UV Fusion: ಈ ಜನುಮವೆ ಆಹಾ ದೊರೆತಿದೆ ರುಚಿ ಸವಿಯಲು


Team Udayavani, Feb 25, 2024, 12:23 PM IST

6-uv-fusion

ಈ ಜನುಮವೆ ಆಹಾ ದೊರೆತಿದೆ ರುಚಿ ಸವಿಯಲು ಈ ಹಾಡು ಕೇಳಿದಾಗ ಪ್ರಕಾಶ್‌ ರೈ ಅವರ ಒಗ್ಗರಣೆ ಸಿನೆಮಾ ದೃಶ್ಯ ನೆನಪಾಗುವುದು. ಹಾಡಿನುದ್ದಕ್ಕೂ ತರತರದ ಭಕ್ಷ್ಯಗಳು ಹಾಡಿನ ಸಾಲಿನಲ್ಲಿ ಮತ್ತು ದೃಶ್ಯದಲ್ಲಿ ಕಾಣಸಿಗುತ್ತದೆ. ಇದು ಮಳೆಗಾಲದ ಹಚ್ಚ ಹಸುರ ನಡೆವೆ ಸವಿಯುವ ರುಚಿಯ ಬಗ್ಗೆ ಪ್ರೇಕ್ಷಕರಿಗೆ ತಿಳಿಸುತ್ತಾ ಹಾಡು ಸಾಗಲಿದೆ. ಇದನ್ನು ಕಂಡಾಗ ನನಗೆ ಮಲೆನಾಡ ರುಚಿ ತಟ್ಟನೆ ನೆನಪಾಯಿತು. ಮಲೆನಾಡು ಎಂದಾಗಲೇ ಮನಸ್ಸಿಗೆ ಮತ್ತು ಕಣ್ಣಿಗೆ ತಂಪು ಎಂದರೆ ತಪ್ಪಿಲ್ಲ. ಮನುಷ್ಯ ತನ್ನ ಜೀವನದಲ್ಲಿ ಒಮ್ಮೆಯಾದರೂ ಮಲೆನಾಡಿಗೆ ಹೋಗದಿದ್ದರೆ ಆತನು ತನ್ನ ಜೀವನದಲ್ಲಿ ಅಪರೂಪದ ಸ್ವರ್ಗವನ್ನು  ಕಳೆದುಕೊಂಡ ಹಾಗೆ.

ಮಲೆನಾಡು ಎಂದರೇನೇ ಮಳೆಯ ನಾಡು.  ಮಲೆನಾಡಿನ ಸೌಂದರ್ಯವನ್ನು ವರ್ಣಿಸಲು ಸಾಧ್ಯವಿಲ್ಲ. ಕೇವಲ ಅದನ್ನು ಕಣ್ಣಲ್ಲಿ ನೋಡಿ, ಮನ ತುಂಬಿ ಕೊಳ್ಳಬೇಕು ಅಷ್ಟೇ. ಅಷ್ಟು ಸುಂದರತೆಯ ಪ್ರತೀಕ ನಮ್ಮ ಮಲೆನಾಡು, ಮಳೆಗಳ ನಾಡು. ಹೆಸರೇ ಹೇಳುವಂತೆ ಮಳೆಗಳ ನಾಡು ಎಂದರೆ ಮಳೆ ಅಧಿಕವಾಗಿ ಬೀಳುವಂತ ಪ್ರದೇಶ. ಆ ಚಳಿಯಲ್ಲಿ, ಮಂಜಿನ ವಾತಾವರಣದಲ್ಲಿ ಸುತ್ತಲು ಗಿಡ ಮರಗಳಿಂದ ತುಂಬಿರುವ ಹಸುರಾದಂತಹ ಪ್ರಕೃತಿಯ ಮಡಿಲಲ್ಲಿ ಮಣ್ಣಿನ ಮನೆ, ಸುತ್ತಲು ಕಾಡು, ಅಗಲವಾದ ಅಂಗಳ, ದನ ಕರುಗಳ ಕೂಗು, ಹಕ್ಕಿ ಮರಿಗಳ ಜತೆಗೆ ಆಗಾಗ ಸದ್ದು ಮಾಡಿ ಗದರಿಸುವ ಝೀರುಂಡೆ ಹುಳು.

ಮಲೆನಾಡಲ್ಲಿ ಅಧಿಕ ಪ್ರಮಾಣದಲ್ಲಿ ಚಳಿ ಇದೆ.  ಅದು ಬೇಸಗೆಯಾದರೂ, ಮಳೆಗಾಲವಾದರೂ ಚಳಿಗಾಲವಾದರೂ ಹೆಚ್ಚಾಗಿ ಮಳೆನಾಡಿನಲ್ಲಿ ಮಂಜಿನ ಒಂದು ವಾತಾವರಣ ಸರ್ವೇಸಾಮಾನ್ಯ. ಈ ಚಳಿಯಲ್ಲಿ ಬಾಯಿ ಚಪ್ಪರಿಸುವುದು ಸಾಮಾನ್ಯ. ತಿಂಡಿ ತಿನಿಸುಗಳ ವಿಚಾರದಲ್ಲಿ ಮಲೆನಾಡಿನಲ್ಲಿ ನೋಡುವುದಾದರೆ ಹೆಚ್ಚಾಗಿ ಕಡುಬಿನ ಪದಾರ್ಥಗಳು ಇರುತ್ತದೆ. ಮಾವು, ಕಳಲೆ, ಪತ್ರೊಡೆ, ಸಿಗಡಿ ಪಲ್ಯ, ಕಲ್ಲೇಡಿ, ಒಣಮೀನು, ಅಣಬೆ, ಹೊಳೆ ಮೀನು ಸಾರು ಹೀಗೆ ಇನ್ನಷ್ಟು ಪದಾರ್ಥಗಳಿವೆ. ಆದರೆ ಅದರಲ್ಲಿಯೇ ವಿಭಿನ್ನವಾದ ಅಂತಹ ಬೆಳಗಿನ ತಿಂಡಿ ಎಂದರೆ ಅದು ಹಲಸಿನ ದೋಸೆ.

ಮಲೆನಾಡಿನಲ್ಲಿ ದೋಸೆ ಮಾಡುವ ಹಿಂದಿನ ದಿನ ಅಂಬಲಿ ಮತ್ತು ಬಕ್ಕೆ ಎಂಬ ಎರಡು ರೀತಿಯ ಹಲಸಿನ ಹಣ್ಣಿನಲ್ಲಿ ಮಾಡುತ್ತಾರೆ. ಈ ಹಲಸಿನ ದೋಸೆಯನ್ನು ಅನೇಕ ಭಾಗದ ಜನರು ಬೆಳಗ್ಗಿನ ತಿಂಡಿಯಾಗಿ ಸವಿದರೂ ಮಲೆನಾಡಿನಲ್ಲಿ ಇದನ್ನು ಸವಿಯುವುದು ಒಂದು ರೀತಿ ವಿಶೇಷ ಅನುಭವ ನೀಡಲಿದೆ. ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ದೋಸೆ ಸವಿಯುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನಬಹುದು.

-ವಿದ್ಯಾ

ಎಂ.ಜಿ.ಎಂ., ಉಡುಪಿ

ಟಾಪ್ ನ್ಯೂಸ್

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.