತಿಯಲ್ಲಿ ಬೆಳೆದು ಶಿಕ್ಷಣ ಪಡೆಯಬೇಕಾದ ಮಕ್ಕಳು ಬಾಲ್ಯದಲ್ಲಿಯೇ ಅವರನ್ನು ಕಳೆದುಕೊಂಡು ಬೀದಿ ಪಾಲಾಗುತ್ತಾರೆ. ಇಂತಹ ಮಕ್ಕಳ ಬವಣೆ, ನೋವು ಕಂಡರೆ ಎಂತಹವರೇ ಆದರೂ ಒಂದು ಕ್ಷಣ ಮರುಗುತ್ತಾರೆ. ನೊಂದ ಅನಾಥ ಮಕ್ಕಳ ಬದುಕು ಹೀಗೆಯೇ ಅಲ್ಲವೇ?

ಮನೆಯವರ ಆಸರೆ, ಹೆತ್ತವರ ಪ್ರೀತಿ ಇಲ್ಲದೆ ಬದುಕಿನ ದಾರಿ ಹುಡುಕಿ ನಡೆದವಳ ಜೀವನ ಪಯಣವಿದು. ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡು ಬುದ್ಧಿಮಾಂಧ್ಯೆ ತಾಯಿಯಿಂದ ಏನನ್ನೂ ನಿರೀಕ್ಷಿಸದ ಹೆಣ್ಣು ಮಗಳೊಬ್ಬಳ ದುರಂತ ಕಥೆಯಿದು. ಒಂದು ದಿನ ತಾಯಿಯೂ ಮಗಳನ್ನು ಒಂಟಿಯಾಗಿಸಿ ಹೋಗಿಬಿಟ್ಟಳು. ಅನಾಥಳಾಗಿ ಬೀದಿ ಪಾಲಾದ ಹೆಣ್ಣು ಮಗಳು ಕರುಣೆಯಿಲ್ಲದ ಕೈಗಳಿಗೆ ಸೆರೆಯಾಗಬೇಕಾಯಿತು. ನೀಚ ಜನರ ಚಿತ್ರಹಿಂಸೆ ಸಹಿಸದೇ ಅವರ ಆನತಿಯಂತೆ ಭಿಕ್ಷಾಟನೆ ಮಾಡಬೇಕಾಯಿತು. ಭಿಕ್ಷೆ ಕೊಡುವ ಜನರಿಗೆ ಕರುಣೆ ಬರಲೆಂದು ಅವಳ ದೇಹದ ಮೇಲೆ ಗಾಯದ ಗುರುತು ಕಾಣುವಂತೆ ಮಾಡಿ, ಬಲವಂತವಾಗಿ ಭಿಕ್ಷೆ ಬೇಡುವಂತೆ ಮಾನಸಿಕ ಹಿಂಸೆ ನೀಡಿದರು. ಬೇರೆ ದಾರಿ ಕಾಣದ ಆ ಬಾಲಕಿಗೆ ಭಿಕ್ಷೆ ಬೇಡಿಯೇ ಜೀವನ ನಡೆಸುವುದು ನಿತ್ಯದ ಬದುಕಾಯಿತು.

ಮನುಷ್ಯತ್ವ ಇಲ್ಲದ ಜನರ ವರ್ತನೆಗೆ ಬೇಸತ್ತು ತನ್ನ ತಂದೆ, ತಾಯಿಯ ಸಾವು ನೆನೆದು ಕಣ್ಣೀರು ಹಾಕುವುದು ಅವಳ ದಿನದ ಪಾಡಾಯಿತು.

ಇಂತಹ ಕೆಟ್ಟ ಜನರ ಸಹವಾಸ ತೊರೆದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದು ಹೇಗೆಂದು ಕಣ್ಣೀರು ಸುರಿಸುತ್ತಾ ಯೋಚಿಸಿದಳು. ಆ ನರಕದಿಂದ ಪಾರಾಗಲು ಯತ್ನಿಸಿ ಹಿಂಸೆ ಅನುಭವಿಸಿದಳು. ಒಮ್ಮೆ ಅಲ್ಲಿಂದ ಪಾರಾಗಿ ಪೊಲೀಸರ ನೆರವಿನಿಂದ ಮರಳಿ ಊರು ಸೇರಿದಳು. ಆದರೆ ಊರಿನಲ್ಲಿ ಅನಾಥ ಪ್ರಜ್ಞೆ ಕಾಡದಂತೆ ಅಪ್ಪಿಕೊಳ್ಳುವ ಕೈ, ಕಣ್ಣೀರು ಒರೆಸಿ, ಪ್ರೀತಿ ತೋರುವ ಮನಸ್ಸುಗಳಿಲ್ಲ. ನೊಂದು ಬಂದಿದ್ದ ಬಾಲಕಿಗೆ ಇರುವ ಒಬ್ಬ ಅಣ್ಣ ಕಣ್ಣೆತ್ತಿಯು ನೋಡಲಿಲ್ಲ.

