ಕೊರಗುಗಳಿಗೆ ಚೂರಿ ಇರಿದಾಗಲೇ ನಿಜವಾದ ಗೆಲುವು ಕಾಣಲು ಸಾಧ್ಯ..!

ಬದುಕು ನೀವಂದುಕೊಂಡದ್ದಕ್ಕಿಂತ ದುಪ್ಪಟ್ಟು ಚೆನ್ನಾಗಿದೆ

ಶ್ರೀರಾಜ್ ವಕ್ವಾಡಿ, Jun 11, 2021, 9:00 AM IST

Even in a world with much sadness, at its essence, life is beautiful.

ನಾವು ಎಂದಿಗೂ ಸಕ್ಸಸ್ ಬಗ್ಗೆ ತುಂಬಾ ಯೋಚನೆ ಮಾಡುತ್ತೇವೆ. ಆದರೇ, ಸಕ್ಸಸ್ ಆಗುವುದು ಹೇಗೆ ಎನ್ನುವುದರ ಬಗ್ಗೆ ಯೋಚನೆ ಮಾಡುವುದೇ ಇಲ್ಲ.

‘ಸಕ್ಸಸ್ ಫುಲ್’ ಆಗಬೇಕೆಂದಿರುವ ಒಬ್ಬ ವ್ಯಕ್ತಿ ಯಾವಾಗಲೂ ಸೃಜನಾತ್ಮಕವಾಗಿ ಬದುಕನ್ನು ಕಂಡುಕೊಳ್ಳುತ್ತಾನೆ. ಹಾಗೂ ಆ ಮುಖವಾಗಿ ಬದುಕನ್ನು ಕಂಡುಕೊಳ್ಳುವುದಕ್ಕೆ ಆತ ಮುಂದಾಗುತ್ತಾನೆ.

ಸಕ್ಸಸ್ ಬಗ್ಗೆ ಬಹಳ ಯೋಚನೆ ಮಾಡುವ ಬಹಳ ಮಂದಿ ನಿಸ್ಪೃಹವನ್ನು, ನಿರಾಸೆಯನ್ನು ಹೆಚ್ಚಾಗಿ ಎದುರಿಸುತ್ತಾರೆ.

ಮನುಷ್ಯನ ಬದುಕೆಂಬುವುದು ಸುಖವೆಂಬ ಮರೀಚಿಕೆಯ ಬೆನ್ನು ಹಿಡಿಯುವ ಗೊತ್ತಿಲ್ಲದ ಪ್ರಯಾಣ. ಈ ಪ್ರಯಾಣದಲ್ಲಿ ಕಷ್ಟಗಳ ಸರಮಾಲೆ ಸುತ್ತಿಕೊಳ್ಳುತ್ತಲೇ ಇರುತ್ತದೆ. ಒಮ್ಮೊಮ್ಮೆ ದೊರೆತ ಯಶಸ್ಸು ಮುಂದೊಂದು ದಿನ ಕಷ್ಟಗಳ ಬೇಡಿಯನ್ನು ತೊಡಿಸುತ್ತದೆ. ಇನ್ನು ಕೆಲವೊಮ್ಮೆ ನಾವು ಸೋತ ಸೋಲುಗಳೇ ನಮ್ಮ ಬದುಕಿಗೆ ಹೊಸ ಮೆರಗು ನೀಡುತ್ತವೆ.

ಬದುಕಿನ ಕೊರಗುಗಳಿಗೆ, ಕೊರತೆಗಳಿಗೆ ಚೂರಿ ಇರಿದು ಕೊಂದುಕೊಂಡಾಗಲೇ  ನಿಜವಾದ ಗೆಲುವು ಕಾಣುವುದಕ್ಕೆ ಸಾಧ್ಯ. ಎಲ್ಲದಕ್ಕಿಂತ ಹೆಚ್ಚಾಗಿ ಗೆಲ್ಲುವುದಕ್ಕಿಂತ ಸೋಲದಿರುವುದೇ ಮುಖ್ಯ.

