ಬಹುಕಾಲದ ಸಮಸ್ಯೆಗೆ ಪರಿಹಾರ ಸಿಕ್ಕೀತೇ?: ಶಾಲಾ ಬ್ಯಾಗ್‌ ಭಾರ ಇಳಿಕೆ


Team Udayavani, Jul 22, 2017, 7:17 AM IST

22-ANKANA-3.gif

ಪುಸ್ತಕ ಚೀಲದ ಭಾರಕ್ಕೆ ನಿರ್ದಿಷ್ಟ ಮಾನದಂಡಗಳು ಇಲ್ಲದಿದ್ದರೂ ಮಕ್ಕಳ ತೂಕದ ಶೇ. 10 ಮೀರ ಬಾರದೆಂಬ ಸೂತ್ರವನ್ನು ಹೆಚ್ಚಿನ ದೇಶಗಳು ಅನುಸರಿಸುತ್ತಿವೆ.  

ಶಾಲಾ ಮಕ್ಕಳ ಪಾಟೀ ಚೀಲದ ಭಾರವನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ಮುಂದಾಗಿರುವುದು ಸ್ವಾಗತಾರ್ಹ ನಡೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಸಂಸತ್ತಿನಲ್ಲಿ ಶಾಲಾ ಮಕ್ಕಳ ಬ್ಯಾಗ್‌ ಭಾರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿರುವ ವಿಚಾರವನ್ನು ತಿಳಿಸಿದ್ದಾರೆ. ಹೊಸ ರಾಷ್ಟ್ರಪತಿಯನ್ನು ಅಭಿನಂದಿಸುವ ಸಂಭ್ರಮದಲ್ಲಿ ಈ ಮಾತು ಮಾಧ್ಯಮಗಳ ಗಮನ ಸೆಳೆದಿಲ್ಲ. ಪುಟಾಣಿಗಳು ತಮಗಿಂತಲೂ ಹೆಚ್ಚಿನ ಭಾರವನ್ನು ಹೊರುವುದನ್ನು ನೋಡುವಾಗ ಕನಿಕರ ಮೂಡುತ್ತದೆ. ನಿತ್ಯ ಇಷ್ಟು ಪುಸ್ತಕಗಳನ್ನು ಹೊತ್ತುಕೊಂಡು ಹೋಗುವ ಅಗತ್ಯವಾದರೂ ಏನು ಎಂಬ ಪ್ರಶ್ನೆ ಕೆಲವರ ಮನಸ್ಸಿನಲ್ಲಾದರೂ ಸುಳಿಯದೆ ಇರಲಾರದು. ಪುಸ್ತಕ ಚೀಲದ ಭಾರ ಕಡಿಮೆ ಮಾಡಲು ಮೊದಲಿನಿಂದಲೂ ಪ್ರಯತ್ನ ನಡೆದಿದ್ದರೂ ಪರಿಣಾಮ ಬೀರಿಲ್ಲ. ಇಂದಿಗೂ ಮಕ್ಕಳು ಕೂಲಿಗಳಂತೆ ಪುಸ್ತಕದ ಮೂಟೆಯನ್ನು ಹೊತ್ತುಕೊಂಡು ಹೋಗುತ್ತಾರೆ. 

ತೆಲಂಗಾಣ ರಾಜ್ಯ ಇತ್ತೀಚೆಗೆ ಪಾಟೀ ಚೀಲದ ತೂಕದ ಕುರಿತು ಕಟ್ಟುನಿಟ್ಟಿನ ಆದೇಶ ಹೊರಡಿಸಿ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಅಲ್ಲಿನ ಸರಕಾರ ಆಯಾಯ ತರಗತಿಗಳಿಗೆ ಪಾಟೀ ಚೀಲದ ಭಾರವನ್ನು ನಿಗದಿಪಡಿಸಿ ಇದನ್ನು ಮೀರಿದರೆ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಅಂತೆಯೇ ತಮಿಳುನಾಡು ಸರಕಾರವೂ ಪುಸ್ತಕ ಚೀಲದ ಭಾರವನ್ನು ಕಡಿಮೆ ಮಾಡಲು ಕೆಲವೊಂದು ಕ್ರಮಗಳನ್ನು ಕೈಗೊಂಡಿದೆ. ಮಹಾರಾಷ್ಟ್ರ ಸರಕಾರ ಪಾಟೀ ಚೀಲದ ಭಾರವನ್ನು ಅಧ್ಯಯನ ಮಾಡುವ ಸಲುವಾಗಿಯೇ ಸಮಿತಿಯೊಂದನ್ನು ನೇಮಿಸಿತ್ತು. ಈ ಸಮಿತಿ ಭಾರ ಕಡಿಮೆ ಮಾಡಲು ಸುಮಾರು 44 ಶಿಫಾರಸುಗಳನ್ನು ಮಾಡಿದೆ. ಪುಸ್ತಕ ಚೀಲದ ಭಾರಕ್ಕೆ ನಿರ್ದಿಷ್ಟ ಮಾನದಂಡಗಳು ಇಲ್ಲದಿದ್ದರೂ ಮಕ್ಕಳ ತೂಕದ ಶೇ. 10 ಮೀರಬಾರದೆಂಬ ಸೂತ್ರವನ್ನು ಹೆಚ್ಚಿನ ದೇಶಗಳು ಅನುಸರಿಸುತ್ತಿವೆ.  ಯುರೋಪ್‌, ಸಿಂಗಾಪುರ, ಅಮೆರಿಕ ಮತ್ತಿತರ ಮುಂದುವರಿದ ದೇಶಗಳಲ್ಲಿ ಈ ಮಾನದಂಡವನ್ನು ಅನುಸರಿಸ ಲಾಗುತ್ತಿದೆ. ಕೆಲವು ದೇಶಗಳು ಶಾಲೆಗೆ ಬೋಧನೆ ವಿಧಾನವನ್ನೇ ಬದಲಾಯಿಸಿ ಪುಸ್ತಕ ಒಯ್ಯುವ ಪದ್ಧತಿಯನ್ನೇ ರದ್ದುಪಡಿಸಿವೆ. ಭಾರೀ ತೂಕದ ಶಾಲಾ ಬ್ಯಾಗ್‌ಗಳನ್ನು ಹೊತ್ತುಯ್ಯುವುದರಿಂದ ಮಕ್ಕಳು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಬೆನ್ನು ನೋವು, ಭುಜ ನೋವು ಮತ್ತಿತರ ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳಲು ಪಾಟೀ ಚೀಲದ ಭಾರವೇ ಕಾರಣ ಎನ್ನುವುದು ವೈಜ್ಞಾನಿಕ ಅಧ್ಯಯನಗಳಿಂದ ದೃಢಪಟ್ಟಿರುವ ವಿಚಾರ. ಅಂತೆಯೇ ಮಕ್ಕಳ ಮಾನಸಿಕ ಸ್ಥಿತಿಯ ಮೇಲೂ ಈ ಭಾರ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಂಡುಕೊಳ್ಳಲಾಗಿದೆ. 

