ಯಕ್ಷಗಾನ ಪ್ರದರ್ಶನದಲ್ಲಿ ದೈವದ ಪಾತ್ರಧಾರಿಗೆ ನಿಜ ಆವೇಶ!
Team Udayavani, Jan 11, 2020, 12:04 AM IST
ಬ್ರಹ್ಮಾವರದ ಗಾಂಧಿ ಮೈದಾನದ ಸಾರ್ವಜನಿಕ ಶ್ರೀ ಅಯ್ಯಪ್ಪ ಭಕ್ತ ಸೇವಾ ಸಮಿತಿಯ 40ನೇ ವರ್ಷದ ಧಾರ್ಮಿಕ ಉತ್ಸವ ಪ್ರಯುಕ್ತ ಗುರುವಾರ ರಾತ್ರಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಧೂಮಾವತಿ ವೇಷಧಾರಿ ಮೈ ಮೇಲೆ ದೈವದ ಆವೇಶ ಉಂಟಾದ ಘಟನೆ ನಡೆದಿದೆ.
ಹಟ್ಟಿಯಂಗಡಿ ಮೇಳದಿಂದ ‘ದೈವದೃಷ್ಟಿ’ ಪ್ರಸಂಗ ಜರುಗುತ್ತಿತ್ತು. ಆ ಸಂದರ್ಭದಲ್ಲಿ ವೇಷಧಾರಿ ಆವೇಶಗೊಂಡರು. ಬಳಿಕ ಗುರುಸ್ವಾಮಿಗಳ ಸ್ಪರ್ಶ, ಮಾಲಾಧಾರಿಗಳ ಪ್ರಾರ್ಥನೆ ಬಳಿಕ ವೇಷಧಾರಿ ಸಹಜ ಸ್ಥಿತಿಗೆ ಬಂದರು ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ವಿಡಿಯೋ ವೈರಲ್ ಆಗಿದೆ.