UV Special: ಈತ ಆಧುನಿಕ ಭಾರತದ ಕುಂಭಕರ್ಣ…ವರ್ಷದಲ್ಲಿ 300 ದಿನ ನಿದ್ದೆಗೆ ಶರಣು!

ನಿದ್ದೆಗೆ ಶರಣಾದ ಪುಖ್ರಾಮ್ ನನ್ನು ಎಬ್ಬಿಸುವುದೇ ದೊಡ್ಡ ಸವಾಲಿನ ಕೆಲಸವಂತೆ.

Team Udayavani, Jul 14, 2021, 2:40 PM IST

UV Special: ಈತ ಆಧುನಿಕ ಭಾರತದ ಕುಂಭಕರ್ಣ…ವರ್ಷದಲ್ಲಿ 300 ದಿನ ನಿದ್ದೆಗೆ ಶರಣು!

ಉಡುಪಿ/ನವದೆಹಲಿ: ರಾಮಾಯಣದಲ್ಲಿ ರಾವಣನ ಸಹೋದರ ಕುಂಭಕರ್ಣ ಭಾರತೀಯರ ಮನಸ್ಸಿನಲ್ಲಿ ಜನಪ್ರಿಯನಾಗಿರುವ ಕಥೆ ಎಲ್ಲರಿಗೂ ತಿಳಿದಿದೆ. ಆತ ಆರು ತಿಂಗಳ ಕಾಲ ದೀರ್ಘಕಾಲ ನಿದ್ದೆಯಲ್ಲಿರುವವನು. ಇದರಿಂದಾಗಿಯೇ ನಮ್ಮ, ನಿಮ್ಮ ಮನೆಯಲ್ಲಿ ಯಾರಾದರೂ ತುಂಬಾ ಸಮಯ ನಿದ್ದೆಗೆ ಶರಣಾದರೆ ಆತನನ್ನು ಕುಂಭಕರ್ಣನಿಗೆ ಹೋಲಿಸುವುದು ಸಾಮಾನ್ಯವಾದ ವಾಡಿಕೆ. ಆದರೆ ರಾಜಸ್ಥಾನದ ನಾಗ್ಪುರದ ನಿವಾಸಿ ಪುಖ್ರಾಮ್ ವರ್ಷದಲ್ಲಿ 300 ದಿನ ನಿದ್ದೆಗೆ ಶರಣಾಗುತ್ತಿದ್ದಾನೆ ಎಂಬ ವರದಿಯನ್ನು ನೀವು ನಂಬಲೇಬೇಕು!

ಇದನ್ನೂ ಓದಿ:ಪಾಕಿಸ್ತಾನ ಬಸ್ ನಲ್ಲಿ ಬಾಂಬ್ ಸ್ಫೋಟ; ಚೀನಾದ 9 ಕಾರ್ಮಿಕರು ಸೇರಿ 13 ಮಂದಿ ಸಾವು

ತಜ್ಞರ ಪ್ರಕಾರ ಒಬ್ಬ ಆರೋಗ್ಯವಂತ ಮನುಷ್ಯ ದಿನಕ್ಕೆ ಎಂಟು ಗಂಟೆಗಳ ಕಾಲ ನಿದ್ದೆ ಸಾಕಾಗುತ್ತದೆ ಎನ್ನುತ್ತಾರೆ. ಆದರೆ ನಾಗ್ಪುರದ ಪುಖ್ರಾಮ್ ತಿಂಗಳಲ್ಲಿ 25 ದಿನಗಳ ಕಾಲ ನಿರಂತರವಾಗಿ ನಿದ್ದೆಗೆ ಶರಣಾಗುತ್ತಾನಂತೆ. ಪುಖ್ರಾಮ್ ಗೆ 23ವರ್ಷಗಳ ಹಿಂದೆ ಅಪರೂಪದ ಕಾಯಿಲೆ ಇರುವುದು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