ಒಲ್ಲದ ಮನಸ್ಸಿಂದಲೇ ಆ ಹುಡುಗಿ ಆನಾಥಾಶ್ರಮ ಸೇರಿದಳು. ಅಲ್ಲಿ ಅವಳ ಜಾಣ್ಮೆಯನ್ನು ಕಂಡ ಶಿಕ್ಷಕನೊಬ್ಬ ಅವಳಿಗೆ ಆಶ್ರಯ ಒದಗಿಸಿ ವಿದ್ಯಾಭ್ಯಾಸ ಮಾಡಲು ನೆರವು ನೀಡಿ ಶಾಲೆಗೆ ಸೇರಿಸಿದರು. ಅವಳ ಸರಳತೆ, ಮುಗ್ಧತೆ, ಆಸಕ್ತಿ ಅಷ್ಟೇ ಅಲ್ಲ. ಹಾಡುಗಾರಿಕೆ, ನೃತ್ಯ, ಪ್ರಬಂಧ ಸ್ಪರ್ಧೆ ಮತ್ತು ಕ್ರೀಡೆಗಳಲ್ಲಿಯೂ ಮುಂಚೂಣಿಯಲಿದ್ದ ಆ ಹುಡುಗಿಯನ್ನು ಶಿಕ್ಷಕರು ಪ್ರಶಂಸಿಸಿದರು.

ಅನಂತರ ಹೈಸ್ಕೂಲ್‌ಗೆ ಪ್ರವೇಶ ಪಡೆದು ಅತ್ಯುತ್ತಮ ವಿದ್ಯಾರ್ಥಿ ಎನಿಸಿಕೊಂಡಳು. ಹತ್ತನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿ ನಮ್ಮ ಶಾಲೆಗೆ ಕೀರ್ತಿ ತರುವಳು ಎಂಬ ಆಸೆ ಅಲ್ಲಿನ ಶಿಕ್ಷಕರಿಗಿತ್ತು. ಬೇಸಗೆಯ ರಜೆ ನಿಮಿತ್ತ ಊರಿಗೆ ಬಂದವಳನ್ನು ಕಂಡ ವಿಧಿ ಎಲ್ಲಿ ಕಾದು ಕುಳಿತಿತ್ತೋ ಗೊತ್ತಿಲ್ಲ. ಅವಳ ಬದುಕಿಗೆ ಇತಿ ಹಾಡಿತು. ಕಣ್ಣ ತುಂಬಾ ಕನಸು ಕಟ್ಟಿದವಳು ಮತ್ತೆ ಕಣ್ಣು ತೆರೆಯಲಿಲ್ಲ. ಪುಟ್ಟ ಹುಡುಗಿಯ ಜೀವನದ ಬಹುದೊಡ್ಡ ಕನಸು ಕೊನೆಗೂ ಈಡೇರಲಿಲ್ಲ.

ನಾವಿಬ್ಬರೂ ಓದುತ್ತಿದ್ದುದು ಒಂದೇ ಶಾಲೆಯಲ್ಲಿ. ನನಗಿಂತ ಒಂದು ವರ್ಷ ಚಿಕ್ಕವಳಾದರೂ ಯಾವಾಗಲೂ ನನ್ನ ಜತೆಯಲ್ಲೇ ಇರುತ್ತಿದ್ದಳು. ತಾನು ಅನುಭವಿಸಿದ ಕಷ್ಟಗಳನ್ನೆಲ್ಲ ನನ್ನೊಂದಿಗೆ ನೋವಿನಿಂದ ಹೇಳಿಕೊಳ್ಳುತ್ತಿದ್ದವಳು. ವಿಧಿ ಅವಳನ್ನು ನನ್ನಿಂದ ಶಾಶ್ವತವಾಗಿ ದೂರ ಮಾಡಿತು. ನನ್ನ ಮುದ್ದಿನ ತಂಗಿಯ ನೆನಪು ನನ್ನನ್ನೂ ಬಿಡದೆ ಕಾಡುತ್ತಿದೆ. ಅರಳಬೇಕಾದ ಬದುಕು ಇಷ್ಟು ಬೇಗ ಕಮರಿ ಹೋಯಿತು. ವಿಧಿಯಾಟ… ಬಲ್ಲವರಾರು?


 ಲಕ್ಷ್ಮೀ ಬಿ., ಕಲಬುರಗಿ ವಿಶ್ವವಿದ್ಯಾಲಯ 

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.