ಬಿಡುಗಡೆ ಭರಾಟೆ ಕಡಿಮೆ ಆಗಿದೆ


Team Udayavani, May 26, 2017, 3:31 PM IST

hebuli.jpg

-ಇದು ಕಳೆದ ವರ್ಷ ಹಾಗೂ ಈ ವರ್ಷದ ಮೇ ಕೊನೆ ವಾರಕ್ಕೆ ಬಿಡುಗಡೆಯಾದ ಕನ್ನಡ ಸಿನಿಮಾಗಳ ಸಂಖ್ಯೆ. ಕಳೆದ ವರ್ಷ  ಮೇ ಕೊನೆಯ ವಾರಕ್ಕೆ 83 ಸಿನಿಮಾಗಳು ಬಿಡುಗಡೆಯಾಗಿದ್ದರೆ ಈ ವರ್ಷ ಮೇಗೆ 67 ಸಿನಿಮಾಗಳು ಬಿಡುಗಡೆಯಾಗಿವೆ.

ತುಳು ಹಾಗೂ ಇತರೆ ಪ್ರಾದೇಶಿಕ ಭಾಷೆಗಳ ಚಿತ್ರಗಳನ್ನು ಸೇರಿಸಿದರೆ, ಸಂಖ್ಯೆ 70 ದಾಟುತ್ತದೆ. ಅಲ್ಲಿಗೆ ಕಳೆದ ವರ್ಷಕ್ಕಿಂತ ಈ ವರ್ಷ 16 ಸಿನಿಮಾಗಳ ಬಿಡುಗಡೆ ಕಡಿಮೆಯಾಗಿವೆ.

ಈ ವರ್ಷ ಸಿನಿಮಾ ಕಡಿಮೆ ಯಾಗಲು ಸಾಕಷ್ಟು ಕಾರಣಗಳಿರಬಹುದು. ಮುಖ್ಯವಾಗಿ ಚಿತ್ರತಂಡಗಳು ನೀಡುವ ಕಾರಣ ಕ್ರಿಕೆಟ್‌ . ಜೊತೆಗೆ ಸ್ಟಾರ್‌ ಸಿನಿಮಾಗಳು. ಈ 67 ಸಿನಿಮಾಗಳಲ್ಲಿ ಬಹುತೇಕ ಹೊಸಬರ ಸಿನಿಮಾಗಳು ಸೇರಿಕೊಂಡಿವೆ. ಕ್ರಿಕೆಟ್‌ ಮತ್ತು ಸ್ಟಾರ್‌ ಸಿನಿಮಾಗಳು ಇಲ್ಲದೇ ಇರುತ್ತಿದ್ದರೆ ಮತ್ತಷ್ಟು ಹೊಸಬರ ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು.

ಶ್ರೀಕಂಠ’, “ರಾಜ್‌ಕುಮಾರ’, “ಚಕ್ರವರ್ತಿ’, “ಹೆಬ್ಬುಲಿ’, “ಮಾಸ್ತಿಗುಡಿ’, “ಬಂಗಾರ – ಸನ್‌ ಆಫ್ ಬಂಗಾರದ ಮನುಷ್ಯ’, ಈ ವಾರ “ಪಟಾಕಿ’ … ಈ ಐದು ತಿಂಗಳಲ್ಲಿ ಬಹುತೇಕ ಎಲ್ಲಾ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗಿವೆ. ಸಹಜವಾಗಿಯೇ ಈ ಎಲ್ಲಾ ಸಿನಿಮಾಗಳಿಗೆ ಹೆದರಿ ಹೊಸಬರು ಹಿಂದೇಟು ಹಾಕಿರುವುದು ಸುಳ್ಳಲ್ಲ. ಹಾಗಂತ ಅದಿಲ್ಲಿ ವಿಷಯವಲ್ಲ. ಈ ಐದು ತಿಂಗಳಲ್ಲಿ ಬಿಡುಗಡೆಯಾಗಿರುವ ಸಿನಿಮಾಗಳು ಮತ್ತು ಅದರಲ್ಲಿನ ವಿಭಿನ್ನತೆಯನ್ನು ಗಮನಿಸಬಹುದು. ಪಕ್ಕಾ ಸ್ಟಾರ್‌ ಸಿನಿಮಾಗಳ ಜೊತೆಗೆ ಹೊಸಬರ ಹೊಸ ಬಗೆಯ ಹಾಗೂ ಒಂದಷ್ಟು ನಿರೀಕ್ಷೆ ಹುಟ್ಟಿಸಿ, ನಿರೀಕ್ಷೆಯ ಮಟ್ಟ ತಲುಪಿದ ಹಾಗೂ ತಲುಪದ ಸಿನಿಮಾಗಳು ಕೂಡಾ ಇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಐದು ತಿಂಗಳಲ್ಲಿ ಬಿಡುಗಡೆಯಾಗಿರುವ ಸ್ಟಾರ್‌ ಸಿನಿಮಾಗಳ ಸಂಖ್ಯೆಯೂ ಹೆಚ್ಚಿದೆ ಮತ್ತು ಸಕ್ಸಸ್‌ ರೇಟ್‌ ಕೂಡಾ. ಕಳೆದ ವರ್ಷ ಮೇ ಹೊತ್ತಿಗೆ ಮೂರು ಸ್ಟಾರ್‌ ಸಿನಿಮಾಗಳು ಬಿಡುಗಡೆಯಾಗಿದ್ದವಷ್ಟೇ. ವರ್ಷಾರಂಭದಲ್ಲಿ ಶಿವರಾಜಕುಮಾರ್‌, “ಕಿಲ್ಲಿಂಗ್‌ ವೀರಪ್ಪನ್‌’ ರಿಲೀಸ್‌ ಆದರೆ, ಫೆಬ್ರವರಿಯಲ್ಲಿ “ಶಿವಲಿಂಗ’ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತು.

