ಇದು ದೇಶದ ಅತ್ಯಂತ ಅಪಾಯಕಾರಿ ಕೋಟೆ… ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ಅಪಾಯವಿದ್ದರೂ ಇಲ್ಲಿಗೆ ಭೇಟಿ ನೀಡುತ್ತಾರೆ ಸಾವಿರಾರು ಮಂದಿ

ಸುಧೀರ್, Jul 16, 2023, 10:00 AM IST

ಇದು ದೇಶದ ಅತ್ಯಂತ ಅಪಾಯಕಾರಿ ಕೋಟೆ… ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ

ಕೋಟೆ ಎಂದರೆ ನಾನಾ ರೀತಿಯಲ್ಲಿ ಇರುತ್ತದೆ ಹಳೆಯ ರಾಜರುಗಳ ಕಾಲದಲ್ಲಿ ನಿರ್ಮಿಸಿದ ಕೋಟೆಗಳೇ ಇಂದು ಪ್ರವಾಸಿ ತಾಣಗಳಾಗಿ ಮಾರ್ಪಟ್ಟಿವೆ. ಅಂದಿನ ರಾಜರು ತಮ್ಮ ಪ್ರದೇಶವನ್ನು ಉಳಿಸಿಕೊಳ್ಳಲು ಕಳ್ಳ ಕಾಕರಿಂದ, ಎದುರಾಳಿಗಳಿಂದ ತಮ್ಮ ರಾಜ್ಯವನ್ನು ರಕ್ಷಿಸಲು ಈ ಕೋಟೆಗಳನ್ನು ನಿರ್ಮಾಣ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಅದೇ ಕೋಟೆಗಳು ಇಂದು ಅದೆಷ್ಟೋ ಪ್ರವಾಸಿ ಪ್ರೀಯರಿಗೆ ನೆಚ್ಚಿನ ತಾಣಗಳಾಗಿ ಮಾರ್ಪಾಡು ಹೊಂದಿದೆ ಅದರಲ್ಲೂ ಕೆಲವೊಂದು ಕೋಟೆಗಳು ಯಾವ ರೀತಿ ನಿರ್ಮಾಣ ಮಾಡಲಾಗಿದೆ ಎಂದರೆ ನಾವು ಊಹಿಸಲೂ ಸಾಧ್ಯವಿರದ ಅತ್ಯಂತ ಭಯಾನಕ ರೀತಿಯಲ್ಲಿ ನಿರ್ಮಾಣಮಾಡಲಾಗಿರುತ್ತದೆ.

ಮಹಾರಾಷ್ಟ್ರದ ಬಳಿಯೊಂದು ಕೋಟೆ ಇದೆ, ದೂರದಲ್ಲಿ ನೋಡುವಾಗ ಆ ಕೋಟೆ ಆಕಾಶಕ್ಕೆ ಹತ್ತಿರವಾಗಿ ಕಾಣುತ್ತದೆ, ಅದೇ ಕೋಟೆಯ ಮೇಲೆ ನಿಂತು ನೋಡಿದರೆ ಜೀವವೇ ಒಮ್ಮೆ ಹೋಗಿ ಬಂದಂತಾ ಅನುಭವ. ಅಂದಹಾಗೆ ಈ ಕೋಟೆಯನ್ನು ಹತ್ತಲು ಎರಡು ಗುಂಡಿಗೆ ಬೇಕು ಇದು ಮಾತ್ರ ಸತ್ಯ, ಟ್ರಕ್ಕಿಂಗ್ ಮಾಡುವವರಿಗೆ ಹೇಳಿ ಮಾಡಿಸಿದ ಕೋಟೆ, ಸಾಹಸ ಪ್ರಿಯರಿಗೂ ಸೂಕ್ತವಾದ ಸ್ಥಳ.

ಅಂದಹಾಗೆ ನಾವೀಗ ಹೇಳ ಹೊರಟಿರುವ ಕೋಟೆ ಮುಂಬೈ ಸಮೀಪದಲ್ಲಿರುವ ಕಲಾವಂತಿನ್ ದುರ್ಗಾ ಕೋಟೆ, ಇದಕ್ಕೆ ಪ್ರಬಲ್ಗಡ್ ಕೋಟೆ ಎಂದೂ ಕರೆಯುತ್ತಾರೆ ಇದು ಮಹಾರಾಷ್ಟ್ರದ ಮಾಥೆರಾನ್ ಮತ್ತು ಪನ್ವೆಲ್ ಬೆಟ್ಟಗಳ ಮಧ್ಯೆ ಕಾಣಸಿಗುವ ಕೋಟೆಯಾಗಿದೆ. ಸಮುದ್ರ ಮಟ್ಟದಿಂದ ಸುಮಾರು 2,300 ಅಡಿ ಎತ್ತರವಿರುವ ಈ ಕೋಟೆ ಹಲವು ಶತಮಾನ ಹಳೆಯದು ಎನ್ನಲಾಗಿದೆ.