ಪುಸ್ತಕದ ಬ್ಯಾಗಿನಲ್ಲಿ ಪಠ್ಯ ಪುಸ್ತಕದ ಜತೆಗೆ ಒಂದೊಂದು ಪಠ್ಯಕ್ಕೂ ಎರಡೆರಡು ನೋಟ್‌ ಪುಸ್ತಕಗಳು, ವರ್ಕ್‌ ಬುಕ್‌, ಡ್ರಾಯಿಂಗ್‌ ಬುಕ್‌ , ಮ್ಯಾಪ್‌ ಕಂಪಾಸ್‌ ಬಾಕ್ಸ್‌, ಪೆನ್‌ ಬಾಕ್ಸ್‌ ಎಂದು ಹಲವು ಸರಕುಗಳಿರುತ್ತವೆ. ಜತೆಗೆ  ಊಟದ ಬುತ್ತಿಯ ಚೀಲ, ಕೊಡೆ ಹಾಗೂ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಂಗೀತ  ಮತ್ತಿತರ ಚಟುವಟಿಕೆಗಳ ಉಪಕರಣಗಳನ್ನು ಮಗು ಹೊತ್ತು ಕೊಂಡು ಹೋಗಬೇಕು. ಒಂದು ಸಮೀಕ್ಷೆ ಪ್ರಕಾರ ಸರಕಾರಿ ಶಾಲೆಗಳ ಮಕ್ಕಳಿಗಿಂತ ಖಾಸಗಿ ಶಾಲೆಗಳ ಮಕ್ಕಳ ಚೀಲವೇ ಹೆಚ್ಚು ಭಾರವಾಗಿರುತ್ತದೆಯೆಂತೆ. ಕೇರಳದ ಶಾಲೆಯೊಂದು ಮಕ್ಕಳ ಪುಸ್ತಕ ಚೀಲವನ್ನು ತರಲೆಂದೇ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿ ಗಮನ ಸೆಳೆದಿತ್ತು.  ಪಾಟೀ ಚೀಲದ ಭಾರವನ್ನು ಕಡಿಮೆಗೊಳಿಸಲು ಹಲವು ಪ್ರಯೋಗಗಳನ್ನು ಮಾಡಲಾಗಿದೆ, ಶಾಲೆಗೊಂದು ಮನೆಗೊಂದು ಎಂಧು ಎರಡೆರಡು ಪುಸ್ತಕಗಳ ಸೆಟ್‌ ಒದಗಿಸುವ ಪ್ರಯತ್ನ ವಿಫ‌ಲಗೊಂಡಿದೆ.ಶಾಲೆಯಲ್ಲೇ ಲಾಕರ್‌ ಒದಗಿಸುವ ಪ್ರಸ್ತಾವವನ್ನು ಕಾರ್ಯಗತಗೊಳಿಸಲು ಹೆಚ್ಚಿನ ಶಾಲೆಗಳು ಮುಂದಾಗಿಲ್ಲ. ತಮಿಳುನಾಡಿನಲ್ಲಿ ಸೆಮಿಸ್ಟರ್‌ ಪ್ರಕಾರ ಪುಸ್ತಕಗಳನ್ನು ನಾಲ್ಕು ಭಾಗ ಮಾಡಿ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಕೇಂದ್ರ ಸರಕಾರ ಅನುಸರಿಸಲು ಹೊರಟಿರುವುದು ಈ ವಿಧಾನವನ್ನೇ. ಜತೆಗೆ ಶಾಲೆಗಳನ್ನು ಡಿಜಜಿಟಲ್‌ ಬೋಧನೆಗೆ ಒತ್ತುಕೊಟ್ಟು ಕ್ರಮೇಣ ಇಡೀ ಶಿಕ್ಷಣ ವ್ಯವಸ್ಥೆಯನ್ನು ಮಾರ್ಪಾಡುಗೊಳಿಸುವ ಇರಾದೆಯನ್ನು ಸರಕಾರ ಹೊಂದಿದೆ. ಇದಾದರೆ ಮಕ್ಕಳನ್ನು ಬಹುಕಾಲದಿಂದ ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗುತ್ತದೆ.

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.