ಓ ನಲ್ಲ.. ನೀನಲ್ಲ… ಕರಿಮಣಿ ಮಾಲಕ ನೀನಲ್ಲ….


Team Udayavani, Feb 15, 2024, 2:48 PM IST

5-uv-fusion

ಅವತ್ತು ಆಫೀಸನಲ್ಲಿ ಕೆಲಸ ಏನು ಇರಲಿಲ್ಲ, ಸುಮ್ಮನೆ ಫೇಸ್‌ಬುಕ್‌ ತೆಗೆದು ರೀಲ್ಸ್‌ಗಳನ್ನು ಒಂದೊಂದಾಗಿ ಸರಿಸತೊಡಗಿದೆ. ಈ ರೀಲ್ಸ್ ಎಂಬ ಪ್ರಪಂಚದಲ್ಲಿ ಒಳ ಹೊಕ್ಕರೆ ಮುಗಿತು‌, ಹೊರಗೆ ಬರುವುದು ಅಷ್ಟು ಸುಲಭವಲ್ಲ. ಅದರಲ್ಲಿ ಒಂದು ರೀಲ್‌ ಕನೆಕ್ಟ್ ಆದಂಗೆ ಅನಿಸಿತು, ಮತ್ತೂಮ್ಮೆ ಆ ವಿಡಿಯೋ ನೋಡಿದೆ ಅದರಲ್ಲಿ ಮಚ್ಚಾ ಹೋಗಬೇಕಾದಾಗ ಒಂದ ಮಾತ್ ಹೇಳಿ ಹೋದುಳು, ಏನ ಹೇಳಿ ಹೋದುಳು ಅಂದಾಗ..  ಓ ನಲ್ಲ ನೀ ನಲ್ಲ, ಕರಿಮಣಿ ಮಾಲಕ ನೀನಲ್ಲ ಎಂಬ ಹಾಡು ಬರುತ್ತದೆ. ಇಪ್ಪತೈದು ವರ್ಷದ ಹಿಂದೆ ಗುರುಕಿರಣ್ ಸಂಯೋಜನೆ ಮಾಡಿದ ಈ ಹಾಡು 2024 ರ ಮೊದಲ ಟ್ರೆಡಿಂಗ್‌ ಆಗಿದೆ.

ಎಲ್ಲಿ ನೋಡಿದರೂ ಇದೇ ಹಾಡು ಈಗ ಎಲ್ಲರ ಬಾಯಲ್ಲಿ ಗುಣಗುಡುತಿದೆ, ಸ್ವತಃ ಅದರ ಸಂಗೀತ ನಿರ್ದೇಶಕರಾದ ಗುರುಕಿರಣರವರು ಕೂಡ ಮತ್ತೂಮ್ಮೆ ಆ ಸಾಲುಗಳನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಅದು ಈಗ ಟ್ರೆಂಡಿಂಗ್‌. ಕೇವಲ ಟ್ರೆಂಡಿಂಗ್‌ ಅನ್ನುವ ಕಾರಣಕ್ಕಾಗಿ ಇದನ್ನು ಬರಿಯುತ್ತಿಲ್ಲ. ಕೇವಲ ಆ ಎರಡು ಸಾಲುಗಳಲ್ಲಿ ಅನೇಕ ಜನರ ಭಾವನೆ ಅಡಗಿದೆ. ಇತ್ತೀಚಿನ ಕಾಲಘಟ್ಟದಲ್ಲಿ ಯುವ ಜನತೆಯ ಬದುಕಿನಲ್ಲಿ ಬ್ರೇಕಪ್‌ ಎಂಬುದು ಮಾಮೂಲಿ ವಿಷಯವಾಗಿದೆ.

