ಯಾರನ್ನೂ ಬದಲಾಯಿಸಲು ಪ್ರಯತ್ನಿಸಬೇಡಿ


Team Udayavani, Mar 16, 2021, 6:21 AM IST

ಯಾರನ್ನೂ ಬದಲಾಯಿಸಲು ಪ್ರಯತ್ನಿಸಬೇಡಿ

ನಮಗೆ ಶತ್ರುಗಳು ಹೆಚ್ಚಾಗ ಬೇಕೆ? ಹಾಗಾದರೆ ಈ ಒಂದು ಸಣ್ಣ ಕೆಲಸವನ್ನು ಮಾಡಿಬಿಡಿ. ಅವರು ಮಾಡುತ್ತಿರುವ ತಪ್ಪುಗಳನ್ನು ಅವರಿಗೆ ತೋರಿಸಿ ಸಾಕು. ಓರ್ವ ವ್ಯಕ್ತಿ ಯನ್ನು ನೀವು ಕರೆದು ಆತನ ತಪ್ಪುಗಳನ್ನು ಸ್ವಲ್ಪ ಖಾರವಾಗಿ ಹೇಳಿ. ತತ್‌ಕ್ಷಣವೇ ಆ ವ್ಯಕ್ತಿಗೆ ನೀವು ಶತ್ರುವಿನಂತೆ ಕಾಣಿಸುತ್ತೀರಿ. ಇದುವೇ ಇಂದಿನ ಹೆಚ್ಚಿನ ಜನರ ಮನಃಸ್ಥಿತಿ, ಸಮಾಜದ ದುಸ್ಥಿತಿ.

ಇದು ಮಾನವ ಸಹಜ ಗುಣ ಎಂದು ಇದನ್ನು ಅಲ್ಲಿಗೆ ಮರೆತುಬಿಡುವುದು ನಿಮ್ಮ ಹಿತದೃಷ್ಟಿಯಿಂದ ಒಳ್ಳೆಯದು. ಆತ ನೀವೂ ಆತನನ್ನು ದ್ವೇಷಿಸಲಾರಂಭಿಸಿದಿರಿ ಎಂದರೆ ಅದು ನಿಮ್ಮ ಮೇಲೂ ನಕಾರಾತ್ಮಕ ಪರಿಣಾಮ ಬೀರಬಲ್ಲುದು. ಇಂತಹ ವಿಚಾರಗಳಲ್ಲಿ ಇತ್ತಂಡಗಳೂ ಜಾಣ ನಡೆ ಅನುಸರಿಸುವುದೇ ಲೇಸು.

ನೆನಪಿಡಿ, ದುಡಿಮೆ ಯಾವ ವ್ಯಕ್ತಿ ಯನ್ನು ಮೋಸಗೊಳಿಸುವುದಿಲ್ಲ. ಆದರೆ ವ್ಯಕ್ತಿಯೇ ದುಡಿಮೆಗೆ ಮೋಸ ಮಾಡು ತ್ತಾನೆ. ಸಮಾಜದಲ್ಲಿ ನಾನು ಎಲ್ಲವನ್ನು ಸರಿ ಮಾಡುತ್ತೇನೆ, ಎಲ್ಲರನ್ನು ಸರಿದಾರಿಯಲ್ಲಿ ನಡೆಸುತ್ತೇನೆ ಎಂದು ಶಪಥ ಮಾಡುವುದು ಮೂರ್ಖತನವೇ ಸರಿ.

ಅಡ್ಡದಾರಿಯಲ್ಲಿರುವ ಅಥವಾ ತಪ್ಪು ಮಾಡುತ್ತಿರುವ ವ್ಯಕ್ತಿಗೆ ಒಂದು ಅಥವಾ ಎರಡು ಹೆಚ್ಚೆಂದರೆ ಮೂರು ಬಾರಿ ತಿಳಿ ಹೇಳಲು ಪ್ರಯತ್ನಿಸಬೇಕು. ಇಷ್ಟಾದ ಮೇಲೂ ಆತ ಬದಲಾಗಲಿಲ್ಲವೇ, ಆತ ನನ್ನು ಹಾಗೆಯೇ ಬಿಟ್ಟು ಬಿಡಬೇಕು. ಜೀವ ನವೇ ಅಂಥವರಿಗೆ ಸೂಕ್ತ ಸಮಯ ದಲ್ಲಿ ಮರೆಯಲಾಗದ ಪಾಠವೊಂದನ್ನು ಕಲಿಸುತ್ತದೆ. ಏಕೆಂದರೆ ಮನುಷ್ಯ ನಿಗೆ ಜೀವನ, ಸಮಯ ಶ್ರೇಷ್ಠ ಗುರುಗಳು. ಇದರ ಮುಂದೆ ಉಳಿದೆಲ್ಲವೂ ಗೌಣ.