ಬಹಳ ಮಂದಿಗೆ ಗೆಲ್ಲವುದೆಂದರೇ ಸುಖದ ಸುಪ್ಪತ್ತಿಗೆಯಲ್ಲಿ ಬದುಕನ್ನು ಅನುಭವಿಸುವುದೆಂದಷ್ಟೇ ಗೊತ್ತು. ಆದರೇ, ಬದುಕಿನಲ್ಲಿ ಎಂತಹ ಕಷ್ಟದ ಕಾಲದಲ್ಲಿಯೂ ಸೋಲಿಗೆ ಎದುರಾಗಿ ಗಟ್ಟಿಯಾಗಿ ನಿಲ್ಲುವುದೇ ದೊಡ್ಡ ಗೆಲುವು ಎಂದು ಯಾರಿಗೂ ಗೊತ್ತಿಲ್ಲ.

‘ಸೆಲ್ಫ್ ಇಮೇಜ್’ ನನ್ನು ಆಯ್ಕೆ ಮಾಡಿಕೊಳ್ಳದೇ ತಮ್ಮ ಜೀವನದ ಎಷ್ಟೋ ಸುಂದರ ಸಮಯಯನ್ನು ಕಳೆದುಕೊಳ್ಳುವುದುಂಟು. ನಿಮ್ಮ ಬದುಕು ಹಸನಾಗಬೇಕೆಂದಿದ್ದಲ್ಲಿ ಅದನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುವುದನ್ನು ಕಲಿತುಕೊಂಡಿರದೇ ಬದುಕುವುದು, ಮತ್ತು ಆ ಬದುಕಿನಲ್ಲೇ ಗೆಲುವು ಕಾಣುವುದಕ್ಕೆ ಬಯಸುವುದು ದೊಡ್ಡ ದುರಂತ.

ನಮ್ಮ ಅಂತರ್ಗತ ಶಕ್ತಿಯ ಬಗ್ಗೆ ನಮಗೆ ನಂಬಿಕೆಯೇ ಇಲ್ಲದಿರುವಾಗ ನಾವು ‘ಸಕ್ಸಸ್ ಫುಲ್’ ಬದುಕನ್ನು ಕನಸಿನಲ್ಲಿಯೂ ಕಾಣುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ನಮ್ಮ ಬದುಕಿನ ಗೆಲುವಿನ ಮೊದಲ ಹೆಜ್ಜೆ ಯಾವುದೆಂದರೇ, ನಮ್ಮ ಮನಸ್ಸಿನ ಒಳಗಿರುವ ಅಂತರ್ಗತ ಶಕ್ತಿ. ನಾವು ಆ ಶಕ್ತಿಯ ಮೇಲೆ ಅಪಾರವಾಗಿ ಇಡುವ ಗೌರವ ಹಾಗೂ ನಂಬಿಕೆ ನಮಗೆ ಹೊಸ ದಾರಿಗೆ ಅನುವು ಮಾಡಿಕೊಡುತ್ತದೆ ಎನ್ನುವುದರಲ್ಲಿ ಅನುಮಾನ ಇಲ್ಲ.

ನಿಮ್ಮ ಮನಸ್ಸು ಕಳಂಕವಿಲ್ಲದ್ದು. ಆ ಮನಸ್ಸಿನಲ್ಲಿ ಇರುವ ಸ್ವಯಂ ನಿಂದನೆಗಳನ್ನು ಹಾಗೂ ಪರ ನಿಂದನೆಗಳನ್ನು ತೊಲಗಿಸಕೊಳ್ಳುವುದು ಕೂಡ ವೈಯಕ್ತಿಕ ಏಳ್ಗೆಗೆ ರಹದಾರಿಯನ್ನು ಒದಗಿಸಿಕೊಡುತ್ತದೆ. ಹಾಗಾಗಿ ನಮ್ಮ ಬಗ್ಗೆ ನಾವೇ ನಿಂದಿಸಿಕೊಳ್ಳುವುದು ಹಾಗೂ ಇನ್ನೊಬ್ಬರನ್ನು ನಿಂದಿಸುವುದನ್ನು ಕಡಿಮೆ ಮಾಡಿದಷ್ಟು ನಾವು ಅತಿ ಬೇಗ ಬದುಕಿನಲ್ಲಿ ಗೆಲುವನ್ನು ಕಾಣುತ್ತೇವೆ.