ಇನ್ನು, ಕಾರಣಾಂತರಗಳಿಂದ ನಿಂತು ಹೋಗಿದ್ದ ದರ್ಶನ್‌ ಅವರ “ವಿರಾಟ್‌’ ಚಿತ್ರ ಜನವರಿಯಲ್ಲಿ ಬಿಡುಗಡೆಯಾದರೆ, ಏಪ್ರಿಲ್‌ನಲ್ಲಿ ಪುನೀತ್‌ ಅಭಿನಯದ “ಚಕ್ರವ್ಯೂಹ’ ಬಿಡುಗಡೆ ಕಂಡಿತ್ತು. ಆದರೆ, ಈ ವರ್ಷ ಮೇ ಹೊತ್ತಿಗೆ ಬರೋಬ್ಬರಿ
ಏಳು ಸಿನಿಮಾಗಳು ಬಿಡುಗಡೆಯಾಗಿವೆ. 

“ರಾಜ್‌ಕುಮಾರ’, “ಹೆಬ್ಬುಲಿ’ ಚಿತ್ರಗಳು ದೊಡ್ಡ ಮಟ್ಟದ ಯಶಸ್ಸು ಕಂಡರೆ, ಸದ್ಯ “ಬಂಗಾರ ಸನ್‌ ಆಫ್ ಬಂಗಾರದ ಮನುಷ್ಯ’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಶೇಷವೆಂದರೆ, ಈ ವರ್ಷವೂ ಕಳೆದ ವರ್ಷದಂತೆ ಮೇ ಹೊತ್ತಿಗೆ ಶಿವರಾಜಕುಮಾರ್‌ ಅವರ ಎರಡು ಚಿತ್ರಗಳು ಬಿಡುಗಡೆಯಾಗಿವೆ.

ಈ ಐದು ತಿಂಗಳಲ್ಲಿ ಬಿಡುಗಡೆಯಾದ ಒಂದಷ್ಟು ಸಿನಿಮಾಗಳು ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದವು. ಟ್ರೇಲರ್‌, ಹಾಡು ನೋಡಿದವರಿಗೆ ಸಹಜವಾಗಿಯೇ ಆ ಸಿನಿಮಾಗಳ ಬಗ್ಗೆ ನಿರೀಕ್ಷೆ, ಕುತೂಹಲ ಹೆಚ್ಚಿತ್ತು. ಆದರೆ, ಚಿತ್ರ ಬಿಡುಗಡೆಯಾದ ಮೇಲೆ ಆ ಚಿತ್ರಗಳು ನಿರೀಕ್ಷೆಯ ಮಟ್ಟ ತಲುಪಲಿಲ್ಲ.

“ಚಕ್ರವರ್ತಿ’, “ಪುಷ್ಪಕ ವಿಮಾನ’, “ಎರಡನೇ ಸಲ’, “ಮಾಸ್ತಿಗುಡಿ’, “ಉರ್ವಿ’, “ರೋಗ್‌’ ಸೇರಿದಂತೆ ಒಂದಷ್ಟು ಸಿನಿಮಾಗಳು ನಾನಾ ಕಾರಣಗಳಿಂದಾಗಿ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಇದು ಒಂದಾದರೆ, ಈ ಐದು ತಿಂಗಳಲ್ಲಿ ಒಂದಷ್ಟು ಪ್ರಯೋಗಗಳ ಮೂಲಕ ಕೆಲವು ಸಿನಿಮಾಗಳು ಸುದ್ದಿಯಾಗಿ ಚರ್ಚೆಯ ವಸ್ತುವಾಗಿದ್ದನ್ನು ಇಲ್ಲಿ ಗಮನಿಸಬಹುದು.

