ಗುಜರಾತ್‌ ಜಯಕ್ಕೆ ರೈನಾ ನೆರವು


Team Udayavani, Apr 22, 2017, 11:03 AM IST

Gujarath-22-4.jpg

ಕೋಲ್ಕತಾ: ನಾಯಕ ಸುರೇಶ್‌ ರೈನಾ ಅಮೋಘ ಆಟದಿಂದಾಗಿ ಗುಜರಾತ್‌ ಲಯನ್ಸ್‌ ತಂಡವು ಶುಕ್ರವಾರದ ಐಪಿಎಲ್‌ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದೆ. ಕೆಕೆಆರ್‌ ತಂಡದ 187 ರನ್ನಿಗೆ ಉತ್ತರವಾಗಿ ಗುಜರಾತ್‌ ಲಯನ್ಸ್‌ ತಂಡವು 18.2 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 188 ರನ್‌ ಗಳಿಸಿ ಜಯಭೇರಿ ಬಾರಿಸಿದೆ. ಇದು ಗುಜರಾತ್‌ ತಂಡದ ಎರಡನೇ ಗೆಲುವು ಆಗಿದೆ. ಆರನ್‌ ಫಿಂಚ್‌ ಮತ್ತು ಬ್ರೆಂಡನ್‌ ಮೆಕಲಮ್‌ ಮೊದಲ ವಿಕೆಟಿಗೆ 3.3 ಓವರ್‌ಗಳಲ್ಲಿ 42 ರನ್‌ ಪೇರಿಸುವ ಮೂಲಕ ಉತ್ತಮ ಆರಂಭ ಒದಗಿಸಿದರು. ಫಿಂಚ್‌ 15 ಎಸೆತಗಳಲ್ಲಿ 31 ರನ್‌ ಹೊಡೆದರೆ ಮೆಕಲಮ್‌ 17 ಎಸೆತಗಳಿಂದ 33 ರನ್‌ ಗಳಿಸಿದರು. ಜವಾಬ್ದಾರಿ ಅರಿತು ಆಡಿದ ರೈನಾ 46 ಎಸೆತಗಳಿಂದ 84 ರನ್‌ ಸಿಡಿಸಿ ತಂಡದ ಗೆಲುವು ಖಚಿತಪಡಿಸಿದರು. 9 ಬೌಂಡರಿ ಬಾರಿಸಿದ ಅವರು 4 ಸಿಕ್ಸರ್‌ ಸಿಡಿಸಿ ರಂಜಿಸಿದರು.


ಈ ಮೊದಲು ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕೋಲ್ಕತಾ ತಂಡವು ಸ್ಫೋಟಕ ಆರಂಭ ಪಡೆಯಿತು. ಸುನೀಲ್‌ ನಾರಾಯಣ್‌ ಅವರ ಸ್ಫೋಟಕ ಆಟದಿಂದಾಗಿ ಕೆಕೆಆರ್‌ ತಂಡವು ಕೇವಲ 3.2 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 45 ರನ್‌ ಪೇರಿಸಿತು. ಇದರಲ್ಲಿ ನಾರಾಯಣ್‌ ಪಾಲು 42 ರನ್‌. ವೇಗದ ಅರ್ಧಶತಕ ಸಿಡಿಸುವ ಸೂಚನೆಯಿತ್ತ ನಾರಾಯಣ್‌ 17 ಎಸೆತ ಎದುರಿಸಿ 42 ರನ್ನಿಗೆ ಔಟಾದರು. 9 ಬೌಂಡರಿ ಹೊಡೆದ ಅವರು 1 ಸಿಕ್ಸರ್‌ ಬಾರಿಸಿದರು. ಗಂಭೀರ್‌ ಮತ್ತು ಉತ್ತಪ್ಪ ಜವಾಬ್ದಾರಿಯಿಂದ ಆಡಿ ತಂಡದ ಮೊತ್ತ ಏರಿಸಲು ನೆರವಾದರು. ಅವರಿಬ್ಬರು ದ್ವಿತೀಯ ವಿಕೆಟಿಗೆ 69 ರನ್‌ ಪೇರಿಸಿದ್ದರು. ಗಂಭೀರ್‌ 33 ರನ್‌ ಗಳಿಸಿ ಔಟಾದರೆ ಉತ್ತಪ್ಪ ಬಿರುಸಿನ ಆಟವಾಡಿ 48 ಎಸೆತಗಳಿಂದ 72 ರನ್‌ ಹೊಡೆದರು. 8 ಬೌಂಡರಿ ಮತ್ತು 2ಸಿಕ್ಸರ್‌ ಬಾರಿಸಿದ ಅವರು ತಂಡ ಉತ್ತಮ ಸ್ಥಿತಿಗೆ ತಲುಪಲು ನೆರವಾದರು. ಉತ್ತಪ್ಪ ಔಟಾದ ಬಳಿಕ ತಂಡದ ರನ್‌ವೇಗ ಕುಸಿಯಿತು. ಅಂತಿಮವಾಗಿ ತಂಡ 5 ವಿಕೆಟಿಗೆ 187 ರನ್‌ ಗಳಿಸಿತು.