ಎಷ್ಟೋ ಜನರು ತಮಗೆ ಸೂಕ್ತ ಮಾರ್ಗ ದರ್ಶನ ಮಾಡುವವರು, ತಪ್ಪು ಮಾಡಿ ದಾಗ ತಿದ್ದಲು ಯಾರೂ ಇಲ್ಲವೆಂದು ಕೊರಗುತ್ತಿರುತ್ತಾರೆ. ಅಂಥದ್ದರಲ್ಲಿ ಇದ್ದ ದ್ದನ್ನು ಇದ್ದ ಹಾಗೆ ಹೇಳಿದರೆ ಆಜನ್ಮ ಶತ್ರುವಿನಂತೆ ಕಾಣುವುದೇಕೆ? ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು. ಅದ ಕ್ಕಾಗಿ ನೀವು ಪಶ್ಚಾತ್ತಾಪ ಪಡುವ ಅಗತ್ಯ ವಿಲ್ಲ. ಹಾಗೆಂದು ಇದನ್ನು ದೊಡ್ಡ ವಿಷ ಯವಾಗಿಸಿ ಆತನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರವೂ ಸಲ್ಲದು.

ಬೇರೆಯವರನ್ನು ಬದಲಾಯಿಸಲು ಹೊರಟರೆ ನಮ್ಮ ಮನಸ್ಸಿನ ನೆಮ್ಮದಿ, ಶಾಂತಿ, ಆರೋಗ್ಯ ಹಾಳಾಗುತ್ತದೆ. ಒಮ್ಮೆ ಹೇಳಿದರೆ ಅರ್ಥಮಾಡಿಕೊಂಡು ಅನು ಸರಿಸುವವರನ್ನು ಕಂಡರೆ ನಮಗೆ ತಿಳಿ ಹೇಳುವುದಕ್ಕೂ ಸಂತೋಷವಾಗುತ್ತದೆ, ಹೇಳಿದ ಮಾತಿಗೂ ತೂಕವಿರುತ್ತದೆ. ಆದರೆ ನಾವು ಅವರ ತಪ್ಪನ್ನು ಹೇಳಿದ ತತ್‌ಕ್ಷಣ ಹಿಂದು ಮುಂದು ಯೋಚಿಸದೆ ತತ್‌ಕ್ಷಣವೇ ಮರು ಉತ್ತರ ನೀಡುವುದು, ಅಗೌರವ ಸಲ್ಲಿಸುವುದು, ಉಡಾಫೆತನ ಪ್ರದರ್ಶಿಸುವುದು, ನನಗೆ ಎಲ್ಲ ಗೊತ್ತಿದೆ, ಇವನು ಏನು ಹೇಳುವುದು? ಎನ್ನುವ ವರನ್ನು ನಮ್ಮಿಂದ ಆದಷ್ಟು ದೂರದಲ್ಲಿ ಇಟ್ಟರೆ ನಮಗೆ ಒಳ್ಳೆಯದು. ಗಂಧದ ಜತೆ ಗುದ್ದಾಡಿದರೆ ಸುವಾಸನೆ ಬರುತ್ತದೆ.

ಆದರೆ ಹೊಲಸಿನ ಜತೆ ಗುದ್ದಾಡಿದರೆ ದುರ್ವಾಸನೆ ಬರುತ್ತದೆ ಅಲ್ಲವೇ?
ನಮ್ಮ ಮಾನಸಿಕ ನೆಮ್ಮದಿ, ಭವಿಷ್ಯ, ಉತ್ತಮ ಆರೋಗ್ಯದ ದೃಷ್ಟಿಯಿಂದ ಬೇರೆಯವರನ್ನು ಬದಲಾಯಿಸಲು ಪ್ರಯತ್ನಿಸದಿರುವುದೇ ತುಂಬಾ ಒಳ್ಳೆ ಯದು. ಅದರಲ್ಲೂ ನಾನೇ ಸರ್ವೋ ತ್ತಮ, ನಾನು ಮಾಡುತ್ತಿರುವುದೆಲ್ಲವೂ ಸರಿ ಎಂಬ ಪಿತ್ತ ನೆತ್ತಿಗೇರಿರುವವರ ಹತ್ತಿರ ಸುಳಿಯದಿರುವುದೇ ಇನ್ನೂ ಒಳ್ಳೆಯದು. ಏಕೆಂದರೆ ಪಿತ್ತ ಆರೋಗ್ಯಕ್ಕೆ ಮಾರಕವೇ ಹೊರತು ಪೂರಕ ಅಲ್ಲವೇ ಅಲ್ಲ.

ನಾವು ಉತ್ತಮ ರೀತಿಯಲ್ಲಿ ಬದಲಾ ಗುತ್ತಾ ಹೋಗೋಣ. ಬದಲಾಗುವ ಮನಸ್ಸಿರುವವರು ನಮ್ಮನ್ನು ನೋಡಿ ಬದಲಾಗುತ್ತಾರೆ, ನಮ್ಮನ್ನು ಅನುಸರಿಸು ತ್ತಾರೆ. ಬದಲಾಗುವ ಮನಸ್ಸಿಲ್ಲದವರು ನಿಂತಲ್ಲೇ ನಿಂತಿರುತ್ತಾರೆ. ಬದಲಾವಣೆ ಜಗದ ನಿಯಮ. ಜಗತ್ತೇ ಬದಲಾಗುತ್ತಿದೆ, ನೀವು ಬದಲಾಗುವುದಿಲ್ಲವೇ?

– ಪ್ರಶಾಂತ್‌ ಕುಮಾರ್‌ ಎ. ಪಿ. ತುಮಕೂರು.

ಟಾಪ್ ನ್ಯೂಸ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.