‘ಬಿ ಹ್ಯಾಪಿ ಆ್ಯಂಡ್ ಕೀಪ್ ಅದರ್ಸ್ ಟು ಹ್ಯಾಪಿ’ ಎಂಬ ನಗುವಿನ ಮಂತ್ರ ನಿಮ್ಮನ್ನು ಗೆಲುವಿನ ಅರ್ಧ ದಾರಿಯ ತನಕ ಯಾವುದೇ ಪರಿಶ್ರಮವಿಲ್ಲದೇ, ಉಚಿತವಾಗಿ ಕೊಂಡ್ಹೋಗಿ ಬಿಡುತ್ತದೆ. ಹಾಗಾಗಿ ಬದುಕನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುವ ಬದಲಾಗಿ, ಬದುಕನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ, ನಗು ನಗುತ್ತಾ ನಡೆಯುವುದು ಅಥವಾ ಬದುಕುವುದು ಬಹಳ ಮುಖ್ಯ ಆಗುತ್ತದೆ.

ಬದುಕಿನಲ್ಲಿ ಏರು ಪೇರುಗಳಿಲ್ಲದೇ ನಿಜವಾದ ಗೆಲುವನ್ನು ಕಾಣುವುದಕ್ಕೆ ನಿಮಗೆ ಸಾಧ್ಯವೇ ಇಲ್ಲ. ಏರು ಪೇರುಗಳಿಲ್ಲದೇ ಕಾಣುವ ಗೆಲುವು ಅದು ಕ್ಷಣಿಕ ಸುಖವಷ್ಟೇ.

ಇನ್ನು, ಒಬ್ಬ ವ್ಯಕ್ತಿ ಎಷ್ಟೇ ಧನಾತ್ಮಕತೆಯಿಂದ ಬದುಕನ್ನು ಕಾಣುವುದಕ್ಕೆ ಪ್ರಯತ್ನ ಪಟ್ಟರೂ ಕೂಡ ಸಣ್ಣ ಋಣಾತ್ಮಕತೆ ಆತನಲ್ಲಿ ಇದ್ದೇ ಇರುತ್ತದೆ. ಆದರೇ, ಧನಾತ್ಮಕತೆಗೆ ಋಣಾತ್ಮಕತೆಯನ್ನು ತಿರುಗಿಸಿಕೊಳ್ಳುವ ಹೇಗೆ ಎನ್ನುವುದರ ಬಗ್ಗೆ ತಿಳಿದಿರಬೇಕು. ಅಂದರೇ, ಅವಲಕ್ಷಣಗಳನ್ನು ಸುಲಕ್ಷಣಗಳನ್ನಾಗಿ ಪರಿವರ್ತಿಸಿಕೊಳ್ಳುವುದು ಎಂದರ್ಥ.

ಗೆಲುವು ಎನ್ನುವುದು ಸುಮ್ಮನೆ ಬರುವುದಿಲ್ಲ. ಅದು ಜೀವನದಲ್ಲಿ ಪರಿಶ್ರಮ ಹೆಚ್ಚಾದ ಹಾಗೆ ಅನುಭವಪೂರ್ವಕವಾಗಿ ಬರುವ ಅನುಭೂತಿ. ಎಲ್ಲರೂ ಗೆಲ್ಲಬಹುದು ಆದರೇ, ಅವರೊಳಗಿನ ಚಿಂತೆಗಳನ್ನು ಚಿತೆಯ ಮೇಲೆ ಸುಟ್ಟುಕೊಂಡಾಗ ಮಾತ್ರ. ಬದುಕು ಚೆನ್ನಾಗಿದೆ. ನೀವಂದುಕೊಂಡದ್ದಕ್ಕಿಂತ ದುಪ್ಪಟ್ಟು ಚೆನ್ನಾಗಿದೆ.

-ಶ್ರೀರಾಜ್ ವಕ್ವಾಡಿ

ಇದನ್ನೂ ಓದಿ : ಪಾಸಿಟಿವ್ ಗೆದ್ದೇ ಗೆಲ್ಲುತ್ತದೆ : ಓದುಗರೊಬ್ಬರಿಂದ ಪಿಡಿಎಫ್ ಆದ ಉದಯವಾಣಿ ಸುದ್ದಿಗಳು ವೈರಲ್

ಟಾಪ್ ನ್ಯೂಸ್

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.