ಸ್ಕೋರ್‌ ಪಟ್ಟಿ
ಕೋಲ್ಕತಾ ನೈಟ್‌ರೈಡರ್
ಸುನೀಲ್‌ ನಾರಾಯಣ್‌ ಸಿ ಫಾಕ್ನರ್‌ ಬಿ ರೈನಾ    42
ಗೌತಮ್‌ ಗಂಭೀರ್‌    ಸಿ ರೈನಾ ಬಿ ಫಾಕ್ನರ್‌    33
ರಾಬಿನ್‌ ಉತ್ತಪ್ಪ ಸಿ ಮೆಕಲಮ್‌ ಬಿ ಕುಮಾರ್‌    72
ಮನೀಷ್‌ ಪಾಂಡೆ ಬಿ ಬಾಸಿಲ್‌ ಥಂಪಿ    24
ಯೂಸುಫ್ ಪಠಾಣ್‌ ಔಟಾಗದೆ    11
ಸೂರ್ಯ ಕೆ. ಯಾದವ್‌ ರನೌಟ್‌    1
ಶಕಿಬ್‌ ಅಲ್‌ ಹಸನ್‌ ಔಟಾಗದೆ    1
ಇತರ:   3

ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ)    187

ವಿಕೆಟ್‌ ಪತನ: 1-45, 2-114, 3-169, 4-184, 5-186 

ಬೌಲಿಂಗ್‌:
ಪ್ರವೀಣ್‌ ಕುಮಾರ್‌   2-0-24-1
ಜೇಮ್ಸ್‌ ಫಾಕ್ನರ್‌    4-0-38-1
ಬಾಸಿಲ್‌ ಥಂಪಿ    4-0-44-1
ಸುರೇಶ್‌ ರೈನಾ    2-00-11-1
ಧವಳ್‌ ಕುಲಕರ್ಣಿ    2-0-23-0
ರವೀಂದ್ರ ಜಡೇಜ    4-0-31-0
ಡ್ವೇನ್‌ ಸ್ಮಿತ್‌    2-0-14-0

ಗುಜರಾತ್‌ ಲಯನ್ಸ್‌
ಆರನ್‌ ಫಿಂಚ್‌    ಸಿ ಪಾಂಡೆ ಬಿ ನೈಲ್‌    31
ಬ್ರೆಂಡನ್‌ ಮೆಕಲಮ್‌    ಸಿ ಪಾಂಡೆ ಬಿ ವೋಕ್ಸ್‌    33
ಸುರೇಶ್‌ ರೈನಾ    ಸಿ ಪಾಂಡೆ ಬಿ ಕುಲದೀಪ್‌    84
ದಿನೇಶ್‌ ಕಾರ್ತಿಕ್‌    ಸಿ ಗಂಭೀರ್‌ ಬಿ ನೈಲ್‌    2
ಇಶಾನ್‌ ಕಿಶನ್‌    ಸಿ ಉಮೇಶ್‌ ಬಿ ಕುಲದೀಪ್‌    4
ಡ್ವೇನ್‌ ಸ್ಮಿತ್‌    ಬಿ ಉಮೇಶ್‌    5
ರವೀಂದ್ರ ಜಡೇಜ    ಔಟಾಗದೆ    19
ಜೇಮ್ಸ್‌ ಫಾಕ್ನರ್‌    ಔಟಾಗದೆ    4

ಇತರ:    5
ಒಟ್ಟು (18.2 ಓವರ್‌ಗಳಲ್ಲಿ 6 ವಿಕೆಟಿಗೆ)    188

ವಿಕೆಟ್‌ ಪತನ: 1-42, 2-73, 3-81, 4-115, 5-122, 6-180

ಬೌಲಿಂಗ್‌:
ಶಕಿಬ್‌ ಅಲ್‌ ಹಸನ್‌      3-0-31-0
ಸುನೀಲ್‌ ನಾರಾಯಣ್‌  4-0-42-0
ನಥನ್‌ ಕೌಲ್ಟರ್‌ ನೈಲ್‌  3.2-0-41-2
ಕ್ರಿಸ್‌ ವೋಕ್ಸ್‌             2-0-20-1
ಕುಲದೀಪ್‌ ಯಾದವ್‌    4-0-33-2
ಉಮೇಶ್‌ ಯಾದವ್‌     2-0-17-1

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.