ಕನಸೆಂಬ ಕುದುರೆಯನೇರಿ


Team Udayavani, Mar 18, 2017, 11:31 AM IST

eradu-kanasu.jpg

ಅನಾಥ ಮಕ್ಕಳೇ ಆತನ ಪ್ರಪಂಚ. ಪ್ರಚಾರದ ಹುಚ್ಚಿಲ್ಲ. ಸೇವೆಯಲ್ಲೇ ಖುಷಿ ಕಾಣುವ ಸ್ವಭಾವ ಆತನದು. ಆತನ ವಯಸ್ಸಿನ ಹುಡುಗರು ಸ್ಟೈಲಿಶ್‌ ಲೈಫ್ ನಡೆಸುತ್ತಿದ್ದರೆ ಈತ ಮಾತ್ರ ಅನಾಥಾಶ್ರಮ ನಡೆಸುತ್ತಾ ಅದರಲ್ಲೇ ಖುಷಿ ಕಾಣುತ್ತಾನೆ. ಮುತ್ತುವಿನ ಈ ಕಾರ್ಯಕ್ಕೆ ಪ್ರೇರಣೆಯೇನು, ಅದರ ಉದ್ದೇಶವೇನು ಎಂಬ ತಿಳಿಯುವ ಕುತೂಹಲವಿದ್ದರೆ ನೀವು ಎರಡೂವರೆ ಗಂಟೆ ಸೀಟಿಗೆ ಅಂಟಿಕೊಂಡು ಕೂರಲೇಬೇಕು.

ಕನಸಿನ ದೀರ್ಘ‌ ಪಯಣದಲ್ಲಿ ನೀವು ಸಾಕಷ್ಟು ವಿಷಯಗಳನ್ನು ಬೇಕೋ ಬೇಡವೋ ಕಣ್ತುಂಬಿಕೊಳ್ಳಲೇಬೇಕು. ನಿರ್ದೇಶಕ ಮದನ್‌ ಅವರ ಸಿನಿಮಾ ಪ್ರೀತಿಯನ್ನು ಹಾಗೂ ಅವರು ಆಲೋಚಿಸಿದ ರೀತಿಯನ್ನು ಮೆಚ್ಚಲೇಬೇಕು. ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಯಾವ ವರ್ಗಕ್ಕೂ ಮೋಸ ಆಗಬಾರದು ಎಂಬ ಕಾರಣಕ್ಕೆ ಲವ್‌, ಆ್ಯಕ್ಷನ್‌, ಸೆಂಟಿಮೆಂಟ್‌, ಕಾಮಿಡಿ, ಕಲರ್‌ಫ‌ುಲ್‌ ಹಾಡು, ಫ್ಲ್ಯಾಶ್‌ಬ್ಯಾಕ್‌ ಸ್ಟೋರಿ … ಹೀಗೆ ಎಲ್ಲವನ್ನು ಕಟ್ಟಿಕೊಟ್ಟಿದ್ದಾರೆ.

ಹಾಗಾಗಿ, “ಸುಖ-ದುಃಖ’ದ ಸಮ್ಮಿಲನದಂತೆ ಈ ಸಿನಿಮಾ ಮೂಡಿಬಂದಿದೆ. ಎಲ್ಲವನ್ನು ಒಂದೇ ಸಿನಿಮಾದಲ್ಲಿ ನೀಡುವ ಪ್ರಯತ್ನವೇ ಸಿನಿಮಾದ ಮೈನಸ್‌ ಪಾಯಿಂಟ್‌ ಎಂದರೆ ನಿರ್ದೇಶಕರಿಗೆ ಬೇಸರವಾಗಬಹುದು. ಹಾಗೆ ನೋಡಿದರೆ ಚಿತ್ರದ ಒನ್‌ಲೈನ್‌ ಚೆನ್ನಾಗಿದೆ. ಅನಾಥ ಮಕ್ಕಳನ್ನು ಯಾವ ರೀತಿ ದಂಧೆಗೆ ಬಳಸುತ್ತಾರೆಂಬ ಲೈನ್‌ ಇಟ್ಟುಕೊಂಡು ಸಿನಿಮಾ ಆರಂಭಿಸಿದ ಮದನ್‌ ಇಂಟರ್‌ವಲ್‌ ನಂತರ ಅದನ್ನು ಮೊಟಕುಗೊಳಿಸಿ ಬೇರೆಯೇ ಲೋಕವನ್ನು ತೋರಿಸಿದ್ದಾರೆ.

ಹಾಗಾಗಿ, ಒಂದು ಟಿಕೆಟ್‌ನಲ್ಲಿ ಎರಡು ಸಿನಿಮಾ ನೋಡಿದ ಅನುಭವ ನಿಮಗೆ ಆಗುತ್ತದೆ. ಆದರೆ, ಆ ಲೈನ್‌ ಅನ್ನು ಮತ್ತಷ್ಟು ಬೆಳೆಸಿಕೊಂಡು ಹೋಗಿದ್ದರೆ “ಕನಸು’ ಕಲರ್‌ಫ‌ುಲ್‌ ಹಾಗೂ ಒಂದು ಸೀರಿಯಸ್‌ ವಿಷಯದ ಸಿನಿಮಾವಾಗುತ್ತಿತ್ತು. ಆದರೆ, ನಿರ್ದೇಶಕರಿಗೆ ಫ್ಯಾಮಿಲಿ ಅಟ್ಯಾಚ್‌ಮೆಂಟ್‌ ಜಾಸ್ತಿ. ಹಾಗಾಗಿ, ತುಂಬಿದ ಕುಟುಂಬದ ಸಂಭ್ರಮ, ಸಡಗರ, ನೋವು-ನಲಿವನ್ನು ಸ್ವಲ್ಪ ಜಾಸ್ತಿಯೇ ತೋರಿಸಿದ್ದಾರೆ. 

