UV Fusion: ಯಾವ ಕಾಲದ ಶಾಸ್ತ್ರ..?


Team Udayavani, Mar 14, 2024, 7:45 AM IST

12-uv-fusion

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?, ಕುವೆಂಪು ಅವರ “ಕೋಗಿಲೆ ಮತ್ತು ಸೋವಿಯತ್‌ ರಷ್ಯಾ’ ಎಂಬ ಕವನಸಂಕಲನದಲ್ಲಿಯ ಒಂದು ಕವನವಿದು. ಬದುಕಿನ ನಾನಾ ಸತ್ಯ, ಆಚರಣೆಗಳು, ವಿಚಾರಗಳನ್ನು ನೈತಿಕ ನೆಲೆಗಟ್ಟಿನಲ್ಲಿ ನಿಂತು ಯೋಚಿಸುವಂತೆ ಮಾಡುತ್ತದೆ.

ಪ್ರಸ್ತುತ ಯಾವುದೇ ವಿಚಾರಗಳನ್ನು ತಿಳಿದಾಗ, ಅವುಗಳನ್ನು ಓರೆಗೆ ಹಚ್ಚಿ ನೋಡದೆ, ತಮಗೆ ತಿಳಿದಂತೆ, ತಾವು ತಿಳಿದದ್ದೇ ಸತ್ಯ ಎಂಬಂತೆ ಅರ್ಥೈಸಿಕೊಂಡು ವಿಷಯದಾಳಕ್ಕೆ ಹೋಗದೆ ಹೀಗಳೆಯುವವರೇ ಹೆಚ್ಚಾಗಿದ್ದಾರೆ. ಅದಕ್ಕೊಂದು ಉದಾಹರಣೆ, ನಮ್ಮ ಸಂಸ್ಕೃತಿ ಆಚರಣೆಗಳು ಹೆಚ್ಚು ಆಡಂಬರಗೊಳ್ಳುತ್ತಿರುವುದರ ಜತೆಗೆ ಆಧುನಿಕತೆಯ ಸೋಗಿನಲ್ಲಿ ವಾಸ್ತವಿಕ ಸತ್ಯದೆಡೆಗೆ ಒತ್ತು ಕೊಡದೆ ಅಧಃಪತನದೆಡೆಗೆ ಸಾಗುತ್ತಿರುವುದೂ ಒಂದು ವಿಚಿತ್ರ ಸತ್ಯ..!

ನಮ್ಮ ಸಂಸ್ಕೃತಿಯಲ್ಲಿ ಸಾಕಷ್ಟು ಸಂಪ್ರದಾಯಗಳು ವೈಜ್ಞಾನಿಕ ನೆಲೆಗಟ್ಟು ಮಿಳಿತವಾಗಿರುವುದೊಂದು ವಿಸ್ಮಯದ ವಿಚಾರ. ಪ್ರತಿಯೊಂದನ್ನು ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಂಡಿರುವ ಈಗಿನ ಬುದ್ಧಿ ಜೀವಿಗಳು ನಮ್ಮ ಆಚರಣೆಗಳ ಹಿಂದಿನ ಸತ್ಯಗಳನ್ನು ಅರಿತು ಪಾಲಿಸುವುದರಲ್ಲಿ ಯಾಕೆ ವಿಫ‌ಲವಾಗುತ್ತಿದ್ದಾರೆ ?. ಸ್ತ್ರೀಯರ ಕೈಬಳೆ ಕಾಲ್ಗೆಜ್ಜೆಗಳ ಸಪ್ಪಳಕ್ಕೆ ವೇದ ಮಂತ್ರಗಳಷ್ಟು ಶಕ್ತಿಯಿದೆ ಎಂದು ನಂಬಲಾಗಿದೆ.  ಗಾಜಿನ ಕೈಬಳೆಗಳು, ಕಾಲ್ಗೆಜ್ಜೆಗಳ ಸದ್ದು ಸದಾ ಒಂದಿಲ್ಲೊಂದು ಮನೆಯ ಜವಾಬ್ದಾರಿ/ ಕರ್ತವ್ಯದೊಳಗೆ ಮುಳುಗಿ ಹೈರಾಣಾಗುವ ಸ್ತ್ರೀಯೊಳಗೆ, ಸಕಾರಾತ್ಮಕತೆಯನ್ನು ತುಂಬಿ ಚೈತನ್ಯಗೊಳ್ಳುವಂತೆ ಮಾಡುತ್ತವೆ.

