ರುಚಿ, ರುಚಿ ಬಿಸಿಬೇಳೆ ಬಾತ್…ಸಿಂಪಲ್ ರೆಸಿಪಿ..ಮನೆಯಲ್ಲೇ ಟ್ರೈ ಮಾಡಿ…

ಕೆಲವರಿಗಂತೂ ಬಿಸಿಬೇಳೆ ಬಾತ್‌ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತೆ.

ಶ್ರೀರಾಮ್ ನಾಯಕ್, Sep 23, 2022, 5:41 PM IST

web exclusive environment nayak food

ಕರ್ನಾಟಕದ ಜನಪ್ರಿಯವಾದ ಆಹಾರಗಳಲ್ಲಿ ಬಿಸಿ ಬೇಳೆ ಬಾತ್‌ ಕೂಡಾ ಒಂದು. ಕೆಲವರಿಗಂತೂ ಬಿಸಿಬೇಳೆ ಬಾತ್‌ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತೆ. ಇದು ಬೆಳಗ್ಗಿನ ಉಪಹಾರಕ್ಕೂ ಸೈ ಹಾಗೆಯೇ ಮಧ್ಯಾಹ್ನದ ಊಟಕ್ಕೂ ಸೈ, ಜೊತೆಗೆ ಮನೆಗೆ ಬಂದ ಅತಿಥಿಗಳಿಗೂ ಬಿಸಿ ಬಿಸಿಯಾದ ಬಿಸಿ ಬೇಳೆ ಬಾತ್‌ ಮಾಡಿ ಉಣ ಬಡಿಸಬಹುದು. ಅಲ್ಲದೇ ಇದು ಆರೋಗ್ಯಕ್ಕೂ ಕೂಡ ಒಳ್ಳೆಯದು. ಈ ರೆಸಿಪಿ ತುಂಬಾನೇ ಸಿಂಪಲ್‌ ಕೂಡ ಆಗಿದ್ದು, ಇದನ್ನು ನೀವು ಮನೆಯಲ್ಲಿ ಟ್ರೈ ಮಾಡಬಹುದು…

ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ 1ಕಪ್‌, ತೊಗರಿಬೇಳೆ 100ಗ್ರಾಂ, ಹುಣಸೇ ಹುಳಿ ರಸ 2ಚಮಚ, ಎಣ್ಣೆ 4 ಚಮಚ, ಕಡ್ಲೆ(ಶೇಂಗಾ) 3 ಚಮಚ, ಸಾಸಿವೆ ಸ್ವಲ್ಪ, ಅಚ್ಚ ಖಾರದ ಪುಡಿ 2ಚಮಚ, ಅರಶಿನ ಪುಡಿ ಸ್ವಲ್ಪ, ಟೊಮೆಟೋ 2, ಬಟಾಟೆ 1,ಬಿಸಿ ಬೇಳೆ ಬಾತ್‌ ಮಸಾಲ ಪುಡಿ 4 ದೊಡ್ಡ ಚಮಚ, ಈರುಳ್ಳಿ 1, ಒಣಮೆಣಸು 3,ಕರಿಬೇವು ಸ್ವಲ್ಪ, ತುಪ್ಪ 1ಚಮಚ, ದೊಣ್ಣೆ ಮೆಣಸು(ಕ್ಯಾಪ್ಸಿಕಂ) 1,ರುಚಿಗೆ ತಕ್ಕಷ್ಟು ಉಪ್ಪು, ತರಕಾರಿ-ಕ್ಯಾರೆಟ್‌ 1,ಬೀನ್ಸ್‌ 5ರಿಂದ 6,ಹಸಿಬಟಾಣಿ 1/2ಕಪ್‌, ಗೆಡ್ಡೆ ಕೋಸು(ನವಿಲು ಕೋಸು) ಸಣ್ಣದು 1.

ತಯಾರಿಸುವ ವಿಧಾನ
ಒಂದು ಕುಕ್ಕರ್‌ ಪಾತ್ರೆಗೆ ಮೇಲಿರುವ ತರಕಾರಿಯನ್ನು ಹಾಕಿ,ಅದರ ಜೊತೆಗೆ ತೊಳೆದಿಟ್ಟ ಅಕ್ಕಿ ಮತ್ತು ತೊಗರಿಬೇಳೆಯನ್ನು ಹಾಕಿ ಬೇಯಿಸಿರಿ(ಜಾಸ್ತಿ ಬೇಯಿಸುವುದು ಬೇಡ). ತದನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದಮೇಲೆ ಸಾಸಿವೆ, ಶೇಂಗಾ, ಈರುಳ್ಳಿ, ಒಣಮೆಣಸು, ದೊಣ್ಣೆಮೆಣಸು, ಕರಿಬೇವು ಸೇರಿಸಿ ಚೆನ್ನಾಗಿ ಪ್ರೈ ಮಾಡಿಕೊಳ್ಳಿ. ನಂತರ ಟೊಮೆಟೋ ಹಾಕಿ ಅದಕ್ಕೆ ಅರಶಿನ ಪುಡಿ, ಅಚ್ಚ ಖಾರದ ಪುಡಿ, ಬಿಸಿಬೇಳೆ ಬಾತ್‌ ಮಸಾಲ ಪುಡಿ,ಹುಣಸೇ ಹುಳಿ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 2 ರಿಂದ 3 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ನಂತರ ಒಂದು ಕಪ್‌ ನೀರನ್ನು ಸೇರಿಸಿ ಅದಕ್ಕೆ ಬೇಯಿಸಿಟ್ಟ ತರಕಾರಿಯನ್ನು ಹಾಕಿ ಒಂದು ಚಮಚದಷ್ಟು ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿರಿ. ಬಿಸಿ-ಬಿಸಿಯಾದ ಬಿಸಿಬೇಳೆ ಬಾತ್‌ ಖಾರ ಬೂಂದಿಯೊಂದಿಗೆ ಸವಿಯಲು ಸಿದ್ಧ.

*ಶ್ರೀರಾಮ್ ನಾಯಕ್

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

10-uv-fusion

Harekala Hajabba: ಕೋಟಿ ಒಡೆಯನಲ್ಲ, ಆದರೂ ಈತ ಕೋಟಿಗೊಬ್ಬ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.