ಅಣಬೆ ಯಾರಿಗೆ ಇಷ್ಟವಿಲ್ಲ ಹೇಳಿ !


Team Udayavani, Oct 12, 2020, 10:30 AM IST

Mushroom-Manchurian-in-1

ಅಣಬೆ/ಮಶ್ರೂಮ್‌ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಳೆಗಾಲದಲ್ಲಿ ಒಂದು ಗುಡುಗು ಬಂದ್ರೆ ಸಾಕು ತೋಟ-ಗುಡzಗಳಲ್ಲಿ ಅಣಬೆ ಹುಡುಕಲು ಹೋಗುತ್ತಾರೆ.ಆದರೆ ಈಗ ಅಷ್ಟೊಂದು ಕಷ್ಟಪಡುವ ಅವಶ್ಯಕತೆವಿಲ್ಲ. ಯಾಕೆಂದರೆ ಈಗ ವ್ಯಾಪಕವಾಗಿ ಅಣಬೆ ಕೃಷಿ ಮಾಡುತ್ತಿರುವುದರಿಂದ ಎಲ್ಲಾ ಋತುಗಳಲ್ಲೂ ವಿವಿಧ ರೀತಿ ಅಣಬೆಗಳು ಮಾರುಕಟ್ಟೆಗಳಲ್ಲಿ ದೊರೆಯುತ್ತದೆ.

ಆರೋಗ್ಯಕ್ಕೆ ಒಳ್ಳೆಯದು :
– ಅಣಬೆಯಲ್ಲಿ ಪ್ರೊಟೀನ್‌ ಅಂಶ ಜಾಸ್ತಿ ಇರುತ್ತದೆ ಹಾಗೂ ನಾರಿನಾಂಶ ಜಾಸ್ತಿ ಇರುವುದರಿಂದ ಅಣಬೆ ಸೇವಿಸುವವರ ಕೊಲೆಸ್ಟರಾಲ್‌ ಹತೋಟಿಗೆ ಬರುತ್ತದೆ.
– ಇದರಲ್ಲಿ ಕ್ಯಾಲೋರಿ ಕಡಿಮೆಯಿದ್ದು ನಾರಿನಾಂಶ ಹೆಚ್ಚಾಗಿರುವುದರಿಂದ ದೇಹವನ್ನು ರೋಗ ಮುಕ್ತವಾಗಿಡುವ ಸಾಮರ್ಥ್ಯವಿದೆ.
– ಅಣಬೆಯಲ್ಲಿ ವಿಟಮಿನ್‌ ಎ,ಬಿ ಮತ್ತು ಡಿ ಹೊಂದಿರುವುದಲ್ಲದೇ ದೇಹದ ಜೀವಕೋಶ ರಕ್ಷಿಸಲು ಇದು ಸಹಕಾರಿ.
– ಕ್ಯಾನ್ಸರ್‌ ಮತ್ತಿತರ ರೋಗಗಳನ್ನು ತಡೆಗಟ್ಟಲು ಬೇಕಾಗುವ ಆ್ಯಂಟಿ ಆಕ್ಸಿಡಾಂಟ್‌ಗಳು ಅಣಬೆಯಲ್ಲಿವೆ.
– ಅಣಬೆಯಲ್ಲಿ ಪೊಟ್ಯಾಶಿಯಂ ಇರುವ ಕಾರಣ ಇದು ರಕ್ತದೊತ್ತಡದ ರೋಗಗಳಿಗೆ ಉತ್ತಮ ಆಹಾರವಾಗಿದೆ.

ಮಶ್ರೂಮ್‌ ಮಂಚೂರಿಯನ್‌ :
ಮಶ್ರೂಮ್‌ ಮಂಚೂರಿ ಆಹಾರ ಪ್ರಿಯರ ಮೆಚ್ಚಿನ ತಿಂಡಿಯೂ ಹೌದು.ಸಮಪಾಕದಲ್ಲಿ ತಯಾರಿಸಿದ ಮಶ್ರೂಮ್‌ ಮಂಚೂರಿಯನ್ನು ಸವಿಯುವುದೇ ನಾಲಗೆಗೆ ಒಂದು ಹಬ್ಬ. ಕೆಲವೊಂದು ಹೊಟೇಲ್‌ಗ‌ಳು ಮಶ್ರೂಮ್‌ ಮಂಚೂರಿಗೆ ಬ್ರಾಂಡ್‌ ಆಗಿರುವುದು ಇದೆ.ಸರಿಯಾದ ಕ್ರಮ ಗೊತ್ತಿದ್ದಲ್ಲಿ ಮಶ್ರೂಮ್‌ ಮಂಚೂರಿಯನ್ನು ನೀವು ಮನೆಯಲ್ಲೇ ಸಿದ್ಧ ಪಡಿಸಿ ತಿನ್ನಬಹುದು.ಸಸ್ಯಾಹಾರಿಗಳೂ ಇಷ್ಟಪಡುವ ಮತ್ತು ಆರೋಗ್ಯಕಾರಕ ಮಶ್ರೂಮ್‌ ಮಂಚೂರಿಯನ್ನು ನೀವೂ ಒಮ್ಮೆ ಸವಿದು ನೋಡಿ.

