World Cup ಮೂರು ವಿಕೆಟ್‌ ಬಿದ್ದಾಗ ನಾನು ಆತಂಕಗೊಂಡಿದ್ದೆ: ರೋಹಿತ್‌


Team Udayavani, Oct 9, 2023, 11:53 PM IST

1—–sadsad

ಚೆನ್ನೈ: ಪಟಪಟನೆ 3 ವಿಕೆಟ್‌ ಬಿದ್ದಾಗ ತಾನು ತೀವ್ರ ಆತಂಕಗೊಂಡಿದ್ದೆ ಎಂಬುದಾಗಿ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಪ್ರತಿ ಕ್ರಿಯಿಸಿದ್ದಾರೆ. ಆಸ್ಟ್ರೇಲಿಯ ವಿರು ದ್ಧದ ಮೊದಲ ವಿಶ್ವಕಪ್‌ ಪಂದ್ಯದ ಬಳಿಕ ಅವರು ತಮ್ಮ ಅನಿಸಿಕೆಯನ್ನು ಹೊರಗೆಡಹಿದರು.

“ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಬಹಳ ಆತಂಕಗೊಂಡಿದ್ದೆ, ನರ್ವಸ್‌ ಆಗಿದ್ದೆ. ಚೇಸಿಂಗ್‌ ವೇಳೆ ಇಂಥ ಸ್ಥಿತಿಯನ್ನು ಯಾವ ತಂಡವೂ ಬಯಸುವುದಿಲ್ಲ. ಇದಕ್ಕಾಗಿ ಆಸ್ಟ್ರೇ ಲಿಯ ಬೌಲರ್‌ಗಳನ್ನು ನಾನು ಪ್ರಶಂಸಿಸುತ್ತೇನೆ. ಆದರೆ ಇದರಲ್ಲಿ ನಮ್ಮ ತಪ್ಪುಗಳೂ ಸಾಕಷ್ಟಿವೆ. ಕೆಟ್ಟ ಹೊಡೆತಗಳು ಮುಳುವಾದವು. ಪವರ್‌ ಪ್ಲೇಯಲ್ಲಿ ಹೆಚ್ಚು ರನ್‌ ಗಳಿಸಬೇಕೆಂಬ ಧಾವಂತದಲ್ಲಿ ಹೀಗಾಗುತ್ತದೆ’ ಎಂಬು ದಾಗಿ ರೋಹಿತ್‌ ಹೇಳಿದರು.
ರೋಹಿತ್‌ ಶರ್ಮ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಮೊದಲ ಸಲ ಮುನ್ನಡೆಸುತ್ತಿದ್ದಾರೆ. ಇಲ್ಲಿ ಅವರು ಕೂಡ ಖಾತೆ ತೆರೆಯಲು ವಿಫ‌ಲರಾದರು. ಕೊನೆಯಲ್ಲಿ ವಿರಾಟ್‌ ಕೊಹ್ಲಿ-ಕೆ.ಎಲ್‌. ರಾಹುಲ್‌ ಅಮೋಘ ಜತೆಯಾಟದ ಮೂಲಕ ತಂಡದ ಗೆಲುವನ್ನು ಸಾರಿದರು. ಆಗಲೇ ರೋಹಿತ್‌ ನಿರಾಳಗೊಂಡದ್ದು.

“ಕೊಹ್ಲಿ-ರಾಹುಲ್‌ ಆಪತಾºಂಧವರ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿ ಭಾರತಕ್ಕೆ ಗೆಲುವನ್ನು ತಂದಿತ್ತರು. ಇದೊಂದು ಸ್ಮರಣೀಯ ಇನ್ನಿಂಗ್ಸ್‌ ಆಗಿದೆ. ಅವರು ಒತ್ತಡವನ್ನು ಬಹಳ ಚಾಕಚಕ್ಯತೆಯಿಂದ ಕೊಡವಿಕೊಳ್ಳುತ್ತ ಹೋದರು. ಹಾಗೆಯೇ ತ್ರಿವಳಿ ಸ್ಪಿನ್‌ ಪ್ರಯೋಗವೂ ಯಶಸ್ಸು ಕಂಡಿತು’ ಎಂಬುದಾಗಿ ರೋಹಿತ್‌ ಹೇಳಿದರು.

ವಿಭಿನ್ನ ಸವಾಲು
ಇದೇ ವೇಳೆ ತಂಡದ ಮುಂದಿ ರುವ ಸವಾಲುಗಳ ಬಗ್ಗೆಯೂ ಹೇಳಿ ಕೊಂಡರು. “ಈ ಬಾರಿಯ ವಿಶ್ವಕಪ್‌ 10 ತಾಣಗಳಲ್ಲಿ ನಡೆಯುತ್ತದೆ. ಎಲ್ಲ 10 ಮೈದಾನಗಳಲ್ಲೂ ಭಾರತ ಆಡಲಿದೆ. ಹೀಗಾಗಿ ವಿಭಿನ್ನ ವಾತಾ ವರಣ, ವಿಭಿನ್ನ ಪರಿಸ್ಥಿತಿ ಜತೆಗೆ ವಿಭಿನ್ನ ಸವಾಲುಗಳು ಎದುರಾಗಲಿವೆ. ಇದಕ್ಕೆ ನಾವು ಸೂಕ್ತ ಸಿದ್ಧತೆಗಳನ್ನು ಮಾಡಿ ಕೊಳ್ಳಬೇಕು. ಇದರಿಂದ ತಂಡದ ಸಂಯೋ ಜನೆ ಯಲ್ಲಿ, ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದ ಲಾವಣೆ ಮಾಡಿಕೊಳ್ಳುವ ಸಂದರ್ಭ ಎದುರಾಗಲೂಬಹುದು’ ಎಂದರು.

ಟಾಪ್ ನ್ಯೂಸ್

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್

World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್

1-sadsdas

World Cup 2023 ; ಭಾರತವನ್ನು ರೂಪಿಸಿದ ತ್ರಿಮೂರ್ತಿಗಳು

1-qweqwwqe

ICC ವಿಶ್ವಕಪ್‌ ಸಾಧಕರ ತಂಡಕ್ಕೆ ರೋಹಿತ್‌ ನಾಯಕ; ತಂಡ ಹೀಗಿದೆ

1-ww-eqeqwe

World Cup Final; ವೀಕ್ಷಕರು ಮೌನಕ್ಕೆ ಶರಣು:ಕ್ಯಾಪ್ಟನ್‌ ಪ್ಯಾಟ್‌ ಕಮಿನ್ಸ್‌  ಫುಲ್‌ ಖುಷ್‌

1-saddasd

Head line ನಲ್ಲಿ ಮಿಂಚಿದ ಟ್ರ್ಯಾವಿಸ್‌ ಹೆಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.