ಅಕ್ಕನೊಂದಿಗೆ ಬಾಲ್ಯದ ಸ್ವಾತಂತ್ರ್ಯದಿನಾಚರಣೆಯ ಮೆಲುಕು


Team Udayavani, Aug 15, 2020, 6:15 AM IST

Childood

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಪ್ರೀತಿಯ ಅಕ್ಕಾ ಹೇಗಿದ್ದೀಯ ನೀನು ವಿದೇಶದಲ್ಲಿ ಸುರಕ್ಷಿತವಾಗಿ ಇರುವೆ ಎಂದು ಭಾವಿಸುವೆ.

ನಾವು ಇಲ್ಲಿ ಕ್ಷೇಮವಾಗಿದ್ದೇವೆ. ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇವೆ ಆದಷ್ಟು ಬೇಗ ಬಾ.

ದೂರವಾಣಿಯಲ್ಲಿ ಎಷ್ಟು ಹರಟಬಹುದು, ವಿಡಿಯೋ ಕರೆಯಲ್ಲಿ ಮಾತಾಡಬಹುದು. ಆದರೆ ಬರವಣಿಗೆಯಲ್ಲಿ ಉಕ್ಕುವ ಭಾವನೆ ಸರಣಿ ಮಾತುಗಳಲ್ಲಿ ಸಿಗುವುದಿಲ್ಲ. ಅದಕ್ಕಾಗಿ ನಿನ್ನ ನೆನಪಿನ ಹಂದರದಲ್ಲಿ ಈ ಪತ್ರ ಬರೆಯುತ್ತಿದ್ದೇನೆ ಕಣೇ.

ಅಕ್ಕಾ ಸ್ವತಂತ್ರ ಅಂದ್ರೆ ಅದೊಂದು ಹೋರಾಟ, ತ್ಯಾಗ, ಮಾತೃಭೂಮಿ ಎನ್ನುವ ಉನ್ಮತ್ತ ಶಕ್ತಿ. ನಮ್ಮ ಭಾರತದ ದೇಶಕ್ಕಾಗಿ ಸಂಭವಿಸಿದ ಸುಧೀರ್ಘ‌ ಸಂಘರ್ಷ. ಸ್ವಾತಂತ್ರ್ಯ ದೇಶದ ಮಟ್ಟಿಗೆ ಎಷ್ಟು ಪ್ರಮುಖವೊ ಹಾಗೆ ವ್ಯಕ್ತಿಯ ಮಟ್ಟಿಗೂ ಸ್ವಾತಂತ್ರ್ಯ ಅಷ್ಟೇ ಮುಖ್ಯ. ತನ್ನ ಆಲೋಚನೆಗಳನ್ನು ಹಾಗೂ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಸ್ವಾತಂತ್ರ್ಯ ಆವಶ್ಯಕವಾಗಿದೆ.

ನನಗೂ ನಿನಗೂ ಸ್ವತಂತ್ರ ದಿನಾಚರಣೆ ಎಂದರೆ ಮರೆಯಲಾಗದಷ್ಟು ಸಿಹಿ ನೆನಪುಗಳಿವೆ. ನೆನಪಿದ್ಯಾ ನಿನಗೆ ?ನಾವಿಬ್ಬರೂ ಬಿಳಿ ಸಮವಸ್ತ್ರ ತೊಟ್ಟು ಹಿಂದಿನ ದಿನವೇ ಹತ್ತಾರು ಆಂಗಡಿ ಸುತ್ತಿ ತಂದಿದ್ದ ಕೆಸರಿ ಬಿಳಿ ಹಸಿರು ಬಣ್ಣದ ಬ್ಯಾಂಡ್‌ ಹಾಕಿ ಇಬ್ಬರೂ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದದ್ದು. ತಿಂಗಳಿನಿಂದಲೇ ಅಭ್ಯಾಸ ನಡೆಸಿ ವೆಂಕಟೇಶ್‌ ಸರ್‌ ಹೇಳಿಕೊಡುತ್ತಿದ್ದ ವಂದೇ ಮಾತರಂ ಹಾಡನ್ನು ವೇದಿಕೆಯಲ್ಲಿ ನಿಂತು ಹಾಡುತ್ತಿದ್ದದ್ದು, ಒಮ್ಮೆ ನಾನು ಸಾವರ್ಕರ್‌ ಅವರ ಕುರಿತಾದ ಭಾಷಣಕ್ಕೆ ತಯಾರಾಗಿದ್ದೆ. ವೇದಿಕೆಗೆ ಹೋಗುತಿದ್ದಂತೆ ಗಲಿಬಿಲಿಯಾಗಿ ತಡಬಡಾಯಿಸಿದ್ದು ಹೇಗೊ ಸಂಭಾಳಿಸಿಕೊಂಡು ಭಾಷಣ ಮಾಡಿದ್ದೆ.  ವೇದಿಕೆಯ ಮೇಲಿದ್ದ ಅತಿಥಿಗಳಿಂದ ಬಹುಮಾನ ಪಡೆದಿದ್ದೂ ಸವಿನೆನಪು.