ಮುಖ್ಯವಾಗಿ ಈ ಕೋಟೆಯ ಬಗ್ಗೆ ಹೇಳಬೇಕೆಂದರೆ ಕೋಟೆಯ ಮಾರ್ಗವು ಕ್ಲಿಷ್ಟಕರವಾಗಿದೆ ಅಲ್ಲದೆ ಈ ಕೋಟೆ ಹತ್ತಬೇಕಾದರೆ ಧೈರ್ಯ ಬೇಕು ಬೇರೆ ಕೋಟೆಗಳಂತಲ್ಲ ಈ ಕೋಟೆ ಬಂಡೆ ಕಲ್ಲಿನ ಅಂಚನ್ನೇ ಕೆತ್ತಿ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದಂತಿದೆ ಅಲ್ಲದೆ ಇಲ್ಲಿ ಕೋಟೆ ಹತ್ತುವಾಗ ಆಧಾರಕ್ಕೆ ಹಿಡಿಯಲು ಯಾವುದೇ ವ್ಯವಸ್ಥೆ ಇಲ್ಲ ಬಂಡೆ ಕಲ್ಲುಗಳನ್ನೇ ಆಧಾರವಾಗಿ ಹಿಡಿದು ಕೋಟೆ ಹತ್ತಬೇಕು, ಹತ್ತುವಾಗ ಏನೋ ಧೈರ್ಯದಲ್ಲಿ ಹತ್ತಿದರೆ ಅದೇ ಕೆಳಗೆ ಇಳಿಯಬೇಕಾದರೆ ಕೋಟೆಯ ಬುಡವೇ ಕಾಣುವುದಿಲ್ಲ ಮೈಯೆಲ್ಲಾ ಬೆವರಿ ಒದ್ದೆಯಾಗುವ ಅನುಭವವಾಗುತ್ತದೆ ಅಷ್ಟು ಮಾತ್ರವಲ್ಲದೆ ಸ್ವಲ್ಪ ಯಾಮಾರಿದರೂ ದೇವರೇ ಗತಿ ಎಂಬಂತಿದೆ.

ಕೋಟೆಯ ಇತಿಹಾಸ:
ಬಹುಮನಿ ಸುಲ್ತಾನರ ಕಾಲದಲ್ಲಿ ಪನ್ವೇಲ್‌ ಹಾಗೂ ಕಲ್ಯಾಣ್‌ ಕೋಟೆಗಳ ಮೇಲೆ ಕಣ್ಣಿಡಲು ಈ ಕೋಟೆಯನ್ನು ಕ್ರಿ.ಶ 1458 ರಲ್ಲಿ ನಿರ್ಮಿಸಲಾಯಿತು. ಒಂದು ಕಾಲದಲ್ಲಿ ಈ ಕೋಟೆಯನ್ನು ಮುರಂಜನ್‌ ಕೋಟೆ ಎಂದು ಕರೆಯಲಾಗುತ್ತಿತ್ತು. ಕಾಲಾನಂತರ ತನ್ನ ಹೆಸರನ್ನು ಬದಲಾಯಿಸಿಕೊಂಡಿತು. ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಆಳ್ವಿಕೆಯ ಸಮಯದಲ್ಲಿ ಕೋಟೆಯ ಹೆಸರು ಮರುನಾಮಕರಣ ಮಾಡಿ ಕೋಟೆಗೆ ರಾಣಿ ಕಲಾವಂತಿಯ ಹೆಸರನ್ನು ಇಟ್ಟರು ಎಂದು ಹೇಳಲಾಗುತ್ತಿದೆ.

ಯಾಮಾರಿದ್ರೆ ಅಪಾಯ ಗ್ಯಾರಂಟಿ
ಈ ಕೋಟೆಯನ್ನು ಹತ್ತಲು ಎರಡು ಗುಂಡಿಗೆ ಬೇಕು ಕಲ್ಲು ಬಂಡೆಗಳಲ್ಲೇ ನಿರ್ಮಿಸಿದ ಮೆಟ್ಟಿಲುಗಳನ್ನು ಹತ್ತಿ ಕೋಟೆಯ ಮೇಲೆ ಹೋಗಬೇಕು ಹಾಗೆಯೇ ಕೋಟೆಯಿಂದ ಇಳಿಯುವಾಗ ಕೋಟೆಯ ಮೇಲಿಂದ ಕೆಳಗೆ ನೋಡುವಾಗ ತಲೆ ಸುತ್ತು ಬರುತ್ತದೆ, ಜಾಗ್ರತೆ ಅತೀ ಅಗತ್ಯ, ಒಂದು ಚೂರು ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ, ಈ ಹಿಂದೆ ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರಲ್ಲಿ ಕೆಲವರು ಅಜಾಗರೂಕತೆಯಿಂದ ಜೀವವನ್ನೇ ಕಳೆದುಕೊಂಡ ನಿದರ್ಶನಗಳೂ ಇವೆ.