ನಾಯಕನ ಕಾಯಕದ ಹಿಂದಿನ ಉದ್ದೇಶವನ್ನು ಹೇಳುವುದಕ್ಕಾಗಿ ಫ್ಲ್ಯಾಶ್‌ಬ್ಯಾಕ್‌ ಮೊರೆ ಹೋದ ನಿರ್ದೇಶಕರು ಸಿನಿಮಾ ಮುಗಿಯಲು ಹತ್ತು ನಿಮಿಷವರೆಗೂ ಆ ಫ್ಲ್ಯಾಶ್‌ಬ್ಯಾಕ್‌ನಿಂದ ಹೊರಬಂದಿಲ್ಲ. ಹಾಗಾಗಿ, ಚಿತ್ರ ಆರಂಭವಾದಾಗ ನೋಡಿದ ನಾಯಕ ಕಾಯಕ ಮತ್ತೆ ನಿಮಗೆ ಸಿಗೋದೇ ಇಲ್ಲ. ಚಿತ್ರದ ಮೊದಲರ್ಧವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ನಿರೂಪಣೆ ವಿಷಯದಲ್ಲೂ ಇಲ್ಲಿ ನಿರ್ದೇಶಕರ ಕೆಲಸವನ್ನು ಮೆಚ್ಚಬಹುದು.

ಆದರೆ, ಇಂಟರ್‌ವಲ್‌ ನಂತರ ಮಾತ್ರ ಕೆಟ್ಟ ರಸ್ತೆಯಲ್ಲಿ ಸಾಗುವ ವಾಹನದಂತೆ ಇಡೀ ಸಿನಿಮಾ ನಿಧಾನಗತಿಯಲ್ಲೇ ಸಾಗುತ್ತದೆ. ಇಲ್ಲಿ ಸಾಕಷ್ಟು ಅನಾವಶ್ಯಕ ದೃಶ್ಯಗಳನ್ನು ತರಲಾಗಿದೆ. ನಿರ್ದೇಶಕರ ಕಾಮಿಡಿ ಪ್ರೀತಿಯನ್ನೇನೋ ಮೆಚ್ಚಬಹುದು. ಆದರೆ, ಆ ಪ್ರೀತಿ ಮಾತ್ರ ಇಲ್ಲಿ ಸ್ವಲ್ಪ ಅತಿಯಾದ ಕಾರಣ ತುಂಬಾ ಉದ್ದುದ ಕಾಮಿಡಿ ದೃಶ್ಯಗಳನ್ನು ಇಟ್ಟಿದ್ದಾರೆ. ಇವೆಲ್ಲದಕ್ಕೆ ಕತ್ತರಿ ಹಾಕಿದ್ದರೆ ಸಿನಿಮಾದ ಅವಧಿ ಕಡಿಮೆಯಾಗಿ, ಕಥೆಗೆ ಮತ್ತಷ್ಟು ಮಹತ್ವ ಬರುತ್ತಿತ್ತು.  

ಫ್ಯಾಮಿಲಿ ಡ್ರಾಮಾ ಇಷ್ಟಪಡುವವರಾದರೆ “ಎರಡು ಕನಸು’ ನೋಡಲಡ್ಡಿಯಿಲ್ಲ. ಜಾತ್ರೆ, ಕಲರ್‌ಫ‌ುಲ್‌ ಹಾಡು ಎಲ್ಲವನ್ನೂ ನೀವು ಕಣ್ತುಂಬಿಕೊಳ್ಳಬಹುದು.  ನಾಯಕ ವಿಜಯರಾಘವೇಂದ್ರ “ಕಸ್ತೂರಿ ನಿವಾಸ’ದ ಮುತ್ತುವಾಗಿ, ಕುಟುಂಬದ ಕಣ್ಮಣಿಯಾಗಿ ಇಷ್ಟವಾಗುತ್ತಾರೆ. ಈ ಬಾರಿ ಯಾವ ಆ್ಯಕ್ಷನ್‌ ಹೀರೋಗೂ ಕಮ್ಮಿ ಇಲ್ಲದಂತೆ ಫೈಟ್‌ ಮಾಡಿದ್ದಾರೆ. ನಾಯಕಿಯರಾದ ಕ್ರಿಷಿ ತಾಪಂಡ, ಕಾರುಣ್ಯ ರಾಮ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಕುರಿ ಪ್ರತಾಪ್‌, ಪೆಟ್ರೋಲ್‌ ಪ್ರಸನ್ನ ಸೇರಿದಂತೆ ಇತರ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. 

ಚಿತ್ರ: ಎರಡು ಕನಸು
ನಿರ್ಮಾಣ: ಅಶೋಕ್‌
ನಿರ್ದೇಶನ: ಮದನ್‌
ತಾರಾಗಣ: ವಿಜಯ ರಾಘವೇಂದ್ರ, ಕ್ರಿಷಿ ತಾಪಂಡ, ಕಾರುಣ್ಯ ರಾಮ್‌, ಪೆಟ್ರೋಲ್‌ ಪ್ರಸನ್ನ, ಕುರಿ ಪ್ರತಾಪ್‌ ಮತ್ತಿತರರು. 

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.