ಮೊಮ್ಮಗಳನ್ನು ರಕ್ಷಿಸಲು ಕುಡುಕ ಮಗನನ್ನು ಕೊಂದ ತಾಯಿ
Team Udayavani, Aug 18, 2017, 11:48 AM IST
ಮುಂಬಯಿ : ಮಾದಕ ದ್ರವ್ಯ ವ್ಯಸನಿಯಾಗಿರುವ ತನ್ನ 45ರ ಹರೆಯದ ಮಗ ಕುಡಿದ ಅಮಲಿನಲ್ಲಿ ರಾತ್ರಿ ಮನೆಗೆ ಬಂದು ತನ್ನನ್ನು ಹಾಗೂ ತನ್ನ ಮೊಮ್ಮಗಳನ್ನು ಹೊಡೆದು ಚಚ್ಚಿ ಸಾಯಿಸುವುದನ್ನು ತಡೆಯಲೆತ್ನಿಸಿದ ಆತನ ತಾಯಿ ಇದ್ರಿಸ್ ಎಂಬಾಕೆ ತನ್ನ ದುಪಟ್ಟಾದಿಂದಲೇ ಆತನ ಕುತ್ತಿಗೆಯನ್ನು ಬಿಗಿದು ಸಾಯಿಸಿದ ಘಟನೆ ಮುಂಬಯಿಯಲ್ಲಿ ಇದೇ ಆಗಸ್ಟ್ 15ರಂದು ನಡೆಯಿತು.
ಅನ್ವರಿ ಇದ್ರಿಸ್ ತನ್ನ ಕುಟುಂಬದವರೊಂದಿಗೆ ಮುಂಬಯಿಯಲ್ಲಿ ನೆಲೆಸಿದ್ದಾಳೆ. ಎರಡು ವರ್ಷಗಳ ಹಿಂದೆ ಆಕೆಯ ಮಗ ನದೀಮ್ ಅಲಹಾಬಾದ್ನ ಹುಡುಗಿಯನ್ನು ಮದುವೆಯಾಗಿದ್ದ. ಆದರೆ, ಮದುವೆಯಾದಂದಿನಿಂದಲೂ ಇದ್ರಿಸ್ಳ ಕುಡಕ ಮಗ ನದೀಮ್ ದಿನ ನಿತ್ಯ ಕುಡಿದು ಮನೆಗೆ ಬಂದು ಪತ್ನಿಯನ್ನು ಹೊಡೆಯುತ್ತಿದ್ದ. ಇದರಿಂದ ಬೇಸತ್ತ ಆತನ ಪತ್ನಿ ಮನೆ ಬಿಟ್ಟು ಹೋಗಿದ್ದಳು.
ಆಗಸ್ಟ್ 15ರ ರಾತ್ರಿ ಎಂದಿನಂತೆ ಕಂಠಪೂರ್ತಿ ಕುಡಿದು ನದೀಮ್ ಮನೆಗೆ ಬಂದಿದ್ದ . ಈತನಿಂದ ಮನೆಯವರಿಗೆ ಅಪಾಯ ಇರುವುದನ್ನು ಮನಗಂಡ ತಾಯಿ ಇದ್ರಿಸ್ ಮನೆಮಂದಿಯನ್ನು ಪಕ್ಕದ ಮನೆಗೆ ಮಲಗಲು ಕಳುಹಿಸಿದ್ದಳು.
ಇದರಿಂದ ವ್ಯಗ್ರಗೊಂಡ ನದೀಮ್ ತಾಯಿಯನ್ನೇ ಹೊಡೆಯಲಾರಂಭಸಿದ. ಆತ ತನ್ನ ಮಗಳ ಮೇಲೂ ಹಿಂಸೆ ಎಸಗಿದೆ. ಹತಾಶಳಾದ ತಾಯಿ ಇದ್ರಿಸ್ ಬೇರೆ ಉಪಾಯವಿಲ್ಲದೆ ಮಗ ನದೀಮ್ನ ಕುತ್ತಿಗೆಗೆ ತನ್ನ ದುಪಟ್ಟಾ ಬಿಗಿದು ಆತನನ್ನು ಸಾಯಿಸಿದಳು.
ಪೊಲೀಸರೀಗ ಇದ್ರಿಸ್ ಳನ್ನು ಬಂಧಿಸಿದ್ದಾರೆ. ಆ.31ರ ವರೆಗೆ ಆಕೆಗೆ ಕೋರ್ಟ್ ಪೊಲೀಸ್ ಕಸ್ಟಡಿ ವಿಧಿಸಿದೆ. ಪೊಲೀಸರು ಐಪಿಸಿ ಸೆ.302ರ ಪ್ರಕಾರ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