Mini Taj Mahal: ತಾಯಿಯ ಪ್ರೀತಿಗೆ ಗೌರವ ಸಲ್ಲಿಸಲು ʼಮಿನಿ ತಾಜ್‌ ಮಹಲ್‌ʼ ನಿರ್ಮಿಸಿದ ಮಗ


Team Udayavani, Jun 12, 2023, 11:31 AM IST

TDY-4

ಷಹಜಹಾನ್‌ – ಮುಮ್ತಾಜ್‌ ಪ್ರೇಮ ಕಥೆಯ ಪ್ರತೀಕವಾಗಿ ವಿಶ್ವ ವಿಖ್ಯಾತಿಯನ್ನು ಪಡೆದಿರುವ ʼತಾಜ್‌ ಮಹಲ್‌ʼ ಯಾರಿಗೆ ಗೊತ್ತಿಲ್ಲ ಹೇಳಿ. ವಿಶ್ವ ಪ್ರಸಿದ್ದ ತಾಜ್‌ ಮಹಲ್‌ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜಗತ್ತಿನ ನಾನಾ ಕಡೆಯಿಂದ ಜನ ಹರಿದು ಬರುತ್ತಾರೆ. ತಾಜ್‌ ಮಹಲ್‌ ಷಹಜಹಾನ್‌ ಪ್ರೇಮಕ್ಕೆ ಸಾಕ್ಷಿಯಾಗಿ ನಿಂತಿದೆ.

ತಾಜ್‌ ಮಹಲ್‌ ನಂತಯೇ ಒಂದು ಕಟ್ಟಡ ತಮಿಳುನಾಡಿನಲ್ಲಿ ಎದ್ದು ನಿಂತಿದೆ. ಈ ʼಮಿನಿ ತಾಜ್‌ ಮಹಲ್‌ʼ ತಾಯಿಯ ಪ್ರೀತಿಗೆ ಮಗ ಕೊಟ್ಟ ಕೊಡುಗೆ.!

ತಮಿಳುನಾಡಿನ ತಿರುವರೂರು ಮೂಲದ ಹಾರ್ಡ್‌ವೇರ್ ಉದ್ಯಮಿ ಅಮ್ರುದೀನ್ ಶೇಖ್ ದಾವೂದ್ ಸಾಹೇಬ್ ತನ್ನ ತಾಯಿಯ ನೆನಪಿಗಾಗಿ ಮಿನಿ ತಾಜ್‌ ಮಹಲ್‌ ನ್ನು ಕಟ್ಟಿದ್ದಾರೆ.

ಅಮ್ರುದೀನ್ ಶೇಖ್ ಅವರಿಗೆ 5 ಮಂದಿ ಒಡಹುಟ್ಟಿದವರು. ಐದರಲ್ಲಿ ನಾಲ್ವರು ಹೆಣ್ಣು ಮಕ್ಕಳು. ಅಮ್ರುದೀನ್ ಒಬ್ಬರು ಮಾತ್ರ ಗಂಡು ಮಗ. ತಂದೆ ಅಬ್ದುಲ್ ಖಾದರ್ ಶೇಕ್ ದಾವೂದ್ ಚೆನ್ನೈನಲ್ಲಿ ಉದ್ಯಮಿಯಾಗಿ, ಚರ್ಮದ ವಸ್ತುಗಳ ಬಗ್ಗೆ ವ್ಯವಹಾರ  ನಡೆಸುತ್ತಿದ್ದರು. ಆದರೆ ಮಕ್ಕಳು ಸಣ್ಣ ವಯಸ್ಸಿನಲ್ಲಿದ್ದಾಗಲೇ ಅವರು ನಿಧನರಾದರು.

