Professional Life: ಕಂಡಂತಿಲ್ಲ ವೃತ್ತಿ ಜೀವನ


Team Udayavani, Dec 22, 2023, 8:00 AM IST

10-uv-fusion

ಯಾವುದೇ ಒಂದು ವಿಷಯದ ಬಗ್ಗೆ ನಮಗೆ ಪೂರ್ತಿಯಾಗಿ ತಿಳಿಯುವುದು ಆ ವಿಷಯದೊಳಗೆ ಹೊಕ್ಕಾಗ ಮಾತ್ರ ಎಂದು ತಿಳಿದವರು ಹೇಳ್ತಾರೆ. ಅಂತೆಯೇ ಯಾವುದೇ ವೃತ್ತಿಯನ್ನು ನಿಭಾಯಿಸುವುದು ಹೊರಗಿನಿಂದ ನೋಡಲು ಸುಲಭವಾಗಿ ಕಂಡರೂ ಅದರೊಳಗೆ ಪ್ರವೇಶಿಸಿದಾಗಲೇ ಅದರ ಆಳ ಅರಿಯುವುದು. ಹೀಗೆ ಸೆಮಿಸ್ಟರ್‌ ಪರೀಕ್ಷೆ ಮುಗಿದ ಬಳಿಕ ಒಂದು ತಿಂಗಳು ಇಂಟರ್ನ್ ಶಿಪ್‌ ಮಾಡಬೇಕೆಂದು ಕಾಲೇಜಿನಲ್ಲಿ ಆಜ್ಞೆಯಾಗಿತ್ತು. ಇದಕ್ಕಾಗಿ ನಾನು ಆಯ್ಕೆ ಮಾಡಿದ್ದು ಮುದ್ರಣ ಮಾಧ್ಯಮ. ಪತ್ರಿಕೆಗಳು ದಿನಂಪ್ರತಿ ಮುದ್ರಿತವಾಗಿ ಜನರ ಕೈಸೇರುವ ಪರಿಯನ್ನೊಮ್ಮೆ ಕಣ್ಣಾರೆ ಕಾಣುವ ಹಂಬಲದಿಂದ ಪರೀಕ್ಷೆ ಮುಗಿದ ಮಾರನೇ ದಿನವೇ ಬೆಂಗಳೂರಿಗೆ ಹೊರಟೆ.

ಮೊದಲ ದಿನ ಪತ್ರಿಕಾ ಲೋಕಕ್ಕೆ ಕಾಲಿಟ್ಟಾಗ ಕೊಂಚ ಭಯ ನಡುಕ ನನ್ನನ್ನು ಕಾಡಿತ್ತು. ಅಲ್ಲಿ ಸಬ್‌ ಎಡಿಟರ್‌ ಸರ್‌ ವಾರಕ್ಕೆ ಒಂದೊಂದು ಡೆಸ್ಕ್ ನಲ್ಲಿ ಕೆಲಸ ಮಾಡುವಂತೆ ಸೂಚಿಸಿದರು. ಮೊದಲ ವಾರವೇ ಅನುವಾದ ಮಾಡುವ ಕೆಲಸ ನನಗೆ ಸಿಕ್ಕಿದ ಕಾರಣ ಬೇರೆ ವಿಷಯಗಳ ಮೇಲೆ ಗಮನಹರಿಸಲು ಕಷ್ಟವಾಯಿತು. ಮೊದಲೇ ನನಗೆ ಅನುವಾದದ ಗಂಧ ಗಾಳಿ ಗೊತ್ತಿಲ್ಲ. ಕಾಲೇಜಿನಲ್ಲಿ ಅಧ್ಯಾಪಕರು ಅನುವಾದ ಕೊಟ್ಟಾಗ ಹೇಗಾದರೂ ಮಾಡಿ, ಏನಾದರೊಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆವು. ಇಂಟರ್ನ್ ಶಿಪ್‌ ನಲ್ಲಿ ಅನುವಾದ ಮಾಡದೆ ಬೇರೆ ದಾರಿಯಿರಲಿಲ್ಲ. ಹೀಗಾಗಿ ಅನುವಾದದ ಬಗ್ಗೆ ಸಂಪೂರ್ಣವಾಗಿ ಅರಿತುಕೊಳ್ಳಲು ಸಹಾಯವಾಗುವುದರ ಜತೆಗೆ ಕನ್ನಡ ಟೈಪಿಂಗ್‌ ಸಹ ಸುಧಾರಿಸಿತು. ಮೊದಲಿಗೆ ಕಷ್ಟವೆನಿಸಿದರೂ ದಿನ ಕಳೆದಂತೆ ತಪ್ಪುಗಳು ಕಡಿಮೆಯಾದವು. ವಿದ್ಯಾರ್ಥಿ ಜೀವನವನ್ನೇ ನೋಡಿದ ನನಗೆ ವೃತ್ತಿಜೀವನದ ಕಡೆ ಆಸಕ್ತಿ ಮೂಡಿತು.

