ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ: ಹರಿಶೇಖರನ್‌


Team Udayavani, Feb 23, 2021, 4:30 PM IST

ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ: ಹರಿಶೇಖರನ್‌

ಧಾರವಾಡ: ಪೊಲೀಸ್‌ ಪ್ರಶಿಕ್ಷಣಾರ್ಥಿಗಳುತರಬೇತಿ ನಂತರದ ತಮ್ಮ ಸೇವಾವಧಿಯಲ್ಲಿ ವೃತ್ತಿಗೆ ಪೂರ್ವದಲ್ಲಿ ಸ್ವೀಕರಿಸಿದ ಪ್ರತಿಜ್ಞೆಗೆ ಬದ್ಧರಾಗಿ ಮತ್ತು ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ರಾಜ್ಯ ಪೊಲೀಸ್‌ ಇಲಾಖೆ ತರಬೇತಿ ವಿಭಾಗದ ಪೊಲೀಸ್‌ ಮಹಾನಿರೀಕ್ಷಕ ಪಿ. ಹರಿಶೇಖರನ್‌ ಹೇಳಿದರು.

ಇಲ್ಲಿನ ಪೊಲೀಸ್‌ ತರಬೇತಿ ಶಾಲೆಯಲ್ಲಿ 6ನೇ ತಂಡದ ಪ್ರಶಿಕ್ಷಣಾರ್ಥಿ ನಾಗರಿಕ ಪೊಲೀಸ್‌ ಪೇದೆಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನಸಾಮಾನ್ಯರಿಗೆ ಇಲಾಖೆಕಾರ್ಯಕ್ರಮ, ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಬೇಕು. ಜನರ ಸಹಭಾಗಿತ್ವ, ಅಧಿಕಾರಿಗಳ ಸಹಕಾರದಿಂದ ಉತ್ತಮವಾಗಿಕಾರ್ಯ ನಿರ್ವಹಿಸಬಹುದು. ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಗ್ರಾಮವಾಸ್ತವ್ಯದಲ್ಲಿಪಾಲ್ಗೊಂಡು ಜನರಿಗೆ ಸುರಕ್ಷತೆ, ಶಾಂತಿ,ಸುವ್ಯವಸ್ಥೆ ಭಾವನೆ ಮೂಡಿಸಿ ಅವರು ಸಹಭಾಗಿತ್ವ ನೀಡುವಂತೆ ಪ್ರೇರೇಪಿಸಬೇಕು ಎಂದರು.

ಪ್ರಶಿಕ್ಷಣಾರ್ಥಿಗಳು ಉತ್ತಮವಾಗಿ ಪಥಸಂಚಲನ ಪ್ರದರ್ಶಿಸಿದ್ದಕ್ಕೆ ಪ್ರಶಿಕ್ಷಣಾರ್ಥಿಗಳ ತರಬೇತಿದಾರರಿಗೆ 10,000ರೂ. ಬಹುಮಾನ ಘೋಷಿಸಿದರು.ಹು-ಧಾ ಪೊಲೀಸ್‌ ಆಯುಕ್ತ ಲಾಬುರಾಮ್‌, ಎಸ್ಪಿ ಪಿ. ಕೃಷ್ಣಕಾಂತ, ರಾಜ್ಯದ ವಿವಿಧ ಪೊಲೀಸ್‌ ತರಬೇತಿಶಾಲೆಗಳ ಪ್ರಾಂಶುಪಾಲರು, ಅಧಿಕಾರಿಗಳುಪಾಲ್ಗೊಂಡಿದ್ದರು. ಪೊಲೀಸ್‌ ತರಬೇತಿಶಾಲೆಯ ಪ್ರಾಂಶುಪಾಲ ಎನ್‌.ಬಿ. ಜಾಧವ ಸ್ವಾಗತಿಸಿ, ವರದಿ ವಾಚನ ಮಾಡಿದರು.

ಪಥಸಂಚಲನದಲ್ಲಿ ವಿವಿಧ ತಂಡಗಳ ನೇತೃತ್ವವನ್ನು ಪ್ರಶಿಕ್ಷಣಾರ್ಥಿಗಳಾದ ಪಂಚಾಕ್ಷರಿಸಿದ್ದನಗೌಡ ಪಾಟೀಲ, ಶಬ್ಬೀರ ಎಂ, ಪ್ರದೀಪ ಕೆ., ಮಧುಚಂದ್ರ ಧಾರವಾಡ, ನಾಗರಾಜ ಕೆ. ಬರಡಿ, ನಾಗೇಂದ್ರಕುಮಾರ ಎನ್‌., ಯಲ್ಲಪ್ಪ ತೋಳಮಟ್ಟ, ಆನಂದ ವಿ.ವಿ.,ಆಕರ್ಷ ಎಂ.ಎಸ್‌., ಮಾರ್ತಾ.ಡಪ್ಪ, ಮಾಟ್ನರ್‌ ಅನಿಲಕುಮಾರ, ಪರಶಿವಮೂರ್ತಿಬಿ. ವಹಿಸಿದ್ದರು. ಎನ್‌.ಎ. ಮುತ್ತಣ್ಣ ಸ್ಮಾರಕ ಪೊಲೀಸ್‌ ಮಕ್ಕಳ ವಸತಿ ಶಾಲೆಯ ಪ್ರಾಚಾರ್ಯ ಡಾ| ವೈ.ಪಿ. ಕಲ್ಲನಗೌಡರ ನಿರೂಪಿಸಿದರು. ಪೊಲೀಸ್‌ ಇನ್ಸ್‌ಪೆಕ್ಟರ್‌ ಡಾ| ಗಿರೀಶ ಭೋಜನ್ನವರ ವಂದಿಸಿದರು.

