UV Fusion: ಇಂಡಿ ಪಂಪ್‌ ಮಟ..


Team Udayavani, Apr 18, 2024, 9:43 AM IST

6-fusion

ಹಾಯಾರೀ ಇಂಡಿ ಪಂಪ್‌ ಮಟ, ಅಂತ ನಿರ್ವಾಹಕರು ಹುಬ್ಬಳ್ಳಿ ಹಳೆ ಬಸ್‌ ನಿಲ್ದಾಣದಲ್ಲಿ ಕೂಗುತ್ತಿರುತ್ತಾರೆ. ಅದರಲ್ಲೇನು ವಿಶೇಷ ಅಂತೀರಾ. ಹೀಗೆ ಭಾಷೆ ಸಂವಹನ ಸರಿಯಾಗದಿದ್ದರೆ ಫ‌ಜೀತಿ ಅಂತಾರಲ್ಲ ಹಾಗೇ ಆಗಿತ್ತು ನಮಗೂ.

ಹುಬ್ಬಳ್ಳಿಯ ಹೆಗ್ಗೇರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸೀಟು ಸಿಕ್ಕಿತ್ತು. ಕಾಲೇಜು ಪ್ರಾರಂಭವಾಗಿತ್ತು. ನಂಗೆ ಹಳೆ ಹುಬ್ಬಳ್ಳಿಯ ಅಷ್ಟು ಪರಿಚಯ ಇರಲಿಲ್ಲ. ಹಾಗಾಗಿ ಮನೆಯಲ್ಲಿ ಕಾಲೇಜಿಗೆ ಹೇಗೆ ಹೋಗುವುದು ಎಂದು ಕೇಳಿದಾಗ ಇಂಡಿ ಪಂಪ್‌ ಸ್ಟಾಪ್‌ನಲ್ಲಿ ಇಳಿಬೇಕು ಎಂದು ತಿಳಿಸಿದ್ದರು. ಅದೇ ರೀತಿ ಬಸ್‌ ಇಂಡಿ ಪಂಪ್‌ ದಾಟಿ ಮುಂದೆ ಆನಂದ ನಗರ, ಸಿದ್ಧಾರೂಢ ಮಠದ ಕಡೆ ಹೋಗುತ್ತದೆ ಅಂತಾನೂ ಹೇಳಿದ್ದರು.

ಮುಂಜಾನೆ ಸ್ನೇಹಿತೆಯರ ಜತೆಗೂಡಿ ಕಾಲೇಜ್‌ಗೆ ತಯಾರಾಗಿ ಬಸ್‌ ಸಿಲ್ದಾಣದಲ್ಲಿ ಬಂದು ನಿಂತೆ. ಸಿದ್ಧಾರೂಢ ಮಠದ ಬಸ್‌ ಬಂತು ಕಂಡಕ್ಟರ್‌ ಇಂಡಿ ಪಂಪ್‌ ಮಟಾ ಅಂತ ಜೋರಾಗಿ ಕೂಗಿದರು. ನಾನೂ ಈ ಬಸ್‌ ಇಂಡಿ ಪಂಪ್‌ ತನಕ ಹೊಕ್ಕೆತಿ ಅನ್ಕೊಂಡು ಹ್ಯಾಂಗಿದ್ರೂ, ನಾನು ಇಂಡಿ ಪಂಪ್‌ ಸ್ಟಾಪ್‌ಗೆ ಇಳಿದ್ರೆ ಸಾಕು ಅಂತ ಬಸ್‌ ಹತ್ತಿದೆ.

ಆದ್ರೂ ಬಸ್‌ಗೆ ಸಿದ್ಧಾರೂಢ ಮಠ ಅಂತ ಬೋರ್ಡ್‌ ಹಾಕ್ಯಾರ್‌ ಯಾವಾಗ ಹೊಕ್ಕೈತಿ ಇದು ಅಂತ ಯೋಚನೆ ಮಾಡಿದೆ. ಮರುದಿನವೂ ಮತ್ತೆ ಬಸ್‌ ನಿಲ್ದಾಣಕ್ಕೆ ಬಂದಾಗ ಯಾರೀ ಇಂಡಿ ಪಂಪ್‌ ಮಟ ಅಂದರು. ನಾನು ಮತ್ತು ನಮ್ಮೆಲ್ಲಾ ಸ್ನೇಹಿತೆಯರು ಇವ್ರ ಇಂಡಿ ಪಂಪ್‌ ತನ ಅಷ್ಟ ಹೋದರ, ಮುಂದ ಆನಂದ ನಗರ, ಸಿದ್ಧಾರೂಢರ ಮಠಕ ಹೋಗೊರು ಹ್ಯಾಂಗ ಹೋಗತಾರ, ಅಂತ ಇರಲಾರದ ಇರುವೆ ಬಿಡ್ಕೊಂಡ್ರು ಅನ್ನುವಂಗ ಚಿಂತಿ ಮಾಡಕ್ಹತ್ತಿದ್ವಿ.

ಮನಿಗೆ ಬಂದು ಕೇಳಿದಾಗ ಅಸಲಿ ವಿಷಯ ಗೊತ್ತಾಗಿದ್ದು. ಇಂಡಿ ಪಂಪ ಮಟ ಅಂದರ, ಅಲ್ಲಿಯವರೆಗೂ ಅಷ್ಟ ಅಲ್ಲ, ನಾವೆಲ್ಲಾ ಇಲ್ಲೇ ಚೆನ್ನಮ್ಮ ಸರ್ಕಲ್‌ ಮಟ ಬಾಲೇ , ಲೇ ಜಾಬಿನ್‌ ಕಾಲೇಜು ಮಟ ಅಷ್ಟ ಅಂತ ಅನ್ನೋ ಮಟ ಇದಲ್ಲಾ, ಇದು ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢರ ಮಠ ನಿರ್ವಾಹಕರ ಬಾಯಲ್ಲಿ ಹಾ ಯಾರೀ ಇಂಡಿ ಪಂಪ ಮಟ ಅನ್ನೋವಂಗ ಕೇಳಿಸಿತ್ತು.

ಮಟ ಅಂದ್ರೆ ಅಲ್ಲಿಮಟ ಬಿಡಲೇ ವಿದ್ಯಾನಗರ ಮಟ ಡ್ರಾಪ್‌ ಅನ್ನೋ ಮಟ ಅಲ್ಲ ಮಠ ಅಂತ ಗೊತ್ತಾಗಿ ಒಳಗೊಳಗೆ ನಕ್ಕಿದ್ದೆವು. ಮನೆ ಮಂದಿಯಲ್ಲಾ ನಕ್ಕಿದ್ದು ನಾಚಿಕೆ ತರಸಿತ್ತು. ಈಗಲೂ ಹಾ ಯಾರೀ ಇಂಡಿಪಂಪಮಟ ಅಂದರ ಸಾಕು ಕಾಲೇಜಿನ ಪ್ರಾರಂಭದ ದಿನಗಳ ಸವಿನೆನಪುಗಳು ಬಿಚ್ಚುತ್ತವೆ.

-ಡಾ| ದೀಕ್ಷಾ ಹುಣಸೀಮರದ

ಹುಬ್ಬಳ್ಳಿ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.