ಎರಡನೇ ವಾರ ವರದಿ ಮಾಡಿಕೊಂಡು ಬರುವಂತೆ ಹೇಳಿದಾಗ ಮನಸ್ಸು ದಿಗಿಲುಗೊಂಡಿತು. ಕಾರಣ ಬೆಂಗಳೂರಿನಲ್ಲಿ ಯಾವತ್ತೂ ಒಬ್ಬಳೇ ಪ್ರಯಾಣಿಸಿದವಳಲ್ಲ. ಜತೆಗೆ ಊರಿನಿಂದ ಬಂದವರು ಬೆಂಗಳೂರಿನಲ್ಲಿ ಜಾಸ್ತಿ ಮೋಸ ಹೋಗ್ತಾರೆಂದು ಕೇಳಿದ್ದೆ. ಹಾಗೆಂದು ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳುವುದು ಸಹ ನನಗೆ ಇಷ್ಟವಿರಲಿಲ್ಲ. ಧೈರ್ಯ ಮಾಡಿ ವರದಿ ಮಾಡಲು ಹೊರಟ ನನಗೆ ಸಹಾಯ ಮಾಡಿದ್ದು ಗೂಗಲ್‌ ಮ್ಯಾಪ್‌ ಮತ್ತು ಪರ್ಸಿನಲ್ಲಿದ್ದ ಪುಡಿಗಾಸು. ಹಾಗೋ ಹೀಗೋ ವರದಿ ಮಾಡಿ ಪುನಃ ಆಫೀಸಿನತ್ತ ಬರುವಾಗ ನನಗೆ ಅರ್ಥವಾದದ್ದು ಏನೆಂದರೆ ಪಟ್ಟಣದಲ್ಲಿ ಪಾರಾಗಲು ಬೇಕಾದದ್ದು ಧೈರ್ಯದ ಜತೆ ಹಣ. ಇವೆರಡಿದ್ದರೆ ಮನುಷ್ಯ ಎಲ್ಲಿಯೂ ಬದುಕಬಲ್ಲ. ನಾನು ಇಂಟರ್ನ್ಶಿಪ್‌  ಗೆಂದು ಹೋದ ಕಾರಣ ದಿನದಲ್ಲಿ ಒಂದು ಅಥವಾ ಎರಡು ವರದಿ ಮಾಡಲು ಸಿಗುತ್ತಿತ್ತು. ಆದರೆ ಅಲ್ಲಿದ್ದ ವರದಿಗಾರರಿಗೆ ಪ್ರತಿದಿನ ನಗರದಲ್ಲಿ ನಡೆದ ಘಟನೆಗಳನ್ನೆಲ್ಲ ವರದಿ ಮಾಡಬೇಕಿತ್ತು. ಅವರ ಕಷ್ಟ ಒಮ್ಮೆ ಕಣ್ಣೆದುರು ಬಂದು ಹೋಯಿತು.

ಹೀಗೆ ಒಂದು ತಿಂಗಳು ಒಂದಾದ ಮೇಲೊಂದು ಡೆಸ್ಕ್ ನಲ್ಲಿ ಕೆಲಸ ಮಾಡಿದೆ. ನಾನು ಕಲಿಯುವ ಜತೆಗೆ ಅಲ್ಲಿದವರ ಕೆಲಸಗಳನ್ನು ಗಮನಿಸುತ್ತಿದ್ದೆ. ಆಫೀಸ್‌ ಎಂಬ ನಾಲ್ಕು ಗೋಡೆಯ ಮಧ್ಯೆ ಇಷ್ಟೆಲ್ಲ ಕೆಲಸ ನಡೆಯುತ್ತಾ ಎಂದು ಬೆರಗಾದೆ.