ಕುಟುಂಬದ ವ್ಯವಹಾರವನ್ನು ಅಮ್ರುದೀನ್ ಶೇಖ್ ಅವರ ತಾಯಿ ಜೈಲಾನಿ ಬೀವಿ ಅವರು ನೋಡಿಕೊಳ್ಳಲು ಆರಂಭಿಸುತ್ತಾರೆ. ಐದು ಮಕ್ಕಳನ್ನು ಸಾಕುವುದರೊಂದಿಗೆ ವ್ಯವಹಾರವನ್ನು ನೋಡಿಕೊಳ್ಳುವುದು ಜೈಲಾನಿ ಬೀವಿ ಅವರಿಗೆ ಸವಾಲು ಹಾಗೂ ಸಂಕಷ್ಟ ಎರಡನ್ನೂ ಒಟ್ಟಿಗೆ ಎದುರಿಸುವಂತೆ ಮಾಡುತ್ತದೆ. ಆದರೆ ಎಷ್ಟೇ ಕಷ್ಟವಾದರೂ ತನ್ನ ಮಕ್ಕಳಿಗೆ ಯಾವ ಕೊರತೆಯನ್ನು ಜೈಲಾನಿ ಬೀವಿ ಅವರು ಮಾಡಲಿಲ್ಲ. ತಾಯಿಯ ಕಷ್ಟವನ್ನು ಅಮ್ರುದೀನ್ ಶೇಖ್ ಅವರು ನೋಡುತ್ತಾರೆ. ಮಕ್ಕಳು ಬೆಳೆಯುತ್ತಾ ಹೋದಂತೆ ನಾಲ್ವರು ಹೆಣ್ಣು ಮಕ್ಕಳನ್ನು ಒಳ್ಳೆಯ ಸಂಬಂಧವನ್ನು ಹುಡುಕಿ ಮದುವೆ ಮಾಡಿಸಿ  ಜೈಲಾನಿ ಬೀವಿ ಜವಾಬ್ದಾರಿ ನಿಭಾಯಿಸುತ್ತಾರೆ.

ಕಷ್ಟದಿಂದ ಮೇಲೆ ಬಂದ ಅಮ್ರುದೀನ್ ಶೇಖ್ ಹಾರ್ಡ್‌ ವೇರ್‌ ವ್ಯವಹಾರವನ್ನು ಮಾಡಿ, ದೊಡ್ಡ ಉದ್ಯಮಿಯಾಗಿ ಬೆಳೆಯುತ್ತಾರೆ. ಮಗ ಎಷ್ಟೇ ದೊಡ್ಡವನ್ನಾದರೂ ತಾಯಿ ತನ್ನ ಮಗನನ್ನು‌ ಪ್ರೀತಿಯಿಂದ ಆರೈಕೆ ಮಾಡುತ್ತಾರೆ.

ತಾಯಿಯನ್ನು ಖುಷಿಯಾಗಿ ನೋಡಿಕೊಳ್ಳುತ್ತಿದ್ದ ಮಗ ಅಮ್ರುದೀನ್ ಶೇಖ್ ಗೆ 2020 ರ ಅಮಾವಾಸ್ಯೆಯ ದಿನ ಅತ್ಯಂತ ಕರಾಳ ದಿನವಾಗುತ್ತದೆ. ಅಂದು ಅವರ ಪ್ರೀತಿಯ ತಾಯಿ ಜೈಲಾನಿ ಬೀವಿ ಇಹಲೋಕ ತ್ಯಜಿಸುತ್ತಾರೆ. ಆ ವರ್ಷದಿಂದ ಪ್ರತಿ ವರ್ಷದ ಅಮಾವಾಸ್ಯೆಯ ದಿನದಂದು ತಾಯಿಯ ಸ್ಮರಣೆಯಿಂದ, ತಾಯಿಗಾಗಿ ಅವರು 1000 ಸಾವಿರ ಮಂದಿಗೆ ಊಟವನ್ನು ಬಡಿಸುತ್ತಾರೆ.