ಅವುಗಳನ್ನು ಧರಿಸಿದವರಿಗೆ ಬಳೆಗಳ ಮತ್ತು ಗೆಜ್ಜೆಯ ಒತ್ತುವಿಕೆಯಿಂದ ಕೈಕಾಲಿನ ನರಗಳು ಸದಾ ಚಲನಶೀಲವಾಗಿ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತವೆ. ಆದರೆ ಇವೆಲ್ಲಾ ಆಧುನೀಕರಣದ ಹೆಸರಿನಲ್ಲಿ ಮೆಟಲ್‌ ಪ್ಲಾಸ್ಟಿಕ್‌ ಗಳಾಗಿ ಬದಲಾಗಿ, ಕೇವಲ ಅಂದ ಚೆಂದಕ್ಕಾಗಿಯಷ್ಟೆ ಬಳಸುವ ವಸ್ತುಗಳಾಗಿ ಬದಲಾಗಿವೆ. ಇವುಗಳಿಂದ ಯಾವ ಉಪಯೋಗವಿದೆ ಎಂದು ಕೆದಕುವ ಗೋಜಿಗೆ ಯಾರು ಹೋಗುತ್ತಾರೆ.

ಇನ್ನೂ ಕುಂಕುಮದ ವಿಷಯಕ್ಕೆ ಬಂದರೆ ಅದೂ ಈಗಿನ ಕಾಲದಲ್ಲಿ ರಾಸಾಯನಿಕವಾಗಿ ಬದಲಾಗಿದೆ. ಪಚ್ಚೆ ಕರ್ಪೂರ, ನಿಂಬೆರಸ, ಅರಿಶಿನ, ಸುಣ್ಣ ಮುಂತಾದ ವಸ್ತುಗಳಿಂದ ತಯಾರಿಸಿದ ಪುಡಿ ನಿಜವಾದ ಕುಂಕುಮ. ಇದನ್ನು ಹಣೆಯಲ್ಲಿ ಧರಿಸುವುದರಿಂದ ನಮ್ಮೊಳಗೆ ಧನಾತ್ಮಕತೆ ಚೈತನ್ಯವಿರಲಿದೆ. ಮೆದುಳಿಗೆ ರಕ್ತಸಂಚಾರ ಚೆನ್ನಾಗಿ ಆಗುವಂತೆ ನೋಡಿಕೊಳ್ಳುತ್ತದೆ.

ಇನ್ನು ಕಾಲುಂಗುರ ಮತ್ತು ತಾಳಿಯ ವಿಚಾರದಲ್ಲಿ ವಿವಾಹಿತ ಸ್ತ್ರೀಯರಿಗೆ ಕೊಂಚ ಒತ್ತಡಗಳು, ಗೊಂದಲಗಳು ಹೆಚ್ಚು. ಕಾಲಿಗೆ ಧರಿಸುವ ಬೆಳ್ಳಿ ಉಂಗುರಕ್ಕೂ ಅದನ್ನು ಧರಿಸುವ ಸ್ತ್ರೀಯ ಆರೋಗ್ಯಕ್ಕೂ ಬಹಳ ಸಂಬಂಧವಿದೆ. ಬೆಳ್ಳಿ ಧನಾತ್ಮಕ ಶಕ್ತಿವಾಹಕ.

ಕಾಲಿನ ಎರಡನೇ ಬೆರಳಿಗೆ ಅದನ್ನು ಧರಿಸುವುದರಿಂದ ಆ ಬೆರಳಿಗೆ ಕೂಡಿಕೊಂಡ ನರವೊಂದು ಗರ್ಭಾಶಯದ ಮೂಲಕ ಹೃದಯಕ್ಕೆ ಸೇರಿಕೊಂಡಿರುತ್ತದೆ. ನಡೆಯುವಾಗ ಕಾಲುಂಗುರದ ಒತ್ತುವಿಕೆಯಿಂದ ಆ ನರವು ಚೈತನ್ಯಗೊಂಡು ರಕ್ತ ಸಂಚಾರ ಸುಗಮವಾಗುವುದರಿಂದ ಗರ್ಭಾಶಯ ಆರೋಗ್ಯವಾಗಿರುತ್ತದೆ ಮತ್ತು ಋತುಚಕ್ರ ಸರಿಯಾಗಿ ಆಗುತ್ತದೆ. ಇದರಿಂದ ಸಂತಾನ ಭಾಗ್ಯ ಹೆಚ್ಚುತ್ತದೆ.