341 ಪ್ರಶಿಕ್ಷಣಾರ್ಥಿಗಳು :

ನಾಗರಿಕ ಪೊಲೀಸ್‌ ಪೇದೆಗಳ ನಿರ್ಗಮನ ಪಥ ಸಂಚಲನದಲ್ಲಿ 341 ಪ್ರಶಿಕ್ಷಣಾರ್ಥಿಗಳಿದ್ದರು. ಪರೇಡ್‌ ಕಮಾಂಡರ್‌ ರಂಜಿತಕುಮಾರ ಹಾಗೂ ನವೀನಕುಮಾರ ಚವ್ಹಾಣ ನೇತೃತ್ವದಲ್ಲಿ ಅತಿಥಿಗಳಿಗೆ ವಿವಿಧ ತಂಡಗಳಿಂದ ಗೌರವ ಸಲ್ಲಿಸಲಾಯಿತು. ಒಳಾಂಗಣ ವಿಭಾಗದಲ್ಲಿ ಪರಶಿವಮೂರ್ತಿ ಬಿ.,ವೀರೇಂದ್ರ ಶಿಪರಮಟ್ಟಿ, ಆನಂದ ಬಹುಮಾನ ಪಡೆದರು. ಹೊರಾಂಗಣ ವಿಭಾಗದಲ್ಲಿ ರಂಜಿತಕುಮಾರ, ದಸ್ತಗೀರ, ನರಸಪ್ಪ ಬಹುಮಾನ ಪಡೆದರು.ಫೈರಿಂಗ್‌ ವಿಭಾಗದಲ್ಲಿ ಎಸ್‌. ನದಾಫ್‌, ರμàಕ್‌ ನದಾಫ್‌, ಸುರೇಶ ಜಿ., ಮೊಹಮ್ಮದ ಎಜಾಜ್‌ ಬಹುಮಾನ ಪಡೆದರು. ಸರ್ವೋತ್ತಮ ಪ್ರಶಿಕ್ಷಣಾರ್ಥಿಯಾಗಿ ರಂಜಿತಕುಮಾರ ಬಹುಮಾನ ಪಡೆದರು.

ಅನೇಕ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗೆ ಕರ್ತವ್ಯದಲ್ಲಿದ್ದಾಗ ತಮ್ಮ ಜವಾಬ್ದಾರಿ, ಅಧಿಕಾರಗಳು ಅರ್ಥವಾಗುವುದಿಲ್ಲ. ಹಲವಾರು ರೀತಿಯ ಸವಾಲುಗಳಿದ್ದರೂ ಅಪ್ರಮುಖವಾದವುಗಳಿಗೆ ಪ್ರಾಶಸ್ತ್ಯ ನೀಡುತ್ತಾರೆ. ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಲಾಖೆಯ ಆಶಯ, ಉದ್ದೇಶಗಳಿಗೆ ಆದ್ಯತೆ ನೀಡಿ ಎಲ್ಲರೂ ಕರ್ತವ್ಯ ನಿರ್ವಹಿಸಬೇಕು. ಪಿ. ಹರಿಶೇಖರನ್‌, ರಾಜ್ಯ ಪೊಲೀಸ್‌ ಇಲಾಖೆ ತರಬೇತಿ ವಿಭಾಗದ ಪೊಲೀಸ್‌ ಮಹಾನಿರೀಕ್ಷಕ

ಟಾಪ್ ನ್ಯೂಸ್

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Dharmasthala: ಸರಣಿ ಅಪಘಾತ; 5 ವಾಹನಗಳಿಗೆ ಹಾನಿ

Dharmasthala: ಸರಣಿ ಅಪಘಾತ; 5 ವಾಹನಗಳಿಗೆ ಹಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ

1-wqeqewqe

BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!

Hubli; ಪ್ರಧಾನಿ ಮೋದಿ ಪ್ರಧಾನ ಸುಳ್ಳುಗಾರ, ಸುಳ್ಳಿನ ಸರದಾರ: ಬಿ.ಕೆ.ಹರಿಪ್ರಸಾದ್

Hubli; ಪ್ರಧಾನಿ ಮೋದಿ ಪ್ರಧಾನ ಸುಳ್ಳುಗಾರ, ಸುಳ್ಳಿನ ಸರದಾರ: ಬಿ.ಕೆ.ಹರಿಪ್ರಸಾದ್

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Ra

50% ಮಿತಿ ರದ್ದು, ಎಷ್ಟು ಬೇಕೋ ಅಷ್ಟೇ ಮೀಸಲು:ರಾಹುಲ್‌ ಗಾಂಧಿ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

Rahul Gandhi 3

Rahul Gandhiವಿರುದ್ಧ ಶಿಕ್ಷಣ ತಜ್ಞರು, ಕುಲಪತಿಗಳು ಗರಂ

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.