ಮಕ್ಕಳಿಗಾಗಿ ತನ್ನೆಲ್ಲಾ ಆಸೆ- ಆಕಾಂಕ್ಷೆಗಳನ್ನು ಬದಿಗಿಟ್ಟ ತಾಯಿಯ ನೆನಪಿಗೆ ಊಟವನ್ನು ಬಡಿಸಿದರೆ ಮಾತ್ರ ಸಾಲದು ಎಂದು ಅಮ್ರುದೀನ್ ಶೇಖ್ ʼಮಿನಿ ತಾಜ್‌ ಮಹಲ್ʼ ನಿರ್ಮಿಸಲು ಸಿದ್ದವಾಗುತ್ತಾರೆ.

ಇದಕ್ಕಾಗಿ ಮೊದಲು ತನ್ನ ಪೂರ್ವಜರ ಹಳ್ಳಿಯಾದ ಅಮ್ಮಯ್ಯಪ್ಪನ್‌ನಲ್ಲಿ ಒಂದು ಎಕರೆ ಭೂಮಿಯನ್ನು ಖರೀದಿಸುತ್ತಾರೆ ಹಾಗೂ ಬಿಲ್ಡರ್‌ ಆಗಿರುವ ಸ್ನೇಹಿತನ ಬಳಿ ಈ ಬಗ್ಗೆ ಚರ್ಚೆ ನಡೆಸಿ, 1 ಎಕರೆ ಭೂಮಿಯಲ್ಲಿ ಕಟ್ಟಡ ನಿರ್ಮಿಸಲು ಶುರು ಮಾಡುತ್ತಾರೆ.

ವರ್ಷಾನುಗಟ್ಟಲೇ ಕೆಲಸವನ್ನು ಮಾಡಿದ ತಾಯಿ ನೆನಪಿಗಾಗಿ ಕಟ್ಟಿದ ʼಮಿನಿ ತಾಜ್ ಮಹಲ್‌ʼ ಪೂರ್ಣಗೊಳ್ಳುತ್ತದೆ. ಇದೇ ವರ್ಷದ ಜೂ. 2 ರಂದು ಸಾರ್ವಜನಿಕರ ವೀಕ್ಷಣೆಗಾಗಿ ಇದನ್ನು ತೆರೆಯಲಾಗಿದೆ. ರಾಜಸ್ಥಾನದಿಂದ ಅಮೃತಶಿಲೆಯನ್ನು ತರಿಸಿ ಇದನ್ನು ಮಾಡಲಾಗಿದ್ದು, ಆಗ್ರಾದ ತಾಜ್ ಮಹಲ್‌ನಲ್ಲಿರುವಂತೆಯೇ ಸ್ಮಾರಕದ ಸುತ್ತಲೂ ಮಾರ್ಗಗಳು ಮತ್ತು ಕಾಲುದಾರಿಗಳನ್ನು ನಿರ್ಮಿಸಲಾಗಿದೆ.

ಎಲ್ಲಾ ಧರ್ಮದ ಜನರು ಧ್ಯಾನ ಮಾಡಬಹುದಾದ ಧ್ಯಾನ ಕೇಂದ್ರಗಳು ಇದರಲ್ಲಿದೆ. ಸದ್ಯ ಇದರಲ್ಲಿ 10 ವಿದ್ಯಾರ್ಥಿಗಳು ಉಳಿದುಕೊಳ್ಳುವ ಮದ್ರಾಸ ಕೂಡ ಇದೆ.

ಅಮ್ರುದೀನ್ ಶೇಖ್ ʼಮಿನಿ ತಾಜ್‌ ಮಹಲ್‌ʼ ಬಗ್ಗೆ ಹೆಚ್ಚಿನ ಪ್ರಚಾರವನ್ನು ಮಾಡಿಲ್ಲ. ಜನರಿಂದ ಜನರಿಗೆ ವಿಚಾರ ಹಬ್ಬಿ ʼಮಿನಿ ತಾಜ್‌ ಮಹಲ್‌ʼ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ.

-ಸುಹಾನ್‌ ಶೇಕ್

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.