UV Fusion: ಬನ್ನಿ ಅಡುಗೆ ಮಾಡೋಣ!


Team Udayavani, Dec 22, 2023, 7:45 AM IST

12-uv-fusion

ಇತ್ತೀಚಿಗೆ ಜಗತ್ತು ಸುಗಮ ಜೀವನಕ್ಕಾಗಿ ಹೊಸ ಹೊಸ ದಾರಿಗಳನ್ನು ಹಿಡಿಯುತ್ತಿದೆ. ಅದು ತಂತ್ರಜ್ಞಾನವೇ ಆಗಿರಬಹುದು ಅಥವಾ ಇನ್ಯಾವುದೋ.  ಆದರೆ ಸುಗಮ ಜೀವನಕ್ಕಾಗಿ ಹಿಂದಿನ ಜೀವನದಲ್ಲಿದ್ದ ಕೆಲವೊಂದು ಖುಷಿ ಬಾಂಧವ್ಯವನ್ನು ನಾವು ಎಲ್ಲೋ ಮರೆಯುತ್ತಿದ್ದೇವೆ. ಇದಕ್ಕೆ ಉದಾಹರಣೆ ಸಾವಿರ ಇರಬಹುದು. ನನ್ನ ಅನುಭವ ಮತ್ತು ನಾನು ಕಂಡ ಒಂದು ವಿಷಯ ಅಂದರೆ ಅದು ಮದುವೆ ಮನೆಯ ಅಡುಗೆ!

ಒಂದು ಮನೆಯಲ್ಲಿ ಮದುವೆ ಅಂದರೆ ಊರಿಗೆ ಊರೇ ಸಂಭ್ರಮದಲ್ಲಿರುತ್ತಿತ್ತು. ಗೆಳೆಯರು, ಸಂಬಂಧಿಕರು ಎಲ್ಲರೂ ಕೈ ಜೋಡಿಸಿ ತಯಾರಿ ನಡೆಯುತ್ತಿತ್ತು. ಇನ್ನು ಮದುವೆ ಮನೆಯವರ ಸಂಭ್ರಮ ಹೇಳಿ ಮುಗಿಯುವಂಥದ್ದಲ್ಲ ಬಿಡಿ. ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಮದುವೆ ಕಾರ್ಯಕ್ರಮ ನಡೆಸುವುದು ಎಂದರೆ ಸಣ್ಣ ವಿಚಾರ ಅಲ್ವೇ ಅಲ್ಲ. ಆರು ತಿಂಗಳ ಹಿಂದೆಯೇ ತಯಾರಿ ಶುರು. ಇನ್ನು ಮದುವೆಯ ದಿನ ಮನೆಯೊಳಗಡೆ ಹುಡುಗಿಯರೆಲ್ಲಾ ಒಂದು ದಿನಕ್ಕೆ ಕನ್ನಡಿ ಪ್ರೇಮಿಗಳಾಗಿರುತ್ತಾರೆ. ಹೊರಗಿನ ಜವಾಬ್ದಾರಿಯೆಲ್ಲಾ ಹುಡುಗರದ್ದೇ. ಎಲ್ಲ ಜವಾಬ್ದಾರಿಗಳಲ್ಲೂ ದೊಡ್ಡ ಜವಾಬ್ದಾರಿ ಎಂದರೆ ಅದು ಅಡುಗೆ. ಉಳಿದ ದಿನಗಳೆಲ್ಲಾ ಹೆಂಗಸರೇ ಅಡುಗೆ ಮಾಡಿದರೆ ಆ ಒಂದು ದಿನ  ಮಾತ್ರ ಸಂಭ್ರಮದ ಅಡುಗೆ ಹುಡುಗರದ್ದು.

ಮುಂಜಾನೆ ನಾಲ್ಕು ಗಂಟೆಗೆ ಎದ್ದು ಶುಚಿಯಾಗಿ ಬಂದು ಗಣಪನಿಗೆ ಅಕ್ಕಿ ತೆಂಗಿನಕಾಯಿ ಇಟ್ಟು ಭಕ್ತಿಯಿಂದ ಪ್ರಾರ್ಥಿಸಿ ಒಲೆಗೆ ಬೆಂಕಿ ಹಚ್ಚಿದ ಅನಂತರ ಶುರು ಮಾಡಿದರೆ ಮತ್ತೆ ಆ ದಿನದ ಸಂಧ್ಯಾ ಸಮಯದವರೆಗೂ ಪಾತ್ರೆ ಸದ್ದೇ ಡೋಲು ವಾದ್ಯ, ಅಡುಗೆ ಪರಿಮಳವೇ ಸುಗಂಧ ದ್ರವ್ಯ, ಅಡುಗೆ ಮಾಡುವಾಗ ಆದ ಮಸಿಯೇ ಆ ದಿನದ ಬಟ್ಟೆಯ ಚಂದ. ತರಕಾರಿ ತುಂಡರಿಸುವವರು ಒಂದು ಗುಂಪಾದರೆ ಮಸಾಲೆ ಅರೆಯುವವರು ಇನ್ನೊಂದು ಗುಂಪು.