ಬೇಕಾಗುವ ಸಾಮಾಗ್ರಿಗಳು:
ಮಶ್ರೂಮ್‌ 4 ಕಪ್‌,ಬೆಳ್ಳುಳ್ಳಿ-ಶುಂಠಿ ಪೇಸ್ಟ್‌ 2 ಚಮಚ,ಮೆಣಸಿನ ಪುಡಿ 2 ಚಮಚ,ಕರಿಯಲು ಎಣ್ಣೆ,ರುಚಿಗೆ ಉಪ್ಪು.
ಹಿಟ್ಟು ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
ಮೈದಾ ಅರ್ಧ ಕಪ್‌,ಕಾನ್‌ ಫ್ಲೋರ್‌ 1/4 ಕಪ್‌,ಅಕ್ಕಿ ಹಿಟ್ಟು 3 ಚಮಚ,ಮೆಣಸಿನ ಪುಡಿ 1 ಚಮಚ,ರುಚಿಗೆ ಉಪ್ಪು.
ಸಾಸ್‌ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
ಬೆಳ್ಳುಳ್ಳಿ 8 ಎಳಸು,ಚಿಲ್ಲಿ ಸಾಸ್‌ 3 ಚಮಚ ,ಶುಂಠಿ 1 ಚಮಚ,ಈರುಳ್ಳಿ 2 ,ಎಣ್ಣೆ 2 ಚಮಚ ,ಮೆಣಸಿನ ಪುಡಿ ಸ್ವಲ್ಪ, ಟೊಮೆಟೋ ಸಾಸ್‌ 4 ಚಮಚ,ಸೋಯಾ ಸಾಸ್‌ 1 ದೊ.ಚಮಚ
ಗ್ರೇವಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
ಕಾನ್‌ ಫ್ಲೋರ್‌ 2 ದೊ.ಚಮಚ,ನೀರು 2ಕಪ್‌,ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ
ಬೆಳ್ಳುಳ್ಳಿ,ಶುಂಠಿ ಪೇಸ್ಟ್‌ ,ಉಪ್ಪು,ಮೆಣಸಿನ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಮಶ್ರೂಮ್‌ ನೆನೆಸಿ 10 ರಿಂದ 15 ನಿಮಿಷ ಇಡಿ.
ಗ್ರೇವಿ ತಯಾರಿಸಲು : ಮೈದಾ, ಕಾನ್‌ ಫ್ಲೋರ್‌,ಅಕ್ಕಿ ಹಿಟ್ಟು,ಮೆಣಸಿನ ಪುಡಿ,ಉಪ್ಪು,ಸ್ವಲ್ಪ ನೀರನ್ನು ಹಾಕಿ ತಳ್ಳಗೆ ಮಾಡಿ. ನೆನೆಸಿಟ್ಟ ಮಶ್ರೂಮ್‌ ಅನ್ನು ಇದರಲ್ಲಿ ಒಂದೊಂದೇ ಮುಳುಗಿಸಿ ತೆಗೆದು ಎಣ್ಣೆಯಲ್ಲಿ ಕರಿದು ಬದಿಗಿಡಿ.
ಸಾಸ್‌ ತಯಾರಿಸಲು : ಎಣ್ಣೆ, ಬಿಸಿ ಮಾಡಿ ಮೊದಲು ಬೆಳ್ಳುಳ್ಳಿ ಹಾಕಿ ಕೆಂಪಗೆ ಹುರಿಯಿರಿ.ನಂತರ ಮೆಣಸಿನ ಕಾಯಿ,ಶುಂಠಿ,ಈರುಳ್ಳಿ ಸೇರಿಸಿ 2 ನಿಮಿಷ ಹುರಿಯಿರಿ.ತದನಂತರ ಚಿಲ್ಲಿ ಸಾಸ್‌,ಟೊಮೆಟೋ ಸಾಸ್‌,ಸೋಯಾ ಸಾಸ್‌,ರುಚಿಗೆ ಬೇಕಾಗುವಷ್ಟು ಉಪ್ಪು ಸೇರಿಸಿ. ಕರಿದಿಟ್ಟ ಮಶ್ರೂಮ್‌ ಸೇರಿಸಿ ಚೆನ್ನಾಗಿ ಬೆರೆಸಿ ಇಳಿಸಿ.ಮೇಲಿನಿಂದ ಆಲಂಕಾರಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿ-ರುಚಿಯಾದ ಮಶ್ರೂಮ್‌ ಮಂಚೂರಿಯನ್‌ ಸವಿಯಲು ಸಿದ್ಧ.

ಟಾಪ್ ನ್ಯೂಸ್

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.