Great Escape: ಮನೆಯೊಳಗೆ ಬಂದ ಚಿರತೆಯನ್ನೆ ಹಿಡಿದು ಹಾಕಿದ 12 ವರ್ಷದ ಬಾಲಕ… ಹೇಗೆ ನೋಡಿ
Team Udayavani, Mar 6, 2024, 3:14 PM IST
ಮನೆಯೊಳಗೆ ಏಕಾಏಕಿ ಚಿರತೆ ನುಗ್ಗಿದರೆ ಹೇಗಾಗಬೇಡ ನೀವೇ ಯೋಚಿಸಿ, ಇಲ್ಲೊಂದು ಅಂತದ್ದೇ ಪ್ರಕರಣವೊಂದು ಮಹಾರಾಷ್ಟ್ರದ ಮಾಲೆಗಾಂವ್ನಲ್ಲಿ ನಡೆದಿದೆ.
ಬಾಲಕನೋರ್ವ ಮನೆಯೊಳಗೆ ಒಬ್ಬನೇ ಮೊಬೈಲ್ ಹಿಡಿದು ಆಟವಾಡುತ್ತಿದ್ದಾಗ ಚಿರತೆಯೊಂದು ಮನೆಯೊಳಗೆ ಪ್ರವೇಶಿಸಿದೆ, ಇದನ್ನು ಕಂಡ ಬಾಲಕ ಒಂದು ಚೂರೂ ಹೆದರದೆ ಚಾಣಾಕ್ಷತನದಿಂದ ಚಿರತೆಯನ್ನು ಮನೆಯೊಳಗೆ ಬಂಧಿಯಾಗಿಸಿದ್ದಾನೆ.
ಬಾಲಕ ಮನೆಯೊಳಗೇ ಸೋಫಾದ ಮೇಲೆ ಮೇಲೆ ಕುಳಿತು ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ ಈ ವೇಳೆ ಚಿರತೆ ನೇರವಾಗಿ ಮನೆಯೊಳಗೆ ಪ್ರವೇಶ ಮಾಡಿದೆ ಆದರೆ ಬಾಗಿಲ ಬಳಿಯಲ್ಲೇ ಇದ್ದ ಬಾಲಕನನ್ನು ನೋಡಲಿಲ್ಲ ಹಾಗಾಗಿ ನೇರವಾಗಿ ಒಳಗಿನ ಕೊಠಡಿಗೆ ಪ್ರವೇಶ ಮಾಡಿದೆ ಇದನ್ನು ಕಂಡ ಬಾಲಕ ಚಿರತೆ ಒಳಗಿನ ಕೊಠಡಿಗೆ ಪ್ರವೇಶ ಮಾಡುತ್ತಿದ್ದಂತೆ ನಿಧಾನವಾಗಿ ಮನೆಯಿಂದ ಹೊರ ಬಂದ ಬಾಲಕ ಮನೆಯ ಮುಖ್ಯ ಬಾಗಿಲನ್ನು ಮುಚ್ಚಿದ್ದಾನೆ ಆ ಬಳಿಕ ಅಲ್ಲಿನ ನೆರೆಹೊರೆಯವರಲ್ಲಿ ವಿಚಾರ ತಿಳಿಸಿದ್ದಾನೆ ಕೂಡಲೇ ಎಚ್ಚೆತ್ತ ಅಕ್ಕಪಕ್ಕದವರು ಮನೆಯ ಬಳಿ ಬಂದು ಬಾಗಿಲು ಭದ್ರಪಡಿಸಿದ್ದಾರೆ. ಆ ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಕಿಟಕಿಯ ಮೂಲಕ ಚಿರತೆಯನ್ನು ಕಂಡಿದ್ದಾರೆ ಈ ವೇಳೆ ಚಿರತೆ ಮನೆಯೊಳಗೆ ಆಚೆ ಈಚೆ ಹೋಗುವುದು ಕಂಡು ಬಂದಿದೆ ಕೂಡಲೇ ಅರಣ್ಯ ಇಲಾಖೆ ಸಿಬಂದಿ ಚಿರತೆಗೆ ಅರಿವಳಿಕೆ ಮದ್ದು ನೀಡಿದ್ದಾನೆ ಇದರಿಂದ ನಿದ್ರೆಗೆ ಜಾರಿದ ಚಿರತೆಯನ್ನು ಕೂಡಲೇ ರಕ್ಷಣೆ ಮಾಡಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.
ಬಾಲಕನ ಅದೃಷ್ಟ ಚೆನ್ನಾಗಿತ್ತು:
ಮನೆಯೊಳಗೆ ಚಿರತೆ ಪ್ರವೇಶಿಸಿದರೂ ಬಾಲಕ ಒಂದು ಚೂರು ಸದ್ದು ಮಾಡದೆ ಸುಮ್ಮನೆ ಕುಳಿತಿದ್ದಿದ್ದರಿಂದ ಚಿರತೆಗೆ ಗೊತ್ತಾಗಲಿಲ್ಲ, ಅಲ್ಲದೆ ಮನೆಯೊಳಗೆ ಬಂದ ಚಿರತೆ ಆಚೆ ಈಚೆ ನೋಡದೆ ನೇರವಾಗಿ ಮನೆಯ ಒಳಗೆ ಪ್ರವೇಶಿಸಿದರಿಂದ ಚಿರತೆಗೂ ಬಾಲಕ ಇರುವುದು ಗೊತ್ತಾಗಲಿಲ್ಲ, ಕೂಡಲೇ ಮನೆಯ ಹೊರಗೆ ಬಂದು ಬಾಗಿಲು ಹಾಕಿ ಜೀವ ಉಳಿಸಿಕೊಂಡಿದ್ದಾನೆ.
ಇದನ್ನೂ ಓದಿ: Tragic: ನಿಂತಿದ್ದ ಟ್ರಕ್ಗೆ ಕಾರು ಢಿಕ್ಕಿ; ನವ ದಂಪತಿ ಸೇರಿ ಒಂದೇ ಕುಟುಂಬದ ಐವರು ದುರ್ಮರಣ
Malegaon, Maharashtra📍
A leopard came inside an office.
12 year old Mohit Ahire smartly locked door from outside until assistance arrived.
Leopard rescued. No body hurt.@rashtrapatibhvn must consider him for Rashtriya Bal Puraskar.
CC: @smritiirani pic.twitter.com/vWj4OfVyGo
— Shashank Shekhar Jha (@shashank_ssj) March 6, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್