UV Fusion: ವೈವಿಧ್ಯಮಯ  ಹೂಗಳ ಮಾರುಕಟ್ಟೆ; ಬಸವನಗುಡಿಯ ಗಾಂಧಿ ಬಜಾರ್‌


Team Udayavani, Sep 24, 2023, 2:38 PM IST

12–fusuion-gandhi-bazar

 

ಬೆಂಗಳೂರಿನ ಅತ್ಯಂತ ಶ್ರೀಮಂತ ಪರಂಪರೆಯನ್ನು ಮತ್ತು ಎಲ್ಲ ವರ್ಗದ ಜನರನ್ನು ಆಕರ್ಷಿಸುವ ಹಾಗೂ ಸಾಂಸ್ಕೃತಿಕವಾಗಿರುವ ಹಳೆಯ ಸ್ಥಳವೆಂದರೆ ಅದು ಬಸವನಗುಡಿ. ಬೆಂಗಳೂರನ್ನು ಕಟ್ಟಿ ಬೆಳಸಿದ ಕೆಂಪೇಗೌಡರು ಬಸವನಗುಡಿಯನ್ನು ಹುಟ್ಟುಹಾಕುವಲ್ಲಿ ಮುಖ್ಯಪಾತ್ರವಹಿಸಿದ್ದಾರೆ. 130 ವರ್ಷಗಳ ಇತಿಹಾಸ ಹೊಂದಿರುವ ಗಾಂಧಿ ಬಜಾರ್‌ ಬೀದಿ ಬದಿಯ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ.

ಗಾಂಧಿ ಬಜಾರ್‌ ಮಾರುಕಟ್ಟೆ ದಕ್ಷಿಣ ಬೆಂಗಳೂರಿನ ಅತ್ಯಂತ ಹಳೆಯ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಹಲವಾರು ವರ್ಷಗಳು ಕಳೆದರು ಸ್ವಲ್ಪವೂ ಬದಲಾಗದೆ ಜನರನ್ನು ತನ್ನತ್ತ ಆಕರ್ಷಿಸುವಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನೂ ಗಾಂಧಿ ಬಜಾರ್‌ ಪ್ಲವರ್‌ ಮಾರಾಟಕ್ಕೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ದೂರದ ಊರಿನ ಜನರನ್ನು ಬಗೆ, ಬಗೆಯ ಹೂವುಗಳ ಸುಗಂದದಿಂದಲೇ ತನ್ನತ್ತ ಸೆಳೆಯುತ್ತದೆ. ಎಲ್ಲಿ ನೋಡಿದರಲ್ಲಿ ಬಗೆ ಬಗೆಯ ಹೂವುಗಳ ಕಲರವ. ಮೈಮನ ಮರೆಸುವ ಗೂಲಾಬಿಯ ಸೊಬಗು, ಕಣ್ಣಿಗೆ ಕುಕ್ಕುವ ಕನಕಾಂಬರ. ಎತ್ತ ನೋಡಿದರೂ ಸುತ್ತ ಗೋಡೆ ಹೊಂದಿರುವ ದುಂಡು ಮಲ್ಲಿಗೆಯ ವೈಯಾರ. ಘಮಘಮಿಸುವ ಮಲ್ಲಿಗೆ ಮುಡಿಗೆ ಚೆಂದ ಎನ್ನುವವರಿಗೆ ತಾಜ ತಾಜ ಹೊಳೆವ ಮಲ್ಲಿಗೆ. ಸಾಮಾನ್ಯ ಜನರ ಕೈಗೆ ಸರಳವಾಗಿ ಸಿಗುವ ಸೇವಂತಿಗೆ. ಕೆಂಡದಂತೆ ಕೋಪಿಸಿಕೊಳ್ಳುವವರಿಗೆ ಆತ್ಮೀಯ ಸ್ನೇಹಿತ ಕೆಂಡಸಂಪಿಗೆ, ದೇವರ ಮುಡಿಗಾಗಿಯೇ ಕಾಯುತ್ತಿರುವ ನಾನಾ ಬಗೆಯ ಹೂವು ಹೀಗೆ ವೈವಿದ್ಯಮಯವಾದ ಹೂವುಗಳು ಇಲ್ಲಿ ದೂರೆಯುವವು.

ಹೂವುಗಳು ಹೆಣ್ಣಿನ ಸೌಂದರ್ಯವನ್ನು ವರ್ಧಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಹಬ್ಬ, ಹುಣ್ಣಿಮೆ, ಜಾತ್ರೆ ಸಂದರ್ಭದಲ್ಲಂತು ಹೂವುಗಳ ಪಾತ್ರ ಬಹಳ ಮುಖ್ಯ. ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಂತು ಗಾಂಧಿ ಬಜಾರ್‌ ವೈವಿಧ್ಯಮಯವಾದ ಹೂವುಗಳಿಂದ ಕಂಗ್ಗೊಳಿಸುತ್ತಿರುತ್ತದೆ. ಮದುವೆ ಮಾಲೆ, ಮುತ್ತೈದೆಯರಿಗೆ ಮುಡಿಗೆ ದಂಡಿ, ಮದುಮಗಳಿಗೆ ಅಲಂಕಾರಿಕ ಮಲ್ಲಿಗೆಯ ಆಭರಣಗಳು ಯಾವುದೇ ಸಮಯದಲ್ಲೂ ಹೋದರು ಸಿಗುವವು.

ಮೊಗ್ಗಿನ ಜಡೆ: ಗಾಂಧಿ ಬಜಾರ್‌ನ ಪ್ಲವರ್‌ ಮಾರುಕಟ್ಟೆ ವಿಧ ವಿಧದ ಮೊಗ್ಗಿನ ಜಡೆಗಳಿಂದಲೇ ಮತ್ತಷ್ಟು ಆಕರ್ಷಿತವಾಗಿದೆ. ಬಿಳಿಯ ಮಲ್ಲಿಗೆಯ ಹೂವುಗಳ ನಡುವೆ ಕೆಂಪು ಗುಲಾಬಿ, ಮಲ್ನಾಡ ಎಲೆಯ ಹಾಗೂ ಸೇವಂತಿಯ ವ್ಯಾಸಗಳಿಂದ ಕೂಡಿದ ಮೊಗ್ಗಿನ ಜಡೆ ಮದುಮಗಳ ಮದುವೆಯ ಸಂಭ್ರಮಕ್ಕೆ ಕಳೆ ನೀಡಿವೆ.

-ಲಕ್ಷ್ಮೀ ಬಾಗಲಕೋಟಿ

ವಿಜಯಪುರ

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.