ಆಗಸ್ಟ್‌ ಬಂದರಂತೂ ನೆನಪುಗಳು ಚಿಟಿಚಿಟಿ ಮಳೆಯಂತೆ ಕಾಡುತ್ತೆ. ಇಂದು ಕೊರೊನಾ ಕಾರಣದಿಂದ ಮನೆಯಲ್ಲೇ ಇರಬೇಕಾಗಿದೆ ಪ್ರತೀ ವರ್ಷ ಮನೆಮುಂದೆ ಹೋಗುತ್ತಿದ್ದ ಗಾಂಧಿ, ಸಾವರ್ಕರ್‌ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಚಂದ್ರಶೇಖರ ಅಜಾದ್‌, ವೇಷಭೂಷಣದ ಶಾಲಾ ಪುಟಾಣಿಗಳ ಟ್ಯಾಬ್ಲೋ ಮೆರಣಿಗೆ ಈ ಬಾರಿ ಇಲ್ಲ ಅವರ ಸಂಭ್ರಮ ಚಿತ್ರಕಲಾ, ಭಾಷಣ, ಕಿರುನಾಟಕ ದೇಶಭಕ್ತಿಗೀತೆಗಳ ಸ್ಪರ್ಧೆಗಳೂ ಹಾಡು ನೃತ್ಯಗಳ ತಯಾರಿಯೂ ಇಲ್ಲ.

ಕೊರೊನಾ ಕಾರಣದಿಂದ ಶಾಲಾ ಕಾಲೇಜುಗಳು ಇನ್ನು ತೆರೆದಿಲ್ಲ. ಶಾಲೆಗಳ ಪುನರ್‌ ಪ್ರಾರಂಭದ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ. ಎಲ್ಲ ಕಳೆದು ಮುಂದಿನ ವರ್ಷ ಆಗಸ್ಟ್‌ 15 ಸಂಭ್ರಮ ಮೊದಲಿನಂತೆ ಇರಲಿ. ಮಹನೀಯರ ಆದರ್ಶದಿಂದ ನಮ್ಮ ನಾಳೆಗಳು ಉನ್ನತವಾಗಲಿ ಸಂತೋಷದಿಂದ ಹೆಮ್ಮೆಯಿಂದ ಸ್ವತಂತ್ರ ದಿನಾಚರಣೆಯನ್ನು ಒಟ್ಟಾಗಿ ಎಲ್ಲರೂ ಆಚರಿಸುವಂತಾಗಲಿ. ಕಳೆದ ವರ್ಷಗಳಂತೆ ಎಲ್ಲ ಸಂತಸದ ಕ್ಷಣಗಳು ಮರಳಿ ಎನ್ನುವೇ ಹಾರೈಕೆ ಯಾಗಿದೆ.

– ಸುರಭಿ ಎಸ್‌. ಶರ್ಮಾ

 

 

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.