ರಾತ್ರಿ ಉಳಿಯುವ ಹಾಗಿಲ್ಲ
ಈ ಕೋಟೆಗೆ ಚಾರಣಕ್ಕೆ ಬಂದವರು ರಾತ್ರಿಯಾಗುವುದರೊಳಗೆ ಕೆಳಗೆ ಇಳಿಯಬೇಕು ಇಲ್ಲವಾದರೆ ಕತ್ತಲಲ್ಲಿ ಇಲ್ಲಿ ಕೆಳಗೆ ಇಳಿಯುವುದು ಕಷ್ಟ, ಒಂದು ವೇಳೆ ಕತ್ತಲಾಯಿತು ಇಲ್ಲೇ ಇದ್ದು ಬೆಳಗ್ಗೆ ಕೆಳಗೆ ಇಳಿಯುವ ಸಾಹಸ ಮಾಡಿದರೆ ಅಪಾಯವೂ ಕಟ್ಟಿಟ್ಟ ಬುತ್ತಿ. ರಾತ್ರಿ ಹೊತ್ತು ಇಲ್ಲಿ ಯಾರೋ ಒಬ್ಬರು ಮಹಿಳೆ ಕೂಗುವ ಸದ್ದು ಕೇಳುತ್ತಂತೆ ಈ ಹಿಂದೆ ಇಲ್ಲಿ ಉಳಿದುಕೊಂಡ ಕೆಲವರು ಈ ಅನುಭವನ್ನು ಅನುಭವಿಸಿದ್ದಾರೆ ಎನ್ನತ್ತಾರೆ. ಅಲ್ಲದೆ ಕೆಲವೊಂದು ವಿಚಿತ್ರ ಸದ್ದುಗಳು ಇಲ್ಲಿ ಕೇಳಲ್ಪಡುತ್ತದೆ ಎನ್ನಲಾಗಿದೆ. ಹಾಗಾಗಿ ಇಲ್ಲಿನ ಆಡಳಿತ ಈ ಕೋಟೆಯಲ್ಲಿ ರಾತ್ರಿ ಉಳಿಯಬಾರದೆಂದು ನಿರ್ಬಂಧ ಹೇರಿದೆ.

ಮಳೆಗಾಲದಲ್ಲಿ ಅಪಾಯ ಹೆಚ್ಚು:
ಮಳೆಗಾಲದಲ್ಲಿ ಈ ಕೋಟೆ ನೋಡಲು ಸುಂದರವಾಗಿ ಕಾಣುತ್ತದೆಯಾದರೂ ಕೋಟೆ ಹತ್ತುವ ಪ್ರಯತ್ನ ಮಾಡಬೇಡಿ ಮಳೆಗಾಲದಲ್ಲಿ ಇಲ್ಲಿನ ಮೆಟ್ಟಿಲುಗಳು ಪಾಚಿ ಹಿಡಿದು ಜಾರುವುದರಿಂದ ಅಪಾಯ ಹೆಚ್ಚು ಹಾಗಾಗಿ ಬೇಸಿಗೆ ಕಾಲದಲ್ಲಿ ಚಾರಣ ಮಾಡಬಹುದು, ಮಳೆಗಾಲದಲ್ಲಿ ದೂರದಲ್ಲೇ ಕೋಟೆ ನೋಡಲು ಚಂದ.

ಇಲ್ಲಿಗೆ ಬರುವುದು ಹೇಗೆ:
ರೈಲಿನ ಮೂಲಕ ಬರುವವರು ನವಿ ಮುಂಬೈ ಹಾಗೂ ಮುಂಬೈನಿಂದ ಬರುವವರು ಪನ್ವೆಲ್ ರೈಲು ನಿಲ್ದಾಣದಲ್ಲಿ ಇಳಿದು ಬಳಿಕ ರಿಕ್ಷಾ ಅಥವಾ ಕಾರಿನ ಮೂಲಕ ಇಲ್ಲಿಗೆ ಬರಬಹುದು.

ಪ್ರವೇಶ ಶುಲ್ಕ ಇಲ್ಲ:
ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿರುವ ಈ ಕೋಟೆಯ ಬುಡದ ವರೆಗೆ ವಾಹನದ ಮೂಲಕ ತಲುಪಬಹುದು. ಅಲ್ಲಿಂದ ನಡಿಗೆ ಮೂಲಕ ಕೋಟೆ ಹತ್ತಬೇಕು, ಇಲ್ಲಿ ಪ್ರವಾಸಿಗರಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ತಮ್ಮ ತಮ್ಮ ಜೀವದ ಮೇಲೆ ಎಚ್ಚರ ಇದ್ದರೆ ಸಾಕು. ಪ್ರಕೃತಿಯ ಸೌಂದರ್ಯವನ್ನು ಸವಿದು ಸುರಕ್ಷಿತವಾಗಿ ಮನೆಗೆ ಮರಳಿ…

– ಸುಧೀರ್ ಪರ್ಕಳ

ಟಾಪ್ ನ್ಯೂಸ್

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.