ಮಹೇಶ ಎಂಬ ಯುವಕ ಎರಡು ಮೂರು ವರ್ಷ ತನ್ನ ಕಾಲೇಜಿನ ಸಮಯದಲ್ಲಿ ಬಸ್‌ನಲ್ಲಿ ಹುಟ್ಟಿದ ಆಕರ್ಷಣೆಗೆ ತನ್ನನ್ನು ಅರ್ಪಿಸಿಕೊಂಡಿದ್ದ. ಒಂದೇ ಕಾಲೇಜು ಆದರೆ ಆತ ಸೀನಿಯರ್‌ ಅವಳು ಜ್ಯೂನಿಯರ್‌. ಇವನ ಊರಿಂದ ಹೋಗುತ್ತಿದ ಬಸ್‌ ಅವಳ ಊರಿನ ಮೇಲೆ ಹಾದು ಹೋಗುತ್ತಿತ್ತು. ತನ್ನ ಊರಿನಲ್ಲಿ ಅವಳಿಗಾಗಿ ಬಸ್‌ ಸೀಟು ಹಿಡಿದು, ಅವಳ ಊರು ಬಂದ ಮೇಲೆ ಅವಳು ಬಸ್‌ ಒಳಗೆ ಬಂದ ಮೇಲೆ ಅವಳಿಗಾಗಿ ತಾನು ಎದ್ದು ನಿಂತು ಅವಳಿಗಾಗಿ ಬಸ್ಸಿನ ಸೀಟು ಬಿಟ್ಟುಕೊಡುತ್ತಿದ್ದ. ‌

ಈ ರೀತಿಯ ಸಹಾಯಹಸ್ತ ಅನೇಕ ತಿಂಗಳು ನಡೆಯಿತು. ನಿಧಾನವಾಗಿ ಅದು ಅವರಿಬ್ಬರ ನಡುವಿನ ಪ್ರೇಮಾಂಕುರಕ್ಕೆ ನಾಂದಿ ಹಾಡಿತು. ಮಹೇಶ ತನ್ನ ಪದವಿ ಪೂರ್ಣಗೊಳಿಸಿದ, ತದನಂತರ ಮನೆಯ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡ. ಈ ಸಮಯದಲ್ಲಿ ಹುಡುಗಿಯ ಪದವಿಯ ಕೊನೆ ವರ್ಷ ಅಂತಿಮ ಹಂತದಲ್ಲಿ ಇತ್ತು. ಇತ್ತ ಮಹೇಶ ಅವಳಿಗಾಗಿ ಅಂಡ್ರಾಯ್ಡ್ ಫೋನ್‌ ಕೂಡ ಕೊಡಿಸಿದ್ದ. ಅವಳು ಪದವಿ ಮುಗಿಸಿ ಮುಂದಿನ ಹಂತಕ್ಕೆ ಹೋಗಬೇಕು ಎಂಬ ಆಸೆ ಇಟ್ಟುಕೊಂಡಿದ್ದಳು. ಇದು ಅವಳ ಮನೆಯವರಿಗೆ ಗೊತ್ತಾಗಿ ಮದುವೆ ಗೊತ್ತು ಮಾಡಿದರು.‌

ಮಹೇಶ ಅವರ ಮನೆಗೆ ಹೋಗಿ ಮಾತು ಕಥೆ ನಡೆಸಿದ, ಸಂಬಳ, ಕೆಲಸ ಎಂಬ ಮಾತುಗಳ ಚರ್ಚೆ ಆಯಿತು. ಈತ ಹಠಕ್ಕೆ ಬಿದ್ದು ಅವಳ ಮನೆಯವರಿಗೆ ಮನವರಿಕೆ ಮಾಡಿ ಎರಡು ವರ್ಷ ಸಮಯ ಕೇಳಿ ದುಬಾೖಗೆ ದುಡಿಯಲು ಹೋದ. ಮಹೇಶ ಮನೆಗೆ ಬಂದಾಗ ಹುಡುಗಿಯ ಕಡೆಯವರು ಆಯಿತು ಎಂಬ ಮಾತು ಕೊಟ್ಟಿದ್ದರು. ಆದರೆ ಯಾವಾಗ ಮಹೇಶ ದುಬಾೖ ಸೇರಿ ಆರು ತಿಂಗಳ ಕಳೆದವು. ಆವಾಗ ತರಾತುರಿಯಲ್ಲಿ ಮದುವೆ ಮಾಡಿಬಿಟ್ಟರು. ಐದು ದಿನದಲ್ಲಿ ನಿಶ್ಚಯವಾಗಿ, ಮದುವೆ ಆಗಿದ್ದನ್ನು ಮಹೇಶನಿಗೆ ತಡೆ ಹಿಡಿಯಲು ಅವಕಾಶವೇ ಸಿಗಲಿಲ್ಲ.