42 ವರ್ಷದ ಪುಖ್ರಾಮ್ ತುಂಬಾ ಅಪರೂಪದ ಆ್ಯಕ್ಸಿಸ್ ಹೈಪರ್ಸೋಮ್ನಿಯಾ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಈತ ನಿರಂತರ 25 ದಿನಗಳ ಕಾಲ ನಿದ್ದೆ ಮಾಡುತ್ತಿರುವುದಾಗಿ ವರದಿ ವಿವರಿಸಿದೆ. ಈ ಅಪರೂಪದ ಕಾಯಿಲೆಗೆ 23 ವರ್ಷಗಳ ಹಿಂದೆ ಮೊದಲ ಬಾರಿಗೆ ಚಿಕಿತ್ಸೆ ಪಡೆದಿದ್ದಾನಂತೆ. ಆದರೆ ಅದು ಗುಣಮುಖವಾಗದೆ ದಿನದಿಂದ ದಿನಕ್ಕೆ ನಿದ್ದೆ ಎಂಬುದು ಆತನ ಜೀವನದ ಒಂದು ಭಾಗವಾಗಿದೆ ಎಂದು ವರದಿ ಹೇಳಿದೆ.

ಕುತೂಹಲಕರ ಸಂಗತಿ ಏನೆಂದರೆ ಪುಖ್ರಾಮ್ ಸ್ಥಳೀಯವಾಗಿ ಪುಟ್ಟ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಅದು ಕೇವಲ ತಿಂಗಳಲ್ಲಿ ಐದು ದಿನ ಮಾತ್ರ ತೆರೆದಿರುತ್ತದೆ. ಉಳಿದ 25 ದಿನಗಳ ಕಾಲ ಅಂಗಡಿಗೆ ರಜೆ, ಈತನಿಗೆ ಕುಂಭಕರ್ಣನ ನಿದ್ದೆ! ಆರಂಭದ ದಿನಗಳಲ್ಲಿ ದೀರ್ಘಕಾಲ ನಿದ್ದೆ ಮಾಡುತ್ತಿದ್ದ ಪುಖ್ರಾಮ್ ಕಾಯಿಲೆ ಬಗ್ಗೆ ಕುಟುಂಬ ಸದಸ್ಯರು ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರಂತೆ. ಆದರೆ ಆತನ ನಿದ್ರೆಯ ಅವಧಿ ಹೆಚ್ಚಳವಾಯ್ತೇ ವಿನಃ ಕಡಿಮೆಯಾಗಿಲ್ಲ ಎಂದು ವರದಿ ತಿಳಿಸಿದೆ.

ನಿದ್ದೆಗೆ ಶರಣಾದ ಪುಖ್ರಾಮ್ ನನ್ನು ಎಬ್ಬಿಸುವುದೇ ದೊಡ್ಡ ಸವಾಲಿನ ಕೆಲಸವಂತೆ. ಸುದೀರ್ಘ ಕಾಲ ನಿದ್ದೆ ಮಾಡುವ ಪುಖ್ರಾಮ್ ಗೆ ತನಗೆ ಅದು ವಿಶ್ರಾಂತಿ ಎಂಬುದಾಗಿ ಹೇಳುತ್ತಾನೆ. ಅಷ್ಟೇ ಅಲ್ಲ ಕೆಲವೊಮ್ಮೆ ತೀವ್ರ ತಲೆನೋವು ಸಹ ಇರುತ್ತದೆ ಎಂದು ಪುಖ್ರಾಮ್ ಹೇಳುತ್ತಾರೆ.ಮಾಧ್ಯಮದ ವರದಿ ಪ್ರಕಾರ, ಈ ಎಲ್ಲಾ ಜಂಜಾಟದ ನಡುವೆ ಪುಖ್ರಾಮ್ ಮೊದಲಿನಂತೆ ಸಹಜ ಜೀವನ ನಡೆಸುವಂತಾಗಲಿ ಎಂಬುದು ಪತ್ನಿ ಲಿಚ್ಮಿ ದೇವಿ ಮತ್ತು ತಾಯಿ ಕಾನ್ವಾರಿ ದೇವಿ ಅವರ ಹಾರೈಕೆಯಾಗಿದೆ.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.