ಅಲ್ಲಿ ಸುಮಾರು 10 ರಿಂದ 15 ಡೆಸ್ಕ್ ಗಳಿದ್ದವು. ಪ್ರತಿಯೊಂದು ಡೆಸ್ಕಿಗೂ  ಒಬ್ಬ ಮುಖ್ಯಸ್ಥ. ಅವರು ಹೇಳಿದಂತೆ ಉಳಿದವರ ಕೆಲಸ ಸಾಗುತ್ತಿತ್ತು. ನಗರದಲ್ಲಾದ ಘಟನೆಯನ್ನು ವರದಿ ಮಾಡಿ ಅದನ್ನು ತಿದ್ದುದರಿಂದ ಹಿಡಿದು ವಿಷಯವನ್ನು ಹಾಳೆಯ ಮೇಲೆ ಹಾಕುವವರೆಗೂ ಅಲ್ಲಿ ಬಹಳಷ್ಟು ಕೆಲಸಗಳು ನಡೆಯುತ್ತವೆ. ಜತೆಗೆ ಫೋಟೋಶಾಪ್‌, ಪೇಜ್‌ ಡಿಸೈನಿಂಗ್‌ ಡೆಸ್ಕ್ಗಳು ಬೇರೇನೇ.

ಬೆಳಗ್ಗೆಯಿಂದಲೇ ಸುದ್ದಿಗಳು ಬರಲು ಪ್ರಾರಂಭವಾಗುತ್ತದೆ. ಸುದ್ದಿಗಳಲ್ಲಿ ಯಾವುದನ್ನು ಹಾಕಬೇಕು ಎಂಬುದನ್ನು ನಿರ್ಧಾರ ಮಾಡುವವರು ಎಡಿಟರ್‌. ಎಲ್ಲ ಸುದ್ದಿಗಳು ಒಮ್ಮೆಗೆ ಕೈ ಸೇರಿದ ತತ್‌ಕ್ಷಣ ಮಧ್ಯಾಹ್ನ ಎಡಿಟರ್‌ ರೂಮ್‌ನಲ್ಲಿ ಎಲ್ಲ ಡೆಸ್ಕಿನ ಮುಖ್ಯಸ್ಥರ ಜತೆಗೆ ಸಭೆ ನಡೆಯುತ್ತದೆ. ಎಡಿಟರ್‌ ನಿರ್ಧಾರದಂತೆ ಯಾವ ಸುದ್ದಿಗಳು ಪತ್ರಿಕೆಯಲ್ಲಿ ಮುದ್ರಣವಾಗಬೇಕು ಎಂದು ತಿಳಿಯುತ್ತದೆ. ಎಲ್ಲ ಸುದ್ದಿಗಳು ತಿದ್ದಿ ಪತ್ರಿಕೆಯಲ್ಲಿ ಕೂರಿಸಿದ ಮೇಲೆ ಯಾವುದಾದರೂ ಮುಖ್ಯವಾದ ವರದಿ ದೊರೆತರೆ ಮೊದಲು ಹಾಕಿದ ಸುದ್ದಿಯನ್ನು ತೆಗೆದು ಮತ್ತೆ ಬಂದ ಸುದ್ದಿಯನ್ನು ಹಾಕಬೇಕು. ಇದು ವರದಿಗಾರ ಮತ್ತು ಪುಟ ವಿನ್ಯಾಸಗಾರನಿಗೆ ಇರುವ ಬಹುದೊಡ್ಡ ಸವಾಲು.

ರಾತ್ರಿ 10ಗಂಟೆಗೆ ಪುಟವಿನ್ಯಾಸವಾಗಿ ಮುದ್ರಣಕ್ಕೆ ಹೋಗಬೇಕಾಗಿರುವುದರಿಂದ ಅದರ ಮೊದಲಿನ ಒಂದೆರಡು ಗಂಟೆ ಅಲ್ಲಿದ್ದವರು ಬಹಳ ಬ್ಯುಸಿ ಆಗಿರುತ್ತಾರೆ. ಆ ಸಮಯದಲ್ಲಿ ಅವರ ಜತೆ ಮಾತನಾಡಿದರೆ ಬೈಗುಳದ ಉಡುಗೊರೆಯಂತೂ  ಗ್ಯಾರಂಟಿ.

ಹೀಗೆ ಪತ್ರಿಕೆ ಮುದ್ರಣವಾಗಿ ಮುಂಜಾನೆಯ ಅಷ್ಟರಲ್ಲಿ ಜನರ ಕೈ ಸೇರುತ್ತದೆ. ಸುದ್ದಿ ಮಾಡುವುದರಿಂದ ಹಿಡಿದು ಜನರಿಗೆ ಸುದ್ದಿ ತಲುಪಿಸುವುದರ ನಡುವೆ ಇರುವ ಪತ್ರಿಕೆಯವರ ಪರಿಶ್ರಮ ಅಗಾಧ. ಇದು ಕೈ ಎತ್ತಿ ಮುಗಿಯುವಂತಹದ್ದೇ ಸರಿ.

-ಲಾವಣ್ಯ ಎಸ್‌.

ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು

 

ಟಾಪ್ ನ್ಯೂಸ್

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.