ಮಹೇಶ ಮರಳಿ ತನ್ನ ಊರಿಗೆ ಬಂದ. ಅವಳ ನೆನಪಿನಲ್ಲಿ ದಿನಗಳನ್ನು ಇಂದಿಗೂ ಕಳೆಯುತ್ತಿದ್ದಾನೆ. ಈ ಬಾರಿಯ ಊರಿನ ಜಾತ್ರೆಗೆ ಮಹೇಶನ ಹುಡುಗಿ ಕೂಡ ಬಂದಿದ್ದಳು. ದೂರದಲ್ಲಿ ನಿಂತು ಕೈ ಮುಗಿದು ತನ್ನ ಕೊರಳಲ್ಲಿರುವ ತಾಳಿ ತೋರಿಸಿದಳು. ಆ ಕ್ಷಣಕ್ಕೆ ಮಹೇಶನ ತಲೆಗೆ ಬಂದಿದ್ದೆ.. ಓ ನಲ್ಲ, ನೀ ನಲ್ಲ, ಕರಿಮಣಿ ಮಾಲೀಕ ನಿನಲ್ಲ ಎಂಬ ಉಪೇಂದ್ರ ಸಿನಿಮಾದ ಹಾಡು.

ಇವತ್ತು ಆ ಹಾಡು ಮರಳಿ ಟ್ರೆಂಡ್‌ ಆಗಿದೆ. ಕೇವಲ ಮಹೇಶನಿಗೆ ಮಾತ್ರ ಈ ಹಾಡು ಕನೆಕ್ಟ್ ಆಗುತ್ತಿಲ್ಲ. ಬದಲಿಗೆ ಪ್ರೀತಿಯ ಪಯಣ ಅರ್ಧ ದಾರಿಗೆ ಮುಕ್ತಾಯವಾದ ಜನರ ಹೃದಯಕ್ಕೆ ಈ ಹಾಡು ಲಾಲಿಹಾಡು. ಆದರೆ, ಅನೇಕ ಜನರಿಗೆ ಇದು ಇಷ್ಟವಾಗಿ ಬಿಟ್ಟಿದ್ದೆ. ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೇ ಏನಿಲ್ಲ ಎಂಬ ಸಾಲುಗಳಿಂತ ಓ ನಲ್ಲ, ನೀನಲ್ಲ, ಕರಿಮಣಿ ಮಾಲಕ ನೀನಲ್ಲ ಎಂಬುದು ಈಗ ಅನೇಕರಿಗೆ ನೋವಿನ ನೆನಪುಗಳಿಗೆ ಸಿಹಿಯಾದ ಯಾತನೆ ನೀಡುತ್ತಿದೆ.

ಸುಮ್ಮನೆ ಕಣ್ಮುಚ್ಚಿ ಕುಳಿತುಕೊಂಡು ನಿಮ್ಮ ನೆನಪುಗಳಿಗೆ ಕಿವಿಯಾಗಿ, ಈ ಸಾಲುಗಳು ಕಿವಿಯ ಬಳಿ ಪ್ರತಿಧ್ವನಿಸಬಹುದು.

ಗಿರಿಧರ ಹಿರೇಮಠ

ಹುಬ್ಬಳ್ಳಿ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.