ಹೀಗೆ ಪ್ರತಿಯೊಂದಕ್ಕೂ ಒಂದೊಂದು ಗುಂಪು. ಇದರ ನಡುವೆ ತಿನ್ನಲು ಏನಾದರು ಸಿಗುವುದಾ ಎಂದು ಬಾಯಿ ಚಪ್ಪರಿಸುತ್ತಾ ಬಿಸಿ ಪಾತ್ರೆಯ ನಡುವೆ ಬರುವ ಮಕ್ಕಳ ಗುಂಪು. ಮಕ್ಕಳಿಗೆ ಕೋಲು ಹಿಡಿದು ಗದರಿಸಲು ಹಿರಿಯರಲ್ಲೊಂದು ಗುಂಪು. ಅಡುಗೆ ರುಚಿಯಾದಾಗ ಸಿಗುವ ಖುಷಿ, ಒಂಚೂರು ತಪ್ಪಾದಾಗ ಬರುವ ಸಿಟ್ಟು, ಕೆಲಸ ತಡವಾದಾಗ ಕೆಲಸ ಕೇಳುವ ಹಾಸ್ಯ ಬೈಗುಳ, ಹೊರಗಿನ ನೆಂಟರು ಬಂದು ಮಾಡುವ ತಮಾಷೆಗೆ ಬರುವ ನಗು ಎಲ್ಲವೂ ಆ ದಿನ ಮನೆಯ ಹಿಂಬದಿಯಲ್ಲಿ ಸಿಗುತ್ತದೆ.

ಹುಡುಗರೆಂದರೆ ಹಾಗೆ ತಾನೆ. ಸಾವಿರ ತಲೆನೋವಿದ್ದರೂ ಸಂಭ್ರಮ ಬಂದಾಗ ಎಲ್ಲವನ್ನೂ ಮರೆತು ಬಿಡುತ್ತಾರೆ. ಇಷ್ಟೇ ಅಲ್ಲ ಅಡುಗೆ ಮಾಡಿದ ಮೇಲೆ ಬಡಿಸುವವರಾರು? ಅದೂ ಹುಡುಗರೇ!ಅರ್ಧ ದಿನ ಮನೆ ಹಿಂಭಾಗದಲ್ಲಿ ಕಳೆದ ನಮಗೆ ಅನ್ನ ಬಡಿಸಲು ನಿಲ್ಲುವಾಗಲೇ ಹೊಸ ಸಂಬಂಧಿಕರ ಪರಿಚಯವಾಗುವುದು. ಅದರಲ್ಲೂ ಕೆಲವೊಂದು ಹಿರಿಯರ ತಮಾಷೆ ಇರುತ್ತೆ. ಎಲ್ಲರದ್ದಾಯ್ತು ನಿಂದ್ಯಾವಾಗ ಮದುವೆ. ಅವರ ಮಾತಿಗೆ ಉತ್ತರ ಕೊಡೋದ ಬೇಡ್ವಾ ಎನ್ನೋ ಉಪ ಪ್ರಶ್ನೆ ನಮ್ಮಲ್ಲಿ. ಎಲ್ಲ ಮುಗಿದ ಅನಂತರ ಮಗಳನ್ನು ಇನ್ನೊಂದು ಮನೆಗೆ ಕಳುಹಿಸುವಾಗ ತಾಯಿಗೆ ಎಷ್ಟು ನೋವಾಗುತ್ತೋ ಅಷ್ಟೇ ನೋವು ನಮಗೆ ಅಡುಗೆ ಪಾತ್ರೆ ತೊಳೆಯಬೇಕು ಅಂದಾಗ ಆಗುವುದು. ಅದಾದ ನಂತರ ಅಡುಗೆ ಮನೆಯ ಕಸ ಗುಡಿಸೋದು ಇನ್ನೊಂದು ತಲೆನೋವು.

ಎಲ್ಲ ಮುಗಿದು ಊಟ ಮಾಡೋವಾಗ ಸೂರ್ಯನಿಗೂ ಸುಸ್ತಾಗಿರುತ್ತೆ. ಎಲ್ಲ ಆದ ಮೇಲೆ ರಾತ್ರಿ ಮಲಗಲು  ಹುಡುಗರೆಲ್ಲರೂ ಅಂಗಳದಲ್ಲಿ ಚಾಪೆ ಹಾಕಿ ಮಲಗೋವಾಗ ಆ ದಿನದ ತಮಾಷೆ ಸಂದರ್ಭ ಹೇಳಿ ನಕ್ಕು ನಕ್ಕು ಹೊಟ್ಟೆ ನೋವು ಶುರುವಾಗಿಬಿಡುತ್ತೆ. ಈ ಎಲ್ಲ ಅಡುಗೆ ಸಂಭ್ರಮ ಈಗ ಕ್ಯಾಟರಿಂಗ್‌ ಎಂಬ ಆಧುನಿಕತೆಯ ಪಾಲಾಗಿದೆ. ಹಾಗಂತ ಕ್ಯಾಟರಿಂಗ್‌ ತಪ್ಪು ಅಂತ ಹೇಳ್ಳೋದಲ್ಲ. ಒತ್ತಡ ಸುಧಾರಿಸಲು ಈ ರೀತಿ ಮಾಡುವುದೆಲ್ಲಾ ಅಗತ್ಯವೇ. ಆದರೆ ನಾವು ಎಲ್ಲೋ ಒಂದು ಕಡೆ ನಮ್ಮ ಹಿಂದಿನ ಸಂಸ್ಕೃತಿ ಅಡಗಿದ ಮನೆ ಅಡುಗೆಯನ್ನು ಮರೆಯುತ್ತಿದ್ದೇವೋ ಅನಿಸುತ್ತಿದೆ. ನಾವು ಸಣ್ಣ ವಯಸ್ಸಿನಲ್ಲಿ ಅಡುಗೆ ಎಂದಾಗ ಓಡೋಡಿ ಬರುತ್ತಿದ್ದ ಕಾಲ ನಿಧಾನವಾಗಿ ಇತಿಹಾಸ ಸೇರುತ್ತಿದೆ.

-ದೀಪಕ್‌

ವಿವಿ ಮಂಗಳೂರು

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.