ವಿಜಯೇಂದ್ರಗೆ ಒಲಿಯುವುದೇ ಮಂಡ್ಯ : ಸಕ್ಕರೆ ನಾಡಿಗೆ ಬಿಎಸ್ವೈ ಪುತ್ರ ಪ್ರವೇಶ
ಪಕ್ಷದ ಗೆಲುವಿಗೆ ರಣಕಹಳೆ
Team Udayavani, Feb 23, 2023, 5:55 AM IST
ಮಂಡ್ಯ: ಇಡೀ ರಾಜ್ಯದಲ್ಲಿ ಹಳೇ ಮೈಸೂರನ್ನು ಗೆಲ್ಲಬೇಕೆನ್ನುವುದು ಬಿಜೆಪಿ ಕನಸು. ಅದರಲ್ಲೂ ಈವರೆಗೂ ಸರಿಯಾಗಿ ಹೆಜ್ಜೆ ಊರಲಾಗದ ಮಂಡ್ಯ ಜಿಲ್ಲೆಯಲ್ಲಿ ಪ್ರಾಬಲ್ಯ ಊರಲು ಬಿಜೆಪಿ ಒಂದಲ್ಲ ಹಲವು ತಂತ್ರಗಳನ್ನು ಹೂಡಿದೆ.
ಹಾಗಾಗಿಯೇ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬುಧವಾರ ಪ್ರವೇಶಿಸಿದ್ದಾರೆ. ಮುಂಬರುವ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಕೇಸರಿ ಧ್ವಜ ಹಾರಿಸಲು ರಣಕಹಳೆ ಮೊಳಗಿಸಿದರು. ಇದು ಬಿಜೆಪಿ ಕಾರ್ಯಕರ್ತ ರಲ್ಲಿ ಉತ್ಸಾಹ ಹೆಚ್ಚುವಂತೆ ಮಾಡಿದೆ.
ಈಗಾಗಲೇ ಹಳೇ ಮೈಸೂರು ಭಾಗ ಟಾರ್ಗೆಟ್ ಮಾಡಿಕೊಂಡಿರುವ ಬಿಜೆಪಿ ಕೆ.ಆರ್.ಪೇಟೆ ಉಪಚುನಾವಣೆಯಂತೆ ಮುಂದಿನ ವಿಧಾನಸಭಾ ಚುನಾವಣೆಯ ಲ್ಲಿಯೂ ವಿಜಯೇಂದ್ರ ಸಾರಥ್ಯದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸಲು ರಣತಂತ್ರ ಹೂಡಲು ಮುಂದಾಗಿದೆ. ಅದರಂತೆ ರಾಜ್ಯದಲ್ಲಿಯೇ ಮೊದಲ ಯುವ ಮೋರ್ಚಾ ಸಮಾವೇಶವನ್ನು ಮಂಡ್ಯದಿಂದಲೇ ಆರಂಭಗೊಳಿಸಲಾಗಿದೆ.
ಮಂಗಳವಾರವೇ ಮಂಡ್ಯಕ್ಕೆ ಆಗಮಿಸಿದ ವಿಜಯೇಂದ್ರ ಅವರಿಗೆ ಭವ್ಯ ಸ್ವಾಗತ ಕೋರುವ ಮೂಲಕ ಬಿಜೆಪಿ ಕಾರ್ಯಕರ್ತರು ಶಕ್ತಿ ಪ್ರದರ್ಶನ ಮಾಡಿದರು.
