ಪಿಕಪ್ – ಬೈಕ್ ನಡುವೆ ಢಿಕ್ಕಿ: ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವು
Team Udayavani, Sep 23, 2022, 5:30 PM IST
ವಿಟ್ಲ: ಕಡೂರು ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯ ಮೈರದಲ್ಲಿ ಪಿಕಪ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಇದನ್ನೂ ಓದಿ:ಸಿಎಸ್ ಕೆ ತೊರೆಯಲಿದ್ದಾರಾ ಜಡೇಜಾ..? ಊಹಾಪೋಹಗಳಿಗೆ ತೆರೆ ಎಳೆದ ಫ್ರಾಂಚೈಸಿ
ಬದಿಯಡ್ಕ ಮುಕಂಪಾರೆ ನಿವಾಸಿ ಸಂದೇಶ್ ಚೆಟ್ಟಿಯಾರ್ ಬಿ. ಮೃತಪಟ್ಟ ದುರ್ದೈವಿ.
ವಿಟ್ಲ ಕಡೆಯಿಂದ ಆಗಮಿಸಿದ ಬೈಕ್ ಹಾಗೂ ಏರುಪ್ರದೇಶದಲ್ಲಿ ತೆರಳುತ್ತಿರುವ ವೇಳೆ ಪಿಕಪ್ ನಡುವೆ ಢಿಕ್ಕಿಯಾಗಿದೆ. ಢಿಕ್ಕಿಯ ಪರಿಣಾಮ ಬೈಕ್ ಸವಾರ ಚರಂಡಿಗೆ ಎಸೆಯಲ್ಪಟ್ಟು ಸ್ಥಳದಲೇ ಸಾವನ್ನಪಿದ್ದಾರೆ. ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.