“ಪುಷ್ಪಕ ವಿಮಾನ’, “ರಾಗ’, “ಬ್ಯೂಟಿಫ‌ುಲ್‌ ಮನಸುಗಳು’, “ಅಲ್ಲಮ’, “ಚೌಕ’, “ಅಮರಾವತಿ’, “ಶುದಿಟಛಿ’ ಚಿತ್ರಗಳು ತಮ್ಮ ಕಥಾವಸ್ತುವಿನಿಂದಾಗಿ ಚರ್ಚೆಗೆ ಗ್ರಾಸವಾಗಿದ್ದವು. ಇಲ್ಲಿನ ಚಿತ್ರಗಳು ಕಮರ್ಷಿಯಲ್‌ ಆಗಿ ಯಶಸ್ಸು ಕಾಣದೇ ಹೋದರೂ ವಿಭಿನ್ನ ಪ್ರಯತ್ನಗಳ ಮೂಲಕ ಗಮನ ಸೆಳೆದಿದ್ದನ್ನು ಅಲ್ಲಗಳೆಯುವಂತಿಲ್ಲ.

ಕೆಲವು ವರ್ಷಗಳು ಹೊಸಬರ ಪಾಲಿಗೆ ಆಶಾದಾಯಕ ಹಾಗೂ ಸಾಕಷ್ಟು ಯಶಸ್ಸನ್ನು ತಂದುಕೊಟ್ಟರೆ ಈ ಐದು ತಿಂಗಳಲ್ಲಿ ಅಂತಹ ಯಾವುದೇ ಯಶಸ್ಸು ಹೊಸಬರಿಗೆ ಸಿಕ್ಕಿಲ್ಲ ಎಂಬುದು ಕೂಡಾ ಗಮನಾರ್ಹ ಅಂಶ. ಐದು ತಿಂಗಳಲ್ಲಿ ಸ್ಟಾರ್‌ಗಳ ಹವಾ ಜೋರಾಗಿ ನಡೆದಿದೆ ಎಂದರೆ ತಪ್ಪಲ್ಲ. ಕಲೆಕ್ಷನ್‌ ವಿಷಯದಲ್ಲೂ ತಮ್ಮ ಸಿನಿಮಾಗಳ ದಾಖಲೆಗಳನ್ನು ತಾವೇ ಮುರಿಯುತ್ತಾ ಮುಂದೆ ಸಾಗುತ್ತಿದ್ದಾರೆ. ಇದು ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಷಯದಿಂದ ಆಶಾದಾಯಕ ಬೆಳವಣಿಗೆಯಾದರೆ, ಸ್ಟಾರ್‌ ಗಳು ಕೂಡಾ ಕಮರ್ಷಿಯಲ್‌ ಜೊತೆ ಜೊತೆಗೆ ಹೊಸ ಬಗೆಯ ಕಥೆಗಳನ್ನು ಮಾಡಿದ್ದಾರೆ. ಅಂದಹಾಗೆ, ಐದು ತಿಂಗಳಾದರೂ ಅಕೌಂಟ್ ಓಪನ್‌ ಮಾಡದ ಸ್ಟಾರ್‌ ನಟ ಎಂದರೆ ಉಪೇಂದ್ರ ಹಾಗೂ ಯಶ್‌. ಈ ಐದು ತಿಂಗಳಲ್ಲಿ ಉಪೇಂದ್ರ ಅವರ ಯಾವುದೇ ಸಿನಿಮಾಗಳು ಬಿಡುಗಡೆಯಾಗಿಲ್ಲ. ಆದರೆ, ಅವರು ಒಪ್ಪಿಕೊಂಡ ಸಾಕಷ್ಟು ಹೊಸ ಹೊಸ ಸಿನಿಮಾಗಳು ಸುದ್ದಿಯಾದುವು. ಯಶ್‌ ಅವರ “ಕೆಜಿಎಫ್’ ಚಿತ್ರೀಕರಣದಲ್ಲಿದೆಯಷ್ಟೇ.

ಇದು ಐದು ತಿಂಗಳ ಕಥೆಯಾದರೆ ಮುಂದೆ ಸಾಕಷ್ಟು ಹೊಸಬರ ಹಾಗೂ ಸ್ಟಾರ್‌ ನಟರ ಮತ್ತಷ್ಟು ಸಿನಿಮಾಗಳು ಬಿಡುಗಡೆಯಾಗಲಿವೆ. ಶಿವರಾಜಕುಮಾರ್‌ ಅವರ “ಲೀಡರ್‌’, “ಟಗರು’, ಮುರುಳಿಯ “ಮμ¤’, ದರ್ಶನ್‌ “ತಾರಕ್‌’, ಸುದೀಪ್‌ “ದಿ ವಿಲನ್‌’, ವಿಜಯ್‌
“ಕನಕ’, ಪುನೀತ್‌ “ಅಂಜನಿಪುತ್ರ’, ಗಣೇಶ್‌ “ಮುಗುಳುನಗೆ’ ಸೇರಿದಂತೆ ಸಾಕಷ್ಟು ನಿರೀಕ್ಷಿತ ಚಿತ್ರಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿವೆ. ಸ್ಟಾರ್‌ಗಳ ಹವಾದ ಮುಂದೆ ಹೊಸಬರ “ಉಸಿರಾಟ’ ಹೇಗಿರುತ್ತೋ ನೋಡಬೇಕು.

– ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.