ಮಂಡ್ಯದ ಮೇಲೆ ಪಕ್ಷದ ವರಿಷ್ಠ ಅಮಿತ್ ಶಾ ಅವರಿಗೆ ವಿಶೇಷ ಕಣ್ಣು, ಅದಕ್ಕಾಗಿಯೇ ಅವರು ಕಳೆದ ಬಾರಿ ಮಂಡ್ಯದಲ್ಲೇ ಸಮಾವೇಶ ಮಾಡುವ ಮೂಲಕ ಪ್ರಚಾರಕ್ಕೆ ನಾಂದಿ ಹಾಡಿದರು. ಅಷ್ಟೇ ಅಲ್ಲ, ದಿಲ್ಲಿಗೆ ಹೋದ ಮೇಲೂ ಎಎನ್ಐಗೆ ನೀಡಿದ ಸಂದರ್ಶನವೊಂದರಲ್ಲಿ ಮಂಡ್ಯವನ್ನು ವಿಶೇಷ ವಾಗಿ ಪ್ರಸ್ತಾವಿಸಿ ಜೆಡಿಎಸ್ನ್ನು ಕುಟುಕಿದ್ದರು.
ಮಂಡ್ಯದ ಮೇಲೆ ಇಷ್ಟೊಂದು ಕಣ್ಣಿಟ್ಟಿರುವುದರಿಂದಲೇ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಉಸ್ತುವಾರಿ ಯಾಗಿ ನಿಯೋಜಿಸಲಾಗಿತ್ತು. ಆದರೆ ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾದ್ದರಿಂದ ಆ ಪ್ರಯೋಗ ಫಲ ಕೂಡಲಿಲ್ಲ. ಈಗ ವಿಜಯೇಂದ್ರ ಅವರನ್ನು ಕಣಕ್ಕಿಳಿಸಿದ್ದಾರೆ ಬಿಜೆಪಿ ಹೈಕಮಾಂಡ್.
ಕೆ.ಆರ್.ಪೇಟೆಯಂತೆ ಜಿಲ್ಲೆ ಗೆಲ್ಲಲು ರಣತಂತ್ರ: 2020ರ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ವಿಜಯೇಂದ್ರ ಅವರ ಮಾಸ್ಟರ್ ಪ್ಲ್ಯಾನ್ ಅನ್ನೇ ಜಿಲ್ಲೆಗೆ ವಿಸ್ತರಿಸಲು ಸಜಾjಗಿದ್ದಾರೆನ್ನಲಾಗಿದೆ. ಅದರಂತೆ ಮಂಗಳವಾರ ಮಂಡ್ಯಕ್ಕೆ ಆಗಮಿಸಿದ ಸಂದ ರ್ಭ ದಲ್ಲಿಯೂ ಮಂಡ್ಯ ಚುನಾವಣೆ ಉಸ್ತುವಾರಿ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ ಎಂದು ವಿಜಯೇಂದ್ರ ಹೇಳಿದ್ದರು.
ಹೈಕಮಾಂಡ್ ಸೂಚಿಸಿದರೆ ಮಂಡ್ಯದಲ್ಲೂ ಸ್ಪರ್ಧೆ: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆಯೂ ಇಂಗಿತ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವಿಜಯೇಂದ್ರ ಮಂಡ್ಯದಲ್ಲಿ ಮನೆ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬುಧವಾರ ನೀಡಿರುವ ಹೇಳಿಕೆ ಸಾಕ್ಷೀಕರಿಸುವಂತಿದೆ. ನನಗೆ ಮಂಡ್ಯ, ವರುಣಾ, ಶಿಕಾರಿಪುರ ಕ್ಷೇತ್ರ ಅಂತಾ ಏನೂ ಇಲ್ಲ. ಹೈಕಮಾಂಡ್ ಸೂಚಿಸಿದರೆ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುವೆ. ಮಂಡ್ಯದಲ್ಲಿ ಮನೆ ಮಾಡುವುದು ಮುಖ್ಯವಲ್ಲ. ಜಿಲ್ಲೆಯ ಜನರ ಮನಸ್ಸಿನಲ್ಲಿ ಮನೆ ಮಾಡಿದರೆ ಅಷ್ಟೇ ಸಾಕು ಎಂದು ಹೇಳಿದ್ದಾರೆ.
-ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