ಕರಿಮಣಿಗಳು ದೇಹದ ಉಷ್ಣತೆಯನ್ನು ಹೀರಿಕೊಳ್ಳುತ್ತವೆ. ಇದರಿಂದ ದೇಹಾರೋಗ್ಯದ ಸಮತೋಲನಕ್ಕೆ ಕಾರಣವಾಗುತ್ತದೆ. ಕರಿಮಣಿಗಳು ದೃಷ್ಟಿ ದೋಷವನ್ನು ನಿವಾರಿಸುತ್ತವೆ ಎಂದು ಹೇಳುತ್ತಾರೆ. ತಾಳಿಯಲ್ಲಿನ ಬಂಗಾರದ ಬೊಟ್ಟು ಹೃದಯಕ್ಕೆ ತಾಕುತ್ತಿರುವುದರಿಂದ ಅವಳಲ್ಲಿ ಧನಾತ್ಮಕತೆ ಮತ್ತು ಆಧ್ಯಾತ್ಮಿಕ, ಸಾತ್ವಿಕತೆ ಜಾಗೃತವಾಗುತ್ತದೆ. ಇದರಿಂದ ದಾಂಪತ್ಯವು ಸಮಚಿತ್ತತೆಯಿಂದ  ಸಾಂಗವಾಗಿ ಸಾಮರಸ್ಯವು ಮನೆಮಾಡಿರುತ್ತದೆ.

ಹೀಗೆ ನಮ್ಮ ಪ್ರತಿಯೊಂದು ಸಣ್ಣ ಸಣ್ಣ ಆಚರಣೆಗಳಲ್ಲಿ ಅಪಾರವಾದ ಅರ್ಥಗಳು ಅಡಗಿವೆ. ಅವುಗಳನ್ನು ಅರಿಯಲು ಹೋಗುತ್ತಿಲ್ಲ.  ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂಬುದು ಈ ವಿಚಾರದಲ್ಲಿ ಸತ್ಯವೇ. ಈಗಿನವರು, ಹಿಂದಿನವರು ಅವಿದ್ಯಾವಂತರು. ಅರ್ಥವಿಲ್ಲದ ಗೊಡ್ಡು ಆಚರಣೆಗಳನ್ನು ಪಾಲಿಸುತ್ತಿದ್ದರು ಎಂಬ ವಿಚಿತ್ರ ಅಸಡ್ಡೆ ಬೆಳೆಸಿಕೊಂಡು ತಮ್ಮನ್ನು ತಾವು ಬಹಳ ಬುದ್ಧಿವಂತರೆಂದುಕೊಂಡಿರುವುದೆ ಇದಕ್ಕೆಲ್ಲ ಕಾರಣವಿರಬಹುದು.

ಕೊಚ್ಚೆ ಕೆದಕುವ ಹಂದಿಯನ್ನೂ ವರಹಾ ದೇವರ ರೂಪವೆಂದು ಪೂಜಿಸುವುದು ನಮ್ಮ ಸಂಸ್ಕೃತಿ. ಜಗತ್ತೇ ಮೆಚ್ಚಿ ನಮ್ಮ ಆಚರಣೆಗಳನ್ನು ಕೊಂಡಾಡುವಾಗ, ನಾವು ಪಾಶ್ಚಾತ್ಯೀಕರಣಕ್ಕೆ ಮರುಳಾಗಿ ನಮ್ಮೆಲ್ಲಾ ಸಂಪ್ರದಾಯಗಳನ್ನು ಗಾಳಿಗೆ ತೂರುತ್ತಿರುವುದು ಒಳ್ಳೆಯ ಬದಲಾವಣೆಯಂತೂ ಅಲ್ಲ.  ಬದಲಾವಣೆ ಬೇಕು ನಿಜ…ಅದು ಅಗತ್ಯಕ್ಕೆ ತಕ್ಕಷ್ಟಿದ್ದರೆ ಮಾತ್ರ ಚೆನ್ನ. ಏನಂತೀರಿ..?

ಪಲ್ಲವಿ ಚೆನ್ನಬಸಪ್ಪ

ಗಡಿಹಳ್ಳಿ

ಟಾಪ್ ನ್ಯೂಸ್

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.