ಸಂಗೀತವೆಂಬ ದೀಪದಲ್ಲಿ ಬೆಳಗುತ್ತಿರುವ ‘ಉಜ್ವಲ’


Team Udayavani, Sep 19, 2021, 3:14 PM IST

hyuty6t

ಸಂವೇದನೆಯೊಂದಿಗಿನ ಅದ್ಭುತ ಕಲೆಯನ್ನು ಗೀರ್ವಾಣಿಯ ಕೃಪಾಕಟಾಕ್ಷದೊಂದಿಗೆ ನುಡಿಸುತ ತನ್ಮಯತೆಯ   ಅನಾವರಣಗೊಳಿಸುವ ಕಲೆಯನ್ನು ನಮ್ಮ ಹಿರಿಯರು ಆಸ್ತಿಯನ್ನಾಗಿ ಅನೇಕ ಯುವ ಪೀಳಿಗೆಯ ಕೋಗಿಲೆಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಸಂಗೀತ ಸರಸ್ವತಿಯ ರೂಪ, ಎಲ್ಲರಿಗೂ ಅಷ್ಟು ಬೇಗ  ಒಲಿಯುವಂತದಲ್ಲ ನಿಷ್ಠೆ ಶ್ರದ್ದೆಯಿಂದ ಪದಗಳ  ರುಚಿಯನ್ನು ಅನುಭವಿಸಿಕೊಂಡು ಹಾಡುವ ಹಾಡು ಮನದ ಕದವನ್ನು ತಟ್ಟುತ್ತದೆ.

ಸಂಗೀತವೆಂದರೆ ಜಾತಿ, ಮತಗಳೆಂಬ ಬೇಧ-ಭಾವವಿಲ್ಲದ ಕಲೆ. ಮನಸ್ಸಿನ ಸಂಕಟ ಬೇಸರಗಳ ನಿವಾರಿಸಲು ಕಿವಿಯೊಳಗೆ ಇಳಿದು ನರನಾಡಿಗಳಲ್ಲಿ ಪ್ರವಹಿಸಿ ಚೈತನ್ಯ ತುಂಬುವ ಪ್ರಕಿಯೆ ಸಂಗೀತ.ಇಂತಹ ಅದ್ಭುತ ಕಲಾ ಸರಸ್ವತಿಯನ್ನು ವರಿಸಿಕೊಳ್ಳುವ ಮೂಲಕ ಸಂಗೀತ ಪ್ರಿಯರನ್ನು ರಾಂಜಿಸುತ್ತಿರುವ ಅನೇಕರಲ್ಲಿ ಉಜ್ವಲ ಆಚಾರ್ ಎಂ ಸಹ ಒಬ್ಬರು.

ಇವರು ಮೂಲತಃ  ಬಂಟ್ವಾಳ ತಾಲೂಕಿನ ಮಂಕುಡೆ ಗ್ರಾಮದವರು.ಶ್ರೀನಿವಾಸ್ ಆಚಾರ್ ಮತ್ತು ಮಮತಾ ಆಚಾರ್ ದಂಪತಿಯ ಪುತ್ರಿ. ಸಂಗೀತ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿರುವ ಇವರು ಮನದ ವೇದನೆಗೆ ಗೆಜ್ಜೆಯ ಆರೈಕೆ ಬೇಸತ್ತ ಒಡಲಿಗೆ ಪ್ರಶಾಂತತೆಯ ಹಾರೈಕೆಗಳು ನೀಡುವ ಮನರಂಜನೆಯಲ್ಲಿ ಒಂದಾದ ಭರತನಾಟ್ಯವನ್ನು ಸಹ ಮಾಡುತ್ತಾರೆ .

ಈಕೆ ಪ್ರಸ್ತುತ ಕೆ. ಎಸ್ ಹೆಗ್ಡೆ ಮೆಡಿಕಲ್ ಅಕಾಡಮಿ ದೇರಳ ಕಟ್ಟೆಯಲ್ಲಿ ಡಾಕ್ಟರ್ ಆಫ್ ಫಾರ್ಮಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಮಧುರವಾದ ಕಂಠಗಳಿಂದ ಹಾಡುವ ಮೂಲಕ ಸಂಗೀತದ ಕಡೆ ಒಲವನ್ನು ಬೆಳೆಸಿಕೊಂಡಿದ್ದಾರೆ. ಗುರುಗಳಾದ ವಿಧೂಷಿ ಅರುಣ ಪಡೀಲ್ ಇವರಿಂದ ಸಂಗೀತ ಕಲೆಯನ್ನು ಕರಗತ ಮಾಡಿಕೊಂಡು ಹಾಡುವ ಜೊತೆಗೆ ಭರತನಾಟ್ಯ ವನ್ನು  ಕೂಡ ಇವರು ನೃತ್ಯ ಗುರುಗಳಾದ ಶಿವರಾಜ್ ಭಟ್ ವಿಟ್ಲ, ಸುರೇಶ್ ಕಾರಂತ್ ಬಿ.ಸಿ ರೋಡ್ ಹಾಗೂ ದೀಪಕ್ ಕುಮಾರ್ ಪುತ್ತೂರು ಇವರ ಮೂಲಕ ಕಲಿತಿದ್ದಾರೆ.

ಇವರು ಸಿಕ್ಕ ಅವಕಾಶವನ್ನು ಕಳೆದುಕೊಳ್ಳದೆ ಪ್ರತಿಭಾಕಾರಂಜಿಗಳಂತಹ ಕಾರ್ಯಕರ್ಮದಲ್ಲಿ, ಹಬ್ಬಗಳ ನಿಮಿತ್ತ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹಾಡುತ್ತಾರೆ. ರಾಜ್ಯಮಟ್ಟದ ಜಾನಪದ ಹಾಡು ಸ್ಪರ್ಧೆಗಳಲ್ಲಿ ಅನೇಕ ಪ್ರಶಸ್ತಿ ಹಾಗೂ ಲಯನ್ಸ್  ಕ್ಲಬ್ ನಲ್ಲಿ ನಡೆಯುವ ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಸಂಗೀತ ಲೋಕದಲ್ಲಿ ಹಿರಿಯ ಸಾಧನೆ ಮಾಡಬೇಕೆನ್ನುವ ಹಂಬಲ ಹೊಂದಿರುವ ಈಕೆ ಕನ್ನಡದ ರಾಬರ್ಟ್ ಚಿತ್ರದ ಕಣ್ಣು ಹೊಡಿಯ್ಯಾಕ್  ಕವರ್ ಸಾಂಗ್ ಹಾಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

ಸುಕನ್ಯಾ ಎನ್. ಆರ್

ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಕಾಲೇಜು ಪುತ್ತೂರು

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.